ನಮ್ಮದಲ್ಲದ...
ಎಷ್ಟೋ ವಿಷಯಗಳನ್ನು...
ನಮ್ಮದಾಗಿಸಿ ಕೊಂಡಿದ್ದೇವೆ....
ನಮ್ಮ ಉಡುಗೆ.. ತೊಡಿಗೆ....
ಆಚಾರ ವಿಚಾರಗಳನ್ನ...
ಬದಲಾಯಿಸಿ ಕೋಂಡಿದ್ದೇವೆ...
ನಮ್ಮ ಊಟ ತಿಂಡಿ....
ಭಾಷೆಯನ್ನೂ.. ..
ಬದಲಾಯಿಸಿ ಕೊಳ್ಳುತ್ತಿದ್ದೇವೆ......
ನಮ್ಮದಲ್ಲದ ಎಷ್ಟೋ ಸಂಗತಿಗಳು ನಮ್ಮದಾಗಿದೆ...
ಆದರೆ...
ನಾವು ನಾವಾಗಿಯೇ ಇರೋಣ.... !!
ನಾವು ಬದಲಾಗೋದು ಬೇಡ.... !!
..... ಬದಲಾದರೂ...... ..
ನಮ್ಮ ಸಂಸ್ಕ್ರತಿಯನ್ನು ಉಳಿಸಿ ಕೊಂಡು...
ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು...
ಉನ್ನತಿಯತ್ತ ಸಾಗೋಣ..
ನಮ್ಮ....
ಭವ್ಯ.. ಪರಂಪರೆ ಮರೆಯದಿರೋಣ...
ಈ...
ಎಲ್ಲಾ... ಬದಲಾವಣೆಗಳ ನಡುವೆ ಮತ್ತೊಂದು.. ..
ವರ್ಷ ಕಳೆದು ಹೋಗಿದೆ...
ಇನ್ನೊಂದು...
ವರುಷ ಬರುತ್ತಲಿದೆ... !
ಹೊಸ ವರುಷವು.....
ಸುಖ ಶಾಂತಿ.. ಸಮ್ರುದ್ಧಿಯನ್ನು ತರಲಿ... !
ಹೊಸ ಮನೆ ಕಟ್ಟುವ...ಭಾಗ್ಯವೊದಗಿ ಬರಲಿ...!!
ಭಾಗ್ಯ ಬಂದಾಗ...
" ಇಟ್ಟಿಗೆ ಸಿಮೆಂಟು.."
ಸದಾ.. ನಿಮ್ಮೊಂದಿಗಿರಲಿ....!!
ಸರ್ವರಿಗೂ..
ಹೊಸ.. ವರುಷ..
ಹೊಸ... ಹರುಷವ
ತರಲಿ... ..
"ಇಟ್ಟಿಗೆ ಸಿಮೆಂಟು"
Monday, December 29, 2008
Friday, December 26, 2008
ಮಿಲತೀ..ಹೇ..ಜಿಂದಗೀ...ಮೇ..ಮೊಹಬ್ಬತ್..... ಕಭಿ. .ಕಭೀ..
ಮುಂಬೈಯಲ್ಲಿರುವಾಗ ಜೀವನದಲ್ಲಿ ಒಂದು ಹಂತಕ್ಕೆ ಬರಬೇಕು ಅನ್ನುವದೇ ಗುರಿಯಾಗಿತ್ತು..
ಅಲ್ಲೂ ಕೂಡ ಒಂದೆರಡು ಹೆಣ್ಣು ಮಕ್ಕಳು ಎಡತಾಕಿ ಹೋಗಿದ್ದರು.
ಆದರೆ ನಾನಿನ್ನೂ "ವಿಜಯಾ" ಗುಂಗಿನಿಂದ ಹೊರಬಂದಿರಲಿಲ್ಲ...
ಆರ್ಥಿಕ ಭದ್ರತೆ ಬಂದ ಮೇಲೆ.. ಅವಳ ಮನೆಗೆ ಹೋಗಿ...
ಅವಳ ಅಣ್ಣನನ್ನೇ ಮಾತಾಡಿಸಿ ಬರುವ ವಿಚಾರ ನನ್ನದಾಗಿತ್ತು..
ಒಂದು ಚಂದದ ಮನೆ.. ಅವಳ ಪ್ರೀತಿ.....
ನಮ್ಮಿಬ್ಬರ ಲೋಕವೇ ಬೇರೆ......
ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದೆ...
ಅಲ್ಲಿ ಷಹ.., ಸುನಿಲ್ ಅಣ್ಣಮ್.., ವಿಲಾಸ್ ಮ್ಹುಳೆ..
ಇವರುಗಳು.. ನನಗೆ ಹಿಂದಿ ಸಿನೇಮಾ, ಗುಲ್ಜ್ಯಾರ್..ಸಿನೆಮಾಗಳು..
ಹಳೆಯ ಹಿಂದಿ ಸಿನೆಮಾ ಹಾಡುಗಳು...
ಒಳ್ಳೊಳ್ಳೆ ಗಝಲ್ ಗಳ ರುಚಿ ಹತ್ತಿಸಿದರು...
ಅವರೆಲ್ಲ ಈಗ ಎಲ್ಲಿ ಕಳೆದು ಹೋಗಿದ್ದಾರೋ...
ಒಮ್ಮೆ ಮುಂಬೈ ಗೆ ಹೋಗಿ ಪೇಪರನಲ್ಲಿ.., ಟಿವಿ ಯಲ್ಲಿ..,
ಜಾಹಿರಾತು ಕೊಟ್ಟು ಹುಡುಕಿಬಿಡೋಣ ಅನಿಸುತ್ತದೆ...
"ಒಮ್ಮೆ ಸಿಕ್ಕಿದ... ಪ್ರೀತಿಯನ್ನು ಬಿಡಬಾರದು..
ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದೆ...
ಅಲ್ಲಿ ಷಹ.., ಸುನಿಲ್ ಅಣ್ಣಮ್.., ವಿಲಾಸ್ ಮ್ಹುಳೆ..
ಇವರುಗಳು.. ನನಗೆ ಹಿಂದಿ ಸಿನೇಮಾ, ಗುಲ್ಜ್ಯಾರ್..ಸಿನೆಮಾಗಳು..
ಹಳೆಯ ಹಿಂದಿ ಸಿನೆಮಾ ಹಾಡುಗಳು...
ಒಳ್ಳೊಳ್ಳೆ ಗಝಲ್ ಗಳ ರುಚಿ ಹತ್ತಿಸಿದರು...
ಅವರೆಲ್ಲ ಈಗ ಎಲ್ಲಿ ಕಳೆದು ಹೋಗಿದ್ದಾರೋ...
ಒಮ್ಮೆ ಮುಂಬೈ ಗೆ ಹೋಗಿ ಪೇಪರನಲ್ಲಿ.., ಟಿವಿ ಯಲ್ಲಿ..,
ಜಾಹಿರಾತು ಕೊಟ್ಟು ಹುಡುಕಿಬಿಡೋಣ ಅನಿಸುತ್ತದೆ...
"ಒಮ್ಮೆ ಸಿಕ್ಕಿದ... ಪ್ರೀತಿಯನ್ನು ಬಿಡಬಾರದು..
ಭದ್ರವಾಗಿ ಹಿಡಿದು ಕೂಂಡು ಬಿಡಬೇಕು..
ಕಳೆದು ಹೋದರೆ ಮತ್ತೆ ಹುಡುಕುವದು ಬಲು ಕಷ್ಟ...
ಕಳೆದು ಹೋದರೆ ಮತ್ತೆ ಹುಡುಕುವದು ಬಲು ಕಷ್ಟ...
ಪ್ರೀತಿ ಮಾಡುವವರು ಸಿಕ್ಕಿದ್ದಾರಲ್ಲ.. !!
ಅವರನ್ನು ಹೋಗಲು ಬಿಡಬಾರದು...!"
"ಮಿಲತಿ ಹೆ ..ಜಿಂದಗೀ ..ಮೆ...
ಮೊಹಬ್ಬತ್..ಕಭೀ..ಕಬೀ...!!
ಹೋತಿ ಹೆ ದಿಲ್ಬರೋಂಸೆ.....
ಇನಾಯತ್ ..ಕಬೀ..ಕಭ್ಹೀ......"
ಇವರು ನೆನಪಾದಾಗಲೆಲ್ಲಾ..ಈ ಹಾಡು ನೆನಪಾಗುತ್ತದೆ...
ಅವರನ್ನು ಹೋಗಲು ಬಿಡಬಾರದು...!"
"ಮಿಲತಿ ಹೆ ..ಜಿಂದಗೀ ..ಮೆ...
ಮೊಹಬ್ಬತ್..ಕಭೀ..ಕಬೀ...!!
ಹೋತಿ ಹೆ ದಿಲ್ಬರೋಂಸೆ.....
ಇನಾಯತ್ ..ಕಬೀ..ಕಭ್ಹೀ......"
ಇವರು ನೆನಪಾದಾಗಲೆಲ್ಲಾ..ಈ ಹಾಡು ನೆನಪಾಗುತ್ತದೆ...
ಹ್ರದಯ ಭಾರವಾಗುತ್ತದೆ....
ಅವರೊಂದಿಗೆ ಹಂಚಿಕೊಂಡ ಕ್ಷಣಗಳು..ಮಾತುಗಳು...
ಪ್ರತಿ ಶನಿವಾರ ಷಹಾನ ಪಾರ್ಟಿಗಳು....
ಅವನ ಹೆಂಡತಿ... ಅವನನ್ನು ಬಿಟ್ಟು ಓಡಿ ಹೋದ ಕಥೆ..
..ಅವನ ಹಾಡುವ ಶೋಕ ಗೀತೆಗಳು.....
"ಪಲ್..ಪಲ್..ದಿಲ್..ಕೇ..ಪಾಸ್..
