Saturday, November 22, 2014

ತಾಳಿ

ನನ್ನ
ಮುಖದ ಮೇಲೆ
ಯಾರೊ ನೀರು ಚಿಮುಕಿಸಿದರು...

ಮೆಲ್ಲಗೆ ಕಣ್ಣು ಬಿಟ್ಟೆ...
ಎಚ್ಚರ ತಪ್ಪಿ ಬಿದ್ದಿದ್ದೆ ಅಂತ ಅನ್ನಿಸ್ತಿದೆ...

ಅಸಾಧ್ಯ ನೋವು..

"ಅಮ್ಮಾ..
ಅಯ್ಯೋ..."  .... ನರಳಿದೆ..

"ಸ್ವಲ್ಪ ಸಮಾಧಾನ ಮಾಡ್ಕೊ ತಾಯಿ...
ನಿಮ್ಮ ಹತ್ತಿರದವರ ಹೆಸರು ಹೇಳ್ತೀರಾ  ?"

ಮಾತನಾಡಲು ಬಾಯಿ ತೆರೆದೆ...

ತುಟಿ ನಡುಗುತ್ತಿತ್ತು...

ತುಟಿಯನ್ನು 
ರಕ್ತ ಬರುವಷ್ಟು ಹೀರಿದ್ದರು...

ಮತ್ತೆ ನೋವಿನಿಂದ ನರಳಿದೆ...

"ನನ್ನ ಮೊಬೈಲಿನಲ್ಲಿ  "ಅಪ್ಪ"  ಅಂತ ಇದೆ.. ನೋಡಿ.."

ಬಹಳ ಕಷ್ಟಪಟ್ಟು ಉಸುರಿದೆ..

ಸ್ವಲ್ಪ ನೀರು ಕುಡಿಸಿದರು..

ಕಣ್ಣಿಗೆ ಕತ್ತಲು ಕಟ್ಟಿತು..
ಮತ್ತೆ ಪ್ರಜ್ಞೆ ತಪ್ಪಿತು..

ಎಚ್ಚರವಾದಾಗ ಅಪ್ಪ ಕಣ್ಣೆದುರು ಇದ್ದರು..

"ಮಗಳೆ .."

ಅಂತ ತಬ್ಬಿಕೊಂಡರು...
ಅವರ ಕಣ್ಣಲ್ಲಿ ನೀರು ಇಳಿಯುತ್ತಿತ್ತು,...

ಆಮೇಲೆ ಗೊತ್ತಾಗಿದ್ದು ಇಷ್ಟು..

ಯಾರೊ ದಂಪತಿಗಳು 
ಸಾಯಂಕಾಲದ ಹೊತ್ತು 
ವಾಯುವಿಹಾರಕ್ಕೆ ಹೋಗುತ್ತಿದ್ದಾಗ
ರಸ್ತೆ ಬದಿಯ ಪೊದೆಯಲ್ಲಿ ನಾನು ನರಳುವ ಶಬ್ಧ ಕೇಳಿತಂತೆ..

ನನ್ನ ಮೇಲೆ ಅತ್ಯಾಚಾರವಾಗಿತ್ತು...!

ನನ್ನ 
ಮೊಬೈಲಿನಿಂದ ನನ್ನಪ್ಪನಿಗೆ ಫೋನ್ ಮಾಡಿ ಕರೆಸಿ..
ಡಾಕ್ಟರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು...

"ನೀವು ಪೋಲಿಸರಿಗೆ ದೂರು ನೀಡಿ..."

ಅಪ್ಪನ ಕಣ್ಣಲ್ಲಿ ನೀರು ಇಳಿಯುತ್ತಿತ್ತು..

"ಬೇಡಿ ಸಾರ್...
ನಾವು ಬಡವರು... 
ಮರ್ಯಾದೆ ಬೀದಿಗೆ ಬಂದರೆ ಬದುಕುವದು ಕಷ್ಟ..

ಬಡತನಕ್ಕೆ ಮರ್ಯಾದೆ ಬಲು ದೊಡ್ಡದು.. 

ಇಲ್ಲಿಯೇ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗುವೆ..."

"ಈ ಸ್ಥಿತಿಯಲ್ಲಿ 
ಮನೆಗೆ ಕರೆದುಕೊಂಡು ಹೋದರೆ .. 
ಅಕ್ಕಪಕ್ಕದವರು ಏನಂದಾರು  ?"

ನನ್ನಪ್ಪನ ಬಳಿ ಉತ್ತರ ಇರಲಿಲ್ಲ..

"ನೋಡಿ..
ಮಗಳಿಗೆ ತಂದೆಯಾಗಿ ನಿಮ್ಮ ಸ್ಥಿತಿ ಅರ್ಥವಾಗುತ್ತದೆ..

ಒಂದಷ್ಟು ದಿನ ಇವಳು ನಮ್ಮ ಮನೆಯಲ್ಲಿರಲಿ..

ನಮಗೇನೂ ತೊಂದರೆ ಇಲ್ಲ..."

ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ..
ನನ್ನನ್ನು ಕಾಪಾಡಿದ ದಂಪತಿಗಳು 

ಅವರು ನಮಗೆ  ದೇವರಂತೆ ಕಂಡರು ...

ಅಪ್ಪ ಅವರ ಮಾತಿಗೆ ಒಪ್ಪಿದ 
ಅವರು ಅಪ್ಪನಿಗೂ ಪರಿಚಿತರಾಗಿದ್ದರು.. .

ನಾನು ಆ ಸಹೃದಯರ ಮನೆಗೆ ಬಂದೆ..

ಅವರಿಬ್ಬರೂ 
ನನಗೆ ಅಪರಿಚಿತರು ಅಂತ ಅನ್ನಿಸಲೇ ಇಲ್ಲ...
ಯಾವುದೋ ಜನ್ಮದ ನನ್ನ ಬಂಧುಗಳಂತೆ ಅನ್ನಿಸಿದರು...

ಸಿನೇಮಾದಲ್ಲಿ 
ವಿಲನ್ನುಗಳು ಅತ್ಯಾಚಾರ ಮಾಡುವದನ್ನು ನೋಡಿದ್ದೆ..
ನಾಯಕಿ ಕಿರಿಚಾಡುವದನ್ನು ಕೇಳಿದ್ದೆ..
ಪುಸ್ತಕಗಳಲ್ಲಿ ವರ್ಣನೆ ಓದಿದ್ದೆ..

ನನಗಾದ ಅನುಭವ ಇದೆಯಲ್ಲ...ಅದು  ಯಾರಿಗೂ ಬೇಡ..!

ಒಬ್ಬಾತ 
ನನ್ನನ್ನು ಮಲಗಿಸಿ ಕೈಯನ್ನು ತನ್ನ ಬೂಟುಕಾಲಲ್ಲಿ ಮೆಟ್ಟಿ ನಿಂತಿದ್ದ...

ಇನ್ನೊಬ್ಬ ಬಟ್ಟೆಯನ್ನು ಹರಿಯುತ್ತಿದ್ದ.. ...

ಅದೆಷ್ಟು ಆತುರ ಈ ದುರುಳರಿಗೆ..!

ಕೂಗೋಣವೆಂದರೆ 
ನನ್ನ ಬಾಯಿಗೆ ಬಟ್ಟೆ ತುರುಕಿದ್ದರು...!

ಸರಾಯಿ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...

ಹರಿದಾಡಿದರು...
ಕೆನ್ನೆ.. ತುಟಿ..
ಮೂಗು
ಎದೆ.. ಎಲ್ಲೆಡೆ ಕಚ್ಚಿದರು..

ನನ್ನನ್ನು ಹೀರಿಬಿಟ್ಟರು...!

ನನಗೆ ನೋವು.. ಹಿಂಸೆ ಕೊಟ್ಟು 
ಈ ದೇಹದಿಂದ ಯಾವ ಸುಖ ಸಿಕ್ಕಿತೋ  ಆ ದುರಳರಿಗೆ ... ! .. 

ಕನಸಲ್ಲೂ 
ಊಹಿಸಲಾಗದ ಭಯಂಕರ ಅತ್ಯಾಚಾರ ನಡೆದೇ ಹೋಯಿತು....

ನೆನಪಾದಾಗಲೆಲ್ಲ ನೋವು ಜಾಸ್ತಿಯಾಗುತ್ತಿತ್ತು...

ನೋವು ದೇಹಕ್ಕಾಯಿತೊ... 
ಮನಸ್ಸಿಗೋ ... 

ನರಳಿದೆ..

ರೂಮಿನ ಬಾಗಿಲು ತೆಗೆದು
ನನ್ನನ್ನು ಕಾಪಾಡಿದವ  ನನ್ನ ಬಳಿ ಬಂದರು ...

ಮೆಲ್ಲಗೆ ನನ್ನ ಹಣೆ ಸ್ಪರ್ಷಿಸಿದರು ..

ಅವರ  ಮುಖದಲ್ಲಿ ಕರುಣೆಯಿತ್ತು... 
ಅನುಕಂಪವಿತ್ತು ..

ಸಾಂತ್ವನಕ್ಕೆ ಮಾತು ಬೇಕಿಲ್ಲ..
ನೋಟ..
ಸ್ಪರ್ಷ ಸಾಕು..

ನನ್ನನ್ನು ಎತ್ತಿ ಕುಳ್ಳಿರಿಸಿ ನೀರು ಕುಡಿಸಿದರು ...

ಈಗ
ಅವರ  ಮಡದಿಯೂ ರೂಮಿಗೆ ಬಂದಳು..

