Sunday, August 30, 2009

ಭರವಸೆಯ.. ಭಾಸ್ಕರ... ಮತ್ತೆ ಮರಳಿ ... ಬಾ...!

ಪ್ರತಿದಿನವೂ... ಕತ್ತಲಾಗುವ ಸಮಯ....
ಸೂರ್ಯ ಮುಳುಗವ ಮುಸ್ಸಂಜೆಯ.. ವೇಳೆ.....
ಹಲವು
ಭಾವನೆಗಳನ್ನು... ಮೂಡಿಸುತ್ತದೆ...
ನಮ್ಮ ಮನದ ಭಾವಗಳಿಗೆ ತಕ್ಕಂತೆ... ಬಾನಿನ ಚಿತ್ರ ಕಾಣುತ್ತದೆ....

ಮರೆಯಾಗುತ್ತಿರುವ ನೇಸರ....
ಆಗಸದ ಹೃದಯದಲ್ಲಿ...
ಬಿಡಿಸುವ ... ಬಣ್ಣದ ಚಿತ್ತಾರ... ಮನಮೋಹಕ....!


ಇದೋ... ನಿಮಗಾಗಿ...
ಮರೆಯಲ್ಲಿ ನ ರವಿಯ...
ಹಲವು ಭಾವಗಳು..... ಬಣ್ಣದ ಚಿತ್ತಾರಗಳು....!




ಬೆಳ್ಳಿ ಮೊಡವೆ... ಎಲ್ಲಿ ಓಡುವೆ...?.
ಸಂಜೆಯ ನೇಸರನ ನೋಡಲು....
ಸಂಭ್ರಮವೇ...?
ಇರುಳಿನ ಚಂದ್ರಮನ ಆಗಮನದ... ನಾಚಿಕೆಯೇ...?



... ಮೋಡ ಬಾನಲ್ಲಿ... ತೇಲಾಡುತಾ...
ನಿನಗಾಗಿ.. ನಾ... ಬಂದೆ.. ನೋಡೆನ್ನುತಾ....
ನಲ್ಲಾ..... ನಿನ್ನ ಸಂದೇಶವಾ.... ನನಗೇ... ಹೇಳಿದೆ.....


ನೇಸರನ ನಿರ್ಗಮನ....
ಪ್ರಿಯಕರ ಚಂದ್ರಮನ... ಆಗಮನದ...
ಕಾತುರ... ಸಂಭ್ರಮ... ಬಾನಿಗೆ...!



ಗಗನವು... ಎಲ್ಲೋ...
ಭೂಮಿಯು.. ಎಲ್ಲೋ...
ಒಂದೂ....... ಅರಿಯೆ... ನಾ....



ಆಕಾಶದಾಗೆ...ಬಣ್ಣದ ಚಿತ್ತಾರಾ.. ಮಾಡಿದವನೇ...
ಮನಸ್ಸನ್ನು ಗೆದ್ದ ಮೋಡಿಗಾರನೆ.....




... ಸಂಜೆ ಯಾಕಾಗಿದೆ....?
ನೀನಿಲ್ಲದೆ...?
ವಿರಹವೇದನೆ... ನಿವೇದನೆಗೂ... ಸ್ಪೂರ್ತಿ.... ...ಬಾನು....


ಸುತ್ತ.. ಮುತ್ತಲೂ...
ಸಂಜೆ.. ಕತ್ತಲು... ಮೆತ್ತ.. ಮೆತ್ತಗೆ.... ಬಯಕೆ... ಮತ್ತಲು...!



ಯಾವ ಕಲಾಕಾರನೂ ಬಿಡಿಸಲಾರಾ.....
ಮನಸೂರೆಗೊಳ್ಳುವ... ಇಂಥಹ ಬಣ್ಣದ ಚಿತ್ತಾರವಾ..
.


ಇದೇನು...? ಚಂಬಲ್... ಕಣಿವೇಯಾ...?
ಪಕ್ಕದಲ್ಲೊಂದು ಬೆಟ್ಟ... ಮೋಡಗಳ ಬೆಳಕಿನ ಬಣ್ಣದಾಟ...!


ಯೇ.... ಶ್ಯಾಮ್... ಮಸತಾನಿ....
ಮಧುಹೊಶ್... ಕಿಯೇಜಾಯ್...
ಮುಜ್ಹೆ ದೂರ್.. ಕೋಯಿ.. ಕೀಛೇ.....
ತೇರಿ ಔರ್... ಲಿಯೇ ಜಾಯೆ....



ಸಂಜೆ.. ಕೆಂಪು ಮೂಡಿತು...
ಇರುಳು.. ಸೆರಗು ಹಾಸಿತು...
ಇಂದು ನಾಳೆಯ ಸೇರಿತು...
....


..ವೋ..... ಶ್ಯಾಮ್... ಕುಛ್... ಅಜೀಬ್ ಥೀ....
ಯೇ .. ಶ್ಯಾಮ್... ಭೀ... ಅಜೀಬ್ ಹೇ....
ವೋ... ಪಲ್.... ಭೀ... ಪಾಸ್.. ಪಾಸ್ ಥೀ.. ವೋ... ಆಜ್ ಭೀ ಕರಿಬ್ ಹೇ....


ಕಹೀ... ದೂರ್.. ಜಬ್ ದಿನ ಢಲ.. ಜಾಯೆ...
ಸಾಂಜ್ ಕಿ ದುಲ್ಹನ್..... ಬದನ ಚುರಾಯೇ...... ಚುಪಕೆಸೆ... ಆಯೇ...
ಮೇರೆ... ಖಯಾಲೋ ಕೆ ಆಂಗನ್ ಮೇ...
ಕೋಯಿ ಸಪನೋಕೆ ದೀಪ್ ಜಲಾಯೇ....!