ತುಮ್ ರೆಹತೀ..ಹೋ..."
ಹಾಡು ಮುಗಿದ ಮೇಲೆ ಅವನ ದುಃಖ...
ಅವನ ಕಣ್ಣಿರು...
"ಅವಳು ಯಾವಾಗಲಾದರೂ...ತಿರುಗಿ... ನನ್ನ ಬಳಿ ಬರಲಿ...
ನಾನು ಕಾಯುತ್ತೇನೆ,,,,
ನಾನು ಅವಳನ್ನು.. ಸ್ವೀಕಾರ ಮಾಡುತ್ತೇನೆ....
ಅವಳ.. " ಅವನ " ಮಗುವನ್ನೂ.... ಸಹ ಪ್ರೀತಿಸುತ್ತೇನೆ.."
ಅಂದಿದ್ದ..ಅವನ ಮಾತುಗಳು.....
ಹಣ ..ಐಶ್ವರ್ಯ ಇದ್ದರೂ ತಾನು ಮದುವೆಯಾಗದೆ ಇದ್ದಿದ್ದ....
ಅವಳನ್ನು ಜಿವದಷ್ಟು ಪ್ರೀತಿಸುತ್ತಿದ್ದ.. ಆ ಷಹಾ...!
ಎಲ್ಲ ನೆನಪಾಗುತ್ತಿವೆ...
ಇವರೆಲ್ಲ ಈ ಜಗದ ಜನ ಜಂಗುಳಿಯಲ್ಲಿ..ಕಳೆದು ಹೋಗಿದ್ದಾರೆ...
ಅವರ ಗೆಳೆತನ..ಹುಡುಗಾಟಿಕೆ...
ಅವರ........
ಪ್ರೀತಿಯೂ...
ಸಹ ಕಳೆದು ಹೋಗಿದೆ....
" ಜಾನೆ ಕಂಹಾ.. ಗಯೇ ವೋ..ದಿನ್....."....
ಆಗ ನನ್ನ ಬಾವ ಆಗ್ರಾದಲ್ಲಿದ್ದ.. ರಾಷ್ಟ್ರಿಕ್ರತ ಬ್ಯಾಂಕಲ್ಲಿ ವ್ಯವಸ್ಥಾಪಕ...
"ಪ್ರಕಾಶು..ಇಲ್ಲಿ ಬೋರು .ಬರ್ತಿದೆ... ಮಾರಾಯಾ ..
..ಹಿಂದಿ ಜನ...ಹಿಂದಿ...ಭಾಷೆ..ಒಮ್ಮೆ ಬಂದು ಹೋಗೊ.."
ಅಕ್ಕ ಗೋಗರೆದಿದ್ದಳು...
ಅಕ್ಕ...
ನಾನು ಯವತ್ತೂ ಅವಳನ್ನು "ಅಕ್ಕ " ಎಂದು ಕರೆಯಲೇ ಇಲ್ಲ....
ಹೆಸರು ಹೇಳಿಯೇ ಕರೆಯುತ್ತಿದ್ದೆ....
ಮೊನ್ನೆ ಹೆಂಡತಿ ಮಗನ ಸಂಗಡ " ..ತಾರೆ ಜಮೀನ್ ಪರ್ .." ಸಿನೆಮಾ ನೋಡುತ್ತಿದ್ದಾಗ ..
ಅಕ್ಕನ ನೆನಪಾಗಿ ಕಣ್ಣಲ್ಲಿ.. ನೀರಾಡಿತ್ತು...
" ಜಾನೆ ಕಂಹಾ.. ಗಯೇ ವೋ..ದಿನ್....."....
ಆಗ ನನ್ನ ಬಾವ ಆಗ್ರಾದಲ್ಲಿದ್ದ.. ರಾಷ್ಟ್ರಿಕ್ರತ ಬ್ಯಾಂಕಲ್ಲಿ ವ್ಯವಸ್ಥಾಪಕ...
"ಪ್ರಕಾಶು..ಇಲ್ಲಿ ಬೋರು .ಬರ್ತಿದೆ... ಮಾರಾಯಾ ..
..ಹಿಂದಿ ಜನ...ಹಿಂದಿ...ಭಾಷೆ..ಒಮ್ಮೆ ಬಂದು ಹೋಗೊ.."
ಅಕ್ಕ ಗೋಗರೆದಿದ್ದಳು...
ಅಕ್ಕ...
ನಾನು ಯವತ್ತೂ ಅವಳನ್ನು "ಅಕ್ಕ " ಎಂದು ಕರೆಯಲೇ ಇಲ್ಲ....
ಹೆಸರು ಹೇಳಿಯೇ ಕರೆಯುತ್ತಿದ್ದೆ....
ಮೊನ್ನೆ ಹೆಂಡತಿ ಮಗನ ಸಂಗಡ " ..ತಾರೆ ಜಮೀನ್ ಪರ್ .." ಸಿನೆಮಾ ನೋಡುತ್ತಿದ್ದಾಗ ..
ಅಕ್ಕನ ನೆನಪಾಗಿ ಕಣ್ಣಲ್ಲಿ.. ನೀರಾಡಿತ್ತು...
ಫೋನ್ ಮಾಡಿ ಹೇಳಿಯೂ ಬಿಟ್ಟಿದ್ದೆ...
ಅಂಥಹ ಅಕ್ಕ...ನನ್ನಕ್ಕ...
ಅವಳು...ನನ್ನಮ್ಮ...ನನ್ನ.."ಆಯಿ" ಕೂಡ...
ನನ್ನ ಗೆಳೆಯ..ಗೆಳತಿ..ಹಾಗೆ...
ನನ್ನ.. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ...ಅವಳು ನಾಲ್ಕು ಗಂಟೆಗೆ ಏಳುತ್ತಿದ್ದಳು..
ನನ್ನನ್ನೂ ಎಬ್ಬಿಸುತ್ತಿದ್ದಳು..
ದೊಡ್ಡದಾಗಿ ಅಂದಿನ ಪರೀಕ್ಷೆಯ.."ಸಂಭಾವ್ಯ" ಪ್ರಶ್ನೋತ್ತರ ಗಳನ್ನು ಓದುತ್ತಿದ್ದಳು...
ನಾನು ಕೇಳುತ್ತಿದ್ದೆ.. ...
ಅವಳು ಮಾಡುತ್ತಿದ್ದುದನ್ನು ನೋಡುತ್ತಿದ್ದೆ...
ಗಣಿತವನ್ನೂ ಸಹ....
ಅವಳು ಮಾಡುತ್ತಿದ್ದುದು ನನ್ನ ಪರೀಕ್ಷೆಯ ತಯಾರಿ...
ಬೆಚ್ಚಗೆ ಚಾದರ ಹೊದ್ದು... ಕುಳಿತಿರುತ್ತಿದ್ದೆ..
ನಾನು ಪಾಸಾದಾಗಾ..ನನಗಿಂತ ಸಂಭ್ರಮ ಪಟ್ಟಿದ್ದಳು....
ನನ್ನ ತುಂಟತನ..ಮೊಂಡುತನ..ತಾಳ್ಮೆಯಿಂದ..ಸಹಿಸುತ್ತಿದ್ದಳು...
..ನನಗಿಂತ ಎರಡು ವರ್ಷ ದೊಡ್ಡವಳು...
ನನಗಾಗಲೇ ತಾಯಿಯಾಗಿದ್ದಳು...
ಇಬ್ಬರೂ ಸೇರಿದಾಗ ಜಗಳ ಮಾಡದೆ ..
ನಮ್ಮ ಪ್ರೀತಿ ಕೊನೆ ಗೊಳ್ಳುವದಿಲ್ಲ...
ಈಗಲೂ ಸಹ....
"ಫೂಲೊಂಕಾ..ತಾರೋಂಕಾ..ಸಬ್ ಕಾ..ಕೆಹನಾ..ಹೆ..
ಏಕ್ ಹಜಾರೋಂ...ಮೇ ..
ಮೇರಿ ಬೆಹೆನಾ..ಹೇ..."
ಪ್ರೀತಿ ಎಲ್ಲಿಯೂ ಸಿಗುವದಿಲ್ಲ...
ನಮ್ಮ ಬಳಿಯೇ ಇರುತ್ತದೆ...
ಹತ್ತಿರವೇ...... ಇರುತ್ತದೆ..
ನೋಡುವ ಕಣ್ಣುಗಳು..ಬೇಕು..
ಪ್ರೀತಿಯನ್ನು ..ಭಾವಿಸುವ.. ಮನಸೂ ಇರಬೇಕು...
ಅನುಭವಿಸುವ ಹ್ರದಯ ಬೇಕು...
ಅಪ್ಪನ ಕಾಣದ ನನಗೆ ಚಿಕ್ಕಪ್ಪ ಇದ್ದಾರೆ...
"ಮಗನೆ ಹೀಗಲ್ಲ..ಹೀಗೆ..
ಮಗನೆ.. ಇದು ಸರಿ..ಇದು ತಪ್ಪು......."
ನನ್ನ ಅಭ್ಯುದಯ ಕಂಡು ಖುಷಿ ಪಡುವ ಚಿಕ್ಕಪ್ಪ ಇದ್ದಾರೆ..
ಓದು ಬರಹ ತಿಳಿಯದ...
ಪ್ರೀತಿಯೊಂದೆ ಗೊತ್ತಿರುವ "ಆಯಿ"....
ಮಕ್ಕಳನ್ನು ಪ್ರೀತಿ ಮಾಡುವದನ್ನು ಬಿಟ್ಟು ಮತ್ತೇನೂ ಅರಿಯದ..ಆಯಿ....
ಹೌದು.....ನಾನೇ ....ಅದ್ರಷ್ಟವಂತ...
ಜೀವನದಲ್ಲಿ.. ಬೆಟ್ಟದಷ್ಟು ಪ್ರೀತಿ ಸಿಕ್ಕಿದೆ..