"ಆ ರಾಕ್ಷಸರನ್ನು 
ಸುಮ್ಮನೆ ಬಿಡಬಾರದು...!

ಕೊಚ್ಚಿ 
ಕೊಚ್ಚಿ ಕತ್ತರಿಸ ಬೇಕು..."

ಅತ್ತು ಬಿಡೋಣ ಎಂದುಕೊಂಡೆ...
ನನ್ನ ಕಣ್ಣಲ್ಲಿ ಈಗ ನೀರೂ ಸಹ ಬರುತ್ತಿಲ್ಲ...

ಆ ದಂಪತಿಗಳ ಮಮತೆಗೆ
ಸ್ನೇಹಕ್ಕೆ.. 
ಅವರ ಒಳ್ಳೆಯತನಕ್ಕೆ ನಾನು ಮನಸೋತೆ...

ಎಷ್ಟು ಅನ್ಯೋನ್ಯವಾಗಿದ್ದಾರೆ !

ನನ್ನ ಭಾಗ್ಯದಲ್ಲಿ  ಇಂಥಹ ಬಾಳುವೆ  ಇದೆಯಾ ?
ಜಗತ್ತಿನಲ್ಲಿ ಇಂಥವರೂ ಇರ್ತಾರಾ ?

ಅವರು ನನ್ನ ಸೇವೆ ಮಾಡುವಾಗ 
ಅವರಿಬ್ಬರನ್ನು ಕಣ್ ತುಂಬಾ ನೋಡುತ್ತಿದ್ದೆ.. 

ಅವರ 
ಮಮತೆಯ ಮಂದಿರವನ್ನು ನನ್ನ ಹೃದಯದಲ್ಲಿ ಕಟ್ಟಿಕೊಂಡೆ 

ಸುಮಾರು ಒಂದು ತಿಂಗಳಾಯಿತು..
ನಾನು ಅವರ ಮನೆಯವಳೇ ಆಗಿಬಿಟ್ಟೆ..

ಕ್ರಮೇಣ ನಾನು ಓಡಾಡುವಷ್ಟು ಆರೋಗ್ಯವಂತಳಾದೆ..

ನನ್ನನ್ನು 
ಇಬ್ಬರೂ ತುಂಬಾ ಮಮತೆಯಿಂದ..
ತಮ್ಮ ತಂಗಿಯಂತೆ ನೋಡಿಕೊಂಡರು..

"ಇವತ್ತು ಡಾಕ್ಟರ್ ಬಳಿ ಹೋಗಬೇಕು..
ರೆಡಿ ಆಗಮ್ಮ..."

ನನ್ನ ಅಣ್ಣನಂತಿದ್ದ
ಅವರ ಮುಖವನ್ನೇ ನೋಡಿದೆ..

"ನೋಡಮ್ಮ..
ನಿನ್ನ ದೇಹದ ಬಹಳಷ್ಟು ಗಾಯಗಳು ವಾಸಿಯಾದವು...

ಆ ದುರುಳರ ಕೆಟ್ಟ ಕೆಲಸದ ಪರಿಣಾಮ ನಿನ್ನ ಹೊಟ್ಟೆಯಲ್ಲಿ ಬೆಳೆಯಬಾರದು..

ಅವರಿಗೆಲ್ಲ ಯಾವ ರೋಗವಿತ್ತೊ.. ಏನೊ..

ಎಲ್ಲವನ್ನೂ ಒಮ್ಮೆ ಪರೀಕ್ಷಿಸಿಕೊಂಡು ಬರಬೇಕಮ್ಮ..."

ನಾನು ತಲೆಯಾಡಿಸಿದೆ...
ಅವರ ಮಡದಿ ನಮ್ಮನ್ನು ಬೀಳ್ಕೊಟ್ಟರು...

ಡಾಕ್ಟರ್ ಎಲ್ಲವನ್ನೂ ಪರೀಕ್ಷಿಸಿದರು...

"ಏನೂ ಸಮಸ್ಯೆ ಇಲ್ಲ... ಎಲ್ಲವೂ ವಾಸಿಯಾಗಿದೆ..."

ನನ್ನನ್ನು ಕರೆದುಕೊಂಡು ಬಂದವರಿಗೂ ಖುಷಿ ಆಯ್ತು.. 

ಒಂದಷ್ಟು ಮಾತ್ರೆ..
ಔಷಧಗಳನ್ನು ಬರೆದುಕೊಟ್ಟರು...

ಮೊದಲೆಲ್ಲ
ನನ್ನಮ್ಮ ನನ್ನ ಮೈ ಮುಟ್ಟಿದರೂ ನನಗೆ ನಾಚಿಕೆಯಾಗುತ್ತಿತ್ತು..
ಕಚಗುಳಿ ಇಟ್ಟಂತಾಗುತ್ತಿತ್ತು...

ಡಾಕ್ಟರ್ 
ನನ್ನ ದೇಹ ಪರೀಕ್ಷಿಸುತ್ತಿರುವಾಗ ನನಗೇನೂ ಅನ್ನಿಸಲೇ ಇಲ್ಲ...

ನಾನು 
ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬಿಟ್ಟೆನಾ ? 

ಇಬ್ಬರೂ ಮನೆಗೆ ಬಂದೆವು..
ಮನೆಯಲ್ಲಿ ಅವರ ಮಡದಿ ಕಾಣಲಿಲ್ಲ..

ಒಂದು ಚೀಟಿಯಿತ್ತು...

"ನಾನು 
ಅಣ್ಣನ ಮನೆಗೆ ಹೋಗುತ್ತಿದ್ದೇನೆ..
ನನಗಾಗಿ ಕಾಯಬೇಡಿ.. ನೀವಿಬ್ಬರೂ ಊಟ ಮಾಡಿ..."

ಅವರು ತುಂಬ ಪ್ರೀತಿಯಿಂದ 
ಮಮತೆಯಿಂದ ಬಡಿಸಿದರು..

"ಸರ್...

ನಿಮ್ಮಿಬ್ಬರಿಂದಾಗಿ  
ನಾನು ಈ ಆಘಾತದಿಂದ ಹೊರಗೆ ಬರ್ತಾ ಇದ್ದೀನಿ.. 

ನಿಮ್ಮಿಬ್ಬರ ಪ್ರೀತಿಗೆ..
ಮಮತೆಗೆ ನನಗೆ ಏನು ಹೇಳಬೇಕೆಂದೇ  ತಿಳಿಯುತ್ತಿಲ್ಲ...

ನಿಮಗೆ ಏನೆಂದು ನಾನು ಕರೆಯಲಿ  ? "

ಅವರು ನಸುನಕ್ಕರು..
ನಗುವಿನಲ್ಲಿ ಪ್ರೀತಿ ಇತ್ತು... 

"ಮನಸ್ಸಲ್ಲಿ ಪ್ರೀತಿ ಇದ್ದರೆ ಸಾಕಮ್ಮ...
ಏನು ಬೇಕಾದರೂ ಕರೆಯಬಹುದು.. ..

ನನ್ನದೇನೂ ಅಭ್ಯಂತರ ಇಲ್ಲ..."

"ನನ್ನ ಅಕ್ಕನ ಗಂಡ..
ನನ್ನ 
ಬಾವನನ್ನು  "ಜಿಜ್ಜು"  ಅಂತ ಕರೆಯುತ್ತಿದ್ದೆ.
ಅವರೀಗ ಇಲ್ಲ..

ನಿಮ್ಮಲ್ಲಿ ನನ್ನ ಬಾವನನ್ನು ಕಾಣುತ್ತಿದ್ದೇನೆ ಸರ್.."

ಅವರು ತಲೆ ಆಡಿಸುತ್ತ ಮತ್ತೆ ನಸು ನಕ್ಕರು...

ಊಟವಾಯಿತು..

ನಾನು ಡೈನಿಂಗ್ ಟೇಬಲ್ಲನ್ನು ಸ್ವಚ್ಛಗೊಳಿಸಲು ಹೋದೆ..

"ನೀನು ವಿಶ್ರಾಂತಿ ಮಾಡಮ್ಮ..
ಇದೆಲ್ಲ ನಾನು ಮಾಡ್ತಿನಿ..."

"ಜಿಜ್ಜು...
ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ..

ಈಗ ನೋವು ಕೂಡ ಇಲ್ಲ..

ಡಾಕ್ಟರ್ ಕೂಡ ಹೇಳಿದ್ದಾರಲ್ಲ ಸಂಪೂರ್ಣ ಗುಣಮುಖಳಾಗಿದ್ದೇನೆ..
ನನಗೆ ಯಾವ ಸಮಸ್ಯೆಯೂ ಇಲ್ಲ ಅಂತ..

ನಾನು ಇದೆಲ್ಲ ಮಾಡ್ತಿನಿ ಬಿಡಿ....."

ಅವರು ಬಂದು ನನ್ನ ಕೈಯಲ್ಲಿದ್ದ ಬಟ್ಟೆಯನ್ನು ಹಿಡಿದುಕೊಂಡರು...

"ಹಾಗಲ್ಲಮ್ಮ..
ನಿನ್ನ ಬಳಿ ಕೆಲಸ ಮಾಡಿಸಿದರೆ 
ನನ್ನವಳು ನನ್ನನ್ನು ಸುಮ್ಮನೆ ಬಿಡುವದಿಲ್ಲ.."

ನಾನು 
ಅವರ ಕೈಯಿಂದ ಬಿಡಿಸಿಕೊಳ್ಳಲು ಕೊಸರಾಡಿದೆ..