ಕೈಲಾಸ ಮಾನಸ ಸರೋವರ ಹೀಗೆ ಇದ್ದಿತಾ...?
ಎಂಥಹ ಬಣ್ಣದ ಚಿತ್ತಾರಾ...!!




ಒಂಟಿ ಮನಕೆ...
ಸಂಜೆ ಏಕಾಂತವು... ಅಪ್ಯಾಯಮಾನವು...



ಮತ್ತದೇ... ಬೇಸರ...
ಅದೇ ಸಂಜೆ... ಅದೇ ಏಕಾಂತ... ನಿ ಜೊತೆಯಿಲ್ಲದೆ....
ನಿನ್ನ ನೆಪಾಗಿದೆ....




ಹಿಮಾಲಯದ ಪರ್ವತ ಶ್ರೇಣಿ...
ಪಕ್ಕದಲ್ಲೊಂದು ಕೊಳ... ಮೋಡಗಳ... ಬಣ್ಣದ ದೋಕುಳಿಯಾಟ....





ಮುಗಿಲ ಮಾರಿಗೆ... ರಾಗ ರತಿಯ...
ರಂಗ ಏರಿತ್ತ.... ಆಗ ಸಂಜೆಯಾಗಿತ್ತ....!!





ಮುಸ್ಸಂಜೆಯ ಹೊತ್ತು...
ಕ್ಷಣ ಕ್ಷಣಕ್ಕೂ ರಂಗು ಬದಲಾಯಿಸುತ್ತ...
ಬಣ್ಣದ ಚಿತ್ತಾರ ಬಿಡಿಸುತ್ತ....
ಮುಳುಗುವ ನೇಸರನಿಗೊಂದು.. ಸಂಭ್ರಮದ ವಿದಾಯ...
ಮತ್ತೆ ಮರಳಿ ಬಾ.... ಭಾಸ್ಕರ...!
ಭರವಸೆಯ...
ಭಾವಗಳನ್ನು ಹೊತ್ತು ತಾ...!.





ನಮ್ಮ ಭಾವನೆಗಳಿಗೆ ತಕ್ಕ ರಂಗಸ್ಥಳ...
ಬಾನಿನಂಗಳ...

ಪ್ರೇಮಿಗಳಿಗೆ.. ವಿರಹಿಗಳಿಗೆ... ಅನಾಥ ಭಾವದ ನೋವುಣ್ಣುವವರಿಗೆ...
ಬದುಕು ಸಾವಿನ ಅಂಚಿನಲ್ಲಿರುವವರಿಗೆ...
ಮದಿರೆಯ ಮಧ್ಯದಲ್ಲಿ.. ಮೋಜು ಮಾಡುವವರಿಗೆ...

ಸ್ವಲ್ಪ ಏಕಾಂತ...
ಹಕ್ಕಿಗಳ ಚಿಲಿಪಿಲಿ ಗಾನದ ಜೊತೆ....
ಗುನುಗು ...ನಿನ್ನ ಇಷ್ಟದ ಹಾಡು....
ಆಗಸದ ಮೂಲೆಗೊಮ್ಮೆ ನೋಡು....
ಬದಲಾಗುವದು ಮನದ ಭಾವದ ಗೂಡು...

ಬಂದೇ ಬರುವನು...
ಭರವಸೆಯ ಭಾಸ್ಕರ...
ಹೊಸ ಭಾವಗಳ....
ಹೊಸತತನದ ಹೊಸ ದಿನವನ್ನು...
ತಂದೇ... ತರುವನು... ನಮ್ಮ ದಿನಕರ..

Saturday, August 22, 2009

ಅವರ ಮಕ್ಕಳಿಗೆ... ಅವರೇ... ಹೆಸರಿಟ್ಟಿದ್ದಾರೆ...!


ಶಾರಿ ಊರಿಂದ ಫೋನ್ ಮಾಡಿದ್ದಳು...

" ಹೋಯ್... ಗೊಮಟೇಶ್ವರ..!!
ಟಿವಿ ೯ ರವರಿಗೆ ಒಂದು ಥ್ಯಾಂಕ್ಸ್ ಹೇಳಪ್ಪ..."


"ಯಾಕೆ ಏನಾಯ್ತೆ..? ಶಾರಿ...??"

"ಅಲ್ಲಾ...!!
ಅಷ್ಟು ಸಣ್ಣ ಟಿವಿಯಲ್ಲಿ ನಿನ್ನಂಥಹ ದೈತ್ಯನನ್ನು ತೋರಿಸಿದರಲ್ಲಾ...?

ಅದು ಹೇಗೆ ಸಾಧ್ಯ..!!.?"

ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ನಾನು ನನ್ನಾಕೆ ಟಿವಿ ನೈನ್‍ನಲ್ಲಿ ಬಂದಿದ್ದೇವು ..
ಲೇಡೀಸ್ ಕ್ಲಬ್ ಕಾರ್ಯಕ್ರಮದಲ್ಲಿ...

ಈ ಶಾರಿ ನಿಜವಾಗಿಯೂ ಕೇಳ್ತಾ ಇದ್ದಾಳೋ...!
ಅಥವಾ ನನ್ನನ್ನು ಹಾಸ್ಯ ಮಾಡ್ತಿದಾಳೊ.. ಗೊತ್ತಾಗಲಿಲ್ಲ...


"ಏಯ್.. ಶಾರಿ ಚೆನ್ನಾಗಿದ್ದಿಯೇನೆ..? ಏನಂತಾನೆ ಗಣಪ್ತಿ...?.."

