ಕೀಳರಿಮೆ , ಅನಾಥ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು...
ಬೇರೆಯವರಿಂದ ಅನುಕಂಪ, ಸಿಂಪಥಿ ಯಾವಾಗಲೂ ಬಯಸುತ್ತಿದ್ದೆ...
ಯಾರಾದರೂ ...ಅನುಕಂಪದಿಂದ...
"ಪಾಪ.. ...!!
ಅಪ್ಪ ಇಲ್ಲದ ಹುಡುಗ.. "
ಅಪ್ಪ ಇಲ್ಲದ ಹುಡುಗ.. "
ಅಂತ ಅಂದು ಬಿಟ್ಟರೆ ನನ್ನೊಳಗೆ ಒಂಥರಾ... ಖುಷಿಯಾಗುತ್ತಿತ್ತು...
ಅದನ್ನು ನನ್ನ ಮನಸ್ಸು ಬಯಸ್ಸುತ್ತಿತ್ತು.....
ಅದನ್ನು ನನ್ನ ಮನಸ್ಸು ಬಯಸ್ಸುತ್ತಿತ್ತು.....
ಇದನ್ನು ಹೊರದೊಡಿಸಿದವರು ನನ್ನ ಚಿಕ್ಕಮ್ಮ....
ಅವರು ಸ್ವಲ್ಪ ನಿಷ್ಠೂರವಾದಿ..
ತಮಗೆ ಸರಿ ಎನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಎದುರಿಗೇ ಹೇಳಿ ಬಿಡುವಂತವರು..
"ನೀನು ಅನುಕಂಪ ಬಯಸುತ್ತಿದ್ದಿಯಾ...
ಇದು ತಪ್ಪು....
ಇದು ನಿನ್ನ ಏಳಿಗೆಗೆ ತೊಂದರೆ ಕೊಡುತ್ತದೆ...
ಅಲ್ಪತ್ರಪ್ತನನ್ನಾಗಿ ಮಾಡಿ ಬಿಡುತ್ತದೆ...
ಇದರಿಂದ ಹೊರಗೆ ಬಂದಂತೂ ನೀನು ಉದ್ಧಾರವಾಗೋದಿಲ್ಲ"
ನನ್ನ ಚಿಕ್ಕಮ್ಮ ಅಪ್ಪಟ ಹಳ್ಳಿ ಪ್ರತಿಭೆ...
ಆ ಭಾಗದಲ್ಲಿ...
ಹಾಡು, ಕಲೆ ಕಸೂತಿಯಿಂದಾಗಿ ಬಹಳ ಪ್ರಸಿದ್ದರು...
ಅವರ ಮಾತು ನನ್ನಲ್ಲಿ ಬಹಳ ನಾಟಿತು...
ಆದರೆ ಹೇಗೆ... ಹೊರಬರುವದು...?
ಚಿಕ್ಕಪ್ಪ, ಚಿಕ್ಕಮ್ಮ ಇಬ್ಬರೂ ನನಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ಪ್ರೋತ್ಸಾಹಿಸುತ್ತಿದ್ದರು...
"ನಿನ್ನಪ್ಪ ...ಆ ಕಾಲದಲ್ಲಿ ..
ಆ .. ದೇವಿಸರದ ಕುಗ್ರಾಮದಲ್ಲಿ ನಾಟಕ ತಂಡ ಕಟ್ಟಿ..
ನಾಟಕದ ನಿರ್ದೇಶನ ಮಾಡಿ ...
ರಾತ್ರಿಯಿಂದ ಬೆಳಗಿನವರೆಗೆ ನಾಟಕ ಆಡಿಸಿದ್ದರು...
ಅವರೇ ಮುಖ್ಯ ಖಳನಾಯಕನ ಪಾತ್ರ..
ನಮ್ಮೂರಲ್ಲಿ " ನ ಭೂತೋ... ನಭವಿಷ್ಯತಿ.."
ಅನ್ನುವಂಥಹ ನಾಟಕ...
ಅವರ ಮಗ ನೀನು....
ನೀನೂ ಭಾಷಣ ಮಾಡ ಬಲ್ಲೆ ...ಮಾಡು..."
ಎಂದು ಹುರಿದುಂಬಿಸುತ್ತಿದ್ದರು...