ಅವರು ಇನ್ನೂ ಜೋರಾಗಿ ಹಿಡಿದುಕೊಂಡರು...

"ನಿನ್ನ ಬಗೆಗೆ 
ನನಗೆ ಬಹಳ ದುಃಖ  ಇದೆಯಮ್ಮ..

ನಿನ್ನ ಮೊದಲ ಅನುಭವವೇ  ಹೀಗಾಗಬಾರದಿತ್ತು..."

ನನಗೆ ಅರ್ಥವಾಗಲಿಲ್ಲ...

ಅವರು ತಡವರಿಸಿದರು..

"ಅದು..

ಅದ್ದೂ.. ... 

ನಿನ್ನ ಮೊದಲ ಸೆಕ್ಸ್ ಅನುಭವ ಹೀಗಾಗ ಬಾರದಿತ್ತು...!... "

ಅವರಿನ್ನೂ ನನ್ನ ಕೈಯನ್ನು ಬಿಟ್ಟಿರಲಿಲ್ಲ..

"ನೋಡಮ್ಮ...
ಸೆಕ್ಸ್..
ಕಾಮವೆಂದರೆ ಒಂದು ಸುಂದರ ಅನುಭೂತಿ...

ಶಬ್ಧಗಳಿಗೆ ವರ್ಣನೆಗೆ ಸಿಗುವಂಥದ್ದಲ್ಲ...

ಕಾಮವಿಲ್ಲದಿದ್ದರೆ 
ಈ ಜಗತ್ತು ಶುಷ್ಕ... ನೀರಸ ... "

ನನಗೆ ಏನು ಹೇಳಬೇಕೆಂದು ತೋಚಲಿಲ್ಲ...

"ನಿನ್ನನ್ನು ಕೇಡಿಸಿದ್ದಾರಲ್ಲ..
ಅವರು ಮಾನಸಿಕ ರೋಗಿಗಳು...

ಪ್ರೀತಿಯಿಂದ ಪಡೆಯಬೇಕಾದಂಥಹುದನ್ನು ಬಲಾತ್ಕಾರವಾಗಿ ಪಡೆಯಲು ಪ್ರಯತ್ನಿಸಿದ್ದಾರೆ..

ಕ್ರೂರಿಗಳು..."

"ಹೌದು ಸರ್..
ಅವರು ರಾಕ್ಷಸರು..!.. "........ 

ಅವರು ನನ್ನ ಕೈಯನ್ನು ಬಿಡದೆ 
ಹಾಗೆ ಹಿಡಿದುಕೊಂಡು ನನ್ನನ್ನು ಬಳಸಿ ತಬ್ಬಿಕೊಂಡರು...

ಈಗ ನಾನು ಅಪ್ರತಿಭಳಾದೆ..

"ಇದೇನು ಸಾರ್.. ನೀವು  ?
ನನಗೆ ಇದೆಲ್ಲ ಇಷ್ಟ ಆಗಲ್ಲ.. ಪ್ಲೀಸ್ ಬಿಟ್ ಬಿಡಿ..."

ಅವರು 
ನನ್ನನ್ನು ನೋವಾಗದ ಹಾಗೆ ಹಿಡಿದುಕೊಂಡಿದ್ದರು...

"ನಿನಗೊಂದು ಸ್ವರ್ಗ ತೋರಿಸುತ್ತೇನೆ..!

ನಿನಗಾದ ಕಹಿ ಅನುಭವ ನೀನು ಮರೆತುಬಿಡಬೇಕು..

ಒಂದು ಅರ್ಧ .. 
ಮುಕ್ಕಾಲು ಗಂಟೆ ಸುಮ್ಮನಿದ್ದುಬಿಡು.... 

ಸೆಕ್ಸ್ ಎಂದರೆ ಸುಂದರ..
ಸಿಹಿಯಾದ 
ಸುಖ ಅಂತ ನಿನಗೂ ಅದರ ಅನುಭವ ಕೊಡುತ್ತೇನೆ..."

ನಾನು ಕೊಸರಾಡಿದೆ...

"ನೋಡು..
ಗಡಿಬಿಡಿ.. ಆತಂಕ ಏನೂ ಬೇಡ... 

ಒಂದು ಹತ್ತು ನಿಮಿಷ ನೀನು ಸುಮ್ಮನಿರು..

ಒಪ್ಪಿಕೊ... 

ನಿನ್ನ ದೇಹ ...
ಈ ಕ್ರಿಯೆಗೆ ಸಹಕರಿಸದಿದ್ದರೆ 
ನಾನು ನಿನ್ನನ್ನು ಬಿಟ್ಟು ಬಿಡುವೆ..

ಖಂಡಿತಾ ಬಲವಂತ ಮಾಡುವದಿಲ್ಲ... "

"ಸಾರ್..
ಇದೇನು.. ?

ನಿಮ್ಮದು ಪ್ರೀತಿಯ ಸಂಸಾರ...

ನಿಮ್ಮ ಮಡದಿ ಏನಂದುಕೊಂಡಾಳು... ?

ನನ್ನನ್ನು ಬಿಟ್ ಬಿಡಿ.. ಪ್ಲೀಸ್..."

ಅವರ ಕೈ .. 
ನನ್ನ ಮೈಮೇಲೆಲ್ಲ ಹರಿದಾಡುತ್ತಿತ್ತು...

ನನ್ನ ಕಿವಿಯ ಬಳಿ ಬಂದು ಉಸುರಿದರು...

"ಅವಳು ನನ್ನ ಮಡದಿ ನಿಜ..

ನಾನು .... 
ನನ್ನ 
ಎಲ್ಲ ಸುಖವನ್ನೂ ಅವಳ ಕುತ್ತಿಗೆಗೆ ಕಟ್ಟಲಿಲ್ಲ..

ತಾಳಿಯನ್ನಷ್ಟೆ ಕಟ್ಟಿದ್ದೇನೆ..."... 

ಅವರು ಏದುಸಿರು ಬಿಡುತ್ತಿದ್ದರು...

ಅಪ್ಪುಗೆ ಬಿಗಿಯಾಗ ತೊಡಗಿತು...



(3K ಬಳಗಕ್ಕಾಗಿ ಬರೆದ ಕಥೆ ಇದು.... 
ಕೇವಲ ಕಥೆಯಲ್ಲ... 
ಸತ್ಯ ಅಂತನೂ  ಅಂದುಕೊಳ್ಳಬಹುದು...)

Saturday, October 25, 2014

ಆ ಚರ ...

ನಮ್ಮ
ಇಷ್ಟ..
ಕಷ್ಟಗಳು ಯಾವಾಗಲೂ ಒಂಟಿ...

ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ ನೋಡಿ.... 


ಹಸಿರು ಚಿಗುರುತ್ತದೆ...

ಮೊಗ್ಗು ಹೂವಾಗಿ ಅರಳುತ್ತದೆ...

ಈ ಹೂವಿಗೆ ಅಷ್ಟು ಸಾಕಾ ?...


ದುಂಬಿ

ತನ್ನೆಡೆಗೆ ಬರಬೇಕು...

ತನ್ನ ಚಂದ ನೋಡಿ ಹಾಡಬೇಕು...


ಮಕರಂದ ಹೀರಬೇಕು...


ಮಕರಂದ ಹೀರಿದ ಮೇಲೆ 

ತನ್ನ ಅಂದ .... 
ಹಾಳಾಗುತ್ತದೆ ಅಂತ ಗೊತ್ತಿದ್ದರೂ..
ಕೊಡುವದರಲ್ಲೇ ತೃಪ್ತಿ ಕಾಣುತ್ತದೆ ಆ ಹೂವು..

ತೃಪ್ತಿ .... 

ಅನ್ನೋದಕ್ಕೆ ವಿಶ್ರಾಂತಿ  ಅನ್ನೋದೆ ಇಲ್ಲ... 

ತನ್ನ ಚಂದವನ್ನು ... 

ಯಾರಾದರೂ ನೋಡಲಿ..

ಹೂ ಮಾಲೆ ಕಟ್ಟಿ 

ಯಾವ ಮೂರ್ತಿಗಾದರೂ ಅಲಂಕರಿಸಲಿ..

ಚಂದದ ಹೆಣ್ಣಿನ ಮುಡಿಸೇರಲಿ..


ಅರಳಿದ 

ಹೂವಿನ ಚಂದ ಕೆಲವೇ ಕ್ಷಣ 
ಅಂತಿದ್ದರೂ
ಚಂದವನ್ನು ಹಾಳುಮಾಡಿಕೊಳ್ಳುವದರಲ್ಲೇ ಸಾರ್ಥಕತೆಯನ್ನು ಕಾಣುತ್ತದೆ...

ಏನು ಮಾಡಲಿ ?


ಹೆಣ್ಣಿಗೆ 

ಈ ಗಂಡಸರು 
ಹೂವು 
ಪ್ರಕೃತಿ ಎನ್ನುತ್ತಾರೆ...

ಪ್ರಕೃತಿಯ 

ಆಗುಹೋಗುಗಳ ಬಗೆಗೆ ಪುರುಷನಿಗೆ ಲಕ್ಷ್ಯವೇ ಇರುವದಿಲ್ಲ...

ರಜಸ್ವಲೆಯಾಗಿ 

ಇಂದು ಮಿಂದಿದ್ದೇನೆ...
ನನ್ನವನಿಗೆ ನನ್ನ ಬಗೆಗೆ ಲಕ್ಷವೇ ಇಲ್ಲ...

ನನ್ನವ ...... 