ನನ್ನ ಅನುಭವದ ಪ್ರತಿಯೊಬ್ಬರ ಪ್ರೇಮ ಸಿಕ್ಕಿದೆ...
ಜೀವಕ್ಕೆ ಜೀವ ಕೊಡುವ ಗೆಳೆಯರು..
ಅಕ್ಕ.. ಅಣ್ಣ..
ದೂರದ ಊರಿನಲ್ಲಿರುವ ತಮ್ಮ..ತಂಗಿ...
ಜಗತ್ತಿನ ಎಲ್ಲ ಬಗೆಯ... ಪ್ರೀತಿ ಪ್ರೇಮದ ಬಾಂಧವ್ಯ..
ಪ್ರೀತಿ ತುಂಬಿದ ಸಂಸಾರ....
ಅದರೆ......
ಅದರೂ.......
ಮಕ್ಕಳನ್ನು ಪ್ರೀತಿ ಮಾಡುವದನ್ನು ಬಿಟ್ಟು ಮತ್ತೇನೂ ಅರಿಯದ..ಆಯಿ....
ಹೌದು.....ನಾನೇ ....ಅದ್ರಷ್ಟವಂತ...
ಜೀವನದಲ್ಲಿ.. ಬೆಟ್ಟದಷ್ಟು ಪ್ರೀತಿ ಸಿಕ್ಕಿದೆ..
ನನ್ನ ಅನುಭವದ ಪ್ರತಿಯೊಬ್ಬರ ಪ್ರೇಮ ಸಿಕ್ಕಿದೆ...
ಜೀವಕ್ಕೆ ಜೀವ ಕೊಡುವ ಗೆಳೆಯರು..
ಅಕ್ಕ.. ಅಣ್ಣ..
ದೂರದ ಊರಿನಲ್ಲಿರುವ ತಮ್ಮ..ತಂಗಿ...
ಜಗತ್ತಿನ ಎಲ್ಲ ಬಗೆಯ... ಪ್ರೀತಿ ಪ್ರೇಮದ ಬಾಂಧವ್ಯ..
ಪ್ರೀತಿ ತುಂಬಿದ ಸಂಸಾರ....
ಅದರೆ......
ಅದರೂ.......
" ..ಅಪ್ಪಾ....ಅಪ್ಪಾ.....!
ನೀನೂ ..ಇರಬೇಕಿತ್ತು..!
ನಿನ್ನನ್ನು "...ಅಪ್ಪಾ.." ಎಂದು ಬಾಯಿತುಂಬಾ...ಕರೆಯಲು...!
ನಿನ್ನನ್ನೊಮ್ಮೆ ಬಿಗಿದಪ್ಪಿ..ಅಳಲು...!
ನನ್ನ ..ಖುಷಿ..ದುಃಖ..ನನ್ನ...ಸುಖ..ಸಂತೋಷ.. ಎಲ್ಲ...ಹಂಚಿಕೊಳ್ಳಲು..!
ಪ್ರಿತಿಯಿಂದ... ನನ್ನ .. ತಲೆ.. ಸವರಲು...!
ನೀನೂ ... ಇರಬೇಕಿತ್ತು ..ಅಪ್ಪಾ...!.."
(please read coments also....)
Tuesday, December 23, 2008
ನಾಗುವಿನ ..""ಹಾಡು.""... ಮತ್ತು.. ""ಚಪಾತಿ..""....!!
ಸಿರ್ಸಿ ರಾಯ್ಸರ್ ಬಿಲ್ಡಿಂಗನಲ್ಲಿ ದಿವಾಕರ ರೂಮ್ ಗೊತ್ತು ಮಾಡಿದ...
ಹತ್ತು ಅಡಿಗೆ ,, ಹತ್ತು ಅಡಿ ವಿಸ್ತೀರ್ಣದ ರೂಮಿನ ಒಂದು ಮೂಲೆಯಲ್ಲೇ ಅಡಿಗೆ ಮಾಡಿಕೊಳ್ಳುತ್ತಿದ್ದೇವು.
ಟೊಯ್ಲೆಟ್,, ಬಾತ್ ರೂಮ್ ಕೆಳಗಡೆ ಇತ್ತು...
ಕೆಳಗಡೆ ಮೂರು ಫಾಮಿಲಿ ಇರುತ್ತಿದ್ದರು...
ಮೇಲೆ ಒಟ್ಟು ಆರು ರೂಮುಗಳು. ಎಲ್ಲ ಗಂಡು ಮಕ್ಕಳೇ.. ಇರುತ್ತಿದ್ದರು.
ಪ್ರತಿ ವಾರ ಅಣ್ಣ ಊರಿನಿಂದ ಬಂದು ಅಕ್ಕಿ ಬೇಳೆ ತಂದು ಕೊಡುತ್ತಿದ್ದ.
ವಾರಕ್ಕೊಮ್ಮೆ ಅರ್ಧ ಲೀಟರ್ ಹಾಲು ತೆಗೆದು ಕೊಳ್ಳುತ್ತಿದ್ದೇವು.....
ಮಧ್ಯದಲ್ಲಿ ಏನಾದರು ತಿನ್ನುವ ಬಯಕೆಯಾದರೆ.....
" ಅವಲಕ್ಕಿ ಇದ್ದಿದ್ದರೆ... ಅವಲಕ್ಕಿ ಮೊಸರು ತಿನ್ನ ಬಹುದಿತ್ತು.. ಮಾರಯಾ..ಮೊಸರೇ ಇಲ್ಲವಲ್ಲೋ.....!!"
ಎಂದು ಹೇಳಿ ನಕ್ಕು ಬಿಡುತ್ತಿದ್ದೇವು...
ಸ್ವಲ್ಪ ದಿನಗಳ ನಂತರ ನಾಗು ನಮ್ಮನ್ನು ಸೇರಿಕೊಂಡ...
ನಂತರ ಊಟ ತಿಂಡಿಗೆ ತೊಂದರೆ ಯಾಗುತ್ತಿರಲಿಲ್ಲ.....
ಆದರೆ ಒಂದು ದೊಡ್ಡ ಸಮಸ್ಯೆ ಎದುರಿತ್ತು...
ಅಲ್ಲಿ ಎರಡು ಟೊಯ್ಲೆಟ್..ಹಾಗೂ ಎರಡು ಬಾತ್ ರೂಮ್ ಇತ್ತು..
ಬಾಗಿಲು... ಒಂದಕ್ಕೂ ಸರಿ ಇರಲಿಲ್ಲ...
ಒಳಗಿನಿಂದ ಚಿಲಕವೇ ಇರಲಿಲ್ಲ...
ಒಳಗಿನಿಂದ ಲಾಕ್ ಮಾಡಲು ಏನೂ ಇರಲಿಲ್ಲ....!!
ಯಾರಾದರೂ...."..ಒತ್ತಡ.." ಜಾಸ್ತಿ ಆದವರು...
ಧಡಾರ್..ಅಂತ ಒಳಗೆ ಬಂದು ಬಿಟ್ಟರೆ..?
ಛೆ..ಇದೇನಪ್ಪ.."ಆಸಮಯವನ್ನು.." ಎಂಜೋಯ್ ಮಾಡ್ಲಿಕ್ಕೂ ಅಗಲ್ಲವಲ್ಲ..!
ನಾನು ದೊಡ್ಡ ಬಕೆಟಿನಲ್ಲಿ ನೀರು ತುಂಬಿಕೋಡು ಬಾಗಿಲಿಗೆ ಅಡ್ಡ ವಾಗಿಟ್ಟು ಮುಂದುವರಿಯುತ್ತಿದ್ದೆ...
ಕೆಮ್ಮು ಬರದಿದ್ದರೂ ಆಗಾಗ "ಕೆಮ್ಮುತ್ತಿದ್ದೆ.."
ನನ್ನ ಇರುವಿಕೆಯನ್ನು ತೋರಿಸಲು...!
ನಾಗುವಿಗೆ ನನ್ನ ಸಮಸ್ಯೆ .... ಹೇಳಿದೆ.....
"ನೀನೇನು ಮಾಡ್ತೀಯಾ ನಾಗು..? ಕೇಳಿದೆ...
ನಾಳೆ ನನ್ನ ಸಂಗಡ ಬಾ" ಅಂದ..
ಸರಿ ಮರುದಿನ ಬೆಳಿಗ್ಗೆ ಅವನ ಸಂಗಡ ಬಕೆಟ್ ಹಿಡಿದು ಹೊರಟೆ...
ಬಕೆಟ್.. ಬೇಡ..ಇಲ್ಲೇ ಬಿಟ್ಟು ಬಾ,,"
ನನಗೆ ನಾಗುವಿನ ಮೇಲೆ ಭರವಸೆ... ಯಾವಾಗಲೂ.....
ಅವನೂ ಒಳಗೆ ಹೋದ ..ನಾನೂ ಒಳಗೆ ಹೋದೆ..
ಬಾಗಿಲನ್ನು ಹಾಕಿದೆ...ಸ್ವಲ್ಪ ಹೊತ್ತು ಸುಮ್ಮನಿದ್ದೆ .
ನಾಗು ಟೊಯ್ಲೆಟ್ಟಿನಿಂದ ಹಾಡುತ್ತಿದ್ದ...!!
ಆ ಕೆಟ್ಟ ವಾಸನೆಯ ತಾಣದಲ್ಲಿ...
" ನೀರಿನಲ್ಲಿ ಅಲೆಯ ಉಂಗುರಾ.....!
ಭೂಮಿಮೇಲೆ ಹೂವಿನ ಊಂಗುರಾ...!
ಮನಸೆಳೆದ ನಲ್ಲ ..ಕೊಟ್ಟನಲ್ಲ......!!.."
