part 2
"ಪ್ರಕಾಶು ಒಂದು ಕವನ ಬರೆದು ಕೊಡೋ..."
ನನಗೆ ಪಿಕಲಾಟಕ್ಕೆ ಶುರುವಾಯಿತು....
"ಎಂತುದು ಮಾರಾಯಾ...?
ಏನು ವಿಷಯ..? ಏನು ಕಥೆ..?
ನಾನೇನೂ ಕವಿ ಅಲ್ಲ ಮಾರಾಯಾ..."
ನಾಗು ಹೇಳಿದ...
"ಈ ಕವನ, ಕವಿತೆ .. ಬರಿಲಿಕ್ಕೆ ಕವಿಗಳು ಯಾಕೋ...??
ಏನೋ...ಒಂದಷ್ಟು .. ಅರ್ಥವಾಗದ ಶಬ್ಧ ಹಾಕಿ ..
ಗೊಂದಲ ಮಾಡಿದರೆ ಕವನ ಆಗುತ್ತದಪ್ಪಾ..
ಅರ್ಥ ಆಗದಿದ್ದರೂ ಪರವಾಗಿಲ್ಲ ...
ಅದಕ್ಕೇನು ಪ್ರಾಸ ಬೇಕಾ...?
ವ್ಯಾಕರಣ ಬೇಕಾ...?
ಕವಿತೆ ಅಂದ್ರೆ ಹೇಗಿರ ಬೇಕು ಗೊತ್ತಾ...?
ಡಾಕ್ಟರ್ ಮೆಡಿಸಿನ್ ಚೀಟಿ ತರಹ ಇರಬೇಕು..
ನಮ್ಮಂಥವರಿಗೆ ಅರ್ಥ ಆದಹಾಗೆ ಅನಿಸಬೇಕು..
ಅರ್ಥ ಆಗಿರ ಬಾರದು...
ಆದರೆ... ಅರ್ಥ ಆಗೊರಿಗೆ ಅರ್ಥ ಆದ್ರೆ ಸಾಕು...
ಕವಿತೆ ಅಂದ್ರೆ ಹೇಗಿರ ಬೇಕು ಗೊತ್ತಾ...?
ಡಾಕ್ಟರ್ ಮೆಡಿಸಿನ್ ಚೀಟಿ ತರಹ ಇರಬೇಕು..
ನಮ್ಮಂಥವರಿಗೆ ಅರ್ಥ ಆದಹಾಗೆ ಅನಿಸಬೇಕು..
ಅರ್ಥ ಆಗಿರ ಬಾರದು...
ಆದರೆ... ಅರ್ಥ ಆಗೊರಿಗೆ ಅರ್ಥ ಆದ್ರೆ ಸಾಕು...
ನೀನು ಬರೆಯಪಾ......"
"... ಯಾಕೆ..?? "
"ಅದೆಲ್ಲ ಕೇಳ ಬೇಡ ...
ಪ್ರತಿಯೊಂದೂ ಕವಿತೆಗೂ ...
ಸಿದ್ದಾಪುರದ ನಿರ್ಮಲಾ ಹೊಟೆಲನಲ್ಲಿ ಮಸಾಲೆ ದೋಸೆ,..
"ಐನ್ ಕೈ ಜ್ಯೂಸ್" ನಲ್ಲಿ ಜ್ಯೂಸ್...
ಲಕ್ಷ್ಮೀ, ಮತ್ತು ಸೆಂಟ್ರಲ್ ಟಾಕೀಸ್ ನಲ್ಲಿ ಸಿನೇಮಾಗಳು..
ನೀನು ಬರಿ ಮಾರಾಯಾ..."
ನಾನು ಆಯಿತೆಂದೆ...
ಒಂದು ಕವನ ಗೀಚಿದೆ....
ಅವನಿಗೆ ಕೊಟ್ಟೆ...
"ನನ್ನ ಬಿಳಿ ಹಲ್ಲಿನ...
ಕ್ಲೋಸ್ ಅಪ್ ನಗುವಿನ...
"... ಯಾಕೆ..?? "
"ಅದೆಲ್ಲ ಕೇಳ ಬೇಡ ...
ಪ್ರತಿಯೊಂದೂ ಕವಿತೆಗೂ ...