ನನ್ನಲ್ಲಿ ಆತ್ಮ ವಿಶ್ವಾಸದ ಕೊರತೆ.....
ಅವರ ಒತ್ತಾಯಕ್ಕೆ ಭಾಷಣ ಮಾಡಿದರೂ ಬಹುಮಾನ ಬಂದಿರಲಿಲ್ಲ....
ಕಾಲೇಜು ದಿನಗಳಲ್ಲಿ ನಾಗು, ದಿವಾಕರ ನನಗೆ ಬಹಳ ಆಪ್ತರಾದರು..
ದಿವಾಕರ ಒಳ್ಳೆಯ ಮಾತುಗಾರ...
ನನ್ನನ್ನೂ ತನ್ನ ಸಂಗಡ ಸೇರಿಸಿಕೊಂಡು ಚರ್ಚಾ ಸ್ಪರ್ಧೆಗೆ ಕರೆದು ಕೊಂಡು ಹೋಗುತ್ತಿದ್ದ...
ತಾನೇ ಭಾಷಣ ಬರೆದು ಕೊಡುತ್ತಿದ್ದ...
ಆದರೆ ....
" ಹೇಳಿಕೊಟ್ಟ ಮಾತು..
ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬರುವದಿಲ್ಲವಲ್ಲ...!!.."
ಏನಾದರೂ ಇದ್ದರೆ.... ಅದು ನಮ್ಮ ಸ್ವಂಥದ್ದು...
ನಮ್ಮ ಸ್ವಂತಿಕೆ.....
ನನ್ನ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಆ ಭಾಷಣಗಳೆಲ್ಲ ಸಪ್ಪೆಯಾಗಿ ಬಿಡುತ್ತಿತ್ತು...
"ನೀನು ಒಂದು ಬಹುಮಾನ ತೆಗೆದು ಕೊಳ್ಳುವವರೆಗೆ ನಾನು ಬೀಡುವದಿಲ್ಲ"
ಎಂದು ದಿವಾಕರ ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟ...
ನಾಗು, ದಿವಾಕರ ಇಬ್ಬರೂ ಪಣ ತೊಟ್ಟರು....
ಸಿದ್ದಾಪುರದ ಟೌನ್ ಹಾಲಿನಲ್ಲಿ ಒಂದು ಚರ್ಚಾ ಸ್ಪರ್ಧೆ ಇತ್ತು..
" ಅಣುಸ್ಥಾವರಗಳು ವಿನಾಷಕ್ಕೆ ದಾರಿ"
ಆಗ "ಉತ್ತರ ಕನ್ನಡ ಜಿಲ್ಲೆ ಉಳಿಸಿ" ಎನ್ನುವ ಆಂದೋಲನದ ಜೋರಾಗಿತ್ತು...
ಕೈಗಾ ಅಣುಸ್ಥಾವರ ವಿರೋಧ ಎಲ್ಲೆಡೆ ಇತ್ತು....
ಕಾರಂತಜ್ಜ ನಮ್ಮೆಲ್ಲರ ನಾಯಕರಾಗಿದ್ದರು...
"ಅಣುಸ್ಥಾವರಗಳು ಬೇಕು" ಅನ್ನಲಿಕ್ಕೆ ಯಾರೂ ಇರುತ್ತಿರಲಿಲ್ಲ...
ನಾವು.., ನಮ್ಮ ಗುಂಪು ಸ್ವಲ್ಪ ಎಡವಟ್ಟುಗಳು....
"ಅಣುಸ್ಥಾವರಗಳು ಬೇಕು" ಎಂದು ವಾದ ಮಾಡುವದಕ್ಕೆ ತಯಾರಿ ಮಾಡಿದೆವು...
ದಿವಾಕರ ರಾಜ್ಯಮಟ್ಟದಲ್ಲಿ ಭಾಷಣಕ್ಕೆ ಪ್ರಥಮ ಬಹುಮಾನ ಪಡೆದವ..
ಈಗಲೂ ಅತ್ಯುತ್ತಮ ವಾಗ್ಮಿ... ಪ್ರತಿಭಾವಂತ...
ಆದರೂ ನಮಗೆ ಬಹುಮಾನ ಸಿಗುವದು ಸಾಧ್ಯವೇ ಇಲ್ಲವಾಗಿತ್ತು...!!
ಅದಕ್ಕೆ ಕಾರಣ.....