" ಅಯ್ಯೋ ಅವರಿಗೇನೊ...?
ಆರಾಮಾಗಿ ಬಾಯಿತುಂಬಾ ಎಲೆ ಅಡಿಕೆ ಹಾಕ್ಕೊಂಡು ಆರಾಮಾಗಿದ್ದಾರೆ...
ಎಲೆ ಅಡಿಕೆ ಇದ್ರೆ ಅವರಿಗೆ ಈ ಪ್ರಪಂಚದಲ್ಲಿ ಏನು ಬೇಡ....
ನನಗೇ ಟೆನ್ಷನ್ ಕಣಪ್ಪಾ..."

" ಏನಾಯ್ತೆ.. ? ಶಾರಿ ನಿಂಗೂ ಟೆನ್ಷನ್ನಾ...?"

" ಹೌದೋ ಪ್ರಕಾಶು...
ಅದೇನೋ ಹಂದಿ ಜ್ವರನಂತೆ ನಂಗೆ ಸ್ವಲ್ಪ ಅದರ ಬಗ್ಗೆ ಹೇಳೊ...

ನಾನು ನಮ್ಮವರಿಗೆ ಹೇಳಿದೆ ಹಂದಿ ಜ್ವರದ ಬಗೆಗೆ ಪ್ರಕಾಶನ ಹತ್ರ ಕೇಳಿ...
ಶರೀರ ದೊಡ್ಡದಾದ್ರೂ.. ಬುದ್ಧಿವಂತನ ಥರ ಕಾಣ್ತಾನೆ......
ಬೆಂಗಳೂರಲ್ಲಿ ಇದ್ದಾನೆ..
ಫೋನ್ ಮಾಡಿ ಅಂದ್ರೆ ಬಾಯಿಂದ ಎಲೆ ಅಡಿಕೆ ತೆಗಿತಾನೆ ಇಲ್ಲ... "

ಇವಳು ಈ ಥರಹ ಹೊಗಳುವದು ನಂಗೆ ಸ್ವಲ್ಪ ಅಭ್ಯಾಸವಾಗಿತ್ತು....

"ಶಾರಿ... ಈ ರೋಗ.. ಗಾಳಿಯಲ್ಲಿ ಹರಡ್ತದೆ..
ರೋಗ ಬಂದವನು ಒಮ್ಮೆ ಕೆಮ್ಮಿದರೆ...

ಅವನಿಂದ ಬರುವ ವೈರಸ್‍ಗಳು.. ಐದು ತಾಸು ಹವೆಯಲ್ಲಿ ಇರ್ತದೆ..
ಮುಖಕ್ಕೆ ಬಟ್ಟೆ ಕಟ್ಗೋ ಬೇಕು... ರೋಗಿಗೂ ಬಟ್ಟೆ ಕಟ್ ಬೇಕು..."

" ಹೌದೇನೋ ..?
ಇಡೀ ದಿನ ಕಟ್ಟಿಕೊಂಡಿರ ಬೇಕು ಅನ್ನು...

ಅಲ್ಲಾ ಎಂಥಾ ಪರಿಸ್ಥಿತಿ ಬಂದೋಯ್ತು...!!...??...
ನಮ್ಮ ಮುಖ ಬೇರೆಯವರಿಗೆ ತೋರ್ಸೋದಿರೋ ಹಾಗಾಯ್ತಲ್ಲಪ್ಪ...!!
ಮುಖ ನೋಡಿ ಪ್ರೀತಿನೂ..... ಮಾಡೋಕ್ಕೆಆಗೋಲ್ಲ ಅನ್ನು...! ಛೇ...
ಛೇ... ಕಲಿಗಾಲಾ...!!"


" ಹುಂ ಮತ್ತೆ ತುಂಬಾ ಎಚ್ಚರಿಕೆಯಲ್ಲಿರ ಬೇಕು...
ಸಿರ್ಸಿ ಕಡೇನೂ ಬಂದಿದೆಯಂತೆ ..

ಹುಷಾರು.. ಮಕ್ಕಳಿಗೂ ಕರ್ಚೀಫ್ ಕಟ್ಟಿ ಶಾಲೆಗೆ ಕಳಿಸು..."

" ಇದೊಳ್ಳೆ ಸಮಸ್ಯೆ ಆಯ್ತಲ್ಲಪಾ... !!
ನನ್ನ ಮಾವ ದಿನಕ್ಕೆ ಹತ್ತು ಕಟ್ಟು ಬೀಡಿ ಕುಡಿತಾನೆ..

ಮುಖಕ್ಕೆ... ಬಟ್ಟೆ ಕಟ್ಟಿಕೊಂಡು ... ಹೇಗೆ ಕುಡಿತಾನೆ...?"

"ಶಾರಿ... ಕರ್ಚೀಫ್ ಒಂದು ಸಣ್ಣ ತೂತು ಮಾಡಿದ್ರಾಯ್ತಪಾ..."

"ಸರಿ.... ಆಯ್ತು ಕಣಪಾ..
ನಂಗೆ ನನ್ನ ಯಜಮಾನ್ರದ್ದೇ ಚಿಂತೆ...!!

ರಾತ್ರಿ ಮಲಗುವಾಗ ಎಲೆ ಅಡಿಕೆ ಹಾಕಿ ...
ಬೆಳಿಗ್ಗೆ ಎದ್ದು ತುಪ್ಪೋ ಅಭ್ಯಾಸ ....ಇವರಿಗೇನು ಮಾಡುವದು..?

ಬಾಯಿಗೆ ಬಟ್ಟೆ ಕಟ್ಟಿಕೊಂಡು... ಎಲೆ ಅಡಿಕೆ ಹೇಗೆ ಹಾಕ್ಕೊಳ್ತಾರೆ..?

