ಎಲ್ಲವೂ ಸರಿ ಇದ್ದು...
ಸಂತೋಷ.. ನಗು ಜಾಸ್ತಿಯಾದಾಗ ...
ನನಗೆ ಒಳಗೊಳಗೆ ಸಣ್ಣ ಆತಂಕ ಶುರುವಾಗುತ್ತದೆ..
ಅದು ನನ್ನ ಪುಸ್ತಕ ಬಿಡುಗಡೆಯ ದಿನಗಳು..
ಸಂತೋಷ.. ಸಡಗರ.. ಸಂಭ್ರಮ...!
ರಾತ್ರಿ ಸರಿಯಾಗಿ ನಿದ್ದೆ ಕೂಡ ಬರುವದಿಲ್ಲವಾಗಿತ್ತು..
ಕಾರ್ಯಕ್ರಮವೆಲ್ಲ ಹೇಗಾಗಬಹುದು ಎನ್ನುವ ಆತಂಕ..!
ರಾತ್ರಿ ಸುಮಾರು ಒಂದು ಗಂಟೆ...
ಫೋನ್.. !!
ನೋಡಿದೆ.. ನಾಗು ಮನೆಯಿಂದ.. !!
ಲಗುಬಗೆಯಿಂದ. .. ಕಾಲ್ ತೆಗೆದು ಕೊಂಡೆ..
ನಾಗು ಹೆಂಡತಿ... ಅಳುತ್ತಿದ್ದಳು..!
"ಪ್ರಕಾಶು ಭಾವ..
ಇವರಿಗೆ ಹಾರ್ಟ್ ಎಟಾಕ್ ಆಗಿದೆ..ಜಲ್ದಿ ಬಾ..!!.."
ನನಗೆ ಗಾಭರಿಯಾಯಿತು..!!
"ಬರ್ತೀನಿ..
ಹೆದರ ಬೇಡ.. ಅಂಬ್ಯುಲೆನ್ಸ್ ಕಳಿಸ್ತೀನಿ..
ನಾನು ಬರುವತನಕ ಕಾಯಬೇಡಿ.. "
ಎಂದು ಲಗುಬಗೆಯಿಂದ ಫೋನ್ ಡೈರಕ್ಟರಿ ತಡಕಾಡಿ ...
ಅಂಬ್ಯುಲೆನ್ಸ್ ಗೊತ್ತು ಮಾಡಿದೆ...!
ನನಗೆ ದಿಕ್ಕು ತೋಚದಂತಾಯಿತು.. ದಿಗ್ಮೂಢನಾಗಿ ಕುಳಿತೆ...
"ನೀವು ಒಬ್ಬರೆ ಹೋಗುವದು ಬೇಡ.. ನಾನು ಬರ್ತೀನಿ.."
ನನ್ನಾಕೆ ಅಂದಳು..
ಬಹುಶಃ ನಾನು ಅಧೀರನಾಗಬಹುದು ಅಂತ..
"ಬೇಡ..
ಈ ಅಪರಾತ್ರಿಯಲ್ಲಿ ನೀನು ಬರುವದು ಬೇಡ..
ನಾನು ಹೋಗ್ತೀನಿ.. ಚಿಂತೆ ಬೇಡ..
ಅಲ್ಲಿ ಹೋದ ಮೇಲೆ ಫೋನ್ ಮಾಡ್ತೇನೆ.."
ಹಾಗೆ ಎದ್ದು ಹೊರಟೆ..
"ಕ್ಯಾಷ್.. ಲೈಸನ್ಸ್, ಮೊಬೈಲ್.. ತಗೊಳ್ಳಿ..."
ನನ್ನಾಕೆ ಬ್ಯಾಗ್ ಕೊಟ್ಟಳು.. ನಾನು ಹೊರಟೆ..
"ಕಾರ್ ಸ್ಪೀಡ್ ಬಿಡಬೇಡಿ... ನಾಗೂಗೆ ಏನೂ ಆಗುವದಿಲ್ಲ.."