"ನಯನಾ" ಎನ್ನುವ ಹುಡುಗಿ....
ಸುಂದರ ದುಂಡು ಮುಖದ ನೀಲಿ ಕಣ್ಣಿನ ಹುಡುಗಿ ಭಾಷಣಕ್ಕೆ ಬರುತ್ತಿದ್ದಳು..
ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!
ನಾಗು ಹೇಳಿದ...
" ಈ ಬಾರಿ ಇದಕ್ಕೆಲ್ಲ ಕೊನೆ ಹಾಕೋಣ...
ಈ ಬಾರಿ ನಾವೇ ಗೆಲ್ಲುತ್ತೇವೆ..ನನ್ನ ಬಳಿ ಉಪಾಯವಿದೆ.."
ಅವನ ವಿಚಾರಗಳು.. ಧೋರಣೆಗಳು ಬೇರೆಯೇ...
ಭಾಷಣದ ದಿನ ಬಂತು...
ಊರಿನಿಂದ ನನ್ನ ಭಾಷಣ ಕೇಳಲು ನನ್ನ ಅಣ್ಣ ಬಂದಿದ್ದರು...
ಜನಸಾಗರವೇ ಸೇರಿತ್ತು....
ಮೊದಲು ದಿವಾಕರ...!
ಎಂದಿನ ತನ್ನ ಸಿಂಹ ಧ್ವನಿಯಲ್ಲಿ ಹೇಳಿದ..
"ವಿಜ್ಞಾನ ವೆಂದರೆ ಒಂದು ಕತ್ತಿ ಇದ್ದ ಹಾಗೆ...
ಅದು ಒಬ್ಬ ಕ್ರಷಿಕನ ಕೈಗೆ ಸಿಕ್ಕರೆ ಬೆಳೆಯನ್ನು, ಕಳೆಯನ್ನು ಕಡಿಯಲಿಕ್ಕೆ ಉಪಯೋಗಿಸುತ್ತಾನೆ..
ಅದೇ ಕತ್ತಿ ಒಬ್ಬ ಕೊಲೆಗಡುಕನ ಕೈಗೆ ಸಿಕ್ಕರೆ ತಲೆಕಡಿಯಲು ಉಪಯೋಗಿಸುತ್ತಾನೆ..
ಇಲ್ಲಿ ಕತ್ತಿಯ ತಪ್ಪು ಏನೂ ಇಲ್ಲ...
ಕತ್ತಿ ಉಪಯೋಗಿಸುವವನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ..
ಅಣುಸ್ಥಾವರಗಳೂ ಹಾಗೇ...ಅದು ಇಂದಿನ ವಿಜ್ಞಾನ ..
ಅದು ಭವಿಷ್ಯದ ಅವಶ್ಯಕತೆ...."
ಎಂದು ತನ್ನ ವಾದ ಮಂಡಿಸಿದ...
ಜನರೆಲ್ಲ ತಲೆದೂಗಿದರು....
ನಂತರ ಬಂದವಳು ಬಳುಕುವ .."ನಯನಾ..."...!!!!...
ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು....
ಕಣ್ಣ ಮುಂದೆ ಬಂದ ಕೂದಲನ್ನು ಹಿಂದಕ್ಕೆ ತಳ್ಳುತ್ತಾ...
ತನ್ನ ಮಾದಕ ..
ಮೋಹಕ ಧ್ವನಿಯಲ್ಲಿ ....ಶುರು ಮಾಡಿದಳು...
" ನನ್ನ ಪ್ರೀತಿಯ ಬಂಧುಗಳೇ...
ಈ ಅಣು ಶಕ್ತಿಯಿಂದ ವಿಕಿರಣ ಉಂಟಾಗುತ್ತದೆ....!
ಸ್ವಲ್ಪ ಎಚ್ಚರ ತಪ್ಪಿದರೆ... ವಿನಾಷ ಗ್ಯಾರೆಂಟಿ...!
ರಷಿಯಾದ ಚರ್ನೋಬಿಲ್ಲಿನಲ್ಲಿ ಏನಾಯಿತು.....?
ನಾಗಸಾಕಿ, ಹಿರೋಷಿಮಾದಲ್ಲಿ ಏನಾಗಿದೆ..? ಏನಾಗುತ್ತಿದೆ...??
