ವಿಶ್ವೇಶ್ವರ ಭಟ್ ರವರ ಪುಸ್ತಕ ಬಿಡುಗಡೆ ಸಮಾರಂಭ...
ಜಯಂತ್ ಕಾಯ್ಕಿಣಿಯವರ ಮಾತಿನ ಮೋಡಿಯಲ್ಲಿ ಕಳೆದು ಹೋಗಿದ್ದೆ...
ಯಾರೋ ಬೆನ್ನು ತಟ್ಟಿದರು...
"ಸರ್... ನೀವು ಇಟ್ಟಿಗೆ ಸಿಮೆಂಟಾ...?"
ನನಗೆ ಆಶ್ಚರ್ಯವಾಯಿತು....
ನನಗೆ ಆಶ್ಚರ್ಯವಾಯಿತು....
ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಇತ್ತೀಚೆಗೆ ನಾನು "ಇಟ್ಟಿಗೆ ಸಿಮೆಂಟು" ಅಂತ ಆಗಿದ್ದು...
ಆ... ಥರಹ ... ನನ್ನನ್ನು ಗುರುತಿಸುತ್ತಿರುವದು....
ಸ್ವಲ್ಪ ಬೇಸರವಾಗುತ್ತಿದ್ದರೂ...
ಖುಷಿಯಾಗುತ್ತಿದೆ...
ಬೇರೆ ಥರಹ ನನ್ನನ್ನು ಗುರುತಿಸುತ್ತಿದ್ದಾರಲ್ಲ
ಸಂತೋಷವೂ ಆಗುತ್ತಿದೆ...
ಘಟನೆ .. ಒಂದು...
ಮೊನ್ನೆ ಪರಿಸರ ವಿಜ್ಞಾನಿ, ಪರಿಸರ ಪ್ರೇಮಿ.. ನಾಗೇಶ ಹೆಗಡೆಯವರನ್ನು ಭೇಟಿಯಾಗುವ ಸುಯೋಗ ಬಂದಿತ್ತು...
ಅವರೊಡನೆ ಮೂರುತಾಸು ಮಾತನಾಡಿದ್ದೆ....
ಅವರೊಂದು ಜ್ಞಾನದ ಸಮುದ್ರ...
ಅವರ ಸಾಧನೆ... ಅಧ್ಯಯನ ಬಲು ದೊಡ್ಡದು...
ದೊಡ್ಡ ವ್ಯಕ್ತಿಯಾಗಿದ್ದರೂ ಅವರ ಸರಳತೆ ನೋಡಿ ಮೂಕನಾಗಿದ್ದೆ....
ಅಂಥವರೊಡನೆ ಕುಳಿತು ಮಾತನಾಡಿದ್ದು ನನ್ನ ಸುಯೋಗ...
ನನ್ನ ಪುಣ್ಯ...!
ಅವರು ನನ್ನ ಬ್ಲಾಗಿನ ಬಗೆಗೆ ಮೆಚ್ಚುಗೆಯ ಮಾತನಾಡುತ್ತಿದ್ದಾಗ ಖುಷಿಯಿಂದ ಕಣ್ಣಲ್ಲಿ ನಿರು ಬಂದಿತ್ತು......
ಘಟನೆ ಎರಡು...
"ಹೆಸರೇ... ಬೇಕಿರದ" ನನ್ನದೊಂದು ಪುಸ್ತಕಕ್ಕೆ.....
ಜಿ.ಎನ್ ಮೋಹನ್ ಸುಂದರ ಮುನ್ನುಡಿ ಬರೆದು ಕೊಟ್ಟಿದ್ದಾರೆ....
ಹಿತನುಡಿಗಳನ್ನು.. ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ....
ತಮ್ಮ ಕೆಲಸದ ಒತ್ತಡದ ನಡುವೆಯೂ ...
ನನ್ನ ಕೆಲಸವನ್ನೂ ಮಾಡಿಕೊಡುತ್ತಾರೆ.... ಇನ್ನು ಬರೆಯಿರಿ ಅಂತ ಬೆನ್ನು ತಟ್ಟುತ್ತಾರೆ....
ಅವರ ಶುಭ ಹಾರೈಕೆಗಳು, ಪ್ರೋತ್ಸಾಹಕ್ಕೆ...
ನನ್ನ ಉತ್ಸಾಹ ಇಮ್ಮಡಿಯಾಗುತ್ತಿದೆ..
ಹಲವಾರು ಗಣ್ಯರು ಪ್ರೋತ್ಸಾಹಕ ನುಡಿಗಳನ್ನು ಬರೆದುಕೊಟ್ಟು ಬೆನ್ನು ತಟ್ಟುತ್ತಿದ್ದಾರೆ....
ಘಟನೆ ಮೂರು...
ರಂಗಶಂಕರದದಲ್ಲಿ ಕಲಾ ಗಂಗೊತ್ರಿಯವರ
"ಮೈಸೂರು ಮಲ್ಲಿಗೆ " ನಾಟಕದ ಕೊನೆಯಲ್ಲಿ...
ಡಾ. ಬಿವಿ ರಾಜಾರಾಂ ಅವರು....
"ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರು..
ವೇದಿಕೆಗೆ ಬರಬೇಕು"
ಎಂದು ನೆನಪಿನ ಕಾಣಿಕೆ ಕೊಟ್ಟರು.....ಅಷ್ಟೆಲ್ಲಾ ಪ್ರೇಕ್ಷಕರ ಮುಂದೆ...!