ಸಿದ್ದಾಪುರದ ನಿರ್ಮಲಾ ಹೊಟೆಲನಲ್ಲಿ ಮಸಾಲೆ ದೋಸೆ,..
"ಐನ್ ಕೈ ಜ್ಯೂಸ್" ನಲ್ಲಿ ಜ್ಯೂಸ್...
ಲಕ್ಷ್ಮೀ, ಮತ್ತು ಸೆಂಟ್ರಲ್ ಟಾಕೀಸ್ ನಲ್ಲಿ ಸಿನೇಮಾಗಳು..
ನೀನು ಬರಿ ಮಾರಾಯಾ..."
ನಾನು ಆಯಿತೆಂದೆ...
ಒಂದು ಕವನ ಗೀಚಿದೆ....
ಅವನಿಗೆ ಕೊಟ್ಟೆ...
"ನನ್ನ ಬಿಳಿ ಹಲ್ಲಿನ...
ಕ್ಲೋಸ್ ಅಪ್ ನಗುವಿನ...
ಹಿಂದೆ ..
ಕೊಳೆತು ನಾರಿ...
ಹೊಮ್ಮುತ್ತಿರುವ...
ಕೊಳೆತು ನಾರಿ...
ಹೊಮ್ಮುತ್ತಿರುವ...
ಹೊಲಸು...
...........
ನನಗಷ್ಟೇ.... ಗೊತ್ತು...!!!.."
ಕವನ ಓದಿ ನಾಗು ದಂಗಾಗಿ ಹೋದ ...!!
" ಏನೋ ಇದು...???.. !!
ಕವಿತೇನಾ ಇದು...?
ಹೋಗ್ಲಿ ಬಿಡು... ಇದು ಚೆನ್ನಾಗಿದೆ... !
ಇಂಥದ್ದೇ ಬರಿ...!
ಇನ್ನೂ ದೊಡ್ಡದಾಗಿ ಬರಿ ಮಾರಾಯಾ..."
ದಿನಾಲೂ ನಾನು ಕವನ ಬರೆಯೋದು...
ಈತ ನನಗೆ ಮಸಾಲೆ ದೋಸೆ ,..
ಸಿನೇಮಾ ತೋರಿಸೋದು ಶುರುವಾಯಿತು...
ಈ ನಾಗು ದಿನಾಲು ನನಗೆ ವಿಷಯ ಕೊಡುತ್ತಿದ್ದ....
'ಇವತ್ತು " ಭಾರತದ ಜನಸಂಖ್ಯೆ " ಬಗೆಗೆ ಬರಿ...!!.."
" ಇವತ್ತು " ಕುಟುಂಬ ಯೋಜನೆ " ಬಗೆಗೆ ಬರಿ...!! "
ಇಂದು "ಇಂದಿರಾ ಗಾಂಧಿ ಮತ್ತು ರಾಜಕುಮರ್ ಮೂಗಿನ " ಬಗೆಗೆ ಬರಿ"
ಇಂದು " ಮುರಾರ್ಜಿ ದೇಸಾಯಿಯವರ ಸ್ವಮೂತ್ರ ಪಾನದ " .. ಬರಿ.."
ಕೊಡುತ್ತಿರುವದು ಎಲ್ಲಾ ಎಡವಟ್ಟು ಐಡಿಯಾಗಳೇ...!
ನನಗೆ ತಲೆ ಕೆಟ್ಟು ಹೋಯಿತು...!!
"ಲೋ ಇವತ್ತು ಇದೆಲ್ಲಾ ಯಾಕೆ ಅಂತ ಹೇಳೋವರೆಗೂ..
ಈ ನಾಗು ದಿನಾಲು ನನಗೆ ವಿಷಯ ಕೊಡುತ್ತಿದ್ದ....
'ಇವತ್ತು " ಭಾರತದ ಜನಸಂಖ್ಯೆ " ಬಗೆಗೆ ಬರಿ...!!.."
" ಇವತ್ತು " ಕುಟುಂಬ ಯೋಜನೆ " ಬಗೆಗೆ ಬರಿ...!! "
ಇಂದು "ಇಂದಿರಾ ಗಾಂಧಿ ಮತ್ತು ರಾಜಕುಮರ್ ಮೂಗಿನ " ಬಗೆಗೆ ಬರಿ"
ಇಂದು " ಮುರಾರ್ಜಿ ದೇಸಾಯಿಯವರ ಸ್ವಮೂತ್ರ ಪಾನದ " .. ಬರಿ.."