ಮಧ್ಯದಲ್ಲಿ ..ಉಸಿರು..ಕಟ್ಟಿ..ಬಿಡುತ್ತಿದ್ದರೂ.....
ಏರಿಳಿತವಿದ್ದರೂ ...ಸ್ವಲ್ಪ ದೊಡ್ಡದಾಗಿ ಹಾಡುತ್ತಿದ್ದ....
ಕೇಳೋಣ ಅನಿಸುವಂತಿತ್ತು..
ಅಂದಿನೀದ ನಾನೂ ಹಾಡುವದನ್ನು ರೂಢಿಸಿ ಕೊಂಡೆ....
ನಾಗೂ ನನಗೆ ಇನ್ನೂ ಬೇರೆ..ಬೇರೆ.. ಹಾಡುಗಳನ್ನೂ.. ಕಲಿಸಿ ಕೊಟ್ಟ...
" ಈ ..ಸಮಯಾ...ಆನಂದ..ಮಯಾ......
ನೂತನ..ಬಾಳಿನಾ..ಶುಭೋದಯ...!!..."
ಕೆಲವು ಸಾರಿ ನಾಗುವು ಆ ಕಡೆಯಿಂದ.....
"ಹಾಗಲ್ಲ ಪ್ರಿಯೆ.. ಈ.... ಸಮಯಾ..ಶ್ರಂಗಾರ ಮಯಾ.....
ಅನ್ನುತ್ತಾ.." ..ಸಾಥ್...".ನೀಡುತ್ತಿದ್ದ....!!.
ಆಗ ತಾನೆ ಕಾಲೇಜು ಶುರುವಾಗಿತ್ತು..
ಒಂದುದಿನ ನಾಗು ಸಾಯಂಕಾಲ ಸಪ್ಪೆ ಮೋರೆ ಹಾಕಿ ಕೊಂಡು ಕುಳಿತಿದ್ದ...ಹೊರಗೆ ಕರೆದರೂಬರಲಿಲ್ಲ...
ಎಲ್ಲರಿಗೂ ಆಶ್ಚರ್ಯ...!! " ಏನಾಯ್ತು ಇವನಿಗೆ..?'
" ಲೇ..ನಾಗೂ ಏನಾಯ್ತೊ..? ಮೈಗೆ..... ಚೆನ್ನಾಗಿಲ್ವೇನೋ...?? "
" ಚೆನ್ನಾಗಿದ್ದೀನಿ....ಮಾರಾಯ್ರಾ..... ..
ಮನೆಯ ಮಾಲಿಕರು ಬಂದಿದ್ರು..!!
ಕೆಳಗಿನ ಬಾಡಿಗೆ ಮನೆಯವರು ಕಂಪ್ಲೇಂಟ್ ನನ್ನ ಮೇಲೆ ಮಾಡಿದ್ದಾರಂತೆ.. !!
ಬಾತ ರೂಮನಲ್ಲಿ ಮಾತಾಡಿದ್ದಕ್ಕೇ ಒಂಥರಾ ಬೈದು ಹೋದ್ರು.. ಅದೂ ನನಗೆ..!..
ಇನ್ನು ಹೇಗೆ ಮುಖಾ ಇಟ್ಗೊಂಡು ಓಡಾಡೋದು..!!."
ತುಂಬಾ ಬೇಜಾರು ಮಾಡಿ ..ಕೊಂಡ...
"ಈಗ ಮತ್ತೆ ಬರ್ತಾರಂತೆ..ಮತ್ತೆ ..ನೀವೆಲ್ಲ ಬಂದ ಮೇಲೆ.. ಮತ್ತೆ ಮಂಗಳಾರತಿ.. ನಾವು ಬೇರೆ ಕಡೆ ಹೋಗೋಣ ..? ..ಈ ರೂಮು ಬೇಡ.. "
ಅಂದು ಗೋಗರೆಯಲು ಶುರು ಮಾಡಿದ...
ಬೇರೆ ಎಲ್ಲೂ ಈಷ್ಟು ಕಡಿಮೆ ದರದಲ್ಲಿ ರೂಮು ಸಿಗುವದಿಲ್ಲವಾಗಿತ್ತು....
ದಿವಾಕರ ಅವನಿಗೆ ಧೈರ್ಯ ತುಂಬಿದ..
ಅಷ್ಟರಲ್ಲಿ... ಕೇಳಗಿನ ಮನೆಯ ಗಂಡಸರು ಬಂದರು.. ಮನೆಯ ಮಾಲಿಕನೂ ಅವರ ಸಂಗಡ ಇದ್ದರು.....ಮುಖದಲ್ಲಿ ಕೋಪ ಎದ್ದು ಕಾಣುತಿತ್ತು...
ಮಾಲಿಕ ಹೇಳಿದ....
" ನೋಡ್ರಪಾ... ಇಲ್ಲಿ ಕೆಳಗಡೆ ಇರೋವ್ರು ಎಲ್ಲ ಮರ್ಯಾದಸ್ತರು..
ನೀವು ಬಾತ್ ರೂಮ್ ನಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿರಂತೆ..
ಇದೆಲ್ಲ ಚೆನ್ನಾಗಿರಲ್ಲ..ಹೆಂಗಸರು..ಹೇಣ್ಣೂ ಮಕ್ಕಳು ಇರುವ ಜಾಗ..
ಹೀಗೆಲ್ಲ.. ಮಾಡೋದಿದ್ರೆ ನೀವು ಬೇರೆ ಕಡೆ.. ಹೋಗಿ.."
ಖಡಾ ಖಂಡಿತವಾಗಿ ಮಾತಾಡಿದ....
ನಮಗೋ..ಹೆದರಿಕೆ..
ಕಡಿಮೆ ದರದ ಬಾಡಿಗೆ ಮನೆ.. ನಾಗು ಬಂದ ಮೇಲೆ ಊಟ ತಿಂಡಿಗೆ ತೊಂದರೆ ಇರಲಿಲ್ಲ......
" ನಮ್ಮಿಂದ ಏನು ತಪ್ಪಾಗಿದೆ..? ಏನೇ ಆದರೂ ನಾವು ತಿದ್ದಿ ಕೊಳ್ತೇವೆ.. ಏನು ಹೇಳಿದ್ದೇವೆ..?"
ದಿವಾಕರ ಸ್ವಲ್ಪ ಧೈರ್ಯದಿಂದ ಮಾತಾಡಿದ..
ಆಗ ಒಬ್ಬ ಬಾಡಿಗೆ ಮನೆಯವರು ..
" ಅದನ್ನು ಹೇಗೆ ಹೇಳುವದು..? ನಮಗೆ ನಾಚಿಕೆ ಯಾಗುತ್ತದೆ..
ಅದರಲ್ಲೂ ಈ ಹುಡುಗ..ದೊಡ್ಡದಾಗಿ ಗಂಟಲು ಹರಿದು ಹೋಗೊ ಹಾಗೆ ಕೂಗುತ್ತಾನೆ....!! "
ಎಂದು ನಾಗುವನ್ನು ತೋರಿಸುತ್ತಾ ಹೇಳಿದ...
ನನಗೆ ಗೊತ್ತಾಯಿತು...!!
ಈ ನಾಗುವಿಗೆ ಮರೆವಿನ ಅಭ್ಯಾಸ.!!
ಕೆಳಗಡೇ ಸ್ನಾನಕ್ಕೆ ಹೋಗುವಾಗ ಅಂಡರ್ವೆರ್ ಮರೆತು ಹೋಗುತ್ತಿದ್ದ.. ..!!
ಸ್ನಾನ ಆದ ಮೇಲೆ ಅಲ್ಲಿಂದಲೇ......
" ಪ್ರಕಾಶಾ..ಕಾಚಾ.. ತಂದು ಕೊಡೊ.. "
ಅಂತ ಜೀವ ಹೋಗುವವರ ಹಾಗೆ ಕೂಗುತ್ತಿದ್ದ..
ಈ ಕನ್ನಡ ಪ್ರೇಮಿ ನಾಗು....!!
" ಬೇಡ ಮಾರಯಾ..ಇಂಗ್ಲೀಷನಲ್ಲಿ ಹೇಳು.. ಮರ್ಯಾದಿ ಇರುತ್ತದೆ ..."
ಅಂದರೂ ಕೇಳುತ್ತಿರಲಿಲ್ಲ...
ಅದು ಈಗ ದೊಡ್ಡ ಸಮಸ್ಯೆಯಾಗಿ ಕುಳಿತಿದೆ..!
ಇನ್ನೊಬ್ಬ ಬಾಡಿಗೆಯವ..ತನ್ನುದೂ ಸೇರಿಸಿದ..
" ನೋಡಿ ನಾನು ಬೆಳಿಗ್ಗೆ ಪೂಜೆಗೆ ಕೂತಿರ್ತಿನಿ,,..
ಅಗಲೇ ಇಂವ ಕೂಗುತ್ತಾನೆ..ನನಗೆ ಡಿಸ್ಟರ್ಬ್ ಆಗುತ್ತದೆ...
ಮನಸೆಲ್ಲ ಎಲ್ಲೊ ಹೋಗಿಬಿಡುತ್ತದೆ....!! "
ಮಾಲಿಕನಿಗೆ ಸಮಸ್ಯೆ.....!.
" ಏನು ಹೇಳುತ್ತಾರೆ ಇವರು..?'
"ಹೇಳುವದಿಲ್ಲ ಸ್ವಾಮಿ.. ..ಕೂಗುತ್ತಾರೆ..!
ಇಲ್ಲಿಯ ವಠಾದವರಿಗೆಲ್ಲ ಕೇಳುವಷ್ಟು ..ಕೂಗುತ್ತಾರೆ ..!
ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಮಕ್ಕಳಿದ್ದಾರೆ....
ನಾವು ಮರ್ಯಾದಸ್ತರು ಏನು ಮಾಡ ಬೇಕು..?