ನಿಮಗೆ ಗೊತ್ತಿರಬೇಕು...

ದೇವಗುರು "ಬೃಹಸ್ಪತಿ..." !


ನಾನವನ ಮಡದಿ "ತಾರೆ..."


ನನ್ನ ಬದುಕೇನು ಚಂದವೆ ?


ನಿಮಗೇನು ಗೊತ್ತು

ಸನ್ಯಾಸಿಯ 
ಆಶ್ರಮದ ಬೇಲಿಯೊಳಗಿನ ಬದುಕು.... ?

ನನ್ನವ 

ಬದುಕಿನ ಪಾರಮಾರ್ಥಿಕತೆಯನ್ನು ಹುಡುಕುವವ...

ನನ್ನವ 

ನನಗೂ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದಾನೆ...

ನಮ್ಮ ಒಳಗಿನ ಆಸೆಯ ಅಭಿವ್ಯಕ್ತಿ ಬಲು ಕಷ್ಟ...

ನನ್ನವನಿಗೆ
ನನ್ನಾಸೆಯನ್ನು ಹೇಳಲೇ ಬೇಕಲ್ಲ...

ನನ್ನ 

ಮೌನ ಮಾತಾಡುತ್ತದೆ .. 
ಆ ಮೌನವನ್ನು ಕೇಳುವ ಮನಸ್ಥಿತಿ ಪುರುಷನಿಗಿರಬೇಕಲ್ಲ.... 

ಅವನ ಬಳಿ ಸುತ್ತಾಡಿದೆ...


"ಏನು " ಎನ್ನುವಂತೆ ನೋಡಿದ...


ನನಗೆ 

ನಗು ಬಂದರೂ ಪ್ರಶ್ನೆ ಕೇಳಿದೆ...

"ನಮ್ಮ 

ಅಂಗಳಕ್ಕೆ..
ಈ ಆಶ್ರಮಕ್ಕೆ ..... 
ಯಾಕೆ ಬೇಲಿ ಹಾಕಿದ್ದೀರಿ..? ..... 

ಪಕೃತಿ ಸಹಜ ಅಲ್ಲವಾ ?


ಪ್ರಕೃತಿಯ ಮೇಲೇಕೆ 

ಬೇಲಿ ಹಾಕಿ..
ಪ್ರಭುತ್ವ ಸ್ಥಾಪಿಸುವ  ಆಸೆ.. ? ... 

ಯಾವ ಪುರುಷನಿಗೇ ಆಗಲಿ 

ಪ್ರಕೃತಿಯ ಮೇಲೆ ಪ್ರಭುತ್ವ ಸಾಧ್ಯವೆ ?.."

ನನ್ನ ಗಂಡ 

ಗಡ್ಡವನ್ನು ತೀಡುತ್ತಾ ...... 
ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ...

"ಬೇಲಿ ಹಾಕಿದ್ದು .... 

"ಪ್ರಭುತ್ವ" ಸಾಧಿಸಲಿಕ್ಕೆ ಅಂತ ಯಾಕೆ ತಿಳಿದು ಕೊಳ್ತೀಯಾ ?

ಇದು    "ನಮ್ಮದು"

ನನ್ನದು ಮಾತ್ರ ...
ಅಂತಿದ್ರೆ ಬದುಕು ಕಟ್ಟಿಕೊಳ್ಳುವದು ಸುಲಭ.. 

ಅದು 

ಪ್ರೀತಿಗೆ ... 
ದಾಂಪತ್ಯಕ್ಕೆ ಸಹಾಯಕ ಮತ್ತು ಸಹಜ... "

"ಪ್ರೀತಿ ಅಂದರೆ ಬೇಲಿಯೊಳಗಿನ ಸ್ವಾರ್ಥವಾ ? "


"ಹೌದು ... 


ಈ 

ಪ್ರೀತಿ  ತನ್ನ ಬೇಲಿಯೊಳಗೆ ಇರಬೇಕೆಂದು ಮನಸ್ಸು ಬಯಸುತ್ತದೆ... 

ಬೇಲಿ ಒಳಗಿನ "ಪ್ರಕೃತಿ" ನನ್ನದು ಅಂತಿದ್ದಾಗ  

ಪ್ರೀತಿ ಮಾಡಬಹುದು..

ನಮ್ಮಲ್ಲಿ  "ಬೇಲಿ" ಇಲ್ಲ ಅಂದುಕೊ...


ಇಲ್ಲಿ ಯಾರು ಬೇಕಾದರೂ ಬರಬಹುದು... 

ಹೂ ಕೀಳಬಹುದು... 

ಇದು ತಮ್ಮದಲ್ಲ 

ಅಂತಿದ್ದಾಗ "ಕಾಳಜಿಯೂ" ಇರುವದಿಲ್ಲ... 

ಬೇಲಿ ಇಲ್ಲದ "ಅಂಗಳ" ನಿನಗೆ ಬೇಕಿತ್ತಾ ? "


ಗಂಡಸರೇ ಹೀಗೆ...

ಪ್ರಶ್ನೆಗೆ ಉತ್ತರವಿಲ್ಲವಾದಾಗ "ಪ್ರಶ್ನೆಗೆ" ಪ್ರಶ್ನೆಯನ್ನೇ ಕೇಳುತ್ತಾರೆ..

ಅವನ ಪ್ರಶ್ನೆಗೆ ನಾನೂ ಸಹ ಪ್ರಶ್ನೆಯನ್ನೇ ಕೇಳಿದೆ...


"ಪ್ರಕೃತಿಯ ಸಹಜ ಗುಣವೇನು ? "


"ಏನು ?"


"ಸೃಷ್ಟಿ...!


ಸೃಷ್ಟಿಸುವದು 

ತಾಯಿಯಾಗುವದು ಅವಳ ಬದುಕಿನ ಸಾರ್ಥಕತೆ...

ಬೇಲಿ ಹಾಕಿದವರಿಗೆ 

ಗಿಡಕ್ಕೆ ಗೊಬ್ಬರ ಕೊಡುವದು  ತಿಳಿದಿರಬೇಕು... "

ನನ್ನವ ದುರುಗುಟ್ಟಿದ...


"ಓಹ್ಹೋ ... !

ಇದಕ್ಕೆ ಇಷ್ಟೆಲ್ಲ ಪೀಠಿಕೆಯೇ ?..

ನನಗೆ ಕಾರ್ಯ ನಿಮಿತ್ತ ದೇವಲೋಕ ಹೋಗಬೇಕಾಗಿದೆ...


ಹದಿನೈದು ದಿನ ಬಿಟ್ಟು ಬರುವೆ

ಅಲ್ಲಿಂದ ಬಂದವ ನಿನ್ನಿಷ್ಟವನ್ನು ಪೂರೈಸುವೆ..."

ಆಸೆಯನ್ನು  ಹೇಳಿದ್ದು  ಅಪರಾಧವಾಯಿತೇನೋ ಎನ್ನುವಂತಿತ್ತು..

ನನ್ನವನ ನಡೆ ನುಡಿ...

ಇಷ್ಟಾದರೂ ಅರ್ಥವಾಯಿತಲ್ಲ..

ನನ್ನ ಪುಣ್ಯ..

ಆಸೆ 

"ಹೂವಾಗಿ"  ಅರಳಿದ ಮೇಲೆ  ಎಲ್ಲವೂ ಚಂದವೆ ...

ಆದರೆ ... 

ಇಂದು 
ಈ ಆಸೆಯೇಕೊ ಬೆಂಕಿಯಾಗಿ ಸುಡುತ್ತಿದೆ...
ನನ್ನನ್ನು ದಹಿಸುತ್ತಿದೆ...

ಬಾಯಾರಿದವರಿಗೆ ಗೊತ್ತು 

ಹನಿ 
ಹನಿ ನೀರಿನ ಹಂಬಲ.... 

ಹನಿ

ಹನಿ ಬಿದ್ದು
ತಂಪಾಗಬೇಕಲ್ಲ...

ಯಾರೋ ಕದ ತಟ್ಟುತ್ತಿದ್ದಾರೆ...


ಕದ ತೆರೆದೆ...


ದಿಘ್ಮೂಢಳಾಗಿ ನಿಂತುಬಿಟ್ಟೆ... !


ಬಂದವ ಚಂದದ ಚಂದಿರ... !!


ನಗು ನಗುತ್ತಾ ನಿಂತಿದ್ದಾನೆ !


ಒಳಗಿನ 

ಒತ್ತಾಸೆಗೆ ದೃವಿಸಿಹೋದೆ... !

ಉಟ್ಟ ಸೀರೆ ಜಾರುತ್ತಿದೆಯೇ... ?

ಬಟ್ಟೆ ಭಾರವಾಗುತ್ತಿದೆಯೆ ?

ಚಂದ್ರಮನನ್ನು ಒಳಗೆ ಕರೆದೆ...

ಕುಳ್ಳಿರಿಸಿದೆ... 
ಆದರಿಸಿದೆ...

ಪ್ರೀತಿ ತೋರಿದೆ...


ನಕ್ಕೆ...


ಗಡಿಬಿಡಿಯಲ್ಲಿ 

ಸರಿದ 
ಸೆರಗನ್ನು ಸರಿಪಡಿಸಿಕೊಂಡೆ...

ಕಣ್ ತೆರೆದು ಮುಚ್ಚುತ್ತ ಮಾತನಾಡಿದೆ....


ಚಂದಿರ ಬೆಪ್ಪನಂತೆ ನೋಡುತ್ತಿದ್ದ...  !


ಛೇ...