ಕೊಡುತ್ತಿರುವದು ಎಲ್ಲಾ ಎಡವಟ್ಟು ಐಡಿಯಾಗಳೇ...!
ನನಗೆ ತಲೆ ಕೆಟ್ಟು ಹೋಯಿತು...!!
"ಲೋ ಇವತ್ತು ಇದೆಲ್ಲಾ ಯಾಕೆ ಅಂತ ಹೇಳೋವರೆಗೂ..
ಕವನ ಬರೆದು ಕೊಡೋದಿಲ್ಲ..."
ಪಟ್ಟು ಹಿಡಿದು ಕುಳಿತೆ...
"ಪ್ರಕಾಶು...
ನಮ್ಮ "ಪೆಟ್ಟಿಗೆ ಗಪ್ಪತಿ" ನನಗೊಂದು ಕಾಂಟ್ರಕ್ಟು ಕೊಟ್ಟಿದ್ದಾನೆ..!!"
" ಏನು..?"
" ಅವನೊಂದು ಹುಡುಗಿ ಇಷ್ಟ ಪಟ್ಟಿದ್ದಾನೆ......
ಅವಳು ಇವನನ್ನು ನೋಡಿ ಇಷ್ಟ ಪಡುವಂತೆ ಮಾಡಬೇಕು...
ಅದು ಕಾಂಟ್ರಕ್ಟು...
ಅವಳು ಇವನನ್ನು ಇಷ್ಟ ಪಡುವಂತೆ ನಾನು ಪತ್ರ ಬರೆದು ಕೊಡ ಬೇಕು.."
" ಇಂಥಾ...ಕವಿತೆ ಕೊಟ್ರೆ ...
ಅವಳು ಎಲ್ಲಿ ಇವನನ್ನು ಇಷ್ಟ ಪಡ್ತಾಳೋ...?"
" ಅದನ್ನು ಕಟ್ಟಿಕೊಂಡು ನಮಗೇನು..??
ಇದು ಎಷ್ಟು ದಿನ ಎಳೆಯುತ್ತೋ...ಅಷ್ಟು ದಿನ ನಮಗೆ ಲಾಭ...!
ಅಷ್ಟು ದಿನ ನಮಗೆ ಸಿನೆಮಾ.., ಮಸಾಲೆ ದೋಸೆ..
ಇನ್ನೋಂದು ವಿಷಯ ...
ಇವನೂ, ಅವಳೂ ... ಇನ್ನೂ ..ಮಾತಾಡ್ತಾ ಇಲ್ಲವಂತೆ..
ಎಲ್ಲ ಕಣ್ಣು ಸನ್ನೆ ಬಾಯಿಸನ್ನೆಯಂತೆ...
ಇವನು ಕೊಟ್ಟ ಪತ್ರಕ್ಕೆ ...
ಪಟ್ಟು ಹಿಡಿದು ಕುಳಿತೆ...
"ಪ್ರಕಾಶು...
ನಮ್ಮ "ಪೆಟ್ಟಿಗೆ ಗಪ್ಪತಿ" ನನಗೊಂದು ಕಾಂಟ್ರಕ್ಟು ಕೊಟ್ಟಿದ್ದಾನೆ..!!"
" ಏನು..?"
" ಅವನೊಂದು ಹುಡುಗಿ ಇಷ್ಟ ಪಟ್ಟಿದ್ದಾನೆ......
ಅವಳು ಇವನನ್ನು ನೋಡಿ ಇಷ್ಟ ಪಡುವಂತೆ ಮಾಡಬೇಕು...
ಅದು ಕಾಂಟ್ರಕ್ಟು...
ಅವಳು ಇವನನ್ನು ಇಷ್ಟ ಪಡುವಂತೆ ನಾನು ಪತ್ರ ಬರೆದು ಕೊಡ ಬೇಕು.."
" ಇಂಥಾ...ಕವಿತೆ ಕೊಟ್ರೆ ...
ಅವಳು ಎಲ್ಲಿ ಇವನನ್ನು ಇಷ್ಟ ಪಡ್ತಾಳೋ...?"
" ಅದನ್ನು ಕಟ್ಟಿಕೊಂಡು ನಮಗೇನು..??