ಸಹಸ್ರಾರು.., ಕೊಟ್ಯಾಂತ ಜನರು.. ಪರಿತಪಿಸುತ್ತಿದ್ದಾರೆ...!
ಸಾವು ಬದುಕಿನ ಮದ್ಯೆ ಒದ್ದಾಡುತ್ತಿದ್ದಾರೆ....!
ಅಣು ವಿಕಿರಣದಿಂದ ಪರಿಸರ ನಾಶವಾಗುತ್ತದೆ...
ನಯನಾ ತನ್ನ ಧ್ವನಿಯನ್ನು ಮತ್ತೂ ಏರಿಸಿ...
ಮೇಜು ಕುಟ್ಟಿದಳು...!
ಆವೇಶ ...ಜಾಸ್ತಿಯಾಯಿತು..!!
"ಬದುಕು ದುಸ್ಥರವಾಗುತ್ತದೆ...!
ಗಂಡಸರು ನಪಂಸಕರಾಗುತ್ತಾರೆ...!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!
ಕಣ್ಣಿಲ್ಲದ, ಕಾಲಿಲ್ಲದ ಮಕ್ಕಳು ನಮ್ಮ ಭವಿಷ್ಯವಾಗುತ್ತಾರೆ...!
ನನ್ನ ಆತ್ಮೀಯ ಬಂಧುಗಳೇ.....
ಇಂಥಹ ಬದುಕು ನಿಮಗೆ ಬೇಕಾ...?
ನೀವೇ ಹೇಳಿ ಅಣು ಸ್ಥಾವರ ನಮಗೆ ಬೇಕಾ..?"
ಅವಳ ಸೌಂದರ್ಯ, ಮಾದಕ ಧ್ವನಿಗೆ ....ಮರುಳಾಗಿದ್ದ ಜನರೆಲ್ಲ...
"ಬೇಡ .. ಬೇಡ " ಎಂದರು...
ನಂತರ ಸರದಿ ನನ್ನದು...!!
ಸೋಲು.... ಖಚಿತವಾಗಿತ್ತು...!!
ಒಂಬತ್ತನೆ ವಿಕೆಟ್ಟಿಗೆ ಅನಿವಾರ್ಯವಾಗಿ ಆಡಲು ಬರುವ ಆಟಗಾರನ ಸ್ಥಿತಿ ನನ್ನದಾಯಿತು..
ನರ್ವಸ್ ಆಗಿಬಿಟ್ಟಿದ್ದೆ..
ಅವಳ ಭಾಷಣದ ಮೋಡಿಯಿಂದ ..
ಜನರ ತಪ್ಪಾಳೆ ನನ್ನನ್ನು ಅಧಿರನನ್ನಾಗಿ ಮಾಡಿ ಬಿಟ್ಟಿತ್ತು....!
ಅಷ್ಟರಲ್ಲಿ ನಾಗು ಓಡೋಡಿ ಬಂದ...!
ಕಿವಿಯಲ್ಲಿ ಏನೇನೋ ಹೇಳಿದ...! ಹುರಿದುಂಬಿಸಿದ....!!
"ಈ ಸ್ಟೇಜು ನಿಂದು.. ಈ ಕ್ಷಣ ಈ ಘಳಿಗೆ ನಿನ್ನದು...
ಈ ಸಮಯ ಮತ್ತೆ ಸಿಗುವದಿಲ್ಲ...
ಪ್ರಕಾಶು.. ...
ಸೋಲು... ಸೋಲುತ್ತಿರುವಾಗ... ಗೆಲ್ಲ ಬೇಕು ..
ಹೋಗು... ಗೆದ್ದೇ ಗೆಲ್ತಿಯಾ.!!..!!"
ಬೆನ್ನುತಟ್ಟಿದ....
ನಾನು ದಿವಾಕರನ ಮುಖ ನೋಡಿದೆ...
"ಹೊಡಿ... ಮುಂದುವರೆಸು.." ಎಂದು ಕಣ್ಣಸನ್ನೆಯಲ್ಲೇ ಹೇಳಿದ...
ನಾನು ಸ್ಟೇಜಿಗೆ ಬಂದೆ...
ಎಲ್ಲೆಲ್ಲೂ ಪಿನ್ ಡ್ರಾಪ್ ಸೈಲೆನ್ಸ್.... !!