ಈ ಗಂಡಸು ಜಾತಿಯೇ ಇಷ್ಟು !

ಹೆಣ್ಣಿನ ಮಾತು... 

ಮೌನ 
ನೋಟಗಳ ಭಾಷೆಗಳನ್ನು  ಅರ್ಥ ಮಾಡಿಕೊಳ್ಳುವುದೇ ಇಲ್ಲ.. 

ನಾಚಿಕೆ ಬಿಟ್ಟು..

ನನ್ನನ್ನು ದಹಿಸುವ ಆಸೆಯನ್ನು ಹೇಳಿದೆ...

ಚಂದಿರ ಹೆದರಿದ...


"ನೀನು ನನ್ನ ಗುರು ಪತ್ನಿ...


ತಾಯಿಯನ್ನು ಬಯಸುವದೆ ?


ತಪ್ಪು ತಪ್ಪು...


ಇದು ಅನಾಚಾರ.. ಅತ್ಯಾಚಾರ...! "


ಉತ್ತರ ಕೊಡಲು ಕಂಪಿಸಿದ .. 

ಬಡಬಡಸಿದ ... 

ಅವನನ್ನೇ ದಿಟ್ಟಿಸಿದೆ ... 


 ಬಲು ಮುದ್ದು ಈ ಚಂದಿರ  !


"ಚಂದಿರಾ...

ಅನಾಚಾರ ಎನ್ನುತ್ತೀಯಲ್ಲ... 

"ಆಚಾರ" ಎನ್ನುವ ಶಬ್ಧ "ಚರ"ದಿಂದ ಬಂದಿದ್ದು..

ಚರ ಎಂದರೆ ನಡೆ... 

ನಮ್ಮ ನಡೆ ... 


ನಮಗೆ ಬೇಕಾದದ್ದು ಆಚಾರ..

ಬೇಡವಾದದ್ದು ಅನಾಚಾರ.. 
ಅತ್ಯಾಚಾರ ...

ಇಷ್ಟಕ್ಕೂ

ಅನಾಚಾರ..
ಅತ್ಯಾಚಾರ ನಿರ್ಣಯಿಸುವವರು ಯಾರು ?..."

"ಯಾರು ?"


" ನಾನು...

ಪ್ರಕೃತಿ ತಾನೆ ?

ನೀನು ಮಾಡುವ  ಆ" ಚರ"  ನನಗೆ ಅನಾಚಾರ ಅಲ್ಲ..


ಅದು ನನ್ನ ಪಾಲಿಗೆ ಆಚಾರ..


ಬಾರೋ.. ಬಾ.. 

ಆ ಚರವನ್ನು ಆಚರಿಸುವಾ.. ಬಾ.. "

ಚಂದಿರ ಚಲಿಸಲಿಲ್ಲ... 


"ನೀನು 

ಈ ತೋಟದ ಬೇಲಿಯೊಳಗಿನ ಹೂವು .. 

ಈ ಕ್ಷೇತ್ರ ನನ್ನದಲ್ಲ...


ನನ್ನದಲ್ಲದ್ದನ್ನು  ಬಯಸುವದು ತಪ್ಪು..


ಇದು ನಿಜ ಅರ್ಥದಲ್ಲೂ ಅತ್ಯಾಚಾರವೇ  ಸರಿ..."


ನನಗೆ ನಗು ಬಂತು...


ಪುಕ್ಕಲು ಗಂಡಸಿನ ಬಾಯಲ್ಲಿ  

ನೀತಿ
ನಿಯತ್ತಿನ ಮಾತು..!

"ಚಂದಿರಾ...


ಬಿಸಿಯಾದ ಭೂಮಿಗೆ

ಹನಿ ಬಿದ್ದು ತಂಪಾಗುತ್ತದೆ...

ಅಲ್ಲೇ ಇದ್ದ ಬೀಜ 

ಮೊಳಕೆಯೊಡೆದು ಹಸಿರಾಗುತ್ತದೆ..

ಈ 

ಜಗತ್ತಿನ ಈ ಕಾಡನ್ನೆಲ್ಲ ನೀನು ಬೆಳೆಸಿದ್ದಾ ?

" ಸೃಷ್ಟಿ" ಪ್ರಕೃತಿಯ ಸಹಜ ಗುಣ...


ಇದರಲ್ಲಿ ನಿನ್ನ ಪುರುಷಾರ್ಥವೇನೂ ಇಲ್ಲ...


ಕ್ಷೇತ್ರವೇ ಬೀಜ ಬಿತ್ತಲು ಕರೆಯುವಾಗ

ನಿರಾಕರಿಸುವದು  ... 
ಇಂದಿನ ಕಾಲ ಧರ್ಮದಲ್ಲಿ ತಪ್ಪಾಗುತ್ತದೆ...

ಬಾ.. ಚಂದಿರಾ.."


ಚಂದಿರ ಬರಲಿಲ್ಲ...

ಮೊಂಡು ಹಟ ಮಾಡುತ್ತ ದೂರವೇ ಇದ್ದ...

"ಈ ಅತ್ಯಾಚಾರಕ್ಕೆ..

ಅನಾಚಾರಕ್ಕೆ 
ಮನಸ್ಸು ಒಪ್ಪುತ್ತಿಲ್ಲ..."

ನನ್ನ ದಹಿಸುವ ಆಸೆ ಹೆಚ್ಚಾಯಿತು...


ಸೃಷ್ಟಿ ಕರ್ತ ಬ್ರಹ್ಮ ನನ್ನ ಅಜ್ಜ..

ಅಜ್ಜ ಸಿಕ್ಕಾಗ ಇದನ್ನೊಮ್ಮೆ ಕೇಳಿಬಿಡಬೇಕು...

ಪ್ರಕೃತಿಗೂ

ಪುರುಷನ ಮೇಲೆ ... 
ಅತ್ಯಾಚಾರ ಎಸಗುವ ಅವಕಾಶ ಇರಬೇಕು.. 

ಹಾಗಿದ್ದಲ್ಲಿ 

ನಾನೇ ಮೊದಲ ಅತ್ಯಾಚಾರಿಣಿಯಾಗುತ್ತಿದ್ದೆ .. 

ಚಂದವಿದ್ದವರು 

ಯಾಕಾದರೂ ಹೆದರುತ್ತಾರೊ.. ಗೊತ್ತಿಲ್ಲ...!

ಈ ಹೇಡಿ ಚಂದಿರನಿಗೆ ಉತ್ತರ ಕೊಡಬೇಕಿತ್ತು...


"ಚಂದ್ರಮಾ...

ಎಂಥಹ ಅತ್ಯಾಚಾರ..
ಎಲ್ಲಿಯ ಅನಾಚಾರ ?

ದಿನಾಲೂ

ಊಟ ಮಾಡುವಾಗ 
ನನ್ನ 
ಸರಿದ ಸೆರಗಿನ ಅಂಚನ್ನು ನೀನು ಆಸ್ವಾದಿಸುವದು ನನಗೆ ಗೊತ್ತಿಲ್ಲ ಅಂದುಕೊಂಡೆಯಾ ?

ನಿನಗೆ ನೀನೇ 

ನಿನ್ನ ಮೇಲೆ 
ಎಷ್ಟು ಬಾರಿ ಅತ್ಯಾಚಾರ ಮಾಡಿಕೊಳ್ಳುತ್ತಿದ್ದೀಯಾ ಗೊತ್ತಾ ?

ಅಸಹಜದ 

ನೀತಿಯ ಗೋಡೆಯನ್ನು  ಕಟ್ಟಿಕೊಳ್ಳುತ್ತೀಯಾ...

ನೀನೆ ಒಡೆದುಕೊಳ್ಳುತ್ತೀಯಾ...


ನೀನು ಮಾಡುತ್ತಿರುವದು  

ಅನಾಚಾರ..
ಇದು ಅತ್ಯಾಚಾರ..."

ಚಂದಿರ ತಗ್ಗಿಸಿದ ತಲೆ ಎತ್ತಲಿಲ್ಲ... 


"ಚಂದಿರಾ... 

ಅತ್ಯಾಚಾರವೆಂದರೆ ಮಾನಸಿಕವೂ ಹೌದು...

ಗಂಡಸು 

ಹೆಣ್ಣಿನ ಮೇಲೆ ದೈಹಿಕ ಅತ್ಯಾಚಾರ ನಡೆಸಿದರೆ ... .

ಗಂಡು ತನ್ನ ಮೇಲೆ 

ತಾನೇ ಮಾನಸಿಕ ಅತ್ಯಾಚಾರ ಮಾಡಿಕೊಳ್ಳುತ್ತಿರುತ್ತಾನೆ...

ಎಲವೊ ಪುರುಷಾ...  !


ಮೊದಲಿಗೆ 

ನೀನು 
ನಿನ್ನ ಮೇಲೆ ಮಾಡಿಕೊಳ್ಳುತ್ತಿರುವ 
ಅತ್ಯಾಚಾರವನ್ನು ನಿಲ್ಲಿಸಿಕೊ.. 

ಚಂದಿರಾ.. 

ಅನ್ನ ಬೆಳೆಯಲು.. 
ಭತ್ತ  
ಬೆಳೆಯಲು ಹೊಲವನ್ನು ಊಳುತ್ತೀಯಲ್ಲ... 

ಅದು ಅತ್ಯಾಚಾರವಲ್ಲವಾ ?"


ಚಂದಿರ 

ಇನ್ನೂ ದೂರವೇ ನಿಂತಿದ್ದ...
ಕಂಪಿಸುವ ಧ್ವನಿಯಲ್ಲಿ ಮಾತನಾಡಿದ...