ಗಣಪ್ತಿಗೆ ಎಲೆ ಅಡಿಕೆ ಜಗಿಯೋ ಅಭ್ಯಾಸ....
ಎಲೆ ಮಡಚಿ ಬಾಯಿಗೆ ಹಾಕಿ... ಸಂಗಡ ಸುಣ್ಣ, ತಂಬಾಕಿನ ಪೀಸು ಹಾಕುತ್ತಲೇ ಇರಬೇಕು...
ಅದು ಒಂದಾದಮೇಲೊಂದು ಬಾಯಿಗೆ ಹೋಗುತ್ತಲೇ ಇರಬೇಕು...
ಅದೋಂಥರಾ ಎಲೆ ಅಡಿಕೆ ಅಗಿಯೋ ಮಶಿನ್ನು....!!

"ಇದಕ್ಕೆ ನನ್ನ ಬಳಿ ಏನೂ ಐಡಿಯಾ ಇಲ್ಲ ಮಾರಾಯ್ತಿ..!!
ಒಂದು ದೊಡ್ಡ ಲುಂಗಿ ಕಟ್ಟಿ ಕಳಿಸು....
ನೋಡು ಇನ್ನೊಂದು ವಿಷಯ...
ಹೊರಗಡೆಯಿಂದ ಬದವರು ಕೈ, ಮುಖತೊಳೆದು ಕೊಂಡೇ....
ತಮ್ಮ ಮೂಗು, ಕಣ್ಣು ಮುಟ್ಕೋ ಬೇಕು..

ಅಲ್ಲೆಲ್ಲ ವೈರಸ್ ಅಂಟಿಕೊಳ್ಳೋ ಸಾಧ್ಯತೆ ಇವೆಯಂತೆ...
ಮಕ್ಕಳಿಗೆ ಎಲ್ಲವನ್ನೂ ತಿಳ್ಸಿ ಹೇಳು ಮಾರಾಯ್ತಿ.."

"ಆಯ್ತು ಮಾರಾಯಾ...!
ಎಲ್ಲಾ ರೋಗ ಬಡವರನ್ನೇ ಸಾಯಿಸ್ಲಿಕ್ಕೆ ಬರ್ತದೆ ನೋಡು...
ಬಗ್ಗಿಕೊಂಡು ಗದ್ದೆ ನೆಟ್ಟಿ ಮಾಡೋರು...
ಅಡಿಕೆ ಮರ ಹತ್ತಿ , ತೆಂಗಿನ ಮರಹತ್ತೋರಿಗೆಲ್ಲ ಇದು ಹೇಗೆ ಸಾಧ್ಯ...?
ಗದ್ದೆ ಊಳೋನಿಗೆ ಬಾಯಿಗೆ ಬಟ್ಟೆ ಕಟ್ಟಿ ಕೆಲಸ ಮಾಡು ಅಂದ್ರೆ ಹೇಗಪ್ಪಾ...?
ಇದೆಲ್ಲಾ ಬರೋದು ಬಡವರನ್ನ ಸಾಯಿಸಲಿಕ್ಕೆ..."


" ಹೌದು ಕಣೆ... ಇದಕ್ಕೆಲ್ಲ ಏನೂ ಮಾಡ್ಲಿಕ್ಕೆ ಬರಲ್ಲ... ಎಚ್ಚರಿಕೆಯಲ್ಲಿರ ಬೇಕು..."

" ಪ್ರಕಾಶು ನಂಗೆ ಇನ್ನೊಂದು ಡೌಟು....
ಈ ರೋಗದ ಹೆಸರೆಲ್ಲ ಯಾಕೇ ಹೀಗಿರ್ತದೆ...?
ಕೋಳಿ ಜ್ವರ.. ಹಕ್ಕಿ ಜ್ವರ... ಹಂದಿ ಜ್ವರ...?
ಎಲ್ಲಾ ಮಾಂಸಹಾರಿಗಳದ್ದೇ ಆಗೋಯ್ತಲ್ಲಾ..??."

" ಶಾರಿ ....ಅದೆಲ್ಲಾ ಅಮೇರಿಕದಲ್ಲಿ ಹುಟ್ಟಿದ ರೋಗ ಕಣೆ..
ಅವರ ಮಕ್ಕಳಿಗೆ.. ಅವರೇ ನಾಮಕರಣ ಮಾಡಿದ್ದಾರೆ.."


" ಅಲ್ಲಿ ತರಕಾರಿಗಳು ಸಿಗೋದಿಲ್ವಾ..?
ಒಪ್ಪವಾಗಿ, ಲಕ್ಷಣವಾಗಿ....
ಬಸಳೆ ಸೊಪ್ಪಿನ ಜ್ವರ,..!!
ಬದನೆಕಾಯಿ ಜ್ವರ...!! ಅನ್ನೋ ಬಹುದಿತ್ತು...

ಹೋಗ್ಲಿ ಬಿಡು... ನೀನೂ ನಿನ್ನ ಹೆಂಡ್ತೀನೂ ಹುಷಾರಿಯಲ್ಲಿರ್ರಪಾ..."

"ಆಯ್ತು ಕಣೆ..."

" ಆಲ್ಲಾ ಹೊರಗಿನಿಂದ ಬಂದು ಹೆಂಡ್ತೀನಾ ತಬ್ಬಿಕೊಳ್ಳೋದಿಕ್ಕೆ ಹೋಗ್ಬೇಡ...!
ಕೈ . ಮುಖ ಎಲ್ಲ ತೊಳ್ಕೊಂಡು... ಪ್ರೀತಿ ಮಾಡ್ಕೊಳ್ಳಿ...!
ಪ್ರೀತಿ, ಪ್ರೇಮ ಮಾಡ್ಕೊಳ್ಳೋ ಮೊದ್ಲು ಸೋಪು ಹಚ್ಚಿ ಸ್ನಾನ ಮಾಡಿ.....
ಯಾಕೊ ಪ್ರಕಾಶು ಹೂಂ ಅಂತಾನೇ ಇಲ್ಲಾ...??"

" ಶಾರಿ... ಸಾಕು ಮಾರಾಯ್ತಿ...ನಾನು ಹೇಳಿದ್ದು ನಂಗೇ ಹೇಳ್ತಿದ್ದಿಯಲ್ಲ..."

"ನೀನು ನಂಗೆ ಯಾವಾಗ್ಲೂ ಸಣ್ಣವನೇ ಕಣಪ್ಪಾ...!
ಅಲ್ಲೋ ಪ್ರಕಾಶು... ಈ ರೋಗ ಪ್ರಾಣಿ.. ಪಕ್ಷಿಗಳಿಗೆ ಬರೋಲ್ವೇನೊ...?"

"ಇಲ್ಲ.. ಕಣೆ..."

" ನೋಡು ನಮಗಿಂತ ಮಾತು ಬರದ ಮೂಕ ಪ್ರಾಣಿಗಳೇ ಮೇಲು...
ಈ ಥರಹ ಅವಾಂತರಗಳನ್ನು ಮಾಡ್ಕೊಂಡಿಲ್ಲ...
ತಮ್ಮ ಪಾಡಿಗೆ ತಾವು... ಆರಾಮಿಗಿವೆ..."


ನನಗೆ ಏನು ಹೇಳ್ಬೇಕು ಅಂತ... ಗೊತ್ತಾಗಲಿಲ್ಲ.....
!!

"ಪ್ರಕಾಶು .. ನಮ್ಮ ಸಮಸ್ಯೆಗೆ ಏನು ಕಾರಣ ಗೊತ್ತಾ..?"

" ನಮಲ್ಲಿನ ಬಡತನ... ಅನಕ್ಷರತೆ... ಅಜ್ಞಾನ..."

" ನೀನು ಪೇಟೆ ಸೇರಿ ಬುದ್ಧಿವಂತ ಆಗಿದಿಯಾ ಅಂದು ಕೊಂಡರೆ ...
ನೀನು ... ನನ್ನ ಯಜಮಾನ್ರ ತರಹ ಆಗಿ ಬಿಟ್ಯಲ್ಲೋ...!!
ಒಳ್ಳೆ ವೋಟ್ ಕೇಳಲಿಕ್ಕೆ ಬಂದ ರಾಜಕಾರಣಿ ತರಹ ಅದನ್ನೇ ಉರು ಹೊಡೆದು ಹೇಳ್ತಾ ಇದ್ದೀಯ...!
ಮ್ಮ ಸಮಸ್ಯೆಗಳಿಗೆ " ಅಮೇರಿಕಾ" ಕಾರಣ...
ಎಲ್ಲಾ ರೋಗ ಹುಟ್ಟಿ ಹಾಕೋದೇ.... ಅಮೇರಿಕಾ...

ಅಷ್ಟರಲ್ಲಿ ಗಣಪ್ತಿ ಬಂದ ಅನಿಸುತ್ತದೆ...
ಗಣಪ್ತಿ ಬಾವ ಫೋನ್ ತೆಗೆದು ಕೊಂಡ...

" ಪ್ರಕಾಶು... ನಿನಗೊಂದು ವಿಷಯ ಹೇಳ ಬೇಕು....
ಕಳೆದ ಒಂದು ತಿಂಗಳಿಂದ .. ನಮ್ಮನೆಗೆ ಟಿವಿ ಬಂದಿದೆ...
ಪೇಪರು ಬರ್ತಾ ಇದೆ..."

" ಅದರಿಂದ ಏನಾಯ್ತು...?"

" ಏನೋ ಹೇಳ್ತಾರಲ್ಲ ... ಮಾರಾಯಾ...!
ಸುಮ್ನೆ ಇರಲಿಕ್ಕೆ ಆಗದೆ ಇರೋನು ಮೈ ಮೇಲೆ ಇರುವೆ ಬಿಟ್ಕೊಂಡಿ ದ್ನಂತೆ ....
ನಿನ್ನ ಶಾರಿಗೆ ಈಗ ನಲವತ್ತೈದು ವರ್ಷ...
ಇಲ್ಲಿಯವರೆಗೆ ಏನೂ ಚಿಂತೆ ಇಲ್ದೆ ಹಾಯಾಗಿದ್ಲು... ಮನೆ.. ಮಕ್ಕಳು ಸಂಸಾರ ಅಂತ....
ಟಿವಿ, ಪೇಪರ್ರು ಬಂದ ಮೇಲೆ ಹೀಗಾಗಿ ಬಿಟ್ಟಿದ್ದಾಳೆ...."

" ಓದಲಿ.. ಬಿಡು ಗಣಪ್ತಿ... ಬಾವ... ಪ್ರಪಂಚ ಜ್ಞಾನ ಬೆಳಿತದೆ..."

"ಪ್ರಕಾಶು ನೀನು....
ನಿಜ ಹೇಳಿದ್ರೂ..... ಹುಂ ಅಂತಿಯಾ....
ಸುಳ್ಳು ಹೇಳಿದ್ರೂ.... ಹುಂ.. ಅಂತಿಯಾ....
ನಿನ್ನ ಶಾರಿ ನನಗೆ ಕುಳಿತಲ್ಲಿ ಕುತ್ಕೊಳೋದಕ್ಕೆ ಬಿಡಲ್ಲ ಕಣಪಾ...
ಹೆಂಗಸರು ಓದಿದ್ರೆ ಹಿಂಗೆ ಆಗೋದು.....
ನೋಡು...!!.
ಗಂಡಸರಿಗೆ ಆರಾಮಾಗಿ ಇರಲಿಕ್ಕೆ ಬಿಡಲ್ಲ...!!."







ಎಲ್ಲರಿಗೂ .. ಗೌರಿ ಗಣೇಶ ಹಬ್ಬದ ಶುಭಾಶಯಗಳು.....


(ಪುಸ್ತಕದ ತಯಾರಿ ಜೋರಾಗಿಯೇ ನಡೆದಿದೆ....
ಪುಸ್ತಕದ ಹೆಸರು ಕೂಡ ಸಿಲೆಕ್ಟ್ ಆಗಿದೆ....
ಪ್ರಕಾಶಕರ ಒತ್ತಡ ಭರ್ಜರಿಯಾಗಿಯೇ ಇದೆ...
ಸಧ್ಯದಲ್ಲಿ ಇನ್ನೊಂದು ಖುಷಿಯ ವಿಚಾರ ಹಂಚಿಕೊಳ್ಳುವೆ...
ಪ್ರೋತ್ಸಾಹ ಹೀಗೆಯೇ ಇರಲಿ....)

Saturday, August 8, 2009

ಕಿವಿಯೂ.... ಚೆಲುವೆಲ್ಲಾ... ತಂದೆಂದಿತು....!!



ಕೂದಲಿನ ಮರೆಯಲ್ಲಿ...
ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ ...
ಸುಮ್ಮನಿರುವ ಕಿವಿಗೆ ತೂತು ಯಾಕೆ ಮಾಡಬೇಕು...??

ಈ... ನೋವು, ಕಣ್ಣೀರು ಎಲ್ಲಯಾಕೆ..?

ನನಗೆ ಅನುಮಾನ ಬಂದರೆ ಮೊದಲು ನೆನಪಾಗುವದು
ದಿ ಗ್ರೇಟ್ "ನಾಗು"
ಅವನ ಬಳಿಯೇ ಕೇಳಿದೆ....

"ಲೋ... ಪ್ರಕಾಶು ....
ನಮ್ಮ ಹಿರಿಯರು.. ಹುಚ್ಚರಲ್ಲ...
ಕಿವಿಯಲ್ಲಿ ಮೆದುಳಿಗೆ ಸಂಬಂಧಪಟ್ಟ ನರತಂತುಗಳು ಇವೆ...
ಅಲ್ಲಿ ತೂತು ಮಾಡಿದರೆ ಮೆದುಳು ಉದ್ದೀಪನೆಯಾಗುತ್ತದೆ....
ಪ್ರಚೋದನೆಯಾಗುತ್ತದೆ...
ನಮ್ಮಲ್ಲಿ ಗಂಡು ಹೆಣ್ಣಿನ ಬೇಧವಿಲ್ಲದೆ ಕಿವಿ ತೂತು ಮಾಡಿರುತ್ತಾರೆ..."
ಜನ ಬುದ್ಧಿವಂತರಾಗುತ್ತಾರೆ...
ಕಿವಿ ಚುಚ್ಚೋದರಿಂದ...
ನಿನ್ನಂಥವನ ತಲೆಯಲ್ಲೂ ಅನುಮಾನಗಳು ಬರುತ್ತವೆ..."


ನಾಗು ಮತ್ತೆ ಕೇಳಿದ. ...
" ನಿನಗೆ ಯಾರಾದರೂ ಇಂಟರ್ ನೆಟ್ ತಜ್ಞರು,
ಅರ್ಥ ಶಾಸ್ತ್ರಜ್ಞರು ಗೊತ್ತಿದ್ದರೆ ತಿಳಿಸು..

ನನ್ನ ಕೆಲವು ಅನುಮಾನಗಳನ್ನು ಪರಿಹರಿಸಿ ಕೊಳ್ಳ ಬೇಕು..."

ಈಗ ನನಗೆ ನೆನಪಾದದ್ದು ಗೆಳೆಯ
"ರಾಜೇಶ್ ಮಂಜುನಾಥ್"

ರಾಜು ಫೋನ್ ನಂಬರ್ ಕೊಟ್ಟೆ...
ಭಾವುಕ, ಬುದ್ಧಿವಂತ ...
ಸದಾ ಚಟುವಟಿಕೆಯಲ್ಲಿರುವ ನಗು ಮುಖದ ಹುಡುಗ....

ನಾಗು , ರಾಜು ಏನು ಮಾಡಿದರು ಗೊತ್ತಾಗಲಿಲ್ಲ....

ಆದರೆ ಮರುದಿನ.....
ಇಬ್ಬರು ಸೇರಿ ಹೇಳಿದ ವಿಷಯ ಕೇಳಿ...
ನಾನು ದಂಗಾಗಿ ಹೋದೆ....!!

" ಲೋ... ಪ್ರಕಾಶು... ನಮ್ಮದೇಶದ ಜನ ಸಂಖ್ಯೆ ಎಷ್ಟೋ...?"

"ನೂರು ಕೋಟಿ"

" ಇದರಲ್ಲಿ ನಲವತ್ತು ಪರ್ಸಂಟ್ ಹೆಣ್ಣುಮಕ್ಕಳು ಅಂದುಕೊ...
ಅದರಲ್ಲಿ, ಕಿವಿಗೆ ಏನನ್ನೂ ಧರಿಸದವರು,
ಜಾತಿ ಪಾತಿ ಎಲ್ಲ ಹದಿನೈದು.. ಪರ್ಸಂಟ್ ಕಳೆದು ಬಿಡು"

" ಉಳಿದದ್ದು ಇಪ್ಪತ್ತಾರು ಕೋಟಿ ಮಹಿಳೆಯರು... "

" ಹಾಗಾದರೆ ಈ ಇಪ್ಪಾತಾರು ಕೋಟಿ ಹೆಂಗಸರು...
ಒಬ್ಬಬ್ಬರು ತಲಾ ೫ ಗ್ರಾಮ್ ಚಿನ್ನ ಕಿವಿಗೆ ಧರಿಸುತ್ತಾರೆ ಅಂದುಕೊಂಡರೆ....
ಎಷ್ಟಾಯಿತು ಗೊತ್ತಾ... ಪ್ರಕಾಶು...?

"ಮಾರಾಯಾ... ಪುಣ್ಯಾತ್ಮಾ...
ನನ್ನ ಕಿವಿ ತೂತು ಈಗ ಮುಚ್ಚಿ ಹೋಗಿದೆ...
ನನಗೆ ಈಗ ಅನುಮಾನವಷ್ಟೇ ಬರೋದು...
ಪರಿಹಾರ ಹೊಳಿಯೋದಿಲ್ಲ....
ನೀನೇ ಹೇಳು..."

"೧೩೦೦ ಟನ್... ಬಂಗಾರ ಆಯಿತು...!!.."

" ಅಬ್ಬಾ...!! ಅಯ್ಯೋ... !! ಹೌದೇನೋ...?"

"ನಿಜ... ಇದು ಎಷ್ಟು ರೂಪಾಯಿ ಆಯಿತು ಗೊತ್ತಾ...???.."

"....!!...??...!!."

" ಲೋ.... ಪ್ರಕಾಶು...
ಇದು ನಿನ್ನ ಬಳಿ ಎಣಿಸಲಾಗದಷ್ಟು...!
೧,೮೨,೦೦೦ ಕೋಟಿ.. ರುಪಾಯಿಗಳು..!!!!
೧.೮೨ ಟ್ರಿಲಿಯನ್ ಅಂತ ಹೇಳ ಬಹುದು...."

ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ....!!!!!

" ಅಂದರೆ....
ಕರ್ಣಾಟಕದ ಮೂರುವರ್ಷದ ಬಜೆಟ್ ಹಣದಲ್ಲಿ ನಿಭಾಯಿಸ ಬಹುದು...!!!!!

ನಮ್ಮದೇಶದ ರಕ್ಷಣಾ ವೆಚ್ಚವನ್ನು ನಿಭಾಯಿಸಿ....
ಕಾಶ್ಮೀರದ ಖರ್ಚನ್ನೂ ಭರಿಸ ಬಹುದು...!!!

" ಬಾಂಗ್ಲಾದೇಶದ ವಾರ್ಷಿಕ ಬಜೆಟ್ ಎರಡುವರ್ಷ ಮಾಡ ಬಹುದು....!!

ನನಗೆ ತಡೆದು ಕೊಳ್ಳಲಾಗಲ್ಲಿಲ್ಲ...

"ಪ್ರಕಾಶು... ಇನ್ನೊಂದು ವಿಷಯ ಗೊತ್ತಾ...??
... ಆರ್ಥಿಕ ಮುಗ್ಗಟ್ಟು ನಮ್ಮ ದೇಶಕ್ಕೆ ಸಮಸ್ಯೆನೇ ಅಲ್ಲ....
ನಮ್ಮ ಹೆಣ್ಣು ಮಕ್ಕಳು ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ....!!

" ಮಾರಾಯಾ.., ನೀನೂ..., ರಾಜೇಶ್ ಇದನ್ನೇ ಹುಡುಕಿದಿರಾ...??
ದೇಶದ ಹೆಣ್ಣು ಮಕ್ಕಳು ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ....
ಹೋಗಿ ಪೋಲಿಸ್ ಪ್ರೊಟೆಕ್ಷನ್ ತಗೊಳ್ಳಿ...
ಮನೆಗೆ ಹೋಗಿ ವಿಷಯ ಹೇಳ ಬೇಡಿ...
ದೊಣ್ಣೆ ತಗೋತಾರೆ...."


ರಾಜೇಶ್ ಮತ್ತು ನಾಗು ಹೇಳಿದ ವಿಷಯದಲ್ಲಿ ತರ್ಕ ಇದೆ ಅನಿಸಿತು.....

... ಕಿವಿಯಲ್ಲಿ ಎಷ್ಟು ತೂತು ಇದೆಯೆಂದು ಹೇಳ ಬಲ್ಲಿರಾ...?

ಚಿನ್ನದಂತಹ ಮನಸ್ಸು... ಹೃದಯದ ಬಂಗಾರಿಗೆ...
ಬಂಗಾರವೆಂದರೆ ಯಾಕಿಷ್ಟು ಮೋಹ...?


ಕಣ್ಣು ಬಿಟ್ಟು ...ನೀ .. ನೋಡು ಒಮ್ಮೆ...
ಕಿವಿಯ ಸೌಂದರ್ಯವಾ....!!



ಆರಂಕುಶ ವಿಟ್ಟೋಡೆನ್ನ ಮನ ನೆನೆವುದು...
ತರುಣಿಯ ಚಂದದ ಕಿವಿಗಳನು......


ಕಿವಿಯೂ.... ಚೆಲುವೆಲ್ಲಾ ತಂದೆಂದಿತು....!!


ಕಿವಿಯ ನೋಡುತಿರೆ....
ಮೊಗವ ನೋಡುವಾಸೆ....


ನಿನ್ನ ಕಿವಿಯ ಅಂದ...
ನುಡಿಸಿದೆ ನನ್ನ ಹೃದಯದಿ.... ಸರಿಗಮ.......



ಕವಿಯ ಕಾವ್ಯದ ಸೊಬಗು... ನಿನ್ನಯ ಕಿವಿಯು.....


ಕಿವಿಯ ಅಂದ ಚಂದ... ನೋಡುತ...
ಮನದ ಮೃದಂಗದ ... ತಕಧಿಮಿತಾ....


ಜಯಂತ್ ಕಾಯ್ಕಿಣಿಯವರ ಶಬ್ಧಗಳಲ್ಲಿ...
ಪದ್ಯವಾಗುವಾಸೆ......
ರಾಗವಾಗಿ ಹಾಡಾಗುವಾಸೆ....


ನನ್ನೊಲವಿನ ಓಲೆ...
ಬರೆಯುವೆನು...
ನಲ್ಲಾ..
ಕಿವಿಯೋಲೆಯ ಮೇಲೆ....

ನಿನ್ನ ಮೆಚ್ಚುಗೆಯ ನೋಟವೊಂದು ಸಾಕೆನಗೆ...
ಕಾದಿರುವೆ .. ಕಾತರದಿ... ತಿಳಿಯದೆ ನಿನಗೆ...?

ನನ್ನೊಲವು, ಚೆಲುವು...
ಹಲವು ಬಗೆಯ ಕಲರವು...
ನಿನ್ನ ಹ್ರದಯದಿ ಜಾಗ ಪಡೆಯಲು
ಈ ಎಲ್ಲ ಅಲಂಕಾರವು....



ಗೋರಿ ತೇರಾ ಕಾನ್ ಬಡಾ ಪ್ಯಾರಾ.....


ಮೈ ತೊಗಯಾ... ಮಾರಾ....
ದೇಖೆ ....ಯಹಾಂ..ರೇ....!!


ಹರಳು..... ರಗಳೆಯಾಗದೆ.... ತರಳೆ...?



ಜೋಲುವ.. ತೂಗುವ ವಿಸ್ಮಯ.... ವಿಚಿತ್ರ....!!


ತುಮ್ ... ಆಗಯೇ... ಹೋ...
ನೂರ್ ಆಗಯಾ... ಹೇ...!!



ಚಾಂದ್ ಜೈಸೆ ಮುಖಡೆಪೆ... ಯೇಹೈ.... ಸಿತಾರಾ...!!




ಅಂದ... ಚಂದ ವಿಚಿತ್ರದಲ್ಲೂ ಇದೆ....!!


ತೂತಿಲ್ಲದೆಯೂ ಅಲಂಕಾರ....


ಚಂದದ ಹಿಂದೆ ನೋವು ಇರಬೇಕಿಲ್ಲ....!!


ಹಳೆಯ ಸೊಬಗು.... ಹೊಸತನದ ಬೆಡಗು... ಕೂಡಿರಲು...


ಇವಳು ಯಾರು ಬಲ್ಲೆಯೇನು...?
ಮಲ್ಲಿಗೆ ಮುಡಿದವಳೇ...
ಚಂದದಾ ಮನಸಿನವಳೇ...
ಬ್ಲಾಗ್ ಲೋಕದಾ.... ಸಹೋದರಿಯೇ...!!
ಇವಳು ಯಾರು ಬಲ್ಲೆಯೇನು...?



ಚಿನ್ನವಾದರೇನು ಶಿವಾ...?
ಬೆಳ್ಳಿ ಯಾದರೇನು.... ಶಿವಾ...
ಕಿವಿಯಲ್ಲಾ ಚಂದವೇ.. ಶಿವಾ....



ಮತ್ತೆ.. ಮತ್ತೆ..
ಮತ್ತೂ
...
ಮತ್ತೇರಿಸಿದೆಯಲ್ಲೇ......
ನಷೆಯಿಲ್ಲದ ಮತ್ತು........
ನಿನ್ನ ಕಿವಿಯ ನತ್ತು....!!


ನಾಗು ಮತ್ತೆ ನನ್ನನ್ನು ಪ್ರಶ್ನಿಸಿದ...

" ನೋಡಪಾ....
ತೂತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಿಗೇ....ಮಾಡಿ...
ಬಂಗಾರ, ಬೆಳ್ಳಿ ತೂಗು ಬಿಡುತ್ತಾರೆ.... ... ಯಾಕೆ ಗೊತ್ತಾ...?"


" ಪುಣ್ಯಾತ್ಮಾ... ದೇವರಾಣೆ ಗೊತ್ತಿಲ್ಲ..."

" ಪ್ರಕಾಶು... ಅದಕ್ಕೂ ಕಾರಣ ಇದೆ....
ಈಗಲೇ ಬೇಡ ಮುಂದಿನವಾರ ಹೇಳ್ತೇನೆ...."

ಎಂದು ರಾಜೇಶ್ ನನ್ನು ಎಳೆದು ಕೊಂಡು ಹೂರಟು ಹೋದ....

ಯಾಕೆ ಹೆಣ್ಣುಮಕ್ಕಳಿಗೆ... ಹೀಗೆ ಮಾಡುತ್ತಾರೆ...?"

ನಾನು ಕಿವಿಯನ್ನು ಒಮ್ಮೆ... ಮುಟ್ಟಿಕೊಂಡೆ... !!

ಮತ್ತೆ... ಅನುಮಾನಗಳು..ಶುರುವಾದವು ...!!.......!!




(ಕೃತಜ್ಞತೆಗಳು...

ವಿನೂತ......
ಡಾ. ಪ್ರಶಾಂತ್...
ಡಾ. ಲತಾ...
.................
..................
ರೂಪದರ್ಶಿಗಳು...)



(ಛಾಯಾ ಚಿತ್ತಾರಾ...
ನನ್ನ ಪ್ರೊಫೈಲ್ ನೋಡಿ.... )