ಅವಳು ನನ್ನ ಧೈರ್ಯಕ್ಕೆ ಹೇಳಿದ ಮಾತುಗಳು..
ನನಗೆ ಗೊತ್ತಾಗುತ್ತಿತ್ತು...
ನಾಗುವಿಗೆ ಹಾರ್ಟ್ ಎಟಾಕ್.. !!
ನಾನು.. !
ನನ್ನ ಗೆಳೆಯರು...!
ನಾವೆಲ್ಲ ಸಾಯುವ ದಿನಗಳು ಹತ್ತಿರ ಬಂದುಬಿಟ್ಟೀತಾ..?
ಇಷ್ಟು ಬೇಗ....?
ಅವನ ಸಾವು ನಾನು ನೋಡಬೇಕಾ..?
ಕಣ್ಣೆಲ್ಲ ಮಂಜಾದವು.. ಕಾರನ್ನು ಪಕ್ಕಕ್ಕೆ ಹಾಕಿಕೊಂಡೆ..
ಸ್ವಲ್ಪ ಹೊತ್ತಿನ ನಂತರ ಧೈರ್ಯ ತಂದುಕೊಂಡೆ..
ನನಗೆ ನಾನೇ ಸಮಾಧಾನ ಮಾಡಿಕೊಂಡೆ...
ಸಾವರಿಸಿಕೊಂಡೆ...
ನನ್ನ ನಾಗು ಇನ್ನೂ ಇದ್ದಾನೆ.. !
ಅವನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು...!
ಜಾಗ್ರತವಾದೆ...
ಹೆಚ್ಚಿಗೆ ತೊಂದರೆ ತೆಗೆದುಕೊಳ್ಳದೆ.. ನಾರಾಯಣ ಹೃದಯಾಲಯಕ್ಕೆ ಬಂದೆ...
ನನ್ನನ್ನು ನೋಡಿ ನಾಗುವಿನ ಮಡದಿ ಓಡೋಡಿ ಬಂದಳು...
" ಈಗ ಐಸಿಯೂ ದಲ್ಲಿಟ್ಟಿದ್ದಾರೆ... !
ಡಾಕ್ಟರ್ ಇನ್ನೂ ಹೊರಗೆ ಬಂದಿಲ್ಲ..."
ಬಿಕ್ಕಿ.. ಬಿಕ್ಕಿ ಅಳುತ್ತಿದ್ದಳು.....
ಅವಳಿಗೆ ಸಮಾಧಾನದ ಮಾತಾಡಿದೆ...
"ನಾಗುವಿಗೆ ಏನೂ ಆಗುವದಿಲ್ಲ...
ಧೈರ್ಯವಾಗಿರು...ದೇವರಿದ್ದಾನೆ.."
ಇಷ್ಟು ಹೇಳುವಾಗ ಗಂಟಲು ಉಬ್ಬಿ ಬಂತು..
ಮುಂದೆ ಹೇಳಲಾಗಲಿಲ್ಲ...
ಅಸಹಾಯಕ...
ಅಸಹನೀಯ ಕ್ಷಣಗಳು...!
ಹೇಗೆ?
ಏನು ಹೇಳಲಿ?
ಇವರಿಬ್ಬರ ಎಷ್ಟೊಂದು ನಗುವಿನಲ್ಲಿ...
ಖುಷಿಯ ಕ್ಷಣಗಳಲ್ಲಿ ನಾನು ಸಾಕ್ಷಿಯಾಗಿದ್ದೆ...!
ಇಬ್ಬರೂ ಸುಮ್ಮನೆ ಕುಳಿತೆವು....
ಮತ್ತೆ ಅವಳೇ ಮಾತು ಶುರುಮಾಡಿದಳು..
ಅವಳಿಗೆ ನನ್ನ ಮೇಲೆ ಅಪಾರ ಭರವಸೆ...
"ಭಾವ..