ಹೀಗಾದರೆ ನಾವೆಲ್ಲ ಬೇರೆ ಕಡೆ ನೋಡಿಕೊಳ್ಳುತ್ತೇವೆ..."
ಮತ್ತೊಬ್ಬ ನಿರ್ಣಯ.. ಸೇರಿಸಿದ...
" ಆದರೆ ಇವರು ಏನು ಕೂಗುತ್ತಾರೆ...?..? ಅದನ್ನ ಹೇಳಿ..ಮೊದಲು.."
ಮಾಲಿಕನಿಗೆ ಸಮಸ್ಯೆ ಬಗೆಹರಿಯಲಿಲ್ಲ...!!.
" ಅದನ್ನು..ಹೇಗೆ ..ಹೇಳುವದು.....? ಇವನ ಬಳಿಯೆ ಹೇಳಿಸಿ.."
ಎಂದು ಒಬ್ಬ ಮೈಗೆ ಎಣ್ಣೆ ಹಚ್ಚಿಕೊಂಡ..
ಈಗ ಕಾಲು ಬುಡಕ್ಕೇ ಬಂತು.!!.
ಆ ಥರ ಕೂಗುತ್ತಿದ್ದ ನಾಗುವಿಗೂ , ಏನು ಹೇಳದವನಂತಾಗಿ....ಸುಮ್ಮನೆ.... ಕುಳಿತಿದ್ದ..
ಅಷ್ಟರಲ್ಲಿ ದಿವಕರ ಮಧ್ಯದಲ್ಲಿ ಬಾಯಿ ಹಾಕಿದ..
" ಹೋಗಲಿ ಬಿಡಿಸಾರ್.. ಇನ್ನು ಮುಂದೆ ಹೀಗೆ ಕೂಗದ ಹಾಗೆ ನಾನು ನೋಡಿಕೊಳ್ಳುತ್ತೇನೆ.. ನೀವು ಬೇಜಾರು ಮಾಡಿಕೊಳ್ಳ ಬೇಡಿ..'
ಸಮಾಧಾನ ಪಡಿಸಲು ಪ್ರಯತ್ನಿಸಿದ..
" ಯಾವ ಗ್ಯಾರೆಂಟಿ..?? ಇವನಿಗೆ ದಿನಾಲೂ ಮರೆತು ಹೋಗುತ್ತದೆ.. ಮತ್ತೆ ಕೂಗಿಬಿಟ್ಟರೆ..?"
" ನಿಜ.. ಇವನಿಗೆ ಮರೆವಿನ ಅಭ್ಯಾಸ ಇದೆ.. ..ಅದರ..ಬದಲು..ನಾವು ಬೇರೆ ಒಳ್ಳೆಯ ಶಬ್ಧ ಕೂಗಲು ಹೇಳುತ್ತೇವೆ..
ಒಟ್ಟಿನಲ್ಲಿ ನಿಮಗೆ ಈ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ.."
' ಮಾಲಿಕರೆ ನೀವಿನ್ನು ಹೊರಡಿ.. ಇದು ಇನ್ನು ಮುಂದೆ ಆಗದ ಹಾಗೆ ನೋಡಿ ಕೊಳ್ಳುತ್ತೇವೆ...."
ಎಂದು ಸಾಗ ಹಾಕಿದೆವು...
ಮಾಲಿಕನಿಗೆ ಕೊನೆಯವರೆಗೆ "ಏನು ಕೂಗುತ್ತಾನೆ?" ಅಂತ ಗೊತ್ತಾಗಲಿಲ್ಲ....!!
ಹೋದ ಮೇಲೆ ರೂಮಿನಲ್ಲಿ ಸ್ಮಾಶನ ಮೌನ....
ನಾಗು ಮುಖ ದಪ್ಪ ಮಾಡಿ ಕೊಂಡು...ಕುಳಿತ್ತಿದ್ದ...ಮಾತಾಡಲಿಲ್ಲ..
" ನೋಡೊ ಬೇಜಾರು ಮಾಡ್ಕೋಬೇಡ..ನಾವೆಲ್ಲ ನಿನ್ನ ಸಂಗಡ ಇದ್ದೇವೆ ಮಾರಾಯ..
ಅದಕ್ಕೆ ಬೇರೆ ಶಬ್ಧ ಹೇಳಿದರಾಯಿತು.."
ಎಂದು ವೇದಾಂತಿಯಂತೆ.. ಸಮಾಧಾನ ಪಡಿಸಿದ...
ಆದರೆ "ಯಾವ" ಶಬ್ದ ಹೇಳ ಬೇಕು...? ತಲೆ ಕೆರೆದು ಕೊಳ್ಳುತ್ತಿದ್ದೆವು....
ದಿವಾಕರ ರಾತ್ರಿ ಚಪಾತಿ ಮಾಡಲು ಹಿಟ್ಟಿನ ಡಬ್ಬ ತೆಗೆದ..
ತಕ್ಷಣ ನಾಗುವಿನ ಮುಖದಲ್ಲಿ ನಗು ಕಾಣಿಸಿತು..
ತಕ್ಷಣ..ಆರ್ಕಿಮಿಡಿಸನ...ಹಾಗೆ ದೊಡ್ಡದಾಗಿ ಕೂಗಿದ....!
ಯುರೆಖಾ..!
" ನೋಡ್ರೊ... ನನ್ನ ಸಮಸ್ಯೆ ಬಗೆ ಹರಿಯಿತು..!
ಇನ್ನು ಮುಂದೆ ನಾನು ಆ ಶಬ್ದ ಅನ್ನೊಲ್ಲ..! ಚಪಾತಿ ಅನ್ನು ತ್ತೇನೆ....!
ಎರಡರ ಆಕಾರ ಒಂದೆ ತರಹ ಇರುತ್ತದೆ.....
ಚಪಾತಿ ಅನ್ನೋದೇ ಸರಿಯಾಗಿದೆ..!! "
ಏನೋ ಸಂಶೋಧನೆ ಮಾಡಿದವರ ಹಾಗೆ ಹೇಳಿದ..
..ನಾವೂ ಸಮ್ಮತಿಸಿದೇವು....
ಅಂದಿನಿಂದ ಈತ ಬಾತ್ ರೂಮಿನಿಂದ ದೊಡ್ಡದಾಗಿ
" ಪ್ರಕಾಶಾ.....ಚಪಾತಿ...! "
ಅನ್ನುತ್ತಿದ್ದ...
ನಾನು ತಂದು ಕೊಡುತ್ತಿದ್ದೆ...
ಒಂದುವಾರ ಕಳೆದಿರಬಹುದು...
ಕೆಳಗಡೆ ಮನೆಯವರೊಬ್ಬ.. ನನ್ನನ್ನು ಮಾತಾಡಿಸಿದರು..
ನಾನು ನಕ್ಕೆ..
"" ಏನ್ರಪಾ...ಈಗ.. ನಾನೇ.. ಅಡ್ಜಸ್ಟ್ ಮಾಡಿ ಕೊಂಡಿದ್ದೇನೆ..
ನಾನು ದೇವರ ಪೂಜೆ ಸಮಯ ಬದಲಿಸಿದ್ದೇನೆ.....
ಆದರೆ..ಅಂವ ಎಂಥಾ ಮನುಷ್ಯ ಮಾರಾಯಾ..?.....?
ಅವನಿಂದಾಗಿ...
ನಮ್ಮನೆಯಲ್ಲಿ .......ಚಪಾತಿಗೆ...ಚಪಾತಿ... ಅನ್ನುವದನ್ನು.....
ಬಿಟ್ಟು ಬಿಟ್ಟಿದ್ದೇವೆ....!!
ರೊಟ್ಟಿ ಹೇಳುವದನ್ನು ಅಭ್ಯಾಸ ಮಾಡಿ ಕೊಂಡಿದ್ದೇವೆ..!!..""
ಅಂದರು...
"" ಚಪಾತಿ ಬಹಳ ಜನಪ್ರಿಯವಾಯಿತು...""
ಹತ್ತು ಅಡಿಗೆ ,, ಹತ್ತು ಅಡಿ ವಿಸ್ತೀರ್ಣದ ರೂಮಿನ ಒಂದು ಮೂಲೆಯಲ್ಲೇ ಅಡಿಗೆ ಮಾಡಿಕೊಳ್ಳುತ್ತಿದ್ದೇವು.
ಟೊಯ್ಲೆಟ್,, ಬಾತ್ ರೂಮ್ ಕೆಳಗಡೆ ಇತ್ತು...
ಕೆಳಗಡೆ ಮೂರು ಫಾಮಿಲಿ ಇರುತ್ತಿದ್ದರು...
ಮೇಲೆ ಒಟ್ಟು ಆರು ರೂಮುಗಳು. ಎಲ್ಲ ಗಂಡು ಮಕ್ಕಳೇ.. ಇರುತ್ತಿದ್ದರು.
ಪ್ರತಿ ವಾರ ಅಣ್ಣ ಊರಿನಿಂದ ಬಂದು ಅಕ್ಕಿ ಬೇಳೆ ತಂದು ಕೊಡುತ್ತಿದ್ದ.
ವಾರಕ್ಕೊಮ್ಮೆ ಅರ್ಧ ಲೀಟರ್ ಹಾಲು ತೆಗೆದು ಕೊಳ್ಳುತ್ತಿದ್ದೇವು.....
ಮಧ್ಯದಲ್ಲಿ ಏನಾದರು ತಿನ್ನುವ ಬಯಕೆಯಾದರೆ.....
" ಅವಲಕ್ಕಿ ಇದ್ದಿದ್ದರೆ... ಅವಲಕ್ಕಿ ಮೊಸರು ತಿನ್ನ ಬಹುದಿತ್ತು.. ಮಾರಯಾ..ಮೊಸರೇ ಇಲ್ಲವಲ್ಲೋ.....!!"