" ಬೇಡ.. ಬೇಡ..

ನಿನ್ನ ಪತಿ ಸಪ್ತ ಋಷಿಗಳಲ್ಲಿ ಒಬ್ಬ...

ಬದುಕಿನಲ್ಲಿ  ಪಾರಮಾರ್ಥಿಕತೆಯನ್ನು ಕಾಣುವವರು..."


ನನಗೆ ಕೋಪ ತಡೆಯಲಾಗಲಿಲ್ಲ..


ದಹಿಸುವ ಆಸೆ...! 


ಕಂಪಿಸ ತೊಡಗಿದೆ...


"ಚಂದಿರಾ...

ನಾನು ಹೆಣ್ಣು...

ಸಿಕ್ಕಿದ 

ಬದುಕನ್ನು 
ಬದುಕುವದಷ್ಟೇ ನನಗೆ ಗೊತ್ತು...

ಸಾವು..

ಸಾವಿನಾಚೆಯ ಪಾರಮಾರ್ಥಿಕತೆ ನನಗೆ ಬೇಕಿಲ್ಲ...

ಬದುಕಿನ .. 

ಸಾವಿನಾಚೆಯ ತತ್ವ ಬೋಧಿಸುವ 
ಈ ಸಪ್ತ ಋಷಿಗಳಲ್ಲಿ ... 
ಸನ್ಯಾಸಿಗಳಲ್ಲಿ 
ಒಬ್ಬರಾದರೂ ಹೆಣ್ಣು ಇದ್ದಾಳೆಯೇ ?

ಬದುಕಿನ ಸ್ವಾರಸ್ಯ ಬಿಟ್ಟು 

ಸನ್ಯಾಸಿಯಾದ 
ಒಬ್ಬಳಾದರೂ ಹೆಣ್ಣನ್ನು ತೋರಿಸು...

ಜಗತ್ತಿನ ಎಲ್ಲ ತತ್ವ ಶಾಸ್ತ್ರ..

ನೀತಿ 
ಧರ್ಮವನ್ನು ಬೋಧಿಸಿದವ ಪುರುಷ,...

ಪುರುಷ ಜಾತಿಗೆ ಬೇಕಾದಂತೆ  ಜಾತಿ 

ಮತಗಳನ್ನು ಸ್ಥಾಪಿಸಿದವ ಪುರುಷ.. !

ಸಿಕ್ಕಿದ 

ಬದುಕನ್ನು ಬಿಟ್ಟು
ಸಾವಿನಾಚೆಯ ಸುಖವನ್ನು ಹುಡುಕುವದು ಗಂಡು..

ಪುರುಷನ ಪುರುಷಾರ್ಥ ಇಷ್ಟೇ...


ಇದು ಸಹಜ ಅಲ್ಲ..."


ಚಂದಿರ ಮುಖ ಬಾಡಿಸಿದ..


"ತಾರೆ...

ಇದು ನಿಜ...

ನನಗೆ ನಿನ್ನ ಮೇಲೆ ಆಸೆ ಇದೆ...


ಆದರೆ ..... 

ಬೃಹಸ್ಪತಿ ಶಕ್ತಿ ಶಾಲಿ...

ದೇವತೆಗಳ ಗುರು... !


ಶಾಪ ಕೊಟ್ಟರೆ ನಾನೆಲ್ಲಿ ಹೋಗಲಿ ?.. ".. 


ಅಂತೂ 

ಈ ಚಂದಿರ ತನ್ನ ನಿಜವಾದ ಬಣ್ಣವನ್ನು ತೋರಿಸಿದ.. ...

ಅವನನ್ನು ಹಿಡಿದು ಬಿಗಿದಪ್ಪಿದೆ... 

ಮುದ್ದಿಸಿದೆ.. 

ಅವನ ಎದೆಗೊರಗಿ ಉಸುರಿದೆ... 


" ಚಂದಿರಾ

ನಿನಗೆ ಹೇಗಿದ್ದರೂ ಶಾಪ ತಪ್ಪಿದ್ದಲ್ಲ....

ನನ್ನನ್ನು ಅನುಭವಿಸಿದರೆ 

ನನ್ನ ಗಂಡ ನಿನ್ನನ್ನು ಶಪಿಸದೆ ಬಿಡುವದಿಲ್ಲ... 

ನನ್ನನ್ನು

ನಿರಾಕರಿಸಿದರೆ ನಾನು ಶಾಪ ಕೊಡುವೆ...!

ಪ್ರಕೃತಿ ಅಬಲೆಯಲ್ಲ... 


ಚಂದ್ರಮಾ..


ಪುರುಷ ಹೇಗಿದ್ದರೂ ಶಾಪಗ್ರಸ್ಥ... !


ಪುರುಷ... 

ಪ್ರಕೃತಿ ನಾಶದ ಮೂಲ ..

ಏನೂ ಮಾಡದೆ ... 

ವಿನಾಕಾರಣ 
ಯಾಕೆ ಶಾಪ ತೆಗೆದುಕೊಳ್ಳುತ್ತೀಯಾ?

ನನ್ನನ್ನು  ಅನುಭವಿಸಿ ..

ಸುಖಿಸಿ... 
ಶಾಪ ತೆಗೆದು ಕೊ.."

ನನ್ನ ಅಪ್ಪುಗೆಯನ್ನು ಬಿಗಿಗೊಳಿಸಿದೆ...


ನನಗೆ ಗೊತ್ತು 

ಚಂದಿರನಿಗೆ ಬೇರೆ ದಾರಿ ಇಲ್ಲ... 

ಚಂದಿರನೂ  ಅಪ್ಪಿದ.. 


ಇದು

ಪ್ರೀತಿಯೋ...
ಕಾಮವೋ...!

ಎಲ್ಲವೂ ಅಪ್ಪುಗೆಯಲ್ಲಿ ಗೊತ್ತಾಗಿಬಿಡುತ್ತದೆ...


ಒಪ್ಪಿದ ಮೇಲೆ  ಪ್ರೇಮವೇನು ..  ?

ಕಾಮವೂ ಚಂದ..... !




(ಚಂದದ  ಪ್ರತಿಕ್ರಿಯೆಗಳಿವೆ... 
ದಯವಿಟ್ಟು ನೋಡಿ ...)

Friday, June 13, 2014

ಮಥನ

ಬಹಳಷ್ಟು ಬಾರಿ ...
ನನ್ನನ್ನೇ ನಾನು ಕೇಳಿಕೊಂಡಿದ್ದಿದೆ.... 

"ನನ್ನ
ಬದುಕಿನಲ್ಲೇ ಯಾಕೆ ಹೀಗಾಗುತ್ತದೆ ?.."

ಇದೀಗ
ಅವನಿಂದ ಸಂದೇಶ ಬಂದಿದೆ....

"ಇಂದು ರಾತ್ರಿ ನನ್ನ ಬಳಿ ಬಾ...."

ಮೊದಲ ಬಾರಿ 
ನಾನಾಗಿಯೇ ಅವನ ಬಳಿ ಅನಿವಾರ್ಯವಾಗಿ ಹೋಗಿದ್ದೆ...

ಆದರೆ ಈಗ ಹಾಗಲ್ಲವಲ್ಲ...

ಅವನಿಗಾಗಿ
ಬಯಸಿ...
ಎದೆಯಲ್ಲಿ ಪ್ರೀತಿಯ ಹೂ ಹೊತ್ತು ಹೋಗುತ್ತಿರುವೆ....

ನಾನು "ತಾರೆ..."
ಕಿಷ್ಕೆಂದೆಯ ವಾಲಿಯ ಮಡದಿಯಾಗಿದ್ದವಳು...

ವಾಲಿ 
ನಿಮಗೆಲ್ಲ ಗೊತ್ತಲ್ಲ...
ಮಹಾ ಶಕ್ತಿಶಾಲಿ....

ಹಿಂದೆ
ಸಮುದ್ರ ಮಥನವಾಗುತ್ತಿದ್ದಾಗ ಅಲ್ಲಿ ಬಂದಿದ್ದ...

ರಾಕ್ಷಸರೂ..
ದೇವತೆಗಳು ಸಮುದ್ರ ಮಥನ ಮಾಡುತ್ತಿದ್ದಾಗ ಅವರಿಗೆ ದಣಿವಾಗಿದ್ದಾಗ
ವಾಲಿ ಅಲ್ಲಿದ್ದನಂತೆ..

ತಾನೊಬ್ಬನೇ 
ವಾಸುಕಿಯನ್ನು ಎರಡೂ ಕಡೆ ಎಳೆದು...
ಕಡೆದು 
ಮಥನ ಮಾಡಿದ್ದನಂತೆ..

ಅಂಥಹ " ಮಥನದ "  ಸಂದರ್ಭದಲ್ಲಿ ನಾನು ಹುಟ್ಟಿದ್ದು....

ಆಗ... 
ಅಲ್ಲಿರುವ ರಾಕ್ಷಸರು... 
ದೇವತೆಗಳು 
ನನ್ನನ್ನು ಆಸೆಯಿಂದ ನೋಡುವಂಥಹ ಸಂದರ್ಭದಲ್ಲಿ... 

ವಾಲಿ  ನನ್ನನ್ನು ಕಂಡು ...
ಮೋಹಿತನಾಗಿ...
ಎಲ್ಲ ದೇವತೆಗಳ ಸಮ್ಮುಖದಲ್ಲಿ ಬಹಳ ಸೊಕ್ಕಿನಿಂದ ಹೇಳಿದ್ದ...

"ಇವಳು ನನ್ನವಳು....
ಇವಳನ್ನು ನಾನು ಮದುವೆಯಾಗುತ್ತೇನೆ..."

ಅಲ್ಲಿದ್ದ 
ಯಾವ ರಾಕ್ಷರೂ..
ದೇವತೆಗಳೂ ತುಟಿ ಬಿಚ್ಚಲಿಲ್ಲವಾಗಿತ್ತು...

ಜವಬ್ದಾರಿ...
ಪರಿಶ್ರಮದ.. ಕೆಲಸ ..
ತಾಕತ್ತು...
ಅಧಿಕಾರವನ್ನು ಸಹಜವಾಗಿ ಕೊಡುತ್ತವೆ....

ನಾನು ಹೆಣ್ಣಲ್ಲವೆ... ?
ನನ್ನ
ಇಷ್ಟ.. ಕಷ್ಟಗಳನ್ನು ಯಾರೂ ಅಲ್ಲಿ ಕೇಳಲೇ ಇಲ್ಲ..... !

ಶಕ್ತಿಯ ಮೇಲೆ ... 
ಸೊಕ್ಕಿರುವ  ಗಂಡಸು 
ಹೆಣ್ಣನ್ನು... 
ಪ್ರಕೃತಿಯನ್ನು ಪ್ರೀತಿಸಲಾರ... 

ಅಧಿಕಾರದ ದರ್ಪವನ್ನು ಮಾತ್ರ ತೋರಿಸಬಲ್ಲ... 

ನಾನು ವಾಲಿಯ ಮಡದಿಯಾದೆ....
ಕಿಷ್ಕಿಂದೆಯ
ಪಟ್ಟದ ರಾಣಿಯಾದೆ...

ಮುಂದಿನ ವಿಷಯ ನಿಮಗೆ ಗೊತ್ತಲ್ಲ...

ವಾಲಿ
ಸುಗ್ರೀವರಿಬ್ಬರೂ ಮಾಯಾವಿ ರಾಕ್ಷನನ್ನು ಕೊಲ್ಲಲು ಹೋಗಿದ್ದು...

ವಾಲಿ ಮಾಯಾವಿ ರಾಕ್ಷಸನಿಂದ ಸತ್ತು ಹೋದ ಅಂತ ಸುಗ್ರೀವ ವಾಪಸ್ಸು ಬಂದಿದ್ದು...


ಸುಗ್ರೀವ ರಾಜಾನಾದದ್ದು..


ನಾನು 
ಅವನ ಸಿಂಹಾಸನದ ಪಕ್ಕದಲ್ಲಿ ಹೋಗಿ ಕುಳಿತದ್ದು...

ಕೆಲವು ದಿನಗಳ ನಂತರ ವಾಲಿ ಬಂದು 
ಸುಗ್ರೀವನಿಗೆ ಚೆನ್ನಾಗಿ ಹೊಡೆದು..
ಬಡಿದು ಕಾಡಿಗೆ ಅಟ್ಟಿದ್ದು...

ಸುಗ್ರೀವನ ಹೆಂಡತಿ "ರುಮೆಯನ್ನು" ತಾನು ಇಟ್ಟುಕೊಂಡಿದ್ದು...


ಶ್ರೀರಾಮ ಬಂದು..

ಮರೆಯಿಂದ ಬಾಣ ಹೊಡೆದು ವಾಲಿಯನ್ನು ಸಾಯಿಸಿದ್ದು....

ಇದು
ನಿನ್ನೆಯವರೆಗಿನ ಕಥೆ....

ಇಂದು
ಮತ್ತೆ ಸುಗ್ರೀವನಿಗೆ ಪಟ್ಟಾಭಿಷೇಕ..!

ವಾಲಿ
ಸತ್ತಿದ್ದಾನೆಂದು ದುಃಖಪಡಬೇಕೊ..?

ಸುಗ್ರೀವ ಮತ್ತೆ ಬಂದಿದ್ದಾನೆಂದು ಖುಷಿಪಡಬೇಕೊ ...!


ನನ್ನ
ಅಂತರಂಗವನ್ನು..
ನನ್ನ ಭಾವನೆಯನ್ನು ಕೇಳುವರ್ಯಾರು ?

ಈ ಗಂಡಸರಿಗೆ ನಾಚಿಕೆ ಇಲ್ಲ....

ಶಾಸ್ತ್ರ ಸಮ್ಮತವಾಗಿ..
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದ ರುಮೆಯನ್ನು ಬಿಟ್ಟು...
ನನಗೆ ಬಾ ಎಂದಿದ್ದಾನೆ...

ನನ್ನ
ಮೊದಲ ಮದುವೆಯಲ್ಲೂ ಇಷ್ಟು ಸಂಭ್ರಮ ನನಗಾಗಿರಲಿಲ್ಲ...

ಸುಗ್ರೀವನ 
ಅಂತಃಪುರದ ಬಾಗಿಲು ತೆರೆದು ಒಳಗೆ ಪ್ರವೇಶಿಸುವಾಗ
ನನ್ನ ಕೈಯೆಲ್ಲ ಬೆವರಿತ್ತು....

ಈ ಸುಗ್ರೀವ ನನಗೆ ಹೊಸಬನೇನಲ್ಲ....

ಆದರೆ

ಇಂಥಹ ... 
ಪ್ರತಿಬಾರಿಯ ಸಂದರ್ಭ ಹಾಗಾಗಿಬಿಡುತ್ತದೆ... .... 

ಅಗಲಿಕೆ ಇದೆಯಲ್ಲ...
ಬಾಂಧವ್ಯವನ್ನು..
ಸಂಬಂಧದ ಬೆಸುಗೆಯನ್ನು ಬಲವಾಗಿ ಹೊಸೆದುಬಿಡುತ್ತದೆ...

ಇಷ್ಟು ದಿನ
ವಾಲಿಯಬಳಿ ನರಳುವಾಗ ಸುಗ್ರೀವ ನೆನಪಾಗುತ್ತಿದ್ದ...

ಈಗ ಮತ್ತೆ ಸುಗ್ರೀವ ಸಿಕ್ಕಿದಾನೆ..

ವಾಲಿಯ ಯಾವುದೇ ಆತಂಕವಿಲ್ಲದೆ....

ಸುಗ್ರೀವ ನನ್ನ ಕೈ ಹಿಡಿದು ಪಕ್ಕಕ್ಕೆ ಕುಳ್ಳಿರಿಸಿಕೊಂಡಾಗ ಮೈ ಜುಮ್ಮೆನ್ನುತ್ತಿತ್ತು....

ಸುಗ್ರೀವ ಯಾವಗಲೂ ಹಾಗೆ....

ಹೂವಿನಂಥವನು...

"ತಾರೆ...
ನನ್ನದು ಒಂದಷ್ಟು ಪ್ರಶ್ನೆಗಳಿವೆ...."

"ಇದೆನು ?
ಕೂಡುವಾಗ.. ಪ್ರಶ್ನೆಗಳೆ ?

ಸುಗ್ರೀವ ನನ್ನನ್ನೇ ದಿಟ್ಟಿಸುತ್ತಿದ್ದ...

"ಪ್ರಶ್ನೆಗಳು ... 
ಇರುವದಕ್ಕಾಗಿಯೆ 
ಕೂಡುವದು..
ಕಳೆಯುವದು ಹುಟ್ಟಿಕೊಂಡಿದೆ..."

ಇವ ಸೊಗಸಾದ ಮಾತುಗಾರ...
ನಾನು ನಕ್ಕುಬಿಟ್ಟೆ.... 

" ಇರು ಮಾರಾಯಾ...
ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು..."

ಸುಗ್ರೀವ
ತನ್ನ ಬೆರಳುಗಳುಗಳಿಂದ ನನ್ನ ಕಿವಿ ಬಳಿ ಕಚಗುಳಿ ಇಡುತ್ತಿದ್ದ...
ನನ್ನನ್ನು ಬಳಸಿ ಕೇಳಿದ.... 

"ಏನು ...?"

"ಅಣ್ಣನ ಮಡದಿಯಾಗಿದ್ದಾಗ ... 
ನೀನು 
ನನ್ನ ಕಾಲುಂಗುರ ನೋಡುತ್ತಿದ್ದೆ.....

ಈಗ 
ನನ್ನೆದೆಯ  ಬಂಗಾರದ ಸರಗಳನ್ನು ಕಣ್ಣ್ಮುಚ್ಚದೆ ನೋಡುತ್ತೀಯಾ... 
ಸೊಂಟದ ಪಟ್ಟಿಗೆ ಕೈ ಹಾಕುತ್ತೀಯಾ.. ?

ಏನಿದು

ಸಂಬಂಧ... ಬಾಂಧವ್ಯಗಳ ಅರ್ಥ ?

ದೇಹ.. ಮನಸ್ಸು.. 
ಬಯಕೆ ... 
ಆಸೆಗಳು ... 
ಸಂಬಂಧ...   ಇವುಗಳ ನಡುವಿನ ಪರಿಧಿ  ಏನು   ?  "

ಸುಗ್ರೀವ ತನ್ನ ಕೈ ಸಡಿಲಿಸಿದ... 
ದೂರ ಕುಳಿತ...

ಸ್ವಲ್ಪ ಹೊತ್ತು ಸುಮ್ಮನಿದ್ದ...

"ದೇಹವಾಗಲಿ.. 
ಮನಸ್ಸಾಗಲಿ .... 
ಸಿಕ್ಕಿದ "ಸಂದರ್ಭವನ್ನು" ಬೇಡವೆನ್ನುವದಿಲ್ಲ..   

ದೇಹ... 
ಮನಸ್ಸು... ಆಸೆಗಳಿಗಾಗಿಯೇ ಹಂಬಲಿಸುತ್ತವೆ... 
ಬದುಕುತ್ತವೆ.... 

ಬೇಡವೆನ್ನುವದು ಶಿಷ್ಟಾಚಾರ... 

ಸರಿ... ತಪ್ಪುಗಳು  .. ಮನಃಸಾಕ್ಷಿಗೆ ಬಿಟ್ಟಿದ್ದು.... 

ನಮ್ಮ 
ಈ ವರ್ತಮಾನದಲ್ಲಿ "ವಿಧವೆ" ... 
ಅತ್ತಿಗೆಗೆ ಬಾಳು ಕೊಡುವದು ತಪ್ಪಲ್ಲ...

ಅದು ಶಾಸ್ತ್ರ ಸಮ್ಮತ...


ಈಗ.... 

ನಿನ್ನ ಅಂತರಂಗವನ್ನು ಕೇಳಿಕೊ...

ಅಂದು

ಸಿಂಹಾಸನದಲ್ಲಿ 
ನಾನು ನನ್ನ ಮಡದಿ 
ರುಮೆಯೊಡನೆ ಕುಳಿತಿರುವಾಗ
ಮೊದಲಿಗೆ ನೀನಾಗಿಯೆ ಬಂದು ಕುಳಿತುಕೊಂಡೆ...

ನಾನು ಕರೆದಿರಲಿಲ್ಲ...


ಆಗ ನಿನಗೇನು ಅನ್ನಿಸಲಿಲ್ಲವಾ?


ಮೈದುನ.. 

ಅತ್ತಿಗೆ .. ಸಂಬಂಧ ಅಂತ..?... "

ನಾನು ಸಣ್ಣದಾಗಿ ಬೆವರುತ್ತಿದ್ದೆ... 

ನನ್ನ 
ಧ್ವನಿ ಕಂಪಿಸುತ್ತಿತ್ತು.... 


"ಅಂದು ..... 
ನಾನು ಹೆಣ್ಣಾಗಿ ನಿನ್ನ ಬಳಿ ಬರಲಿಲ್ಲ..

ನನ್ನ ಮಗ "ಅಂಗದನ" ಭವಿಷ್ಯಕ್ಕಾಗಿ..

ಒಬ್ಬ ತಾಯಿಯಾಗಿ ಬಂದೆ...

ಒಂದು 

ಹೆಣ್ಣಿಗೆ ಹಿಂದೆ ಮುಂದೆ ಯೋಚಿಸಬೇಕಾಗುತ್ತದೆ ..

ಒಬ್ಬ  ತಾಯಿಗೆ... 
ಮಗ ಮತ್ತು ಅವನ ಭವಿಷ್ಯ ಮಾತ್ರ ಕಾಣುತ್ತದೆ.."

ಸುಗ್ರೀವ  ಪಕ ಪಕನೆ ನಗುತ್ತಿದ್ದ....
ಮತ್ತೆ ಹತ್ತಿರ ಬಂದ....

"ತಾರೆ...
"ಮೈದುನ" ಎನ್ನುವ ಶಬ್ಧ ..... 

"ಮೈಥುನ"ದಿಂದ ಹುಟ್ಟಿರಬಹುದಾ ?"

ನನಗೆ ನಾಚಿಕೆಯಾಯಿತು....
ಸುಗ್ರೀವನನ್ನು ತಬ್ಬಿಕೊಂಡೆ...

ತನ್ನದಲ್ಲದ್ದು..
ಇದೀಗ ತನ್ನದ್ದಾಗಿದೆ....

ಮೈ ಹಿತವಾಗಿ ಕಂಪಿಸುತ್ತಿತ್ತು... ಕಣ್ಮುಚ್ಚಿದೆ..


ಸುಗ್ರೀವ ಮೆಲ್ಲಗೆ ಕಣ್ಣು ಬಿಡಿಸಿದ...


"ಈಗ ಹೇಳು...
ನನ್ನಣ್ಣ ಜಗಜಟ್ಟಿ...
ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಿಲ್ಲವಾಗಿತ್ತು...

ನಾನು ತೀರಾ ಸಾಮಾನ್ಯದವ..


ನನಗೂ..

ವಾಲಿಗೂ ಹೇಗೆ ಹೋಲಿಕೆ ? 
ಏನನ್ನಿಸುತ್ತದೆ ?.."

ನನಗೆ ಕೋಪವುಕ್ಕಿತು.. ಸುಗ್ರೀವನನ್ನು ದೂಡಿದೆ...

"ರುಮೇಯನ್ನೂ..
ನನ್ನನ್ನೂ ನೋಡಿದ್ದೀಯಾ... ನಿನಗೇನನ್ನಿಸುತ್ತದೆ ?

ಇಂದು 

ರುಮೆಯನ್ನು ಬಿಟ್ಟು ನನ್ನನ್ನು ಕರೆದಿದ್ದೀಯಾ ? 

ಯಾಕೆ ? "

ಸುಗ್ರೀವ ಮತ್ತೂ ಬಿಗಿಯಾಗಿ ತಬ್ಬಿಕೊಂಡ...
ಕಿವಿಯಲ್ಲಿ ಉಸುರಿದ..

"ಅಕ್ರಮವಾಗಿ 
ಸಿಗುವದು ರೋಮಾಂಚಕಾರಿಯಾಗಿರುತ್ತದೆ..

ಈಗ ನೀನು ಹೇಳು ... 

ನನ್ನಣ್ಣನ ತಾಕತ್ತಿನ ನಿನ್ನ ಅನುಭವ..."

ಈಗ ನಾಚಿಕೆಯಾಗಲಿಲ್ಲ... 

ಆದರೆ 
ಸುಗ್ರೀವನ ಮುಖ ನೋಡಲಾಗಲಿಲ್ಲ... 

"ಸುಗ್ರೀವಾ... 
ನಿನ್ನ ಅಣ್ಣನಿಗೆ ಒಂದು ವರವಿತ್ತು ಗೊತ್ತಿದೆಯಲ್ಲ ?

ಆತ 

ಯಾರ ಸಂಗಡ ಕುಸ್ತಿಯನ್ನಾಗಲಿ..
ಯುದ್ಧವನ್ನಾಗಲಿ ಮಾಡುವಾಗ..
ಎದುರಾಳಿಯ ಅರ್ಧ ಬಲ ಅವನಿಗೆ ಸಿಗುತ್ತಿತ್ತು...

ಅವನನ್ನು ಸೋಲಿಸಲು 

ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ... ..."

ಸುಗ್ರೀವ ಹುಬ್ಬೇರಿಸಿದ

"ಏನು ಇದರ ಅರ್ಥ ?"

"ನಿನ್ನಣ್ಣ...
ಮಡದಿಯೊಡನೆಯ ದಾಂಪತ್ಯ ಪ್ರೀತಿಯನ್ನೂ ..
ಕುಸ್ತಿ.. 
ಹೊಡದಾಟ ಅಂತಲೇ ತಿಳಿದುಕೊಂಡಿದ್ದ...

ನನಗೆ  ಪ್ರತಿ ದಿನ ರಾತ್ರಿ ... 
ಕುಸ್ತಿಯಾಡಿ ಸೋತ ಅನುಭವ...
ಮೈಕೈ ನೋವು.... "

ಸುಗ್ರೀವ ನನ್ನ ಕಣ್ಣುಗಳನ್ನೇ ದಿಟ್ಟಿಸಿದ..

"ದಾಂಪತ್ಯಕ್ಕೆ ಶಕ್ತಿ ಬೇಕಿಲ್ಲವೆ ?..."

ನನಗೆ ನಗು ತಡೆಯಲಾಗಲಿಲ್ಲ...

ಕಣ್ಮುಚ್ಚಿ ನಕ್ಕು ಬಿಟ್ಟೆ...


"ಸುಗ್ರೀವಾ...

ಹೂ ಅರಳಲು... 

ಯಾವುದೇ ತಾಕತ್ತು ಬೇಕಿಲ್ಲ...

ಸೂರ್ಯನ

ಮೃದು ಕಿರಣ .... 
ಹಿತವಾಗಿ ಚುಂಬಿಸಿದರೆ ಸಾಕು...

ಹೂ ಅರಳಿ ನಕ್ಕು ಬಿಡುತ್ತದೆ...."


ಸುಗ್ರೀವ
ಕೆಲ ಹೊತ್ತು ಮೌನವಾದ....

ಕಿವಿಯಲ್ಲಿ ಪಿಸುಗುಟ್ಟಿದ...

"ಪಾಪ !
ನನ್ನ ರುಮೆ...

ಅವಳು ನಿನ್ನಷ್ಟು ಬಲಶಾಲಿಯಲ್ಲ...


ಹೂವಿನಂತವಳು... "

ನಾನು ತಡಮಾಡಲಿಲ್ಲ...

ನಮ್ಮಿಬ್ಬರ ಏಕಾಂತದಲ್ಲಿ ಮಾತಿನದೇನು ಗಲಾಟೆ ?


ಮೆಲ್ಲಗೆ  
ದೀಪವಾರಿಸಿದೆ...


(ದಯವಿಟ್ಟು ಪ್ರತಿಕ್ರಿಯೆಗಳನ್ನೂ  ಓದಿ...)