ಇದು ಎಷ್ಟು ದಿನ ಎಳೆಯುತ್ತೋ...ಅಷ್ಟು ದಿನ ನಮಗೆ ಲಾಭ...!
ಅಷ್ಟು ದಿನ ನಮಗೆ ಸಿನೆಮಾ.., ಮಸಾಲೆ ದೋಸೆ..
ಇನ್ನೋಂದು ವಿಷಯ ...
ಇವನೂ, ಅವಳೂ ... ಇನ್ನೂ ..ಮಾತಾಡ್ತಾ ಇಲ್ಲವಂತೆ..
ಎಲ್ಲ ಕಣ್ಣು ಸನ್ನೆ ಬಾಯಿಸನ್ನೆಯಂತೆ...
ಇವನು ಕೊಟ್ಟ ಪತ್ರಕ್ಕೆ ...
ಸಧ್ಯಕ್ಕೆ ಒಳ್ಳೆಯ ಮುಗುಳ್ನಗೆ ಬಂದರೆ ಸಾಕಂತೆ..!!.
ನೀನು ಬರೆಯೋ ಕವನಕ್ಕೆ ಅವಳು ನಕ್ಕರೆ ಸಾಕು ಕಣೋ..."
" ಯಾರು ಆ ಹುಡುಗಿ...?"
" ಅದನ್ನು ಮಾತ್ರ ನಾನು ಕೇಳ ಬಾರದಂತೆ..."
" ಈ...ಥರ " ಮೂರಾರ್ಜಿಮೂತ್ರ ಪಾನ,..
ನೀನು ಬರೆಯೋ ಕವನಕ್ಕೆ ಅವಳು ನಕ್ಕರೆ ಸಾಕು ಕಣೋ..."
" ಯಾರು ಆ ಹುಡುಗಿ...?"
" ಅದನ್ನು ಮಾತ್ರ ನಾನು ಕೇಳ ಬಾರದಂತೆ..."
" ಈ...ಥರ " ಮೂರಾರ್ಜಿಮೂತ್ರ ಪಾನ,..
ರಾಜಕುಮಾರ್ ಮೂಗು.." ಅಂತೆಲ್ಲ ಬರೆದಿದ್ದನ್ನು ಆತ ನೋಡಲ್ವೇನೋ..?"
" ಪೆಟ್ಟಿಗೆ ಗಪ್ಪತಿ ಹತ್ತಿರ ಹೋಗಿ...
ಹುಡುಗಿ ಯಾರೆಂದು ನಾನು ಕೇಳ ಬಾರದು..
ಹಾಗೆ ಆತ ...
ನಾನು ಬರ್ದು ಕೊಟ್ಟ ಪತ್ರ ಒಡೆದು ನೋಡ ಬಾರದು..
ಇದು ಕಂಡೀಷನ್, ಕರಾರು ಆಗಿದೆ..
ನಮಗೇನು ಆಗಬೇಕಿದೆ..?
ನೀನು ನಾನು ಹೇಳಿದ ಹಾಗೆ ಬರಿ..."
"ನಿನಗೇ ಇಂಥವರು ಸಿಗೋದು ಸಾಕು ಮಾರಾಯಾ..."
ಅಂದಿನಿಂದ ಕವನಗಳು, ಕವಿತೆಗಳು....
ಜೋರಾಗಿ.. ಬರೆದಿದ್ದೇ... ಬರೆದದ್ದು...!!
ಪೆಟ್ಟಿಗೆ ಗಪ್ಪತಿ ಬಹಳ ಖುಷಿಯಲ್ಲಿದ್ದ...
ತನ್ನಷ್ಟಕ್ಕೆ ಹಾಡುತ್ತಿದ್ದ...
ನಮ್ಮ ಸಂಗಡ ಮಾತಾಡಲು ಬರುತ್ತಿರಲಿಲ್ಲ...
ಒಬ್ಬಂಟಿಯಾಗಿ...
ರೂಮಿನಲ್ಲಿ ಪ್ರೇಮಗೀತೆಗಳನ್ನು ಷಿಳ್ಳೆ ಹಾಕುತ್ತ.. ಹಾಡುತ್ತಿದ್ದ...
"ಕಣ್ಣು... ಕಣ್ಣು ಒಂದಾಯಿತು....
ನನ್ನಾ... ನಿನ್ನಾ... ಮನಸೆರಿತು..."