ನಾನು ಮಾತು ಬಾರದೆ ಮೂಕನಾಗಿದ್ದೆ....
ಘಟನೆ ನಾಲ್ಕು.....
ಸುಶ್ರುತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ..
ಮೆಚ್ಚಿನ ಕಥೆಗಾರ "ವಸುಧೇಂದ್ರ " ಸಿಕ್ಕಿದ್ದರು...
"ಚೆನ್ನಾಗಿದ್ದೀರಾ... ಏನನ್ನುತ್ತದೆ ಇಟ್ಟಿಗೆ ಸಿಮೆಂಟು..?.."
ಎಂದು ಆತ್ಮೀಯವಾಗಿ ಕೇಳಿದರು..
ಅಂಥಹ ದೊಡ್ಡ ಕಥೆಗಾರ..!
ಘಟನೆ... ಐದು....
"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."
ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...
ಭಾವುಕನಾಗಿಬಿಟ್ಟಿದ್ದೆ....
( ಆ ಲೇಖನ....
"ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)
ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...
ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...
ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....
ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....
ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(ಮುಕ್ತಾದ "ಮಂಗಳತ್ತೆ")
ಅವರು ಪ್ರೋತ್ಸಾಹಕ್ಕಾಗಿ...
ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...
ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...
ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....
ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....
"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."
ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...
ಭಾವುಕನಾಗಿಬಿಟ್ಟಿದ್ದೆ....
( ಆ ಲೇಖನ....
"ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)
ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...
ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...
ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....
ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....
ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಪತ್ರಕರ್ತ "ಅಶೋಕ್ ಕುಮಾರ್" ಅವರ ಪ್ರೋತ್ಸಾಹ ಮರೆಯಲಾರೆ..
ಪ್ರೋತ್ಸಾಹಿಸಿದ ಇನ್ನೂ ಅನೇಕರ ಹೆಸರು ಬಿಟ್ಟುಹೋಗಿದೆ...
ಬರೆಯಲು ಜಾಗವೂ ಸಾಲುವದಿಲ್ಲ...
ಅವರಿಗೆಲ್ಲ ಹೇಗೆ ಕೃತಜ್ಞತೆ ಅರ್ಪಿಸಲಿ...?
ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(ಮುಕ್ತಾದ "ಮಂಗಳತ್ತೆ")
ಇನ್ನೂ ಅನೇಕರು...ಅನೇಕರು....
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...
ಅವರು ಪ್ರೋತ್ಸಾಹಕ್ಕಾಗಿ...
ಸೌಜನ್ಯಕ್ಕೆಂದು ಹೇಳಿದ ಮಾತುಗಳಾದರೂ...
ನನಗಂತೂ ಖುಷಿಯಾಗುತ್ತದೆ...
ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....
ದಿನನಿತ್ಯ ಬರುವ ಹಲವಾರು ಈ ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....
ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...
ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....
ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....
" ಈ ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......
ಅದಕ್ಕೂ ಈಗ ಉತ್ತರ ಸಿಕ್ಕಿದೆ...
ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಈ ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಇದಕ್ಕೆಲ್ಲ ಕಾರಣ ನನ್ನ ಬ್ಲಾಗ್....ಈ ಬ್ಲಾಗ್ ಲೋಕ....!
ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....
ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....
ಮನದ ಹಿಗ್ಗು....
ಸಂತೋಷದ ಬುಗ್ಗೆಯಾಗಿದೆ...
ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...
ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..
ನನಗಂತೂ ಖುಷಿಯಾಗುತ್ತದೆ...
ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....
ದಿನನಿತ್ಯ ಬರುವ ಹಲವಾರು ಈ ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....
ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...
ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....
ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....
" ಈ ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......
ಅದಕ್ಕೂ ಈಗ ಉತ್ತರ ಸಿಕ್ಕಿದೆ...
ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಈ ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಮನೆಕಟ್ಟುವವರು ನನ್ನ ಬಳಿ ಮಾಹಿತಿ ಪಡೆಯುತ್ತಿದ್ದಾರೆ..
ನನ್ನ ಈ ಬ್ಲಾಗಿನಿಂದ ನನಗೆ ಬಿಸಿನೆಸ್ ಸಿಕ್ಕುತ್ತಿದೆ..
ನಿಮಗೆಲ್ಲ ಹೇಗೆ ಕೃತಜ್ಞತೆ ಹೇಳಲಿ...?
ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....
ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....
ಮನದ ಹಿಗ್ಗು....
ಸಂತೋಷದ ಬುಗ್ಗೆಯಾಗಿದೆ...
ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...
ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..
ಬ್ಲಾಗ್ ಲೋಕದ ...... ಈ ...ಆತ್ಮೀಯತೆಗೆ..
ಸ್ನೇಹ ಭಾವಕ್ಕೆ ನನ್ನದೊಂದು ಸಲಾಮ್...
ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...
ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...
ವರುಷದೊಳಗೆ ಸಂಖ್ಯೆ ನೂರು...
ನಿಮ್ಮ ಭಾವ ಜಗದೊಳು..
ಇನಿತು ಜಾಗವಷ್ಟೇ ಸಾಕು ಎನಗೆ.....
ಅಂಕೆ ಸಂಖ್ಯೆಗಳೆಲ್ಲವೂ...
ಅಗಣಿತ ಗಣಿತದ ಲೆಕ್ಕಾಚಾರವು...
ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....
ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....



