ಎಂದು ಹೇಳಿ ನಕ್ಕು ಬಿಡುತ್ತಿದ್ದೇವು...
ಸ್ವಲ್ಪ ದಿನಗಳ ನಂತರ ನಾಗು ನಮ್ಮನ್ನು ಸೇರಿಕೊಂಡ...
ನಂತರ ಊಟ ತಿಂಡಿಗೆ ತೊಂದರೆ ಯಾಗುತ್ತಿರಲಿಲ್ಲ.....
ಆದರೆ ಒಂದು ದೊಡ್ಡ ಸಮಸ್ಯೆ ಎದುರಿತ್ತು...
ಅಲ್ಲಿ ಎರಡು ಟೊಯ್ಲೆಟ್..ಹಾಗೂ ಎರಡು ಬಾತ್ ರೂಮ್ ಇತ್ತು..
ಬಾಗಿಲು... ಒಂದಕ್ಕೂ ಸರಿ ಇರಲಿಲ್ಲ...
ಒಳಗಿನಿಂದ ಚಿಲಕವೇ ಇರಲಿಲ್ಲ...
ಒಳಗಿನಿಂದ ಲಾಕ್ ಮಾಡಲು ಏನೂ ಇರಲಿಲ್ಲ....!!
ಯಾರಾದರೂ...."..ಒತ್ತಡ.." ಜಾಸ್ತಿ ಆದವರು...
ಧಡಾರ್..ಅಂತ ಒಳಗೆ ಬಂದು ಬಿಟ್ಟರೆ..?
ಛೆ..ಇದೇನಪ್ಪ.."ಆಸಮಯವನ್ನು.." ಎಂಜೋಯ್ ಮಾಡ್ಲಿಕ್ಕೂ ಅಗಲ್ಲವಲ್ಲ..!
ನಾನು ದೊಡ್ಡ ಬಕೆಟಿನಲ್ಲಿ ನೀರು ತುಂಬಿಕೋಡು ಬಾಗಿಲಿಗೆ ಅಡ್ಡ ವಾಗಿಟ್ಟು ಮುಂದುವರಿಯುತ್ತಿದ್ದೆ...
ಕೆಮ್ಮು ಬರದಿದ್ದರೂ ಆಗಾಗ "ಕೆಮ್ಮುತ್ತಿದ್ದೆ.."
ನನ್ನ ಇರುವಿಕೆಯನ್ನು ತೋರಿಸಲು...!
ನಾಗುವಿಗೆ ನನ್ನ ಸಮಸ್ಯೆ .... ಹೇಳಿದೆ.....
"ನೀನೇನು ಮಾಡ್ತೀಯಾ ನಾಗು..? ಕೇಳಿದೆ...
ನಾಳೆ ನನ್ನ ಸಂಗಡ ಬಾ" ಅಂದ..
ಸರಿ ಮರುದಿನ ಬೆಳಿಗ್ಗೆ ಅವನ ಸಂಗಡ ಬಕೆಟ್ ಹಿಡಿದು ಹೊರಟೆ...
ಬಕೆಟ್.. ಬೇಡ..ಇಲ್ಲೇ ಬಿಟ್ಟು ಬಾ,,"
ನನಗೆ ನಾಗುವಿನ ಮೇಲೆ ಭರವಸೆ... ಯಾವಾಗಲೂ.....
ಅವನೂ ಒಳಗೆ ಹೋದ ..ನಾನೂ ಒಳಗೆ ಹೋದೆ..
ಬಾಗಿಲನ್ನು ಹಾಕಿದೆ...ಸ್ವಲ್ಪ ಹೊತ್ತು ಸುಮ್ಮನಿದ್ದೆ .
ನಾಗು ಟೊಯ್ಲೆಟ್ಟಿನಿಂದ ಹಾಡುತ್ತಿದ್ದ...!!
ಆ ಕೆಟ್ಟ ವಾಸನೆಯ ತಾಣದಲ್ಲಿ...
" ನೀರಿನಲ್ಲಿ ಅಲೆಯ ಉಂಗುರಾ.....!
ಭೂಮಿಮೇಲೆ ಹೂವಿನ ಊಂಗುರಾ...!
ಮನಸೆಳೆದ ನಲ್ಲ ..ಕೊಟ್ಟನಲ್ಲ......!!.."
ಮಧ್ಯದಲ್ಲಿ ..ಉಸಿರು..ಕಟ್ಟಿ..ಬಿಡುತ್ತಿದ್ದರೂ.....
ಏರಿಳಿತವಿದ್ದರೂ ...ಸ್ವಲ್ಪ ದೊಡ್ಡದಾಗಿ ಹಾಡುತ್ತಿದ್ದ....
ಕೇಳೋಣ ಅನಿಸುವಂತಿತ್ತು..
ಅಂದಿನೀದ ನಾನೂ ಹಾಡುವದನ್ನು ರೂಢಿಸಿ ಕೊಂಡೆ....
ನಾಗೂ ನನಗೆ ಇನ್ನೂ ಬೇರೆ..ಬೇರೆ.. ಹಾಡುಗಳನ್ನೂ.. ಕಲಿಸಿ ಕೊಟ್ಟ...
" ಈ ..ಸಮಯಾ...ಆನಂದ..ಮಯಾ......
ನೂತನ..ಬಾಳಿನಾ..ಶುಭೋದಯ...!!..."
ಕೆಲವು ಸಾರಿ ನಾಗುವು ಆ ಕಡೆಯಿಂದ.....
"ಹಾಗಲ್ಲ ಪ್ರಿಯೆ.. ಈ.... ಸಮಯಾ..ಶ್ರಂಗಾರ ಮಯಾ.....
ಅನ್ನುತ್ತಾ.." ..ಸಾಥ್...".ನೀಡುತ್ತಿದ್ದ....!!.
ಆಗ ತಾನೆ ಕಾಲೇಜು ಶುರುವಾಗಿತ್ತು..
ಒಂದುದಿನ ನಾಗು ಸಾಯಂಕಾಲ ಸಪ್ಪೆ ಮೋರೆ ಹಾಕಿ ಕೊಂಡು ಕುಳಿತಿದ್ದ...ಹೊರಗೆ ಕರೆದರೂಬರಲಿಲ್ಲ...
ಎಲ್ಲರಿಗೂ ಆಶ್ಚರ್ಯ...!! " ಏನಾಯ್ತು ಇವನಿಗೆ..?'
" ಲೇ..ನಾಗೂ ಏನಾಯ್ತೊ..? ಮೈಗೆ..... ಚೆನ್ನಾಗಿಲ್ವೇನೋ...?? "
" ಚೆನ್ನಾಗಿದ್ದೀನಿ....ಮಾರಾಯ್ರಾ..... ..
ಮನೆಯ ಮಾಲಿಕರು ಬಂದಿದ್ರು..!!
ಕೆಳಗಿನ ಬಾಡಿಗೆ ಮನೆಯವರು ಕಂಪ್ಲೇಂಟ್ ನನ್ನ ಮೇಲೆ ಮಾಡಿದ್ದಾರಂತೆ.. !!
ಬಾತ ರೂಮನಲ್ಲಿ ಮಾತಾಡಿದ್ದಕ್ಕೇ ಒಂಥರಾ ಬೈದು ಹೋದ್ರು.. ಅದೂ ನನಗೆ..!..
ಇನ್ನು ಹೇಗೆ ಮುಖಾ ಇಟ್ಗೊಂಡು ಓಡಾಡೋದು..!!."
ತುಂಬಾ ಬೇಜಾರು ಮಾಡಿ ..ಕೊಂಡ...
"ಈಗ ಮತ್ತೆ ಬರ್ತಾರಂತೆ..ಮತ್ತೆ ..ನೀವೆಲ್ಲ ಬಂದ ಮೇಲೆ.. ಮತ್ತೆ ಮಂಗಳಾರತಿ.. ನಾವು ಬೇರೆ ಕಡೆ ಹೋಗೋಣ ..? ..ಈ ರೂಮು ಬೇಡ.. "
ಅಂದು ಗೋಗರೆಯಲು ಶುರು ಮಾಡಿದ...
ಬೇರೆ ಎಲ್ಲೂ ಈಷ್ಟು ಕಡಿಮೆ ದರದಲ್ಲಿ ರೂಮು ಸಿಗುವದಿಲ್ಲವಾಗಿತ್ತು....
ದಿವಾಕರ ಅವನಿಗೆ ಧೈರ್ಯ ತುಂಬಿದ..
ಅಷ್ಟರಲ್ಲಿ... ಕೇಳಗಿನ ಮನೆಯ ಗಂಡಸರು ಬಂದರು.. ಮನೆಯ ಮಾಲಿಕನೂ ಅವರ ಸಂಗಡ ಇದ್ದರು.....ಮುಖದಲ್ಲಿ ಕೋಪ ಎದ್ದು ಕಾಣುತಿತ್ತು...
ಮಾಲಿಕ ಹೇಳಿದ....
" ನೋಡ್ರಪಾ... ಇಲ್ಲಿ ಕೆಳಗಡೆ ಇರೋವ್ರು ಎಲ್ಲ ಮರ್ಯಾದಸ್ತರು..
ನೀವು ಬಾತ್ ರೂಮ್ ನಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿರಂತೆ..
ಇದೆಲ್ಲ ಚೆನ್ನಾಗಿರಲ್ಲ..ಹೆಂಗಸರು..ಹೇಣ್ಣೂ ಮಕ್ಕಳು ಇರುವ ಜಾಗ..
ಹೀಗೆಲ್ಲ.. ಮಾಡೋದಿದ್ರೆ ನೀವು ಬೇರೆ ಕಡೆ.. ಹೋಗಿ.."
ಖಡಾ ಖಂಡಿತವಾಗಿ ಮಾತಾಡಿದ....
ನಮಗೋ..ಹೆದರಿಕೆ..
