Friday, April 29, 2011

ಆಡದೆ... ಉಳಿದಿಹ .. ಮಾತೂ ... ನೂರಿದೆ...!!

ನಾನು ಹೇಳಿದೆ...

"ಬಂದ ಜನರನ್ನು ...
ಗೇಟಿನಲ್ಲಿ ನಾನೇ..ಕ್ಯಾಮರಾ ಹಿಡಿದು...
ಮೊದಲು ಅವರ ಫೋಟೋ ತೆಗೆದು ಸ್ವಾಗತಿಸುವೆ..."

ಎಲ್ಲರು ಝಾಡಿಸಿದರು...
ಮನೆಯಲ್ಲಿ... ಗೆಳೆಯರು... ಅಳಿಯಂದಿರುಗಳು. ..... 
ಸುತಾರಾಂ  ಒಪ್ಪಲಿಲ್ಲ...

"ನಿನ್ನ  ಪುಸ್ತಕ ಬಿಡುಗಡೆ ..
ನೀನು ಅಲ್ಲಲ್ಲಿ ಓಡಾಡುತ್ತ ಮಾತಾಡಿಸುತ್ತ ಇರು ಸಾಕು ..
ಉಳಿದುದನ್ನು ನಾವು ನೋಡಿಕೊಳ್ಳುತ್ತೇವೆ.." ಅಂದು ಬಿಟ್ಟರು...

ಆದರೆ ಗಡಿಬಿಡಿಯಲ್ಲಿ ನಿಮ್ಮನ್ನೆಲ್ಲ ಮಾತನಾಡಿಸಲು ಆಗಲಿಲ್ಲ..

ಎಷ್ಟೋ ಹೊಸ ಗೆಳೆಯರು.. ಸಹೋದರಿಯರು ಬಂದಿದ್ದರು...!

ಇನ್ನೂ ಏನೇನೋ ಮಾಡಬೇಕಿತ್ತು...!
ಕೆಲವು ತುಂಟತನದ ಉಪಾಯಗಳಿದ್ದವು... 
ಎಲ್ಲದಕ್ಕೂ ಮನೆಯಲ್ಲಿ ನಿಷೇಧ ಹೇರಿದ್ದರು...

ಮೆಚ್ಚಿನ ಜಿ.ಎನ್ ಮೋಹನ್... ಜೋಗಿ.. 
ಹಾಲ್ದೊಡ್ಡೇರಿ  ಸುಧೀಂದ್ರ  ಬಂದಿದ್ದರು...!

ದೆಹಲಿಯ "ಸೀತಣ್ಣ.., 
ಮುಂಬೈ ಅಶೋಕ್.. ಮತ್ತೆ ನಾಲ್ವರು.. 
ಮಂಗಳೂರಿನಿಂದ ವನಿತಾ... ದಿನಕರ...

ದೂರದ "ಗದಗಿನಿಂದ " ವೀರ ನಾರಾಯಣ  "ಶಿವೂ ಯಳವತ್ತಿ..."

ತನ್ನ ಕಾರ್ಯಕ್ರಮ ತಪ್ಪಿಸಿ ಬೆಳಗಿನ ಬಸ್ಸಿಗೆ ತುಮಕೂರಿನಿಂದ " ವಿಶ್ವಣ್ಣ ನೆಂಬ ತಮ್ಮ" ...

ಹಿರಿಯರಾದ  ಎವರ್ ಗ್ರೀನ್ .. !
ಎವರ್ ಯಂಗ್...!
 "ಹೆಬ್ಬಾರ್ ಸರ್' ಮತ್ತು  ಸತ್ಯ ಪ್ರಕಾಶ್ ಸರ್...!

ಪ್ರೀತಿಯಿಂದ .. ಆಶಿರ್ವಾದವಾಗಿ ಬೆನ್ನುಡಿ ಬರೆದು ಕೊಟ್ಟ  "ಮಂಗಳತ್ತೆ... ತಮ್ಮ ಪತಿಯನ್ನೂ ಕರೆದುಕೊಂಡು ಬಂದಿದ್ದರು... 

ಓಡಾಡುತ್ತಿದ್ದೆ...
ಮಾತನಾಡುತ್ತಿದ್ದೆ..... 
ಹೇಳಲಾಗದ ಸಂತೋಷ...! 
ಸಂಭ್ರಮ...!

ನಿಮ್ಮನ್ನೆಲ್ಲಾ ಹೇಗೆ ಮಾತನಾಡಿಸಿದೆನೋ ಗೊತ್ತಿಲ್ಲ...

ಪ್ರೀತಿ ಹೀಗೆಯೇ ಇರಲಿ....

ಒಂದು ಭಾನುವಾರ ನಮ್ಮ ಸಂಭ್ರಮದಲ್ಲಿ ...
ನಮ್ಮ ಕಾರ್ಯದಲ್ಲಿ ಪ್ರೋತ್ಸಾಹ ಪೂರ್ವಕವಾಗಿ ಭಾಗವಹಿಸಿದ್ದಕ್ಕೆ...


ಅನಿವಾರ್ಯ ಕಾರಣಗಳಿಂದ ಬರಲಾಗದೆ...
ಶುಭ ಕೋರಿದ.. 
ಯಶಸ್ಸನ್ನು ಪ್ರಾರ್ಥಿಸಿದ ಎಲ್ಲ ಗೆಳೆಯರಿಗೆ 
ಸಹೋದರಿಯರಿಗೆ...

ಕೃತಜ್ಞತೆಗಳು...
ವಂದನೆಗಳು... 

"ಇದೆ.. ಇದರ.. ಹೆಸರು..!" 
ಮುಖಪುಟದ ನಾಯಕಿ... ಬೆಡಗಿ...
ಚಂದದ ಕಣ್ಣಿನ.. ಮುದ್ದು..ಪುಟಾಣಿ... " ಅಬ್ಜಾ..."


ಹೂವಿನಂಥಹ ಮಾತಿನಿಂದ.. ಮಧುರ ಕಂಠದಿಂದ.. 
ಕಾರ್ಯಕ್ರಮದ ನಿರೂಪಣೆ...
ಸುಮತಿಯವರಿಂದ...

ಬಹು ಕಾತುರದ ಸಮಯ... ಪುಸ್ತಕ ಬಿಡುಗಡೆ...ಇದೆ... ಇದರ... ಸಂಭ್ರಮ....!!
ಮೆಚ್ಚಿನ "ದುಂಡಿರಾಜ್..."
ಖ್ಯಾತ ನಟ... "ಕೋಮಲ್"...
ಅಂದು... ಇಂದು.. ಎಂದೆಂದಿಗೂ ಹತ್ತಿರದ.. "ದಿವಾಕರ"...
ಸಂಗೀತಕ್ಕೆ  ಜೀವನವನ್ನು ಮುಡುಪಾಗಿಟ್ಟ... "ಉಪಾಸನ ಮೋಹನ್...."


ನನ್ನ ಕನಸನ್ನು "ಸಾಕಾರಗೊಳಿಸಿದ...  ನನ್ನ ಮೆಚ್ಚಿನ... ಆತ್ಮೀಯ.."ಹೂವಿನಂಥಹ " ಮಣಿಕಾಂತ್...


ಒಳಪುಟವಿನ್ಯಾಸ... ಅಕ್ಷರಗಳ ಜೋಡಣೆ... ಒಟ್ಟಾರೆ ಪುಸ್ತಕ "ತಮ್ಮದು" ಎಂದು ಪ್ರೀತಿಯಿಂದ ಮಾಡಿಕೊಟ್ಟ...
 "ಪ್ರೇಂ ಕುಮಾರ್"
(ಹದಿನೈದು ವರ್ಷ ನಮ್ಮ ನಾಡಿನ ದೈತ್ಯ ಪ್ರತಿಭೆ "ಲಂಕೇಶರಲ್ಲಿ" ಇವರ ಒಡನಾಟವಿತ್ತು....)


"ನೀಲಿಮಾ ಪ್ರಕಾಶನ" ಅಮ್ಮನ.. ಮುದ್ದು ಕಂದನ ಪ್ರೀತಿ...



ತುಂಬಿದ ಕೊಡ ತುಳುಕುವದಿಲ್ಲ... 
ಸಜ್ಜನ... ಬರಹಗಾರ .. ವಿಜ್ಞಾನಿ.. "ಹಾಲ್ದೊಡ್ಡೇರಿ ಸುಧೀಂದ್ರ"ರವರು...


ನಗುಮುಖದ  ಮೋಹನ... ಜಿ.ಎನ್.....


ದೈತ್ಯ ಬರಹಗಾರ.. ಗಿರೀಶ್ ರಾವ್... 
ನಮ್ಮ ಮೆಚ್ಚಿನ " ಜೋಗಿ "...
ಕೊಟ್ಟ ಮಾತಿನಂತೆ  ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ್ದು... ಮತ್ತಷ್ಟು ಸಂಭ್ರಮ ತರಿಸಿತ್ತು....


ಮೆಚ್ಚಿನ ನಟಿ... ಆತ್ಮಿಯತೆಯಿಂದ ಬಂದಿದ್ದು ಹೀಗೆ...


ಮುಂಬೈನಿಂದ... ನಮ್ಮ ಸಭ್ರಮದಲ್ಲಿ  ಸಡಗರ ಪಟ್ಟಿದ್ದು ಹೀಗೆ...
ಇವರದ್ದು ಒಂದು ಗೆಳೆಯರ ಬಳಗ ಇದೆ... 
"ಸ್ನೇಹ ಲೋಕ" ಅಂತ... ಆರ್ಕುಟ್ಟಿನಲ್ಲಿ...
ಅವರೆಲ್ಲರೂ ಬಂದಿದ್ದರು...

ಡೆಲ್ಲಿ ಮಾಮ... 
ಸೀತಣ್ಣ..  ಬೆಳಗಿನ ವಿಮಾನದಲ್ಲಿ ಕಾರ್ಯಕ್ರಮಕ್ಕಾಗಿಯೇ ಬಂದಿದ್ದರು....


ಬ್ಲಾಗ್ ಲೋಕದ "ಪಡೆಯಪ್ಪ.. ರಜನೀಕಾಂತ್" 
ಮತ್ತು ವನಿತಾ ಪುಟ್ಟಮ್ಮ... ಮಂಗಳೂರಿನಿಂದ ಬಂದಿದ್ದರು...


ಗದುಗಿನ ಗಂಡು... 
ಚುಟುಕು ಕಥೆಗಳ ಸರದಾರ "ಶಿವೂ ಯಳವತ್ತಿ" ನಮ್ಮ ಸಂಭ್ರಮದಲ್ಲಿ ಬಂದಿದ್ದರು...
ಅವರ ಜೊತೆ ಪ್ರತಿಭಾವಂತ ಬರಹಗಾರ " ಗೌತಮ್  ಮದುಮಗ"....



"ಮೂರನೆಯ ಕಿವಿ" ಖ್ಯಾತಿಯ.. 
" ರವಿ  ಐನ್ ಕೈ.."ಮೈಸೂರಿನಿಂದ...
ಮತ್ತು..
ವಿಘ್ನೇಶ್ವರ  ಭಟ್ ಮತ್ತು ದಿವಾಕರ ಇವರ ಸಮಾಲೋಚನೆ....



ಗೆಳೆಯ ಗುಬ್ಬಚ್ಚಿ ಸತೀಶ್..
"ಚಿಂವ್.. ಚಿಂವ್"  ಅಂತ  ತುಮಕೂರಿನಿಂದ ಬಂದಿದ್ದರು...


ಇವರ್ಯಾರೋ ಸಿನೆಮ ನಟ ಅಂದುಕೊಳ್ಳ ಬೇಡಿ... 
ತಮ್ಮ ಪೂರ್ವ ನಿಗದಿತ ಕಾರ್ಯಕ್ರಮ ಬಿಟ್ಟು ..
ಬೆಳಗಿನ ಬಸ್ ಹಿಡಿದು ತುಮಕೂರಿನಿಂದ ಬಂದ... "ವಿಶ್ವಣ್ಣ..." 
ಅಳಿಯಂದಿರ ಗುಂಪಿನ ಸಜ್ಜನ...

ಅಳಿಯಂದಿರ ಗುಂಪಿನ  "ನಾಗು"... ಅಲಿಯಾಸ್ ಕೆ. ನಾಗರಾಜ್..
ಮುಖಪುಟದ ಕಲ್ಪನೆ ಕೊಟ್ಟವರು...
ಬೇಂದ್ರೆ ಸಾಹಿತ್ಯವನ್ನು  ಚೆನ್ನಾಗಿ ಓದಿಕೊಂಡಿದ್ದಾರೆ....

ಇವರ ವಿಚಾರಧಾರೆ ಭಿನ್ನವಾಗಿರುತ್ತದೆ... ನಮ್ಮ ನಾಗು  ಸೌಮ್ಯ ಪ್ರತಿಭಾವಂತ....


ಎಲ್ಲ ಸೇರ್ತಾ ಇದ್ದೇವೆ... ಕಾರ್ಯಕ್ರಮ ಶುರುವಾಗಲಿಲ್ಲವಲ್ಲ ಸ್ವಾಮಿ....


ಮನೆಯವರೆನ್ನೆಲ್ಲ... ಸಿದ್ದಗಂಗಾ  ಸ್ವಾಮಿಜಿಯವರ ಬಳಿ ಕಳಿಸಿ...
 ಡುಮ್ಮಣ್ಣನ ಮತ್ತು ಬ್ಲಾಗ್ ಸ್ನೇಹಿತರನ್ನು  ನೋಡಲು ಬಂದ  
"ಇಂದೂಶ್ರೀ..".

ವಿಳಾಸ ತಪ್ಪಿದ್ದರೂ ಕೊನೆಗೂ ಹುಡುಕಿ ಬಂದ ..
ತಂಗಿ... ಶ್ವೇತಾ... ಮತ್ತು ಅವರ ಸ್ನೇಹಿತೆ...


ಬಾವ ಪಡೆಯಪ್ಪನ ಖದರೇ ಬೇರೆ .. ಬಿಡಿ... 
ಜೊತೆಯಾಗಿ.. ಸಂಗಾತಿ.. ತಂಗಿ  "ವನಿತಾ.."

"ಬಿಸಿಲು ಹನಿ" ಖ್ಯಾತಿಯ ಮಿತ್ರ "ಉದಯ ಇಟಗಿ...."

ಪ್ರೀತಿಯಿಂದ ಬ್ಲಾಗ್ ಓದುವ ದಂಪತಿಗಳು... ಗೀತಾ... ಮತ್ತು ವಿಕ್ರಮ್....

ಹೊಸ ಜೋಡಿ.. ಹೊಸ ಸಿಹಿ ಸುದ್ಧಿಯ ನಿರೀಕ್ಷೆಯಲ್ಲಿ... 
ಗುರುಪ್ರಸಾದ್ ದಂಪತಿಗಳು...



ಸ್ವಲ್ಪ ಹೊತ್ತು ಕ್ಯಾಮರಕ್ಕೆ ರೆಸ್ಟ್ ಕೊಟ್ಟ ..
ಮುದ್ದಿನ ತಮ್ಮಯ್ಯಾ.. "ನವೀನ್ ಹಳ್ಳಿ ಮೇಷ್ಟ್ರು.."


ಸ್ವಲ್ಪ ತಡವಾದರೂ  ಓಡೋಡಿ ಬಂದ ನಟ ಕೋಮಲ್... 
ಮಾತಿನಲ್ಲಿ .. ನಡತೆಯಲ್ಲಿ ಸಜ್ಜನಿಕೆ ಮೆರೆದರು...

ಮಾತೆಯ ಮಮತೆಯೊಂದಿಗೆ .. ಮಡದಿಯ ಪ್ರೀತಿ... ಗೆಳೆಯ ವಸುಧೆಶ್...

 ನಮ್ಮ "ಬಾಲೂ ಸುಬ್ಬು ಸಜ್ಜನರೆಂದು ಗೊತ್ತಿತ್ತು... 
ತುಂಟರೆಂದು ಗೊತ್ತಾಗಿದ್ದು ಈಗ...


"ಪ್ರಕಾಶಣ್ಣಾ.. ನಾನೂ ಬಂದಿದ್ದೇನೆ" ...
ಎನ್ನುವ ಸಹೋದರಿ .. "ವೀಣಾ...' !

"ಮಾನಸ ರಂಗ"ದ ಚೆಲುವೆ.. ವಾಣಿಶ್ರೀ...


"ಪ್ರಕಾಶಣ್ಣ... ನಾನತೂ ಖಂಡಿತ ಬರುವೆ" 
ಎಂದು ಮಾತು ತಪ್ಪದ.....
ಕನಸು ಕಣ್ಣಿನ  ಹುಡುಗಿ.. " ದಿವ್ಯಾ..."

ಇವಳು ಯಾರು ಬಲ್ಲಿರೇನು... ಸಹಜ ಸುಂದರಿ "ಕಾಂತಿ'ಯನು....?


ಚುಕ್ಕಿ ಚಿತ್ತಾರದ  ಭೂರಮೆಯ... ನಾಗಂದಿಗೆ ಕುಟುಂಬ.... 
ನಮ್ಮ ಸಡಗರದಲ್ಲಿ....

ಆಗ್ರಾದ ಹುಡುಗಿಯ  ಅಪ್ಪ.. ಅಮ್ಮ... 
ಸಂಭ್ರಮದಿಂದ ಬಂದಿದ್ದರು....


ಪುಟ್ಟ ತಮ್ಮ "ರಾಜೇಶ್ ಮಂಜುನಾಥ"...

ಈ ಪುಟ್ಟ ಹುಡುಗ  " ದೊಡ್ಡಮನಿ ಮಂಜು.."  
ನನ್ನಂತೆ  ದೊಡ್ಡ ಆಕಾರದ ಆಕೃತಿ ಅಂತ  ಅಂದುಕೊಂಡಿದ್ದೆ...!...



ಸಿಕ್ಕ ಸ್ವಲ್ಪ ಸಮಯದಲ್ಲೇ  ನಮಗೆ ಹುರಿದುಂಬಿಸಿದ ಗೆಳೆಯ " ಶಿವೂ.... " ಗಿರೀಶ್ ಮತ್ತು ನವೀನ್ ಜೊತೆ...
ಇನ್ನೊಂದು ವಿಷಯಗೊತ್ತಾ?


ಗೆಳೆಯ ಕೆ. ನಾಗರಾಜ್  "ಫೋಟೋಕ್ಕೆ" ಸಿಗಲೇ ಇಲ್ಲ...

ಮತ್ತೊಬ್ಬ ಗೆಳೆಯ "ಮಲ್ಲಿಕಾರ್ಜುನ್" ...
ಕ್ಯಾಮರ ತಗೊಂಡು ಬಂದಿದ್ದರು..


ಎಷ್ಟು ಮಾತಾನಾಡಿದರೂ.. ಸಾಲದು...
ಯಳವತ್ತಿ ಇದ್ದಲ್ಲಿ ನಗು ಇರಲೇ ಬೇಕಲ್ಲಾ..!


ಮಗಳನಂತೂ ಕೊಡಲಿಲ್ಲ... ಇದನ್ನಾದರೂ....!!  ?? ...
ಮುದ್ದಿನ  ಅಳಿಮಯ್ಯ "ಅನಿಲು.."


ಇವರು ಬಿಗ್ ಬಾಸ್... ಅಲ್ಲ...ಅಲ್ಲ..!
 ದಿಗ್ ಬಾಸ್...ಅಲ್ಲ..!
ಇವರು.. ಗೆಳೆಯ " ದಿಗ್ವಾಸ್..."

"ನಿಲ್ಲಯ್ಯೋ ನಿಲ್ಲೋ ಓ.. ಕೆಂಚು ಮೀಸೆಯವನೆ...!"
ಕಿರುಮಿಸೆಯಾ... ನಾಚಿಕೆಯ ಅಳಿಮಯ್ಯ "ಶಿವ ಪ್ರಕಾಶ..."


ವಸ್ತಾರೆ ಸಾಹೇಬರ ಜೊತೆ  ಮುಗ್ಧ ನಗುವಿನ  "ಕ್ಯಾಪ್ಶನ್ ಬಾಲಣ್ಣ..." 


ಸ್ನೇಹದ ನಗುವಿನ ಡಾಕ್ಟರ್ ಸಂತೋಷ್... ತಮ್ಮ ಕ್ಯಾಮರಾದೊಂದಿಗೆ..


ಅರಸಿಕೆರೆಯ ಅರಸಿಗ ಮದುವೆಗೆ ಕರೆಯಲು ಬಂದಿದ್ದರು...
ಅಜ್ಜನ ಮನೆಯ 'ಗಣಪತಿ.."


ರವೆ ವಾಂಗಿ ಬಾತ್.. ಅನಾನಸ್ ಕೇಸರಿ ಬಾತ್.. 
ವಾಹ್... 
ಬನ್ರಿ... ಮಾರಾಯರೇ.... 
ಖರ್ಚಾಗಿ ಹೋದೀತು...! 
ಬನ್ರೀ... ಬೇಗ..!

ಬ್ಲಾಗಿಗರ... ಓದುಗರ ಸಡಗರ....