ಜನರೆಲ್ಲ ನನ್ನನ್ನೇ ದಿಟ್ಟಿಸುತ್ತಿದ್ದರು.....!
ನನಗೆ ಎಲ್ಲಿಲ್ಲದ ಧೈರ್ಯ ಬಂದು ಬಿಟ್ಟಿತ್ತು....
"ಮಾನ್ಯರೆ....
ನಮ್ಮ ವಿರೋಧಿಯವರು ಈಗ ತಾನೆ ಹೇಳಿದರು...
ಇದು ನಮ್ಮ ಜಗತ್ತಿನ ಯಾವ ವಿಜ್ಞಾನಕ್ಕೂ ...
ಸಾಧ್ಯವಾಗದ, ಅರ್ಥವಾಗದ ವಿಚಾರ...!!
ನನಗಂತೂ ಅರ್ಥವಾಗುತ್ತಿಲ್ಲ....
ನಿಮಗೆ ಅರ್ಥವಾಯಿತಾ...??
"ಗಂಡಸರೆಲ್ಲ ನಪಂಸಕರಾಗುತ್ತಾರೆ...!!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!!!!!!
ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..???..!!!
ಇದನ್ನು ಕಂಡು ಹಿಡಿದ ಪುಣ್ಯಾತ್ಮ ಯಾರು..???...!!
ಮಹಾಜನಗಳೆ....
ನಾವೆಲ್ಲ ಅವನಿಗೆ ಕರೆದು ಸನ್ಮಾನ ಮಾಡಬೇಕು.....!!.."
ಇಡಿ ಸಭೆಯಲ್ಲಿ ಹಂಚು ಹಾರಿಹೋಗುವಷ್ಟು.. ನಗು.. ತಪ್ಪಾಳೆ...!!!
ಶಿಳ್ಳೆ... ಮುಂದೆ ಮಾತನಾಡಲಾಗದ ಸ್ಥಿತಿ....!!
ನನಗೆ ಉತ್ಸಾಹ ಜಾಸ್ತಿಯಾಯಿತು..... ಮಾತು ಮುಂದುವರೆಸಿದೆ.....
ನಾನು ಸ್ಟೇಜಿನಿಂದ ಹೊರಗೆ ಬರುತ್ತಲೇ ದಿವಾಕರ ನಾಗು ನನ್ನ ಆಲಂಗಿಸಿ ಕೊಂಡರು...
ನನ್ನಣ್ಣನ ಕಣ್ಣಂಚಲ್ಲಿ ನೀರಿತ್ತು...
ಅವನ ಖುಷಿ, ಸಂತೋಷ...
ಹೇಳದಿದ್ದರೂ ಗೊತ್ತಾಗುತ್ತಿತ್ತು...
ಆದರೆ ....
ಅಲ್ಲೂ ನಮಗೆ ಎರಡನೆಯ ಬಹುಮಾನ...!
ನೀನೂ ಭಾಷಣ ಮಾಡ ಬಲ್ಲೆ ...ಮಾಡು..."
ಎಂದು ಹುರಿದುಂಬಿಸುತ್ತಿದ್ದರು...
ನನ್ನಲ್ಲಿ ಆತ್ಮ ವಿಶ್ವಾಸದ ಕೊರತೆ.....
ಅವರ ಒತ್ತಾಯಕ್ಕೆ ಭಾಷಣ ಮಾಡಿದರೂ ಬಹುಮಾನ ಬಂದಿರಲಿಲ್ಲ....
ಕಾಲೇಜು ದಿನಗಳಲ್ಲಿ ನಾಗು, ದಿವಾಕರ ನನಗೆ ಬಹಳ ಆಪ್ತರಾದರು..
ದಿವಾಕರ ಒಳ್ಳೆಯ ಮಾತುಗಾರ...
ನನ್ನನ್ನೂ ತನ್ನ ಸಂಗಡ ಸೇರಿಸಿಕೊಂಡು ಚರ್ಚಾ ಸ್ಪರ್ಧೆಗೆ ಕರೆದು ಕೊಂಡು ಹೋಗುತ್ತಿದ್ದ...
ತಾನೇ ಭಾಷಣ ಬರೆದು ಕೊಡುತ್ತಿದ್ದ...
ಆದರೆ ....
" ಹೇಳಿಕೊಟ್ಟ ಮಾತು..
ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬರುವದಿಲ್ಲವಲ್ಲ...!!.."
ಏನಾದರೂ ಇದ್ದರೆ.... ಅದು ನಮ್ಮ ಸ್ವಂಥದ್ದು...
ನಮ್ಮ ಸ್ವಂತಿಕೆ.....
ನನ್ನ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಆ ಭಾಷಣಗಳೆಲ್ಲ ಸಪ್ಪೆಯಾಗಿ ಬಿಡುತ್ತಿತ್ತು...
"ನೀನು ಒಂದು ಬಹುಮಾನ ತೆಗೆದು ಕೊಳ್ಳುವವರೆಗೆ ನಾನು ಬೀಡುವದಿಲ್ಲ"
ಎಂದು ದಿವಾಕರ ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟ...
ನಾಗು, ದಿವಾಕರ ಇಬ್ಬರೂ ಪಣ ತೊಟ್ಟರು....
ಸಿದ್ದಾಪುರದ ಟೌನ್ ಹಾಲಿನಲ್ಲಿ ಒಂದು ಚರ್ಚಾ ಸ್ಪರ್ಧೆ ಇತ್ತು..
" ಅಣುಸ್ಥಾವರಗಳು ವಿನಾಷಕ್ಕೆ ದಾರಿ"
ಆಗ "ಉತ್ತರ ಕನ್ನಡ ಜಿಲ್ಲೆ ಉಳಿಸಿ" ಎನ್ನುವ ಆಂದೋಲನದ ಜೋರಾಗಿತ್ತು...
ಕೈಗಾ ಅಣುಸ್ಥಾವರ ವಿರೋಧ ಎಲ್ಲೆಡೆ ಇತ್ತು....
ಕಾರಂತಜ್ಜ ನಮ್ಮೆಲ್ಲರ ನಾಯಕರಾಗಿದ್ದರು...
"ಅಣುಸ್ಥಾವರಗಳು ಬೇಕು" ಅನ್ನಲಿಕ್ಕೆ ಯಾರೂ ಇರುತ್ತಿರಲಿಲ್ಲ...
ನಾವು.., ನಮ್ಮ ಗುಂಪು ಸ್ವಲ್ಪ ಎಡವಟ್ಟುಗಳು....
"ಅಣುಸ್ಥಾವರಗಳು ಬೇಕು" ಎಂದು ವಾದ ಮಾಡುವದಕ್ಕೆ ತಯಾರಿ ಮಾಡಿದೆವು...
ದಿವಾಕರ ರಾಜ್ಯಮಟ್ಟದಲ್ಲಿ ಭಾಷಣಕ್ಕೆ ಪ್ರಥಮ ಬಹುಮಾನ ಪಡೆದವ..
ಈಗಲೂ ಅತ್ಯುತ್ತಮ ವಾಗ್ಮಿ... ಪ್ರತಿಭಾವಂತ...
ಆದರೂ ನಮಗೆ ಬಹುಮಾನ ಸಿಗುವದು ಸಾಧ್ಯವೇ ಇಲ್ಲವಾಗಿತ್ತು...!!
ಅದಕ್ಕೆ ಕಾರಣ.....
"ನಯನಾ" ಎನ್ನುವ ಹುಡುಗಿ....
ಸುಂದರ ದುಂಡು ಮುಖದ ನೀಲಿ ಕಣ್ಣಿನ ಹುಡುಗಿ ಭಾಷಣಕ್ಕೆ ಬರುತ್ತಿದ್ದಳು..
ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!
ನಾಗು ಹೇಳಿದ...
" ಈ ಬಾರಿ ಇದಕ್ಕೆಲ್ಲ ಕೊನೆ ಹಾಕೋಣ...
ಈ ಬಾರಿ ನಾವೇ ಗೆಲ್ಲುತ್ತೇವೆ..ನನ್ನ ಬಳಿ ಉಪಾಯವಿದೆ.."
ಅವನ ವಿಚಾರಗಳು.. ಧೋರಣೆಗಳು ಬೇರೆಯೇ...
ಭಾಷಣದ ದಿನ ಬಂತು...
ಊರಿನಿಂದ ನನ್ನ ಭಾಷಣ ಕೇಳಲು ನನ್ನ ಅಣ್ಣ ಬಂದಿದ್ದರು...
ಜನಸಾಗರವೇ ