
Friday, October 31, 2008
Wednesday, October 29, 2008
ಹೀಗೊಂದು ನಾಯಿ ಪ್ರೀತಿ..!!?
ಕಾರು ಸರ್ವೀಸಿಗೆ ಬಿಡಲು ಫೋರ್ಡ್ಗೆ ಹೋಗಿದ್ದೆ. ಅಲ್ಲಿ ಸತೀಶ್ ಎನ್ನುವ ಸರ್ವೀಸ್ ಎಂಜಿನೀಯರ್
ಪರಿಚಯವಾಯಿತು. ನಾನು ಗುತ್ತೀಗೆದಾರ ಅಂತ ತಿಳಿದು ಬಹಳ ಆಸಕ್ತಿಯಿಂದ ಮತಾಡಲು ಶುರು
ಮಾಡಿದರು.
ನಮ್ಮಂಥವರ ಬಳಿ ಹೆಚ್ಚಾಗಿ ಮನೆ ಕಟ್ಟಲು ತಯಾರಾದವರು,ಅಥವಾ ಮನೆಕಟ್ಟುತ್ತಿರುವವರು
ಪ್ರೀತಿಯಿಂದ , ಗೌರವದಿಂದ ಮಾತನಾಡುತ್ತಾರೆ.
ಅವರಿಗೆ ಕಟ್ಟಿ ತಯಾರಾದ ಮನೆ ಬೇಕಾಗಿತ್ತು. " ನಿಮ್ಮ ಬಜೆಟ್ ಎಷ್ಟು ? " ಅಂತ ಕೇಳಿದೆ.
" ೩೦ಲಕ್ಷದ ಆಸು ಪಾಸು" ಅಂದರು.
"ಹಾಗಾದರೆ ನಾನೆ ಕಟ್ಟಿದ ಅಪಾರ್ಟ್ಮೆಂಟ್ ಇದೆ.. ಅದೂ ೨೦ ಲಕ್ಷಕ್ಕೆ .." ಎಂದೆ.
'ಅಪಾರ್ಟ್ಮೆಂಟ್ ಬೇಡ ಸರ್.. ನಮ್ಮನೆಯಲ್ಲಿ ನಾಯಿ ಇದೆ.." ಅಂದರು
"ನೋಡಿ ಸರ್..ನೀವು ೧೦ಲಕ್ಷ ಉಳಿಸ ಬಹುದು.."
"ಬೇಡಾ ಸ್ವಾಮಿ..ನಮ್ಮನೆ ನಾಯಿ ಎಂತಾ ಮಾಡ್ಲಿ..?"
" ಕ್ಲೀನ್ ಇದ್ದರೆ ಮನೆ ಒಳಗಡೆ ಇಟ್ಗೊಳ್ಳೀ..ಇಲ್ಲಾಂದ್ರೆ ಹೊರಗೆ ಕಟ್ಟಿ ಹಾಕಿ.."
"ಒಂದಲ್ಲ..ಎರಡಲ್ಲಾ ಸಾರ್.. ಮೂರು ನಾಯಿ ಮುಂಡೇವು,, ಇವೆ.. "
" ನಾಯಿ ಮುಂಡೇವು ಅಂತಾ ನೀವೆ ಹೇಳ್ತಿದ್ದೀರಾ.. ಮಾರಾಟ ಮಾಡಿ..
ನಾಯಿಗೋಸ್ಕರ ೧೦ ಲಕ್ಷ ಖರ್ಚು ಮಾಡ್ತೀರಾ?"
" ನನಗೆ ಮೂರು ಮಕ್ಕಳು. ಎಲ್ಲ ಅಮೇರಿಕಾ.. ಇಂಗ್ಲಂಡ್..ಅಂತ ದೂರ ಇದ್ದಾರೆ..ಎರಡು ವರ್ಷಕ್ಕೆ
ಒಮ್ಮೆ ಬಂದರೆ ನಮ್ಮ ಪುಣ್ಯ.. ಆ.. ಮಕ್ಕಳ ನೆನಪಿಗೆ ಈ ನಾಯಿಗಳನ್ನ
ಸಾಕಿದ್ದೇನೆ.. ಹೆಸರನ್ನೂ ಅವರದ್ದೇ ಇಟ್ಟಿದ್ದೇನೆ.. ಅಟಾಚ್ಮೆಂಟ್ ಸಾರ್.."
ನನಗೆ ಮುಂದೆ ಏನು ಹೇಳಬೇಕೆಂದು ತೋಚಲಿಲ್ಲ..ಈ ಮಕ್ಕಳು ಹಣದ ಆಸೆಗೆ ಬಿದ್ದು ಮುಪ್ಪಿನಲ್ಲಿರುವ
ತಂದೆ ತಾಯಿ ಬಿಟ್ಟು ಹೇಗಾದರೂ ಅಲ್ಲಿ ಆರಾಮಿರುತ್ತಾರೆ..?
ನಾನೀಗ ಅವರಿಗೆ ಸೈಟು ಹುಡುಕುವದರಲ್ಲಿ ನಿರತನಾಗಿದ್ದೇನೆ...
ಪರಿಚಯವಾಯಿತು. ನಾನು ಗುತ್ತೀಗೆದಾರ ಅಂತ ತಿಳಿದು ಬಹಳ ಆಸಕ್ತಿಯಿಂದ ಮತಾಡಲು ಶುರು
ಮಾಡಿದರು.
ನಮ್ಮಂಥವರ ಬಳಿ ಹೆಚ್ಚಾಗಿ ಮನೆ ಕಟ್ಟಲು ತಯಾರಾದವರು,ಅಥವಾ ಮನೆಕಟ್ಟುತ್ತಿರುವವರು
ಪ್ರೀತಿಯಿಂದ , ಗೌರವದಿಂದ ಮಾತನಾಡುತ್ತಾರೆ.
ಅವರಿಗೆ ಕಟ್ಟಿ ತಯಾರಾದ ಮನೆ ಬೇಕಾಗಿತ್ತು. " ನಿಮ್ಮ ಬಜೆಟ್ ಎಷ್ಟು ? " ಅಂತ ಕೇಳಿದೆ.
" ೩೦ಲಕ್ಷದ ಆಸು ಪಾಸು" ಅಂದರು.
"ಹಾಗಾದರೆ ನಾನೆ ಕಟ್ಟಿದ ಅಪಾರ್ಟ್ಮೆಂಟ್ ಇದೆ.. ಅದೂ ೨೦ ಲಕ್ಷಕ್ಕೆ .." ಎಂದೆ.
'ಅಪಾರ್ಟ್ಮೆಂಟ್ ಬೇಡ ಸರ್.. ನಮ್ಮನೆಯಲ್ಲಿ ನಾಯಿ ಇದೆ.." ಅಂದರು
"ನೋಡಿ ಸರ್..ನೀವು ೧೦ಲಕ್ಷ ಉಳಿಸ ಬಹುದು.."
"ಬೇಡಾ ಸ್ವಾಮಿ..ನಮ್ಮನೆ ನಾಯಿ ಎಂತಾ ಮಾಡ್ಲಿ..?"
" ಕ್ಲೀನ್ ಇದ್ದರೆ ಮನೆ ಒಳಗಡೆ ಇಟ್ಗೊಳ್ಳೀ..ಇಲ್ಲಾಂದ್ರೆ ಹೊರಗೆ ಕಟ್ಟಿ ಹಾಕಿ.."
"ಒಂದಲ್ಲ..ಎರಡಲ್ಲಾ ಸಾರ್.. ಮೂರು ನಾಯಿ ಮುಂಡೇವು,, ಇವೆ.. "
" ನಾಯಿ ಮುಂಡೇವು ಅಂತಾ ನೀವೆ ಹೇಳ್ತಿದ್ದೀರಾ.. ಮಾರಾಟ ಮಾಡಿ..
ನಾಯಿಗೋಸ್ಕರ ೧೦ ಲಕ್ಷ ಖರ್ಚು ಮಾಡ್ತೀರಾ?"
" ನನಗೆ ಮೂರು ಮಕ್ಕಳು. ಎಲ್ಲ ಅಮೇರಿಕಾ.. ಇಂಗ್ಲಂಡ್..ಅಂತ ದೂರ ಇದ್ದಾರೆ..ಎರಡು ವರ್ಷಕ್ಕೆ
ಒಮ್ಮೆ ಬಂದರೆ ನಮ್ಮ ಪುಣ್ಯ.. ಆ.. ಮಕ್ಕಳ ನೆನಪಿಗೆ ಈ ನಾಯಿಗಳನ್ನ
ಸಾಕಿದ್ದೇನೆ.. ಹೆಸರನ್ನೂ ಅವರದ್ದೇ ಇಟ್ಟಿದ್ದೇನೆ.. ಅಟಾಚ್ಮೆಂಟ್ ಸಾರ್.."
ನನಗೆ ಮುಂದೆ ಏನು ಹೇಳಬೇಕೆಂದು ತೋಚಲಿಲ್ಲ..ಈ ಮಕ್ಕಳು ಹಣದ ಆಸೆಗೆ ಬಿದ್ದು ಮುಪ್ಪಿನಲ್ಲಿರುವ
ತಂದೆ ತಾಯಿ ಬಿಟ್ಟು ಹೇಗಾದರೂ ಅಲ್ಲಿ ಆರಾಮಿರುತ್ತಾರೆ..?
ನಾನೀಗ ಅವರಿಗೆ ಸೈಟು ಹುಡುಕುವದರಲ್ಲಿ ನಿರತನಾಗಿದ್ದೇನೆ...
Monday, October 27, 2008
Thursday, October 23, 2008
ನಾನು ಬರಲ್ಲ.. ಸರ್.. ಇವತ್ತು ನನ್ನಜ್ಜನ ತಿಥಿ ಇದೆ...
ಸಿರ್ಸಿ ಹತ್ತಿರ ಕಾನಸೂರ್ ಹೈಸ್ಕೂಲ್.. ...
ಮಧ್ಯಾನ್ಹ ಕೊನೆಯ ಕ್ಲಾಸು......ನಾಗು ಕೊನೆಯ ಬೇಂಚಿನ ಸರದಾರ. ...
ಭೂಗೊಳ ಟೀಚರ್ ತಮಾಷೆಯಾಗಿ ಪಾಠ ಮಾಡಲಿಕ್ಕೆ ಹೆಸರುವಾಸಿ.
ನಮ್ಮ ಹೊಟ್ಟೆ ಚುರ್ ಗುಡುತ್ತಿದೆ.. .
ಬೆಲ್ಲಾಗುವದನ್ನೇ ಕಾಯುತ್ತಿದ್ದೆವು....
ಭೂಗೊಳ ಟೀಚರ್ ಕ್ಲಾಸ್ ಟೀಚರ್ ಕೂಡ ಆಗಿದ್ದರು.
ಬಂದವರೆ ...
"ಇವತ್ತು ನಾವು ಆಫ್ರಿಕಾ ಖಂಡಕ್ಕೆ ಹೋಗಿ ಬರೋಣ....."
ಅಂದರು....
ಅವರು ಪಾಠ ಶುರು ಮಾಡುವ ರೀತಿಯೆ ಹಾಗೆ..
ಸ್ವಲ್ಪ ತಮಾಶೆಯಾಗಿ ಪಾಠ ಮಾಡುತ್ತಿದ್ದರು.....
" ಸರ್.. ನಂಗೆ ಬರ್ಲಿಕ್ಕೆ ಆಗಲ್ಲ ...!!"
ನಾಗರಾಜ ಜೋರಾಗಿ ಹೇಳಿದ....!
ನಾಗು ಕೊನೆಯ ಬೇಂಚಿನ ಸರದಾರ. ...!!
"ಯಾಕೊ.. ಏನಾಯ್ತೊ.."
ಅವರೂ ತಮಾಷೆಯಾಗಿಯೇ ಕೇಳಿದರು.
" ಇವತ್ತು...ನನ್ನಜ್ಜನ..ತಿಥಿ.....
ನೆಂಟರೆಲ್ಲ ಬರ್ತಾರೆ..
ಮಧ್ಯಾನ್ಹದ ಮೇಲೆ ಶಾಲೆಗೆ ಹೊಗ್ಬೇಡ ಅಂತ ನನ್ನಪ್ಪ ಹೇಳಿದಾರೆ..ಸಾರ್.."
ನಾಗರಾಜ ಒಂದೆ ಕಲ್ಲಿಂದ ಎರಡು ಹಕ್ಕಿ ಹೋಡೆದಿದ್ದ. ...!!
ಕ್ಲಾಸ್ ಟೀಚರ್ ಬಳಿ ರಜೇನೂ ಕೇಳಿದಹಾಗಿತ್ತು ....!!
"ಅಷ್ಟರೊಳಗೆ ಬಂದು ಬಿಡೊಣ ಮಾರಾಯ.. !!.."
" ಲಂಚ್ ಟೈಮ್ನಲ್ಲಿ ಬಿಟ್ಟು ಬಿಡಿ ಸಾರ್...ಪ್ಲೀಸ್...."
" ಸರಿ ಮಾರಾಯಾ.. ಕುತ್ಗೋ...!!"
ನಾವೆಲ್ಲಾ ನಕ್ಕು ನಕ್ಕು ಸುಸ್ತಾದ್ವಿ....
ನಮ್ಮ ಹಸಿವೆ ಮರೆತು ಹೋಯ್ತು....
ನಮಗೆ ಕಲಿಸಿದ ಅವರು, ...
ಸ್ನೇಹಿತ ನಾಗು ಇನ್ನೂ ಆ ಘಟನೆ ನೆನಪಿಸಿಕೊಂಡು ನಗುತ್ತಿರುತ್ತೇವೆ..
ಆ .. ದಿನಗಳನ್ನು ಮರೆಯಲಿಕ್ಕುಂಟೆ...?
ಹಾಗಿತ್ತು.. ಗುರು ಶಿಷ್ಯರ ಸಂಬಂಧ.. ಆನುಬಂಧ....!
Tuesday, October 21, 2008
ಮಧ್ಯ ರಾತ್ರಿಯಲ್ಲಿ ವಾಸ್ತು ಪಾಠ
ಅದು ಶನಿವಾರ ರಾತ್ರಿ.
ಗಾಢವಾದ ನಿದ್ರೆಯಲ್ಲಿದ್ದೆ.
ನಮಗೆ ಶನಿವಾರ ಚೆನ್ನಾಗಿ ನಿದ್ರೆ ಬರುತ್ತದೆ.
ಸಪ್ಲೈದಾರರದ್ದು, ಲೇಬರ್ ಪೆಯ್ಮೆಂಟ್ ಆಗಿರುತ್ತದೆ.
ಮುಂದೆ ಒಂದುವಾರ ಪೇಯ್ಮೆಂಟಿನ ಚಿಂತೆ ಇರುವದಿಲ್ಲ....
ಅದಕ್ಕೆ ಶನಿವಾರ ಗುಂಡು ಪಾರ್ಟಿಗಳೂ ಇರುತ್ತದೆ.
ಹಾಗಾಗಿ ನಮಗೆ ನಿದ್ರೆನೂ ಜಾಸ್ತಿ,.....
ಮೊಬೈಲು ಕಿರಿ ಕಿರಿ ಕೂಡ ಇರುವದಿಲ್ಲ.
ಮನೆ ಕಟ್ಟಿಸುವ ಮಾಲಿಕರು, ಸೂಕ್ಶ್ಮತೆ ಇರುವವರು ಫೋನ್ ಮಾಡುವ ಸಾಹಸ ಮಾಡುವದಿಲ್ಲ.
ಆದರೂ ಫೋನ್ ರಿಂಗ್ ಆಗ್ತಾ ಇದೆ.......!!
ನಾನು ತಡಕಾಡಿ ಮೊಬೈಲು ತೆಗೆದುಕೊಂಡೆ.
ಮಧ್ಯ ರಾತ್ರಿ ೧೨ ಗಂಟೆ...
".. ಹಲೋ.. ಹೆಗಡೆಯವರಾ...??..!!.."
ಪರಿಚಯದ ಧ್ವನಿ..!!.
ಹೊಸತಾಗಿ ಮನೆಕಟ್ತಾ ಇದ್ದೆ. ಜವರೆ ಗೌಡರ ಧ್ವನಿ. ...!!
ತುಂಬಾ ಒಳ್ಳೆಯ ಜನ....
ಬಿಲ್ಲು ಕೊಟ್ಟ ತಕ್ಷಣ ಹಣ ರೆಡಿ....
ನಮ್ಮಂಥವರಿಗೆ ಮಾಡಿದ ಕೆಲಸಕ್ಕೆ ಹಣ ಬಂದೆರೆ ಅವರು ತುಂಬಾ ಒಳ್ಳೆಯ ಜನ...
"ಹೌದು ಸಾರ್.. ಏನು ಇಷ್ಟೊತ್ನಲ್ಲಿ..?? !!..
ಬೆಳಿಗ್ಗೆ ಮಾತಡೊಣ ಸಾರ್.."... ಎಂದೆ.
"ಮತ್ತೇನಿಲ್ಲ.. ಮನೆ ಪ್ಲಾನ್ ನೊಡ್ತಾ ಇದ್ದೆ.. ...
ಸ್ವಲ್ಪ ಬದಲಾವಣೆ.. ಮಾಡೊಣ.. ಅಂತಾ..."
ಇದು ಬಹಳ ಸಹಜ....
ಜೀವಮಾನವಿಡಿ ಹಣ ಉಳಿತಾಯ ಮಾಡಿ..
ತಮ್ಮ ಆಸೆ.. ಬೇಕು ಬೇಡಗಳನ್ನು ತಡೆ ಹಿಡಿದು... ಕಟ್ಟಿಸುತ್ತಾರಲ್ಲ...
ಹಗಲಿರುಳು ಮನೆಯದೆ ಕನಸು.. ಮಾತು....!
"ಗೌಡ್ರೆ.. ಬೆಳೀಗ್ಗೆ ಮಾತಾಡೊಣ.. ಪ್ಲೀಸ್..."
ಬಹಳ ವಿನಯವಾಗಿ ಹೇಳಿದೆ.. ಅವರು ಅನ್ನದಾತರಲ್ಲವೆ..?
" ಅಲ್ಲ.... ಹೆಗಡೆಯವರೆ...ಸ್ವಲ್ಪ ..
ಸ್ಮಾಲ್ .... ಸಣ್ಣ ಚೇಂಜು..
ಈಗಿನ ಪ್ಲ್ಯಾನ್ ಪ್ರಕಾರ...
ನಮ್ಮ ಟಾಯ್ಲೆಟ್ ಪೂರ್ವ ಪಶ್ಚಿಮಇದೆ... ........
ಅದನ್ನಾ.. ಉತ್ತರ ದಕ್ಶಿಣಕ್ಕೆ ಮಡಗಬೇಕು..!!..."
ನನಗೆ ಮೈಯೆಲ್ಲ ಉರಿದು ಹೊಯಿತು... ಬಂಗಾರದಂತಾ ನಿದ್ರೆ...!!
ಮಧ್ಯರಾತ್ರಿ ಬೇರೆ...
" ಯಾಕೆ ಸಾರ್.??!!...ಹೀಗೇ ಇದ್ರೆ.. ಸಂಡಾಸ್ ಬರಲ್ವಾ..??"
" ಛೆ,, ಛೆ.. ಹಾಗಲ್ಲ.. ಹೆಗಡೆಯವರೆ..
ವಾಸ್ತು ಪ್ರಕಾರಾ.. ಉತ್ತರ ದಕ್ಶಿಣವಾಗೇ ಮಡಗಬೇಕಂತೆ...
ಮನೆಯವರೆಲ್ಲರ ಆರೋಗ್ಯ ಚೆನ್ನಾಗಿರುತ್ತದಂತೆ...!!."
ಅವರ ಮನೆ.. ಅವರ ಟೊಯ್ಲೆಟ್.. !!
ನಂಗೆನಂತೆ..? ??!!
ವಾಸ್ತು ಪಾಠ ಜಲ್ದಿ ಮುಗಿಸಿ,
ಮುಸುಕೆಳೆದು ಮಲಗಿದೆ.
ಅಂದಿನಿಂದ ಮೊಬೈಲು ಸ್ವಿಚ್ ಆಪ್ ಮಾಡುವದು ಕಡ್ಡಾಯ ಮಾಡಿಕೊಂಡೆ....
ಗಾಢವಾದ ನಿದ್ರೆಯಲ್ಲಿದ್ದೆ.
ನಮಗೆ ಶನಿವಾರ ಚೆನ್ನಾಗಿ ನಿದ್ರೆ ಬರುತ್ತದೆ.
ಸಪ್ಲೈದಾರರದ್ದು, ಲೇಬರ್ ಪೆಯ್ಮೆಂಟ್ ಆಗಿರುತ್ತದೆ.
ಮುಂದೆ ಒಂದುವಾರ ಪೇಯ್ಮೆಂಟಿನ ಚಿಂತೆ ಇರುವದಿಲ್ಲ....
ಅದಕ್ಕೆ ಶನಿವಾರ ಗುಂಡು ಪಾರ್ಟಿಗಳೂ ಇರುತ್ತದೆ.
ಹಾಗಾಗಿ ನಮಗೆ ನಿದ್ರೆನೂ ಜಾಸ್ತಿ,.....
ಮೊಬೈಲು ಕಿರಿ ಕಿರಿ ಕೂಡ ಇರುವದಿಲ್ಲ.
ಮನೆ ಕಟ್ಟಿಸುವ ಮಾಲಿಕರು, ಸೂಕ್ಶ್ಮತೆ ಇರುವವರು ಫೋನ್ ಮಾಡುವ ಸಾಹಸ ಮಾಡುವದಿಲ್ಲ.
ಆದರೂ ಫೋನ್ ರಿಂಗ್ ಆಗ್ತಾ ಇದೆ.......!!
ನಾನು ತಡಕಾಡಿ ಮೊಬೈಲು ತೆಗೆದುಕೊಂಡೆ.
ಮಧ್ಯ ರಾತ್ರಿ ೧೨ ಗಂಟೆ...
".. ಹಲೋ.. ಹೆಗಡೆಯವರಾ...??..!!.."
ಪರಿಚಯದ ಧ್ವನಿ..!!.
ಹೊಸತಾಗಿ ಮನೆಕಟ್ತಾ ಇದ್ದೆ. ಜವರೆ ಗೌಡರ ಧ್ವನಿ. ...!!
ತುಂಬಾ ಒಳ್ಳೆಯ ಜನ....
ಬಿಲ್ಲು ಕೊಟ್ಟ ತಕ್ಷಣ ಹಣ ರೆಡಿ....
ನಮ್ಮಂಥವರಿಗೆ ಮಾಡಿದ ಕೆಲಸಕ್ಕೆ ಹಣ ಬಂದೆರೆ ಅವರು ತುಂಬಾ ಒಳ್ಳೆಯ ಜನ...
"ಹೌದು ಸಾರ್.. ಏನು ಇಷ್ಟೊತ್ನಲ್ಲಿ..?? !!..
ಬೆಳಿಗ್ಗೆ ಮಾತಡೊಣ ಸಾರ್.."... ಎಂದೆ.
"ಮತ್ತೇನಿಲ್ಲ.. ಮನೆ ಪ್ಲಾನ್ ನೊಡ್ತಾ ಇದ್ದೆ.. ...
ಸ್ವಲ್ಪ ಬದಲಾವಣೆ.. ಮಾಡೊಣ.. ಅಂತಾ..."
ಇದು ಬಹಳ ಸಹಜ....
ಜೀವಮಾನವಿಡಿ ಹಣ ಉಳಿತಾಯ ಮಾಡಿ..
ತಮ್ಮ ಆಸೆ.. ಬೇಕು ಬೇಡಗಳನ್ನು ತಡೆ ಹಿಡಿದು... ಕಟ್ಟಿಸುತ್ತಾರಲ್ಲ...
ಹಗಲಿರುಳು ಮನೆಯದೆ ಕನಸು.. ಮಾತು....!
"ಗೌಡ್ರೆ.. ಬೆಳೀಗ್ಗೆ ಮಾತಾಡೊಣ.. ಪ್ಲೀಸ್..."
ಬಹಳ ವಿನಯವಾಗಿ ಹೇಳಿದೆ.. ಅವರು ಅನ್ನದಾತರಲ್ಲವೆ..?
" ಅಲ್ಲ.... ಹೆಗಡೆಯವರೆ...ಸ್ವಲ್ಪ ..