ಎಲಾ ಇವನಾ...?
" ಪೆಟ್ಟಿಗೆ ಗಪ್ಪತಿ ಹತ್ತಿರ ಹೋಗಿ...
ಹುಡುಗಿ ಯಾರೆಂದು ನಾನು ಕೇಳ ಬಾರದು..
ಹಾಗೆ ಆತ ...
ನಾನು ಬರ್ದು ಕೊಟ್ಟ ಪತ್ರ ಒಡೆದು ನೋಡ ಬಾರದು..
ಇದು ಕಂಡೀಷನ್, ಕರಾರು ಆಗಿದೆ..
ನಮಗೇನು ಆಗಬೇಕಿದೆ..?
ನೀನು ನಾನು ಹೇಳಿದ ಹಾಗೆ ಬರಿ..."
"ನಿನಗೇ ಇಂಥವರು ಸಿಗೋದು ಸಾಕು ಮಾರಾಯಾ..."
ಅಂದಿನಿಂದ ಕವನಗಳು, ಕವಿತೆಗಳು....
ಜೋರಾಗಿ.. ಬರೆದಿದ್ದೇ... ಬರೆದದ್ದು...!!
ಪೆಟ್ಟಿಗೆ ಗಪ್ಪತಿ ಬಹಳ ಖುಷಿಯಲ್ಲಿದ್ದ...
ತನ್ನಷ್ಟಕ್ಕೆ ಹಾಡುತ್ತಿದ್ದ...
ನಮ್ಮ ಸಂಗಡ ಮಾತಾಡಲು ಬರುತ್ತಿರಲಿಲ್ಲ...
ಒಬ್ಬಂಟಿಯಾಗಿ...
ರೂಮಿನಲ್ಲಿ ಪ್ರೇಮಗೀತೆಗಳನ್ನು ಷಿಳ್ಳೆ ಹಾಕುತ್ತ.. ಹಾಡುತ್ತಿದ್ದ...
"ಕಣ್ಣು... ಕಣ್ಣು ಒಂದಾಯಿತು....
ನನ್ನಾ... ನಿನ್ನಾ... ಮನಸೆರಿತು..."
ಎಲಾ ಇವನಾ...?
ಈತ ಹುಡುಗಿ ಹತ್ತಿರ ಹೇಗೆ ಭೇಟಿಯಾಗ್ತಾನೆ..?
ಸಂಕ್ಷಿಪ್ತವಾಗಿ ಮಾತನಾಡಲೇ ಬರದ ಈತನಿಗೆ..
ಯಾವ ಹುಡುಗಿ ನೋಡುತ್ತಿರ ಬಹುದು...?
ಇವನ ಘಂಟೆಗಟ್ಟಲೆ ಪುರಾಣದ ಕೊರೆತ ಹೇಗೆ ಸಹಿಸಿ ಕೊಳ್ತಾಳೆ..?
ಸಂಕೋಚ ಸ್ವಭಾವದ ಆತ ಹೇಗೆ , ಎಲ್ಲಿ ..?
ಪತ್ರ ಕೊಡುತ್ತಿದ್ದ ಅನ್ನೋದು ಯಕ್ಷ ಪ್ರಶ್ನೆ ಆಯಿತು...!
ಪ್ರೇಮ ಮತ್ತು ಕೆಮ್ಮು ಮುಚ್ಚಿಡಲಿಕ್ಕೆ, ಬಚ್ಚಿಡಲಿಕ್ಕೆ ಅಗುವದಿಲ್ಲವಂತೆ....
ನನ್ನ ಸಂಗಡ ಸೀತಾಪತಿ, ಉಮಾಪತಿ ಸೇರಿಕೊಂಡರು...
"ತೆಂಗಿನಕಾಯಿತಲೆ ಸೀತಾಪತಿ" ಇದರಲ್ಲಿ ಬಹಳ ಜೋರು...
ಆತ ಕಂಡು ಹಿಡಿದೇ ಬಿಟ್ಟ...!
ಕ್ಲಾಸಿನಲ್ಲಿ ಪೆಟ್ಟಿಗೆ ಗಪ್ಪತಿ ನೋಟ್ ಬುಕ್ ಎಲ್ಲ ಸಂಗ್ರಹ ಮಾಡಿ..