ಸಾಯಂಕಾಲ ಸರಿಯಾಗಿಯೇ ಇದ್ದರು..
ಊಟ ಚೆನ್ನಾಗಿಯೇ ಮಾಡಿದ್ದರು...
ಟಿವಿ ನೋಡುತ್ತ ಕುಳಿತ್ತಿದ್ದವರಿಗೆ ..
ಇದ್ದಕ್ಕಿದ್ದಂತೆ..ಮೈ ಬೆವರತೊಡಗಿತು.. !
ಎದೆ ನೋವು ಅಂತ ಹೇಳಿದರು...
ನನಗೆ ಗಾಭರಿಯಾಯಿತು.. ತಕ್ಷಣ ನಿನಗೆ ಫೋನ್ ಮಾಡಿದೆ..
ಇಲ್ಲಿಗೆ ಬರುತ್ತಿರುವಾಗಲೂ.. " ಪ್ರಕಾಶು ಬಂದನಾ?.." ಅಂತಿದ್ದರು..."
ನನಗೆ ನಾಗುವಿನ ಪ್ರೀತಿ ಕಣ್ಣಿಗೆ ಕಟ್ಟಿತು...
ನನಗೆ ಕಂಟ್ರೋಲ್ ಮಾಡಿಕೊಳ್ಳುವದು ಕಷ್ಟವಾಯಿತು....
ಇವಳ ಎದುರಿಗೆ ಅಳಬಾರದು...
ಮತ್ತಷ್ಟು ಧೈರ್ಯಗುಂದುತ್ತಾಳೆ..
ಎದ್ದು ನಿಂತೆ... ಹೊರಗಡೆ ಬಂದೆ...
ಪೆಟ್ಟಿಗೆ ಗಪ್ಪತಿ ನೆನಪಾದ.. !
ತಕ್ಷಣ ಫೋನ್ ಮಾಡಿದೆ..
ಸಮಯ ನಡು ರಾತ್ರಿ ಎರಡೂವರೆ....!
"ಛೇ.. ಈಗ ಮಾಡಬಾರದಿತ್ತು"
ಅಷ್ಟರಲ್ಲಿ ಕಾಲ್ ಮಾಡಿಯಾಗಿತ್ತು..
"ಏನು ಪ್ರಕಾಶು..? ಏನಾಯ್ತು ಇಷ್ಟು ಹೊತ್ತಿನಲ್ಲಿ..?.."
"ನೋಡೊ... ಗಪ್ಪತಿ..
ನಾರಾಯಣ ಹೃದಯಾಲಯಕ್ಕೆ ಜಲ್ದಿ ಬಾ..."
"ಯಾಕೋ..? !!"
"ನಾಗುವಿಗೆ ಹಾರ್ಟ್ ಎಟಾಕ್ ಆಗಿದೆ..
ಬಾ ಮಾರಾಯಾ...
ನನಗೊಬ್ಬನಿಗೆ ಏನೂ ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ.."
ಹೇಳುತ್ತಿರುವಂತೆ ದುಃಖ ಉಮ್ಮಳಿಸಿತು...
ಫೋನ್ ಕಾಲ್ ಕಟ್ ಮಾಡಿದೆ...
ನಾಗು...
ಅವನ ತುಂಟತನ... ಹುಚ್ಚು ಐಡಿಯಾಗಳು...
ಅವನ ಎಡವಟ್ಟುಗಳು...!
ನನಗೆ ಏನೇ ಆದರೂ ನನ್ನ ನಾಗು ಇದ್ದಾನೆ ಎನ್ನುವ ಧೈರ್ಯ...!
ನನ್ನ ಬದುಕಿನ ಭರವಸೆ ಅವನು....!
ಈ ನಾಗು ನನಗೆ ಏನು..? ಎಷ್ಟು...?
ಆಕಾಶ ನೋಡಿದೆ...
ನಕ್ಷತ್ರಗಳು... ಅಲ್ಲಲ್ಲಿ ಚದುರಿದ ಮೋಡಗಳು...
ಇಷ್ಟು ದೊಡ್ಡ ಭೂಮಿ...
ಕಣ್ಣಿಗೆ ಕಾಣುವಷ್ಟು ವಿಶಾಲವಾದ ಆಕಾಶ...
ಮರಗಳು..
ಎಷ್ಟೆಲ್ಲ ಜನರು...!
ಯಾರಿಗೆ.. ಯಾರೋ...!
ಎಲ್ಲರಿಗೂ ಅವರದ್ದೇ ಆದ ಪ್ರಪಂಚ...!
ಅವರದ್ದೇ.. ಬಳಗ.. !!
ಇಲ್ಲಿ ಯಾರೂ ಶಾಶ್ವತ ಅಲ್ಲ...!
ಯಾಕೋ ಒಂಟಿಯಾದೆ ಅನ್ನಿಸಿತು...!
ನನ್ನ ನಾಗು ಬದುಕಬೇಕು...
ಬದುಕಲ್ಲಿ ನೋಡುವಂಥಹ ಇನ್ನೂ ಖುಷಿಗಳಿವೆ...
ಆಸೆಗಳು ಈಡೇರಿದರೂ ಕೊನೆಯಾಗದ ಬಯಕೆಗಳು...!
ನಮಗೂ ಸಾವು ಹತ್ತಿರ ಬಂತು...!
ವಯಸ್ಸಾಯಿತು.. !
ನನ್ನ ಮಡದಿ.. ಮಗ..
ಅಣ್ಣ.. ಅಕ್ಕ.. ಎಲ್ಲರನ್ನೂ ಬಿಟ್ಟು ಹೋಗಲೇ ಬೇಕು...!
ಅಮ್ಮನನ್ನೂ....?...
ನಾನು ಹೋಗಿ ಬಿಟ್ಟರೆ ...
ಮಗನ.. ಮಡದಿಯ ಭವಿಷ್ಯವೇನು...?
ಅವರಿಗೆ ಮುಂದೆ ಸಾಕಾಗುವಷ್ಟು ಹಣವನ್ನೂ.. ಆಸ್ತಿಯನ್ನೂ ಮಾಡಿಡಲಿಲ್ಲ...!
ಸಾವು ಇಷ್ಟು ಬೇಗ ಬಂದು ಬಿಡುತ್ತಾ..??
ಏನಿದು.. ಸಾವು..?
ಛೇ...!
ಎಷ್ಟೆಲ್ಲ ಅಸಹಾಯಕತೆ...!
ಆಕಾಶ ನೋಡಿದೆ... ಕಣ್ಣಲ್ಲಿ ನೀರಾಡಿತು...
ದೊಡ್ಡದಾಗಿ ಅಳಬೇಕು ಅನ್ನಿಸಿತು...!
ದೊಡ್ಡದಾಗಿ ಅಳಬೇಕು ಅನ್ನಿಸಿತು...!
ಎಲ್ಲವೂ...
ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ....!
"ಭಾವ.. ಬಾವಾ..ಬಾ... ಬಾ..
ಡಾಕ್ಟರ್ ಬರ್ತಾ ಇದ್ದಾರೆ...!..
ಡಾಕ್ಟರ್ ಹತ್ತಿರ ಮಾತಾಡು..
ಬಾ ಭಾವಾ...!"
ಡಾಕ್ಟರ್ ಹತ್ತಿರ ಮಾತಾಡು..
ಬಾ ಭಾವಾ...!"
ನಾಗುವಿನ ಮಡದಿ ಗಾಭರಿಯಿಂದ ಕರೆದಳು...
ದೂರದಲ್ಲಿದ್ದ ಡಾಕ್ಟರ್ ಹತ್ತಿರ ಬರುತ್ತಿದ್ದರು.....
(ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ..)






