"ರಾಮೇಶ್ವರಕ್ಕೆ ಹೋದರು... ಶನೀಶ್ವರ ಬಿಡಲಾರ"
ಏನೂ ಮಾಡೋಣ ಹೇಳಿ...!

"ಮಾವಾ... 
ನಮ್ಮ ಹುಡುಗಿಯರನ್ನು ನಾವೇ ಹುಡುಕಿ ಕೊಳ್ಳುತ್ತೇವೆ... 
ನಮ್ಮ ಮಾತನ್ನು ವಾಪಸ್ಸು ತೆಗೆದು ಕೊಳ್ಳುತ್ತೇವೆ..." 
ಎಂದ ಅಳಿಯಂದಿರು... !!


"ಗಾದೆಗಳ ಸರದಾರಿಣಿ"  ಸದಾ ಹಸನ್ಮುಖಿ..  
ತಂಗ್ಯಮ್ಮ... "ಶಶಿ..." ಸಂಭ್ರಮ...!


"ಮುಂದೈತೆ ಮಾರಿಹಬ್ಬ" 
ನಮ್ಮನ್ನೆಲ್ಲ ನಗೆಯಲ್ಲಿ ಮುಳುಗಿಸಿದ  ಚುಟುಕು ಕವಿ ಸಾಮ್ರಾಟ್ "ದುಂಡಿರಾಜ್"


ಮುದ್ದಾದ ಜೋಡಿ.. "ಉಮೇಶ್ ಬಾಳಿಕಾಯಿ ದಂಪತಿಗಳು"


ಕವಿ ಮಹಾಬಲಗಿರಿಯೊಡನೆ ಗೆಳೆಯ....


ಎಲ್ಲರದೂ ಮೊದಲ ಭೇಟಿ... 
ಚಂದಾ.. ಚಂದಾ.. ಈ ಸಮಯಾ.... ಸಂಭ್ರಮಾ...!




ಊರಿನಿಂದ ಕಾರ್ಯಕ್ರಮಕ್ಕಾಗಿಯೇ ಬಂದ "ಪರಾಂಜಪೆಯವರು.. 
ಮತ್ತು " ಉಮೇಶ ದೇಸಾಯಿಯವರು"

ವಿ.ಆರ್. ಭಟ್ಟರೇ  ...
ಸಂಕೋಚ ಬೇಡಿ...ಇನ್ನಷ್ಟು ಹಾಕಿಸಿಕೊಳ್ಳಿ..." ... ಬಾಲೂ ಉವಾಚ.....!


"ನೋಡಿಸ್ವಾಮಿ ನಾವು ಫೋಟೋ ತೆಗೆಯೋದು ಹೀಗೆ...." ಗಣಪತಿ...


"ನೋಡಿ ಸ್ವಾಮಿ ನಾವು ಫೋಟೋ ತೆಗೆದಾದ ಮೇಲೆ ಹೀಗೆ..."   ನಂಜುಂಡರು...

ಮಣಿಕಾಂತರ ಕಾರ್ಯಕ್ರಮದಲ್ಲಿ ಹಾಡಿದ್ದರೆನೆ ಚಂದ...!
ಇದು ಹಾಡು ಕೇಳುವ ಸಮಯ....
ಸೋಗಸಾಆದ ಹಾಡುಗಳನ್ನು ಕೇಳಿಸಿದರು  "ಉಪಾಸನ ಮೋಹನ್ ಹಾಗು ಅವರ ಮಿತ್ರರು..."

ಅಂದದ ಫೋಟೋಕ್ಕಾಗಿ ನೆನಪಿನ ಕಾಣಿಕೆ..


"ಇದೆ.. ಇದರ.. ಹೆಸರು..!" ಲೋಕಾರ್ಪಣೆಯ ಸಡಗರ...

ಇದೆ.. ಇದರ ಸಂಭ್ರಮಾ.. !!

ಬರಿ ನಗು.. ಸಡಗರ.. ಸಭ್ರಮವೊಂದೆ... ಅಲ್ಲ...!

ಅಲ್ಲಿ ಭಾವುಕತೆಯೂ ಇತ್ತು...!

ನಮ್ಮ ಹೂವಿನಂಥಹ ಮನಸ್ಸಿನ...ಹೃದಯದ  .. 
ಮಣಿಕಾಂತ್ ನನ್ನಮ್ಮನಿಗೆ ವಂದಿಸಲು ಹೋದಾಗ...


ಸಹಜ ಭಾವುಕತೆ... ಅಲ್ಲಿತ್ತು....
ಅಮ್ಮ ಎನ್ನುವ... ಮಮತೆಯ ಭಾವುಕತೆ ಅಲ್ಲಿ ಕಾಡಿತ್ತು...


ಕಣ್ಣಲ್ಲಿ ಹನಿ ಉದುರಿತ್ತು....

ಅಮ್ಮ... ಎನ್ನಿ...
ಆಯಿ ಎನ್ನಿ.... 
ಆಶೀರ್ವಾದ ಮಮತೆ.. ವಾತ್ಸ್ಯಲ್ಲ ಯಾರಿಗೆ ಬೇಡ ಹೇಳಿ....?

ಇಷ್ಟೆಲ್ಲಾ ಆದರೂ...

ನಿಮ್ಮೆಲ್ಲ ಕೆಲಸ ಬಿಟ್ಟು.. 
ನಮ್ಮ ಕರೆಗೆ  ಬಂದು...
ಪ್ರೋತ್ಸಾಹಿಸಿದ ನಿಮಗೆ  ಹೇಗೆ ವಂದಿಸಲಿ...?...

ಇನ್ನೂ ಏನೇನೋ ಮಾಡಬೇಕಿತ್ತು...
ಮಾತನಾಡಿಸಬೇಕಿತ್ತು...
ನಿಮಗೆಲ್ಲ ಏನೇನೋ ಹೇಳಬೇಕಿತ್ತು....
ಇನ್ನೂ ಏನೇನೋ.. ಇತ್ತು.. !!


ಅಲ್ಲಿ ಸ್ಟೇಜಿನ ಮೇಲೆ ಮಾತನಾಡಲು ನಿಂತವನಿಗೆ..
ಗಂಟಲು ಕಟ್ಟಿತ್ತು.. ಮಾತು ಹೊರ ಬರಲಿಲ್ಲ...

ಹೇಳಲಾಗದೆ... 
ಭಾವ ತೋಡಿಕೊಳ್ಳಲಾಗದೆ.. 
ಒಳಗೊಳಗೇ ಉಳಿದ ಮಾತುಗಳು ನೂರಿತ್ತು..!

"ಕಂಗಳು ...
ವಂದನೆ.. ಹೇಳಿವೆ...!..
ಹೃದಯವು... ತುಂಬಿ.. ಹಾಡಿದೆ....!

ಆಡದೆ... 
ಉಳಿದಿಹ .. ಮಾತು.. ನೂರಿದೆ..... ' !!






(ಗೆಳೆಯರೇ...
ಇನ್ನೂ ಹಲವರ ಫೋಟೋಗಳು ಬಿಟ್ಟುಹೊಗಿವೆ...
ಅನ್ನುವದಕ್ಕಿಂತ... ನನಗೆ ಸಿಕ್ಕಿದ್ದು ಇಷ್ಟು... ಇನ್ನಷ್ಟು ಇದಕ್ಕೆ ಮತ್ತೆ ಸೇರಿಸುವೆ... 
ಒಂದೆರಡು ದಿನಗಳಲ್ಲಿ... ಕ್ಷಮೆ ಇರಲಿ...)


ಇದೆ.. ಇದರ.. ಹೆಸರು" ಪುಸ್ತಕ ನಾಡಿನ ಎಲ್ಲ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ...
ಬೆಂಗಳೂರಿನ 
ಸಪ್ನಾ ಬುಕ್ ಸ್ಟಾಲ್
ಜಯನಗರದ "ಟೋಟಲ್ ಕನ್ನಡ..."
ಗಾಂಧೀ ಬಜಾರಿನ "ಅಂಕಿತ  ಪ್ರಕಾಶನ"

ನವ ಕರ್ನಾಟಕದ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ...

ದಯವಿಟ್ಟು ಪ್ರೋತ್ಸಾಹಿಸಿ...

ಪ್ರೋತಿಯಿಂದ...
ಇಟ್ಟಿಗೆ ಸಿಮೆಂಟು...

ಕಾರ್ಯಕ್ರಮದಲ್ಲಿ ಗೆಳೆಯ ದಿವಾಕರನ "ಭಾಷಣ" ಹೀಗಿತ್ತು...
ಭಾಗ ಒಂದು...

ಭಾಗ ಎರಡು...