ಇವನ ಘಂಟೆಗಟ್ಟಲೆ ಪುರಾಣದ ಕೊರೆತ ಹೇಗೆ ಸಹಿಸಿ ಕೊಳ್ತಾಳೆ..?
ಸಂಕೋಚ ಸ್ವಭಾವದ ಆತ ಹೇಗೆ , ಎಲ್ಲಿ ..?
ಪತ್ರ ಕೊಡುತ್ತಿದ್ದ ಅನ್ನೋದು ಯಕ್ಷ ಪ್ರಶ್ನೆ ಆಯಿತು...!
ಪ್ರೇಮ ಮತ್ತು ಕೆಮ್ಮು ಮುಚ್ಚಿಡಲಿಕ್ಕೆ, ಬಚ್ಚಿಡಲಿಕ್ಕೆ ಅಗುವದಿಲ್ಲವಂತೆ....
ನನ್ನ ಸಂಗಡ ಸೀತಾಪತಿ, ಉಮಾಪತಿ ಸೇರಿಕೊಂಡರು...
"ತೆಂಗಿನಕಾಯಿತಲೆ ಸೀತಾಪತಿ" ಇದರಲ್ಲಿ ಬಹಳ ಜೋರು...
ಆತ ಕಂಡು ಹಿಡಿದೇ ಬಿಟ್ಟ...!
ಕ್ಲಾಸಿನಲ್ಲಿ ಪೆಟ್ಟಿಗೆ ಗಪ್ಪತಿ ನೋಟ್ ಬುಕ್ ಎಲ್ಲ ಸಂಗ್ರಹ ಮಾಡಿ..
ಸ್ಟಾಫ್ ರೂಮಿನಲ್ಲಿ ಇಟ್ಟು ಬರುತ್ತಿದ್ದ...
ಹಾಗೆಯೇ ಅದನ್ನು ಲೆಕ್ಚರರ್ ನೋಡಿ ಆದಮೇಲೆ....
ಸ್ಟಾಫ್ ರೂಮಿನಿಂದ ಕ್ಲಾಸಿಗೆ ತಂದಿಡುತ್ತಿದ್ದ...
ಅಲ್ಲಿ ..ಆ... ಹುಡುಗಿಯ ನೋಟ್ ಬುಕ್ಕಿನಲ್ಲಿ ..
ಈ ಪ್ರೇಮಪತ್ರ ಇಡುತ್ತಿದ್ದ....!
ಅಬ್ಭಾ...! ಎಂಥಹ ಸಂಪರ್ಕ ಮಾಧ್ಯಮ...!!!!
ಎಲ್ಲಾ ಸರಿ...ಆ... ಹುಡುಗಿ ಯಾರು...?
ಒಂದುದಿನ ನಾವೆಲ್ಲ ಪೆಟ್ಟಿಗೆ ಗಪ್ಪತಿಯನ್ನೇ ನೋಡುತಿದ್ದೇವು......
ಪಾಠ ಕೇಳಿಸಿಕೊಳ್ಳಲಿಲ್ಲ....
ಸಾವಕಾಶವಾಗಿ ಪೆಟ್ಟಿಗೆ ಗಪ್ಪತಿಯ ಕಣ್ಣು...
ಹೆಣ್ಣುಮಕ್ಕಳ ಕಡೆಗೆ ತಿರುಗಿತು...!
ಕ್ಯಾಮರಾ ಥರಹ ಅಲ್ಲಿ ,ಇಲ್ಲಿ , ಹುಡುಕಿತು....
ಅವನ ಸಂಗಡ ನಮ್ಮ ಕಣ್ಣುಗಳು ಓಡಾಡಿತು....!
ಎಲ್ಲಕಡೆ ಓಡಾಡಿ ಒಂದು ಕಡೆ ನಿಂತಿತು....!
ನಾವೂ ಅದೇ ಕೋನದಲ್ಲಿ ನೋಡಿದೆವು...!!
ಅರೇ,,..!... ಹಾಂ...!!!!
"ಅವಳು ರಾಜಿ...!!!!"
ತನ್ನ ಕಣ್ಣಂಚಿನ ಮಿಂಚಲ್ಲೇ ಕೊಲ್ಲುವ ಹುಡುಗಿ...!!
ರಾಜಿ.. ಒಂದು ಮುಗುಳ್ನಗು ಪೆಟ್ಟಿಗೆ ಗಪ್ಪತಿಕಡೆ ಕೊಟ್ಟಳು....!!