ಸ್ಮಾಲ್ .... ಸಣ್ಣ ಚೇಂಜು..
ಈಗಿನ ಪ್ಲ್ಯಾನ್ ಪ್ರಕಾರ...
ನಮ್ಮ ಟಾಯ್ಲೆಟ್ ಪೂರ್ವ ಪಶ್ಚಿಮಇದೆ... ........
ಅದನ್ನಾ.. ಉತ್ತರ ದಕ್ಶಿಣಕ್ಕೆ ಮಡಗಬೇಕು..!!..."
ನನಗೆ ಮೈಯೆಲ್ಲ ಉರಿದು ಹೊಯಿತು... ಬಂಗಾರದಂತಾ ನಿದ್ರೆ...!!
ಮಧ್ಯರಾತ್ರಿ ಬೇರೆ...
" ಯಾಕೆ ಸಾರ್.??!!...ಹೀಗೇ ಇದ್ರೆ.. ಸಂಡಾಸ್ ಬರಲ್ವಾ..??"
" ಛೆ,, ಛೆ.. ಹಾಗಲ್ಲ.. ಹೆಗಡೆಯವರೆ..
ವಾಸ್ತು ಪ್ರಕಾರಾ.. ಉತ್ತರ ದಕ್ಶಿಣವಾಗೇ ಮಡಗಬೇಕಂತೆ...
ಮನೆಯವರೆಲ್ಲರ ಆರೋಗ್ಯ ಚೆನ್ನಾಗಿರುತ್ತದಂತೆ...!!."
ಅವರ ಮನೆ.. ಅವರ ಟೊಯ್ಲೆಟ್.. !!
ನಂಗೆನಂತೆ..? ??!!
ವಾಸ್ತು ಪಾಠ ಜಲ್ದಿ ಮುಗಿಸಿ,
ಮುಸುಕೆಳೆದು ಮಲಗಿದೆ.
ಅಂದಿನಿಂದ ಮೊಬೈಲು ಸ್ವಿಚ್ ಆಪ್ ಮಾಡುವದು ಕಡ್ಡಾಯ ಮಾಡಿಕೊಂಡೆ....
Friday, October 10, 2008
ವಾಸ್ತು ಮತ್ತು ಅವಾಸ್ತವ?
ಹತ್ತು ವರ್ಷಗಳ ಹಿಂದೆ ಬಹಳ ಚೆನ್ನಾಗಿತ್ತು.
ಮನೆ ಕಟ್ಟುವಾಗ ಜಾಗವನ್ನು ವೇಸ್ಟ್ ಮಾಡದೆ ಒಳ್ಳೆಯ ಪ್ಲಾನ್ ಮಾಡಬಹುದಿತ್ತು.
ಈ ವಾಸ್ತು ಎನ್ನುವ ಭೂತ ಬಂದು ಎಲ್ಲಾ ಅಡಪೊಟ್ರು ಆಯಿತು.....
ವಾಸ್ತು ಸರಿನಾ?.... ತಪ್ಪಾ? ...
ಗೊತ್ತಿಲ್ಲದ ವಿಷಯದ ಬಗ್ಗೆ ಅನಗತ್ಯ ಮಾತು ಬೇಡ.
ಅದರ ಬಗೆಗೆ ಇನ್ನೂ ಆಳವಾದ ಅಭ್ಯಾಸ, ಸಂಶೊಧನೆ ನಡೆಯಬೇಕಿದೆ.
ಆಗ ಕೆಂಗೇರಿಯಲ್ಲಿ ಒಂದು ಮನೆ ಕಟ್ಟುತಿದ್ದೆ.
ಮಾಲಿಕರು ಬಹಳ ಸಭ್ಯರು.
ಮನೆ ವಾಸ್ತು ಪ್ರಕಾರವಾಗಿರ ಬೇಕೆಂದು ಹೇಳಿದ್ದರು.
ಆಗ ತಾನೆ ವಾಸ್ತು ಎಂಬ ಭ್ರಮೆ ಬೆಂಗಳೂರನ್ನು ಹೊಕ್ಕಿತ್ತು.
ನಾನು ಪುಸ್ತಕದ ಅಂಗಡಿಗಳಿಗೆ ಹೋಗಿ ವಾಸ್ತು ಪುಸ್ತಕಗಳನ್ನು ತಂದು ಅಭ್ಯಾಸ ಮಾಡಿ ಪ್ಲಾನ್ ತಯಾರಿಸಿದೆ.
ಒಬ್ಬರು ಬರೆದ ಪುಸ್ತಕಕ್ಕೂ ಮತ್ತೊಬ್ಬರು ಬರೆದುದಕ್ಕೂ ಬಹಳ ವ್ಯತ್ಯಾಸ....!!
ಎಲ್ಲಾ ಉಲ್ಟಾ ಪಲ್ಟಾ....!!
ಆಗ ನನ್ನ ಬಿಸಿನೆಸ್ ಪಾಲುದಾರ ಸತ್ಯ ಹೇಳಿದ....
"ಪ್ರಕಾಶು.... ತಿರುಪತಿ ರೆಡ್ಡಿ ಅಂತ ಬರೆದ ಪುಸ್ತಕ ಬಹಳ ಪ್ರಸಿದ್ದ ವಾಗಿದೆ...
ಅದನ್ನು ಓದಿ ಪ್ಲ್ಯಾನು ಮಾಡು"
ನಾನು ಸತ್ಯನ ಮಾತಿಗೆ ಮತ್ತೆ ಎದುರು ಮಾತಾಡುವದಿಲ್ಲ...
ಅವನು ಮಾತಾಡುವದು ಬಹಳ ಕಡಿಮೆ...
ಆಡಿದ ಮಾತುಗಳು ತೂಕದ ಮಾತುಗಳು....
ನಾನು ಹಾಗೆ ಮಾಡಿದೆ....
ಅವರಿಗೂ ಆ ಪುಸ್ತಕಗಳನ್ನು ಕೊಟ್ಟಿದ್ದೆ.
ಅದೆ ರೀತಿ ಮನೆ ಕೂಡ ತಯಾರಾಯಿತು.
ಮಾಲೀಕರು ತುಂಬಾ ಖುಷಿಯಲ್ಲಿದ್ದರು...
ಮನೆಕಟ್ಟಿಸುವವರ ಖುಷಿಗಾಗಿ ನಾವು ಕಾತುರದಿಂದ ಕಾಯುತ್ತೇವೆ....
ಗ್ರಹಪ್ರವೇಶದ ದಿನ ಬಂದ ನೆಂಟರು ಸುಮ್ಮನೆ ಇರಬೇಕೆ?
ಖರೇ ಹೇಳಬೇಕೆಂದರೆ ಈ ನೆಂಟರೆಂದರೆ ನನಗೆ ಹೆದರಿಕೆ.
ಅವರಿಗೆ ಈ ಮನೆ ನೋಡಿ....
ಹೊಟ್ಟೆಕಿಚ್ಚೋ, ಸಂತೋಷಾನೊ ಗೊತ್ತಾಗಲಿಲ್ಲ. !!
ಅಥವಾ ತಮ್ಮ ಮನೆ ಈ ತರಹ ಆಗಲಿಲ್ಲವಲ್ಲಾ ಅನ್ನುವ ಬೇಜಾರೋ...!
ಗೊತ್ತಾಗುವದಿಲ್ಲ....
ನನ್ನಕಡೆ ಒಂಥರಾ ನೋಡಿ... ನನ್ನನ್ನು ನೋಡುತ್ತಾ ಗುಂಪು ಕಟ್ಟಿ ಮಾತಾಡುತ್ತಿದ್ದರು....
ಹೊಗುವಾಗ ಮಾಲಿಕರನ್ನು ಕರೆದರು...
ನಾನು ಪಕ್ಕದಲ್ಲೇ ಇದ್ದೆ....
" ಮನೆ ಚೆನ್ನಗಿದೆ ಕಣಯ್ಯಾ...
ಆದರೆ ..
ದೇವರ ಮನೆಮೇಲೆ ಅಟ್ಟ ಯಾರದ್ರೂ ಮಾಡಸ್ತಾರೇನಯ್ಯ?
ಬಂಗಾರದಂಥಹ ಮನೆಕತ್ತಿಸಿ ದೇವರ ತಲೆ ಮೇಲೆ ಭಾರ ಇಟ್ಟು ಬಿಟ್ಟಿದ್ದೇಯಲ್ಲ.....!!
ನಿನಗಂತೂ ಬುದ್ಧಿ ಇಲ್ಲ. .... ಮುಗ್ಧ.....!!
ಆ ಇಂಜನೀಯರಗೂ ತಲೆ ಇಲ್ವೆ...?
ದೇವರ ಮೇಲೆ ಭಾರ ಇಡಬಾರದು. ಮೊದ್ಲು ಅಟ್ಟ .... ತೆಗೆಸು...."
ಎಂದು ಅಪ್ಪಣೆ ಕೊಡಿಸಿದ್ರು.
ನನ್ನ ಕಡೆ ನೋಡದೆ ಗಂಭೀರ ವದನರಾಗಿ ಜಾಗ ಖಾಲಿ ಮಾಡಿದರು.....
ಗ್ರಹಪ್ರವೇಷದ ಮರು ದಿವಸವೇ ಅಟ್ಟ ಒಡೆಸಲಾಯಿತು.
ಅದೆ ಸಮಯದಲ್ಲಿ ಗಿರಿನಗರದ ಭುವನಗಿರಿ ಅನಂತಶರ್ಮರ ಮನೆಯನ್ನೂ ಕಟ್ಟುತ್ತಿದ್ದೆ.
ಅವರು ಸಂಸ್ಕ್ರತ ಪಂಡಿತರು, ಬಹಳ ಓದಿದವರು,
ವೇದಾಧ್ಯಯನ ಮಾಡಿದವರು.
ಅವರ ಮನೆ ದೇವರ ಮನೆ ಕಟ್ಟುವಾಗ ಅಟ್ಟ ಬೇಕೆ? ಬೇಡವೆ?
ಸಂಶಯ ಅವರ ಬಳಿಯೇ ಕೇಳಿದೆ........
ಹಾಗೆ ಕೆಂಗೆರಿ ಅನುಭವನೂ ಹೇಳಿದೆ.
ಅವರು .. ಹೆಚ್ಚಿಗೆ ತಲೆ ಕೆಡಿಸಿ ಕೊಲ್ಲಲಿಲ್ಲ....
"ನೋಡು ತಮ್ಮಾ..
ನಾವು ಏನೂ ತಲೆಗೆ ತಗೋ ಬಾರದು,
ಎಲ್ಲ ಭಾರಾನೂ ದೇವರ ಮೇಲೇ ಹಾಕಬೇಕು.
ನೀನು ದೇವರನ್ನು ಪ್ರಾರ್ತಿಸೋದು ಯಾಕೆ...?
ನೀನು ದೇವರ ಮನೆ ಮೇಲೆ ಅಟ್ಟ ಹಾಕು..
ಭಾರ ಎಲ್ಲ ದೇವರ ಮೇಲೇ ಹಾಕಬೇಕು!!!
ಅವನೇ ಹೊರ ಬೇಕು...!!"
ಅಂದರು.
ನನಗು ಹೌದೆನಿಸಿತು........!!
ಮನೆ ಕಟ್ಟುವಾಗ ಜಾಗವನ್ನು ವೇಸ್ಟ್ ಮಾಡದೆ ಒಳ್ಳೆಯ ಪ್ಲಾನ್ ಮಾಡಬಹುದಿತ್ತು.
ಈ ವಾಸ್ತು ಎನ್ನುವ ಭೂತ ಬಂದು ಎಲ್ಲಾ ಅಡಪೊಟ್ರು ಆಯಿತು.....
ವಾಸ್ತು ಸರಿನಾ?.... ತಪ್ಪಾ? ...
ಗೊತ್ತಿಲ್ಲದ ವಿಷಯದ ಬಗ್ಗೆ ಅನಗತ್ಯ ಮಾತು ಬೇಡ.
ಅದರ ಬಗೆಗೆ ಇನ್ನೂ ಆಳವಾದ ಅಭ್ಯಾಸ, ಸಂಶೊಧನೆ ನಡೆಯಬೇಕಿದೆ.
ಆಗ ಕೆಂಗೇರಿಯಲ್ಲಿ ಒಂದು ಮನೆ ಕಟ್ಟುತಿದ್ದೆ.
ಮಾಲಿಕರು ಬಹಳ ಸಭ್ಯರು.
ಮನೆ ವಾಸ್ತು ಪ್ರಕಾರವಾಗಿರ ಬೇಕೆಂದು ಹೇಳಿದ್ದರು.
ಆಗ ತಾನೆ ವಾಸ್ತು ಎಂಬ ಭ್ರಮೆ ಬೆಂಗಳೂರನ್ನು ಹೊಕ್ಕಿತ್ತು.
ನಾನು ಪುಸ್ತಕದ ಅಂಗಡಿಗಳಿಗೆ ಹೋಗಿ ವಾಸ್ತು ಪುಸ್ತಕಗಳನ್ನು ತಂದು ಅಭ್ಯಾಸ ಮಾಡಿ ಪ್ಲಾನ್ ತಯಾರಿಸಿದೆ.
ಒಬ್ಬರು ಬರೆದ ಪುಸ್ತಕಕ್ಕೂ ಮತ್ತೊಬ್ಬರು ಬರೆದುದಕ್ಕೂ ಬಹಳ ವ್ಯತ್ಯಾಸ....!!
ಎಲ್ಲಾ ಉಲ್ಟಾ ಪಲ್ಟಾ....!!
ಆಗ ನನ್ನ ಬಿಸಿನೆಸ್ ಪಾಲುದಾರ ಸತ್ಯ ಹೇಳಿದ....
"ಪ್ರಕಾಶು.... ತಿರುಪತಿ ರೆಡ್ಡಿ ಅಂತ ಬರೆದ ಪುಸ್ತಕ ಬಹಳ ಪ್ರಸಿದ್ದ ವಾಗಿದೆ...
ಅದನ್ನು ಓದಿ ಪ್ಲ್ಯಾನು ಮಾಡು"
ನಾನು ಸತ್ಯನ ಮಾತಿಗೆ ಮತ್ತೆ ಎದುರು ಮಾತಾಡುವದಿಲ್ಲ...
ಅವನು ಮಾತಾಡುವದು ಬಹಳ ಕಡಿಮೆ...
ಆಡಿದ ಮಾತುಗಳು ತೂಕದ ಮಾತುಗಳು....
ನಾನು ಹಾಗೆ ಮಾಡಿದೆ....
ಅವರಿಗೂ ಆ ಪುಸ್ತಕಗಳನ್ನು ಕೊಟ್ಟಿದ್ದೆ.
ಅದೆ ರೀತಿ ಮನೆ ಕೂಡ ತಯಾರಾಯಿತು.
ಮಾಲೀಕರು ತುಂಬಾ ಖುಷಿಯಲ್ಲಿದ್ದರು...
ಮನೆಕಟ್ಟಿಸುವವರ ಖುಷಿಗಾಗಿ ನಾವು ಕಾತುರದಿಂದ ಕಾಯುತ್ತೇವೆ....
ಗ್ರಹಪ್ರವೇಶದ ದಿನ ಬಂದ ನೆಂಟರು ಸುಮ್ಮನೆ ಇರಬೇಕೆ?
ಖರೇ ಹೇಳಬೇಕೆಂದರೆ ಈ ನೆಂಟರೆಂದರೆ ನನಗೆ ಹೆದರಿಕೆ.
ಅವರಿಗೆ ಈ ಮನೆ ನೋಡಿ....
ಹೊಟ್ಟೆಕಿಚ್ಚೋ, ಸಂತೋಷಾನೊ ಗೊತ್ತಾಗಲಿಲ್ಲ. !!
ಅಥವಾ ತಮ್ಮ ಮನೆ ಈ ತರಹ ಆಗಲಿಲ್ಲವಲ್ಲಾ ಅನ್ನುವ ಬೇಜಾರೋ...!
ಗೊತ್ತಾಗುವದಿಲ್ಲ....
ನನ್ನಕಡೆ ಒಂಥರಾ ನೋಡಿ... ನನ್ನನ್ನು ನೋಡುತ್ತಾ ಗುಂಪು ಕಟ್ಟಿ ಮಾತಾಡುತ್ತಿದ್ದರು....
ಹೊಗುವಾಗ ಮಾಲಿಕರನ್ನು ಕರೆದರು...
ನಾನು ಪಕ್ಕದಲ್ಲೇ ಇದ್ದೆ....
" ಮನೆ ಚೆನ್ನಗಿದೆ ಕಣಯ್ಯಾ...
ಆದರೆ ..
ದೇವರ ಮನೆಮೇಲೆ ಅಟ್ಟ ಯಾರದ್ರೂ ಮಾಡಸ್ತಾರೇನಯ್ಯ?
ಬಂಗಾರದಂಥಹ ಮನೆಕತ್ತಿಸಿ ದೇವರ ತಲೆ ಮೇಲೆ ಭಾರ ಇಟ್ಟು ಬಿಟ್ಟಿದ್ದೇಯಲ್ಲ.....!!
ನಿನಗಂತೂ ಬುದ್ಧಿ ಇಲ್ಲ. .... ಮುಗ್ಧ.....!!
ಆ ಇಂಜನೀಯರಗೂ ತಲೆ ಇಲ್ವೆ...?
ದೇವರ ಮೇಲೆ ಭಾರ ಇಡಬಾರದು. ಮೊದ್ಲು ಅಟ್ಟ .... ತೆಗೆಸು...."
ಎಂದು ಅಪ್ಪಣೆ ಕೊಡಿಸಿದ್ರು.
ನನ್ನ ಕಡೆ ನೋಡದೆ ಗಂಭೀರ ವದನರಾಗಿ ಜಾಗ ಖಾಲಿ ಮಾಡಿದರು.....
ಗ್ರಹಪ್ರವೇಷದ ಮರು ದಿವಸವೇ ಅಟ್ಟ ಒಡೆಸಲಾಯಿತು.
ಅದೆ ಸಮಯದಲ್ಲಿ ಗಿರಿನಗರದ ಭುವನಗಿರಿ ಅನಂತಶರ್ಮರ ಮನೆಯನ್ನೂ ಕಟ್ಟುತ್ತಿದ್ದೆ.
ಅವರು ಸಂಸ್ಕ್ರತ ಪಂಡಿತರು, ಬಹಳ ಓದಿದವರು,
ವೇದಾಧ್ಯಯನ ಮಾಡಿದವರು.
ಅವರ ಮನೆ ದೇವರ ಮನೆ ಕಟ್ಟುವಾಗ ಅಟ್ಟ ಬೇಕೆ? ಬೇಡವೆ?
ಸಂಶಯ ಅವರ ಬಳಿಯೇ ಕೇಳಿದೆ........
ಹಾಗೆ ಕೆಂಗೆರಿ ಅನುಭವನೂ ಹೇಳಿದೆ.
ಅವರು .. ಹೆಚ್ಚಿಗೆ ತಲೆ ಕೆಡಿಸಿ ಕೊಲ್ಲಲಿಲ್ಲ....
"ನೋಡು ತಮ್ಮಾ..
ನಾವು ಏನೂ ತಲೆಗೆ ತಗೋ ಬಾರದು,
ಎಲ್ಲ ಭಾರಾನೂ ದೇವರ ಮೇಲೇ ಹಾಕಬೇಕು.
ನೀನು ದೇವರನ್ನು ಪ್ರಾರ್ತಿಸೋದು ಯಾಕೆ...?
ನೀನು ದೇವರ ಮನೆ ಮೇಲೆ ಅಟ್ಟ ಹಾಕು..
ಭಾರ ಎಲ್ಲ ದೇವರ ಮೇಲೇ ಹಾಕಬೇಕು!!!
ಅವನೇ ಹೊರ ಬೇಕು...!!"
ಅಂದರು.
ನನಗು ಹೌದೆನಿಸಿತು........!!
Monday, October 6, 2008
ನಂಬಿಕೆ ವಿಶ್ವಾಸಗಳ ಬಗೆಗೆ ಬಹಳ ದುಬಾರಿ ಪಾಠ
ಇದು ತೀರಾ ವಯಕ್ತಿಕ ವಿಚಾರ,...
ಇದನ್ನ ಬ್ಲೊಗನಲ್ಲಿ ಹಾಕಬೇಡಿ ಎಂದು ನನ್ನ ಗೆಳೆಯ ಶಿವು ಹೇಳಿದ್ದರು.
ಇದು ದೂಷಣೆಗಾಗಿ ಅಲ್ಲ....
ಒಂದು ಅನುಭವ, ಹಂಚಿಕೊಳ್ಳಲಿಕ್ಕೆ.
ಅವರು ನನ್ನ ದೂರದ ಸಂಬಂಧ.
ಬಹಳ ಗೌರವಾನ್ವಿತರು...
ಅವರು ಅದರ ಬಗೆಗೆ ಬಹಳ ಬಹಳ ಮಾತಾನಾಡಿ,...
ನನ್ನ ಬಳಿ ಮನೆ ಕಟ್ಟುವ ವಿಚಾರವಾಗಿ ಮಾತಾಡಿದರು. ...
ನನಗೂ ಖುಶಿಯಾಯಿತು....
ಎರಡು ಬೆಡ್ ರೂಮ್, ಒಂದು ಹಾಲ್, ಎರಡು ಬಾಥರೂಮ್, ನೆಲ ಮಾಳಿಗೆ ಕಟ್ಟುವದು ಎಂದು ಪ್ಲಾನ್ ತಯಾರಾಯಿತು.
ಎಸ್ಟಿಮೇಶನ್ ೧೨ ಲಕ್ಷ. ...
ಕೆಲಸ ಶುರುವಾಯಿತು...
ದಿನಾ ಸಾಯಂಕಾಲ ಮನೆಗೆ ಬಂದು ಕೊರೆಯವದು,...
ಅವಲಕ್ಕಿ, ಕಾಫಿ ಇತ್ಯಾದಿ ಮಾಮೂಲಾಯಿತು....
ಆಗ ತಾನೆ ಮೊಬೈಲು ಬಂದಿತ್ತು....
ಇವರು ಮನೆಗೆ ಹೋಗಿ ಮತ್ತೆ ಕೊರೆಯುತ್ತಿದ್ದರು....
ಆಗ ಒಳಬರುವ ಕರೆಗಳಿಗೂ ೫೦ ಪೈಸೆ ಚಾರ್ಜ್ ಮಾಡುತಿದ್ದರು. ...
ಆಫೀಸಿನಿಂದಲೂ ಕೊರೆಯುತ್ತಿದ್ದರು....
ದಿನಾಲು ಪ್ಲಾನ್ ಬದಲಾಗುತಿತ್ತು....
ಗೋಡೆ ಕಟ್ಟುವದು, ಒಡೆಯುವದು ಮಾಮೂಲಾಗಿತ್ತು. ...
.. ಕಟ್ಟುವದಕ್ಕಿಂತ... ... ಹೆಚ್ಚಿಗೆ ಆಲಿ ಒಡೆಯುವ ಕೆಲಸ ಜಾಸ್ತಿ ಇರುತ್ತಿತ್ತು....
ಹಾಗೆ ನಗರದಲ್ಲಿ ೩೦* ೪೦ ಜಾಗ ಇತ್ತು....
ಅಲ್ಲೂ ನನ್ನ ಬಳಿ ಕೆಲಸ ಶುರು ಮಾಡಿಸಿದರು...!
ಎಸ್ತಿಮೆಶನ್ ಜಾಸ್ತಿಯಾಗುತ್ತಿದೆ ಎಂದು ಹೆಳಿದರೂ ಲಕ್ಷ ಮಾಡಲಿಲ್ಲ....
ನಾನು ಸ್ವಲ್ಪ ಪಾಪ ಪುಣ್ಯದ ವ್ಯಕ್ತಿ. ಇವರು ಮೋಸ ಮಾಡಲಾರರು ಅಂದು ಕೊಂಡೆ.
ಆಗ ೩೦ ಮನೆ ಕಟ್ಟಿದರೂ ಬಾಡಿಗೆ ಮನೆಯಲ್ಲೆ ಇದ್ದೆ.....
ಶುರುವಿನಲ್ಲಿ ಬಿಲ್ಲು ಕೊಟ್ಟ ಹಾಗೆ ಹಣ ಕೊಟ್ಟರು ...
ಗ್ರಹಪ್ರವೇಶದ ದಿನ ಬಂತು....
೩.೬೦ಲಕ್ಷ ಬಿಲ್ಲು ಆಗಿತ್ತು....
ಸಪ್ಲೈದಾರರು ಬಾಕಿ ಹಣ ಕೇಳುತಿದ್ದರು.
"ನೋಡಪ್ಪ ಪೂಜಾ ಮಾಡಿ ನಂತರ ಬಾಕಿ ಕೊಡುತ್ತೇನೆ. ದಯವಿಟ್ಟು ಆಗಲ್ಲ ಅನ್ನಬೇಡ" ಅಂದರು.
ನನಗೆ ಬಹಳ ತೊಂದರೆ ಆಗುತ್ತಿದ್ದರೂ,..
ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.
ಗ್ರಹಪ್ರವೇಶ ಅದ್ದೂರಿಯಾಗಿಯೆ ಆಯಿತು.....
ನಂತರ ನನ್ನ ಕಣ್ಣು ತಪ್ಪಿಸಲು ಶುರು ಮಾಡಿದರು....
ನಾನು ಬಿಲ್ಲ್ ಕೊಟ್ಟೆ. ೪ ಲಕ್ಷದ ಮೆಲೆ ಆಗಿತ್ತು.
ಹಣ ಕೊಡುವ ಮಾತೆ ಇಲ್ಲವಾಗಿತ್ತು....
ಕೇಳಿದರೆ ಹೆಂಡತಿಯ ಹೆಸರು ಹೇಳಲಿಕ್ಕೆ ಶುರು ಮಾಡಿದರು...
. "ಮಾರಾಯರೆ, ನಿಮ್ಮ ಬಿಲ್ಲು ತುಂಬಾ ಜಾಸ್ತಿ ಆಯಿತಂತೆ....
ಹೆಂಡತಿ ಹೆಳ್ತಾಳೆ.. ಅವಳು ಒಪ್ಪಿದರೆ.. ತಕ್ಷಣ ವ್ಯವಸ್ತೆ ಮಾಡ್ತೇನೆ"
ಎಂದು ಹೊಸ ರಾಗ ಶುರು ಮಾಡಿದರು.
ನಿಮಗೆ ಇನ್ನೂ ಒಂದು ವಿಷಯ ಹೇಳಬೆಕು.
ಅವರ ಮನೆ ಮುಗಿಯುವಷ್ಟರಲ್ಲಿ ೪ ರೂಮುಗಳು, ೨ ಹಾಲುಗಳು, ೪ಬಾಥರೂಮುಗಳು, ಒಂದು ಡಾರ್ಕ್ ರೂಮ್ ( ಅವರ ಫೊಟೊ ಕೆಲಸಕ್ಕೆ), ಒಂದು ಸ್ಟೇರಕೇಸ್ ಹೆಚ್ಚಾಗಿ ಮಾಡಿಸಿದ್ದರು....
ನಗರದ ಮನೆಯೂ ಸೆರಿ ನಾನು ೧೭ ಲಕ್ಷದ ಬಿಲ್ಲ್ ಕೊಟ್ಟಿದ್ದೆ.
ಕೆಲಸ ನಡೆಯುವಾಗ ಈ ಕಡೆ ತಲೆ ಹಾಕಿರದ ಆ ಮಹಾತಾಯಿ...
ಮಾತಲ್ಲಿ ಜೋರಾಗಿಯೇ... ಇದ್ದರು.
" ನೋಡಪ್ಪ ನಿನ್ನ ಬಿಲ್ಲು ಜಾಸ್ತಿ... ಅದೆಲ್ಲಾ ಕೊಡಕಾಗಲ್ಲ. ೫೦ ಸಾವಿರಕ್ಕೆ ಅಡ್ಜಸ್ಟು ಮಾಡಿಕೊ"
ಎಂದು ಬಹಳ ಗತ್ತಿನಿಂದ ಹೇಳಿದರು.
ಕೊನೆಯದಾಗಿ ಹೆಂಡತಿ ಹೆಗಲ ಮೇಲೆ ಗನ್ ಇಟ್ಟು ನನಗೆ ಹೊಡೆಯುವ ಕೆಲಸದಲ್ಲಿ ಯಶಸ್ವಿಯಾದರು.
ಹಣ ಬರಲಿಲ್ಲ...
ನಂಬಿ ಕೆಟ್ಟವರಿಲ್ಲ ಎಂದು ಹೇಳುತ್ತಾರೆ....
ವ್ಯವಹಾರವೇ ಬೇರೆ... ಸಂಬಂಧ, ಭಾವುಕತನವೆ ಬೇರೆ... !
ಹೀಗೆ ನನಗೆ ಬೇಡವಾದ ಪಾಠ ಬಹಳ ನೋವಿನಲ್ಲಿ ಕಲಿತೆ. ...
೩.೫ ಲಕ್ಷ ಕೊಟ್ಟು ಕಲಿಯ ಬೇಕಾಯಿತು !!!
ಈ ಘಟನೆಯಿಂದ ಮನಸ್ಸಿಗೆ ಘಾಸಿಯಾಗಿದೆ..
ಬಹಳ ನೋವಾಗಿದೆ..
ಬಹಳ ದಿನಗಳಿಂದ ನನ್ನಲ್ಲಿರುವ ಮಗುವನ್ನು ಜತನವಾಗಿ ಇರಿಸಿಕೊಂಡಿದ್ದೆ....!
ಈ ಘಟನೆಯ ನಂತರ ಆ ಮಗುವಿನ ಆರೊಗ್ಯ ಆಗಾಗ ಕೆಟ್ಟು ಹೋಗುತ್ತದೆ....
ಮತ್ತೆ ಮಗುವನ್ನು ಆರೋಗ್ಯವಗಿಡಲು ಬಹಳ ಹೆಣಗ ಬೇಕಾಗುತ್ತದೆ.....
ಎಲ್ಲರ ಜೀವನದಲ್ಲೂ ಇಂಥಹ ಘಟನೆ ನಡೆದಿರುತ್ತದೆ. ...
ಹೆಸರು ಮಾತ್ರ ಬೇರೆ ಇರುತ್ತದೆ. ಅಲ್ಲವಾ ??
ಇದನ್ನ ಬ್ಲೊಗನಲ್ಲಿ ಹಾಕಬೇಡಿ ಎಂದು ನನ್ನ ಗೆಳೆಯ ಶಿವು ಹೇಳಿದ್ದರು.
ಇದು ದೂಷಣೆಗಾಗಿ ಅಲ್ಲ....
ಒಂದು ಅನುಭವ, ಹಂಚಿಕೊಳ್ಳಲಿಕ್ಕೆ.
ಅವರು ನನ್ನ ದೂರದ ಸಂಬಂಧ.
ಬಹಳ ಗೌರವಾನ್ವಿತರು...
ಅವರು ಅದರ ಬಗೆಗೆ ಬಹಳ ಬಹಳ ಮಾತಾನಾಡಿ,...
ನನ್ನ ಬಳಿ ಮನೆ ಕಟ್ಟುವ ವಿಚಾರವಾಗಿ ಮಾತಾಡಿದರು. ...
ನನಗೂ ಖುಶಿಯಾಯಿತು....
ಎರಡು ಬೆಡ್ ರೂಮ್, ಒಂದು ಹಾಲ್, ಎರಡು ಬಾಥರೂಮ್, ನೆಲ ಮಾಳಿಗೆ ಕಟ್ಟುವದು ಎಂದು ಪ್ಲಾನ್ ತಯಾರಾಯಿತು.
ಎಸ್ಟಿಮೇಶನ್ ೧೨ ಲಕ್ಷ. ...
ಕೆಲಸ ಶುರುವಾಯಿತು...
ದಿನಾ ಸಾಯಂಕಾಲ ಮನೆಗೆ ಬಂದು ಕೊರೆಯವದು,...
ಅವಲಕ್ಕಿ, ಕಾಫಿ ಇತ್ಯಾದಿ ಮಾಮೂಲಾಯಿತು....
ಆಗ ತಾನೆ ಮೊಬೈಲು ಬಂದಿತ್ತು....
ಇವರು ಮನೆಗೆ ಹೋಗಿ ಮತ್ತೆ ಕೊರೆಯುತ್ತಿದ್ದರು....
ಆಗ ಒಳಬರುವ ಕರೆಗಳಿಗೂ ೫೦ ಪೈಸೆ ಚಾರ್ಜ್ ಮಾಡುತಿದ್ದರು. ...
ಆಫೀಸಿನಿಂದಲೂ ಕೊರೆಯುತ್ತಿದ್ದರು....
ದಿನಾಲು ಪ್ಲಾನ್ ಬದಲಾಗುತಿತ್ತು....
ಗೋಡೆ ಕಟ್ಟುವದು, ಒಡೆಯುವದು ಮಾಮೂಲಾಗಿತ್ತು. ...
.. ಕಟ್ಟುವದಕ್ಕಿಂತ... ... ಹೆಚ್ಚಿಗೆ ಆಲಿ ಒಡೆಯುವ ಕೆಲಸ ಜಾಸ್ತಿ ಇರುತ್ತಿತ್ತು....
ಹಾಗೆ ನಗರದಲ್ಲಿ ೩೦* ೪೦ ಜಾಗ ಇತ್ತು....
ಅಲ್ಲೂ ನನ್ನ ಬಳಿ ಕೆಲಸ ಶುರು ಮಾಡಿಸಿದರು...!
ಎಸ್ತಿಮೆಶನ್ ಜಾಸ್ತಿಯಾಗುತ್ತಿದೆ ಎಂದು ಹೆಳಿದರೂ ಲಕ್ಷ ಮಾಡಲಿಲ್ಲ....
ನಾನು ಸ್ವಲ್ಪ ಪಾಪ ಪುಣ್ಯದ ವ್ಯಕ್ತಿ. ಇವರು ಮೋಸ ಮಾಡಲಾರರು ಅಂದು ಕೊಂಡೆ.
ಆಗ ೩೦ ಮನೆ ಕಟ್ಟಿದರೂ ಬಾಡಿಗೆ ಮನೆಯಲ್ಲೆ ಇದ್ದೆ.....
ಶುರುವಿನಲ್ಲಿ ಬಿಲ್ಲು ಕೊಟ್ಟ ಹಾಗೆ ಹಣ ಕೊಟ್ಟರು ...
ಗ್ರಹಪ್ರವೇಶದ ದಿನ ಬಂತು....
೩.೬೦ಲಕ್ಷ ಬಿಲ್ಲು ಆಗಿತ್ತು....
ಸಪ್ಲೈದಾರರು ಬಾಕಿ ಹಣ ಕೇಳುತಿದ್ದರು.
"ನೋಡಪ್ಪ ಪೂಜಾ ಮಾಡಿ ನಂತರ ಬಾಕಿ ಕೊಡುತ್ತೇನೆ. ದಯವಿಟ್ಟು ಆಗಲ್ಲ ಅನ್ನಬೇಡ" ಅಂದರು.
ನನಗೆ ಬಹಳ ತೊಂದರೆ ಆಗುತ್ತಿದ್ದರೂ,..
ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.
ಗ್ರಹಪ್ರವೇಶ ಅದ್ದೂರಿಯಾಗಿಯೆ ಆಯಿತು.....
ನಂತರ ನನ್ನ ಕಣ್ಣು ತಪ್ಪಿಸಲು ಶುರು ಮಾಡಿದರು....
ನಾನು ಬಿಲ್ಲ್ ಕೊಟ್ಟೆ. ೪ ಲಕ್ಷದ ಮೆಲೆ ಆಗಿತ್ತು.
ಹಣ ಕೊಡುವ ಮಾತೆ ಇಲ್ಲವಾಗಿತ್ತು....
ಕೇಳಿದರೆ ಹೆಂಡತಿಯ ಹೆಸರು ಹೇಳಲಿಕ್ಕೆ ಶುರು ಮಾಡಿದರು...
. "ಮಾರಾಯರೆ, ನಿಮ್ಮ ಬಿಲ್ಲು ತುಂಬಾ ಜಾಸ್ತಿ ಆಯಿತಂತೆ....
ಹೆಂಡತಿ ಹೆಳ್ತಾಳೆ.. ಅವಳು ಒಪ್ಪಿದರೆ.. ತಕ್ಷಣ ವ್ಯವಸ್ತೆ ಮಾಡ್ತೇನೆ"
ಎಂದು ಹೊಸ ರಾಗ ಶುರು ಮಾಡಿದರು.
ನಿಮಗೆ ಇನ್ನೂ ಒಂದು ವಿಷಯ ಹೇಳಬೆಕು.
ಅವರ ಮನೆ ಮುಗಿಯುವಷ್ಟರಲ್ಲಿ ೪ ರೂಮುಗಳು, ೨ ಹಾಲುಗಳು, ೪ಬಾಥರೂಮುಗಳು, ಒಂದು ಡಾರ್ಕ್ ರೂಮ್ ( ಅವರ ಫೊಟೊ ಕೆಲಸಕ್ಕೆ), ಒಂದು ಸ್ಟೇರಕೇಸ್ ಹೆಚ್ಚಾಗಿ ಮಾಡಿಸಿದ್ದರು....
ನಗರದ ಮನೆಯೂ ಸೆರಿ ನಾನು ೧೭ ಲಕ್ಷದ ಬಿಲ್ಲ್ ಕೊಟ್ಟಿದ್ದೆ.
ಕೆಲಸ ನಡೆಯುವಾಗ ಈ ಕಡೆ ತಲೆ ಹಾಕಿರದ ಆ ಮಹಾತಾಯಿ...
ಮಾತಲ್ಲಿ ಜೋರಾಗಿಯೇ... ಇದ್ದರು.
" ನೋಡಪ್ಪ ನಿನ್ನ ಬಿಲ್ಲು ಜಾಸ್ತಿ... ಅದೆಲ್ಲಾ ಕೊಡಕಾಗಲ್ಲ. ೫೦ ಸಾವಿರಕ್ಕೆ ಅಡ್ಜಸ್ಟು ಮಾಡಿಕೊ"
ಎಂದು ಬಹಳ ಗತ್ತಿನಿಂದ ಹೇಳಿದರು.
ಕೊನೆಯದಾಗಿ ಹೆಂಡತಿ ಹೆಗಲ ಮೇಲೆ ಗನ್ ಇಟ್ಟು ನನಗೆ ಹೊಡೆಯುವ ಕೆಲಸದಲ್ಲಿ ಯಶಸ್ವಿಯಾದರು.
ಹಣ ಬರಲಿಲ್ಲ...
ನಂಬಿ ಕೆಟ್ಟವರಿಲ್ಲ ಎಂದು ಹೇಳುತ್ತಾರೆ....
ವ್ಯವಹಾರವೇ ಬೇರೆ... ಸಂಬಂಧ, ಭಾವುಕತನವೆ ಬೇರೆ... !
ಹೀಗೆ ನನಗೆ ಬೇಡವಾದ ಪಾಠ ಬಹಳ ನೋವಿನಲ್ಲಿ ಕಲಿತೆ. ...
೩.೫ ಲಕ್ಷ ಕೊಟ್ಟು ಕಲಿಯ ಬೇಕಾಯಿತು !!!
ಈ ಘಟನೆಯಿಂದ ಮನಸ್ಸಿಗೆ ಘಾಸಿಯಾಗಿದೆ..
ಬಹಳ ನೋವಾಗಿದೆ..
ಬಹಳ ದಿನಗಳಿಂದ ನನ್ನಲ್ಲಿರುವ ಮಗುವನ್ನು ಜತನವಾಗಿ ಇರಿಸಿಕೊಂಡಿದ್ದೆ....!
ಈ ಘಟನೆಯ ನಂತರ ಆ ಮಗುವಿನ ಆರೊಗ್ಯ ಆಗಾಗ ಕೆಟ್ಟು ಹೋಗುತ್ತದೆ....
ಮತ್ತೆ ಮಗುವನ್ನು ಆರೋಗ್ಯವಗಿಡಲು ಬಹಳ ಹೆಣಗ ಬೇಕಾಗುತ್ತದೆ.....
ಎಲ್ಲರ ಜೀವನದಲ್ಲೂ ಇಂಥಹ ಘಟನೆ ನಡೆದಿರುತ್ತದೆ. ...
ಹೆಸರು ಮಾತ್ರ ಬೇರೆ ಇರುತ್ತದೆ. ಅಲ್ಲವಾ ??
Subscribe to:
Posts (Atom)