ಕಡಿಮೆ ದರದ ಬಾಡಿಗೆ ಮನೆ.. ನಾಗು ಬಂದ ಮೇಲೆ ಊಟ ತಿಂಡಿಗೆ ತೊಂದರೆ ಇರಲಿಲ್ಲ......
" ನಮ್ಮಿಂದ ಏನು ತಪ್ಪಾಗಿದೆ..? ಏನೇ ಆದರೂ ನಾವು ತಿದ್ದಿ ಕೊಳ್ತೇವೆ.. ಏನು ಹೇಳಿದ್ದೇವೆ..?"
ದಿವಾಕರ ಸ್ವಲ್ಪ ಧೈರ್ಯದಿಂದ ಮಾತಾಡಿದ..
ಆಗ ಒಬ್ಬ ಬಾಡಿಗೆ ಮನೆಯವರು ..
" ಅದನ್ನು ಹೇಗೆ ಹೇಳುವದು..? ನಮಗೆ ನಾಚಿಕೆ ಯಾಗುತ್ತದೆ..
ಅದರಲ್ಲೂ ಈ ಹುಡುಗ..ದೊಡ್ಡದಾಗಿ ಗಂಟಲು ಹರಿದು ಹೋಗೊ ಹಾಗೆ ಕೂಗುತ್ತಾನೆ....!! "
ಎಂದು ನಾಗುವನ್ನು ತೋರಿಸುತ್ತಾ ಹೇಳಿದ...
ನನಗೆ ಗೊತ್ತಾಯಿತು...!!
ಈ ನಾಗುವಿಗೆ ಮರೆವಿನ ಅಭ್ಯಾಸ.!!
ಕೆಳಗಡೇ ಸ್ನಾನಕ್ಕೆ ಹೋಗುವಾಗ ಅಂಡರ್ವೆರ್ ಮರೆತು ಹೋಗುತ್ತಿದ್ದ.. ..!!
ಸ್ನಾನ ಆದ ಮೇಲೆ ಅಲ್ಲಿಂದಲೇ......
" ಪ್ರಕಾಶಾ..ಕಾಚಾ.. ತಂದು ಕೊಡೊ.. "
ಅಂತ ಜೀವ ಹೋಗುವವರ ಹಾಗೆ ಕೂಗುತ್ತಿದ್ದ..
ಈ ಕನ್ನಡ ಪ್ರೇಮಿ ನಾಗು....!!
" ಬೇಡ ಮಾರಯಾ..ಇಂಗ್ಲೀಷನಲ್ಲಿ ಹೇಳು.. ಮರ್ಯಾದಿ ಇರುತ್ತದೆ ..."
ಅಂದರೂ ಕೇಳುತ್ತಿರಲಿಲ್ಲ...
ಅದು ಈಗ ದೊಡ್ಡ ಸಮಸ್ಯೆಯಾಗಿ ಕುಳಿತಿದೆ..!
ಇನ್ನೊಬ್ಬ ಬಾಡಿಗೆಯವ..ತನ್ನುದೂ ಸೇರಿಸಿದ..
" ನೋಡಿ ನಾನು ಬೆಳಿಗ್ಗೆ ಪೂಜೆಗೆ ಕೂತಿರ್ತಿನಿ,,..
ಅಗಲೇ ಇಂವ ಕೂಗುತ್ತಾನೆ..ನನಗೆ ಡಿಸ್ಟರ್ಬ್ ಆಗುತ್ತದೆ...
ಮನಸೆಲ್ಲ ಎಲ್ಲೊ ಹೋಗಿಬಿಡುತ್ತದೆ....!! "
ಮಾಲಿಕನಿಗೆ ಸಮಸ್ಯೆ.....!.
" ಏನು ಹೇಳುತ್ತಾರೆ ಇವರು..?'
"ಹೇಳುವದಿಲ್ಲ ಸ್ವಾಮಿ.. ..ಕೂಗುತ್ತಾರೆ..!
ಇಲ್ಲಿಯ ವಠಾದವರಿಗೆಲ್ಲ ಕೇಳುವಷ್ಟು ..ಕೂಗುತ್ತಾರೆ ..!
ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಮಕ್ಕಳಿದ್ದಾರೆ....
ನಾವು ಮರ್ಯಾದಸ್ತರು ಏನು ಮಾಡ ಬೇಕು..?
ಹೀಗಾದರೆ ನಾವೆಲ್ಲ ಬೇರೆ ಕಡೆ ನೋಡಿಕೊಳ್ಳುತ್ತೇವೆ..."
ಮತ್ತೊಬ್ಬ ನಿರ್ಣಯ.. ಸೇರಿಸಿದ...
" ಆದರೆ ಇವರು ಏನು ಕೂಗುತ್ತಾರೆ...?..? ಅದನ್ನ ಹೇಳಿ..ಮೊದಲು.."
ಮಾಲಿಕನಿಗೆ ಸಮಸ್ಯೆ ಬಗೆಹರಿಯಲಿಲ್ಲ...!!.
" ಅದನ್ನು..ಹೇಗೆ ..ಹೇಳುವದು.....? ಇವನ ಬಳಿಯೆ ಹೇಳಿಸಿ.."
ಎಂದು ಒಬ್ಬ ಮೈಗೆ ಎಣ್ಣೆ ಹಚ್ಚಿಕೊಂಡ..
ಈಗ ಕಾಲು ಬುಡಕ್ಕೇ ಬಂತು.!!.
ಆ ಥರ ಕೂಗುತ್ತಿದ್ದ ನಾಗುವಿಗೂ , ಏನು ಹೇಳದವನಂತಾಗಿ....ಸುಮ್ಮನೆ.... ಕುಳಿತಿದ್ದ..
ಅಷ್ಟರಲ್ಲಿ ದಿವಕರ ಮಧ್ಯದಲ್ಲಿ ಬಾಯಿ ಹಾಕಿದ..
" ಹೋಗಲಿ ಬಿಡಿಸಾರ್.. ಇನ್ನು ಮುಂದೆ ಹೀಗೆ ಕೂಗದ ಹಾಗೆ ನಾನು ನೋಡಿಕೊಳ್ಳುತ್ತೇನೆ.. ನೀವು ಬೇಜಾರು ಮಾಡಿಕೊಳ್ಳ ಬೇಡಿ..'
ಸಮಾಧಾನ ಪಡಿಸಲು ಪ್ರಯತ್ನಿಸಿದ..
" ಯಾವ ಗ್ಯಾರೆಂಟಿ..?? ಇವನಿಗೆ ದಿನಾಲೂ ಮರೆತು ಹೋಗುತ್ತದೆ.. ಮತ್ತೆ ಕೂಗಿಬಿಟ್ಟರೆ..?"
" ನಿಜ.. ಇವನಿಗೆ ಮರೆವಿನ ಅಭ್ಯಾಸ ಇದೆ.. ..ಅದರ..ಬದಲು..ನಾವು ಬೇರೆ ಒಳ್ಳೆಯ ಶಬ್ಧ ಕೂಗಲು ಹೇಳುತ್ತೇವೆ..
ಒಟ್ಟಿನಲ್ಲಿ ನಿಮಗೆ ಈ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ.."
' ಮಾಲಿಕರೆ ನೀವಿನ್ನು ಹೊರಡಿ.. ಇದು ಇನ್ನು ಮುಂದೆ ಆಗದ ಹಾಗೆ ನೋಡಿ ಕೊಳ್ಳುತ್ತೇವೆ...."
ಎಂದು ಸಾಗ ಹಾಕಿದೆವು...
ಮಾಲಿಕನಿಗೆ ಕೊನೆಯವರೆಗೆ "ಏನು ಕೂಗುತ್ತಾನೆ?" ಅಂತ ಗೊತ್ತಾಗಲಿಲ್ಲ....!!
ಹೋದ ಮೇಲೆ ರೂಮಿನಲ್ಲಿ ಸ್ಮಾಶನ ಮೌನ....
ನಾಗು ಮುಖ ದಪ್ಪ ಮಾಡಿ ಕೊಂಡು...ಕುಳಿತ್ತಿದ್ದ...ಮಾತಾಡಲಿಲ್ಲ..
" ನೋಡೊ ಬೇಜಾರು ಮಾಡ್ಕೋಬೇಡ..ನಾವೆಲ್ಲ ನಿನ್ನ ಸಂಗಡ ಇದ್ದೇವೆ ಮಾರಾಯ..
ಅದಕ್ಕೆ ಬೇರೆ ಶಬ್ಧ ಹೇಳಿದರಾಯಿತು.."
ಎಂದು ವೇದಾಂತಿಯಂತೆ.. ಸಮಾಧಾನ ಪಡಿಸಿದ...
ಆದರೆ "ಯಾವ" ಶಬ್ದ ಹೇಳ ಬೇಕು...? ತಲೆ ಕೆರೆದು ಕೊಳ್ಳುತ್ತಿದ್ದೆವು....
ದಿವಾಕರ ರಾತ್ರಿ ಚಪಾತಿ ಮಾಡಲು ಹಿಟ್ಟಿನ ಡಬ್ಬ ತೆಗೆದ..
ತಕ್ಷಣ ನಾಗುವಿನ ಮುಖದಲ್ಲಿ ನಗು ಕಾಣಿಸಿತು..
ತಕ್ಷಣ..ಆರ್ಕಿಮಿಡಿಸನ...ಹಾಗೆ ದೊಡ್ಡದಾಗಿ ಕೂಗಿದ....!
ಯುರೆಖಾ..!
" ನೋಡ್ರೊ... ನನ್ನ ಸಮಸ್ಯೆ ಬಗೆ ಹರಿಯಿತು..!
ಇನ್ನು ಮುಂದೆ ನಾನು ಆ ಶಬ್ದ ಅನ್ನೊಲ್ಲ..! ಚಪಾತಿ ಅನ್ನು ತ್ತೇನೆ....!