ಅಬ್ಭಾ.... ಪೆಟ್ಟಿಗೆ ಗಪ್ಪತಿಯೇ...!!
ಭರ್ಜರಿ ಹುಲಿಯನ್ನೇ ಬೇಟೆಯಾಡಿದ್ದ....!
ಅಷ್ಟರಲ್ಲಿ ಕಾಲೇಜಿನ ಜವಾನ...
ಒಂದು ನೋಟಿಸನ್ನು ಲೆಕ್ಚರರಿಗೆ ಕೊಟ್ಟ..
ಅವರು ಅದನ್ನು ಜೋರಾಗಿ ಓದಿದರು....
" ನಾಡಿದ್ದು... ನಮ್ಮ ಕಾಲೇಜಿನಲ್ಲಿ.. ಎಲ್ಲ ಕ್ಲಾಸುಗಳಲ್ಲಿ..
ರಕ್ಷಾಬಂಧನ ಕಾರ್ಯಕ್ರಮವಿದೆ...
ಇದು ಕಡ್ಡಾಯ...
ತಪ್ಪಿಸಿಕೊಂಡವರಿಗೆ ದಂಡ ವಿಧಿಸಲಾಗುವದು...
ಬರದಿದ್ದವರು ಪಾಲಕರನ್ನು ಕರೆದು ಕೊಂಡು ವಿವರಣೆ ಕೊಡಬೇಕು..
ರಕ್ಷಾ ಬಂಧನ ನಮ್ಮ ಕಾಲೇಜಿನಿಂದ ಉಚಿತವಾಗಿ ಸಪ್ಲೈ ಮಾಡಲಾಗುತ್ತದೆ..
ನಾವೆಲ್ಲ ಸಹೋದರತೆ ಬಾಂಧವ್ಯವನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಾಡೋಣ.."
ಎಲ್ಲರೂ ನಾಗುವಿನ ಕಡೆಗೆ ಮುಖಮಾಡಿದರು....
"ಕಾಪಾಡು ಮಾರಾಯಾ" ಎನ್ನುವಂತೆ...
ನಾಗು ದೀರ್ಘವಾಗಿ, ಗಹನವಾಗಿ ವಿಚಾರ ಮಡುತ್ತಿದ್ದ......
ಎಂಥ ಐಡಿಯಾ ಕೊಡ ಬಹುದು ಈತ...??
ನಮಗೂ ಕುತೂಹಲ ಜಾಸ್ತಿಯಾಯಿತು....!!
(ದಯವಿಟ್ಟು ನಾನು ಬರೆದ.. "ಗಪ್ಪತಿ ಅನ್ನುವ ಅಡಪೊಟ್ರು " ಓದಿ....
ಬರದಿದ್ದವರು ಪಾಲಕರನ್ನು ಕರೆದು ಕೊಂಡು ವಿವರಣೆ ಕೊಡಬೇಕು..
ರಕ್ಷಾ ಬಂಧನ ನಮ್ಮ ಕಾಲೇಜಿನಿಂದ ಉಚಿತವಾಗಿ ಸಪ್ಲೈ ಮಾಡಲಾಗುತ್ತದೆ..
ನಾವೆಲ್ಲ ಸಹೋದರತೆ ಬಾಂಧವ್ಯವನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಾಡೋಣ.."
ಎಲ್ಲರೂ ನಾಗುವಿನ ಕಡೆಗೆ ಮುಖಮಾಡಿದರು....
"ಕಾಪಾಡು ಮಾರಾಯಾ" ಎನ್ನುವಂತೆ...
ನಾಗು ದೀರ್ಘವಾಗಿ, ಗಹನವಾಗಿ ವಿಚಾರ ಮಡುತ್ತಿದ್ದ......
ಎಂಥ ಐಡಿಯಾ ಕೊಡ ಬಹುದು ಈತ...??
ನಮಗೂ ಕುತೂಹಲ ಜಾಸ್ತಿಯಾಯಿತು....!!
(ದಯವಿಟ್ಟು ನಾನು ಬರೆದ.. "ಗಪ್ಪತಿ ಅನ್ನುವ ಅಡಪೊಟ್ರು " ಓದಿ....
http://ittigecement.blogspot.com/2009/03/blog-post_22.html