ಎರಡರ ಆಕಾರ ಒಂದೆ ತರಹ ಇರುತ್ತದೆ.....
ಚಪಾತಿ ಅನ್ನೋದೇ ಸರಿಯಾಗಿದೆ..!! "
ಏನೋ ಸಂಶೋಧನೆ ಮಾಡಿದವರ ಹಾಗೆ ಹೇಳಿದ..
..ನಾವೂ ಸಮ್ಮತಿಸಿದೇವು....
ಅಂದಿನಿಂದ ಈತ ಬಾತ್ ರೂಮಿನಿಂದ ದೊಡ್ಡದಾಗಿ
" ಪ್ರಕಾಶಾ.....ಚಪಾತಿ...! "
ಅನ್ನುತ್ತಿದ್ದ...
ನಾನು ತಂದು ಕೊಡುತ್ತಿದ್ದೆ...
ಒಂದುವಾರ ಕಳೆದಿರಬಹುದು...
ಕೆಳಗಡೆ ಮನೆಯವರೊಬ್ಬ.. ನನ್ನನ್ನು ಮಾತಾಡಿಸಿದರು..
ನಾನು ನಕ್ಕೆ..
"" ಏನ್ರಪಾ...ಈಗ.. ನಾನೇ.. ಅಡ್ಜಸ್ಟ್ ಮಾಡಿ ಕೊಂಡಿದ್ದೇನೆ..
ನಾನು ದೇವರ ಪೂಜೆ ಸಮಯ ಬದಲಿಸಿದ್ದೇನೆ.....
ಆದರೆ..ಅಂವ ಎಂಥಾ ಮನುಷ್ಯ ಮಾರಾಯಾ..?.....?
ಅವನಿಂದಾಗಿ...
ನಮ್ಮನೆಯಲ್ಲಿ .......ಚಪಾತಿಗೆ...ಚಪಾತಿ... ಅನ್ನುವದನ್ನು.....
ಬಿಟ್ಟು ಬಿಟ್ಟಿದ್ದೇವೆ....!!
ರೊಟ್ಟಿ ಹೇಳುವದನ್ನು ಅಭ್ಯಾಸ ಮಾಡಿ ಕೊಂಡಿದ್ದೇವೆ..!!..""
ಅಂದರು...
"" ಚಪಾತಿ ಬಹಳ ಜನಪ್ರಿಯವಾಯಿತು...""
Sunday, December 21, 2008
ಮಣ್ಣು...ಮರಳು...ನಾವೂ..ಮರುಳು...!!
ಐಟಿ..ಬಿಟಿ..ನಗರದಲ್ಲೊಂದು ಅಂಡರ್ ಪಾಸ್ ಕಾಮಗಾರಿ...
ನಿನ್ನೆ ನಾನು ಹೆಬ್ಬಾಳದಿಂದ ಬರುತ್ತಿದ್ದೆ. ಗಂಗಾನಗರದ ಬಳಿ ಬಳ್ಳಾರಿ ರಸ್ತೆಯಲ್ಲಿ ಒಂದು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ.
ಅದು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ರಸ್ತೆ...!
ಅಲ್ಲಿ ಬಳಸುವ ಮರಳನ್ನು ನೋಡಿ ದಂಗಾಗಿ ಹೋದೆ... !!
ಏನು ಮಾಡಬೇಕು...? ಏನು ಮಾಡಲಿ..?
ಗೊತ್ತಾಗಲಿಲ್ಲ.
ಸ್ನೇಹಿತ ಶಿವು ಗೆ ಫೋನ್ ಮಾಡಿ ನನಗಾದ ಬೇಜಾರು ಹೇಳಿಕೊಂಡೆ.
ಆದರೆ ಅವರು ಸುಮ್ಮನಿರ ಬೇಕಲ್ಲ......
ಜಾಗ, ವಿಳಾಸ ಎಲ್ಲ ಪಡೆದು ...ಅಲ್ಲಿ ಹೋಗಿ
ಕಷ್ಟಪಟ್ಟು ,... ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದು ಕಳಿಸಿದ್ದಾರೆ... !!
ನಾನು ಟಿ.ವಿ.೯ ಗೆ ಫೋನ್ ಮಾಡಿದೆ..ಯಾರೂ ಫೋನ್ ತೆಗೆದು ಕೊಂಡಿಲ್ಲ... !
ಉಪಚುನಾವಣೆಯಲ್ಲಿ ಮಗ್ನರಾಗಿರಾದ್ದಾರೋ..ಗೊತ್ತಾಗಲಿಲ್ಲ...
ಈಗ ತಮ್ಮೆಲ್ಲರ ಗಮನಕ್ಕೆ ಈ ಫೋಟೊಗಳನ್ನು ಇಡುತ್ತಿದ್ದೇನೆ...
ಇಲ್ಲಿ ಬಳಸುತ್ತಿರುವದು...ವಾಷ್ಡ್ ಸಾಂಡ್...
ಅರ್ಥಾತ್..ಫಿಲ್ಟರ್ ಮರಳು....
ಅಂದರೆ ಮಣ್ಣನ್ನು ನೀರಲ್ಲಿ ತೊಳೆದು ಇಡಲಾಗಿದೆ...
ನಮ್ಮ ಐಟಿ ಬಿಟಿ ನಗರದಲ್ಲಿ ಮರಳ ಬದಲು ಮಣ್ಣನ್ನು ಬಳಸುವ ಸಂಶೊಧನೆ ಆಗಿದೆಯ..?ಸರಕಾರ ಇದನ್ನು ಒಪ್ಪಿದೆಯಾ..?
ನಾವು..ನೀವು ಓಡಾಡುವ..ಈ ಅಂಡರ್ ಪಾಸ್ ಪೂರ್ತಿಯಾಗಿ ಇದೇ ಕಟ್ಟಿದ್ದಾರೆಯೆ..?
ಇದರ ಆಯಸ್ಸು ಎಷ್ಟು..?
ಇದಕ್ಕೆ ನಾವು ಏನು ಮಾಡಬಹುದು...?
ನಿನ್ನೆ ನಾನು ಹೆಬ್ಬಾಳದಿಂದ ಬರುತ್ತಿದ್ದೆ. ಗಂಗಾನಗರದ ಬಳಿ ಬಳ್ಳಾರಿ ರಸ್ತೆಯಲ್ಲಿ ಒಂದು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ.
ಅದು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ರಸ್ತೆ...!
ಅಲ್ಲಿ ಬಳಸುವ ಮರಳನ್ನು ನೋಡಿ ದಂಗಾಗಿ ಹೋದೆ... !!
ಏನು ಮಾಡಬೇಕು...? ಏನು ಮಾಡಲಿ..?
ಗೊತ್ತಾಗಲಿಲ್ಲ.
ಸ್ನೇಹಿತ ಶಿವು ಗೆ ಫೋನ್ ಮಾಡಿ ನನಗಾದ ಬೇಜಾರು ಹೇಳಿಕೊಂಡೆ.
ಆದರೆ ಅವರು ಸುಮ್ಮನಿರ ಬೇಕಲ್ಲ......
ಜಾಗ, ವಿಳಾಸ ಎಲ್ಲ ಪಡೆದು ...ಅಲ್ಲಿ ಹೋಗಿ
ಕಷ್ಟಪಟ್ಟು ,... ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದು ಕಳಿಸಿದ್ದಾರೆ... !!
ನಾನು ಟಿ.ವಿ.೯ ಗೆ ಫೋನ್ ಮಾಡಿದೆ..ಯಾರೂ ಫೋನ್ ತೆಗೆದು ಕೊಂಡಿಲ್ಲ... !
ಉಪಚುನಾವಣೆಯಲ್ಲಿ ಮಗ್ನರಾಗಿರಾದ್ದಾರೋ..ಗೊತ್ತಾಗಲಿಲ್ಲ...
ಈಗ ತಮ್ಮೆಲ್ಲರ ಗಮನಕ್ಕೆ ಈ ಫೋಟೊಗಳನ್ನು ಇಡುತ್ತಿದ್ದೇನೆ...
ಇಲ್ಲಿ ಬಳಸುತ್ತಿರುವದು...ವಾಷ್ಡ್ ಸಾಂಡ್...
ಅರ್ಥಾತ್..ಫಿಲ್ಟರ್ ಮರಳು....
ಅಂದರೆ ಮಣ್ಣನ್ನು ನೀರಲ್ಲಿ ತೊಳೆದು ಇಡಲಾಗಿದೆ...
ನಮ್ಮ ಐಟಿ ಬಿಟಿ ನಗರದಲ್ಲಿ ಮರಳ ಬದಲು ಮಣ್ಣನ್ನು ಬಳಸುವ ಸಂಶೊಧನೆ ಆಗಿದೆಯ..?ಸರಕಾರ ಇದನ್ನು ಒಪ್ಪಿದೆಯಾ..?
ನಾವು..ನೀವು ಓಡಾಡುವ..ಈ ಅಂಡರ್ ಪಾಸ್ ಪೂರ್ತಿಯಾಗಿ ಇದೇ ಕಟ್ಟಿದ್ದಾರೆಯೆ..?
ಇದರ ಆಯಸ್ಸು ಎಷ್ಟು..?
ಇದಕ್ಕೆ ನಾವು ಏನು ಮಾಡಬಹುದು...?
ಯಾರಾದರೂ ತಿಳಿದವರು ಹೇಳ ಬಲ್ಲರೆ...?
ಬರಿ ಪ್ರಶ್ನೆಗಳು..ಪ್ರಶ್ನೆಗಳು...
ಉತ್ತರ...ಇದೆಯಾ..?
ಬರಿ ಪ್ರಶ್ನೆಗಳು..ಪ್ರಶ್ನೆಗಳು...
ಉತ್ತರ...ಇದೆಯಾ..?
Subscribe to:
Posts (Atom)


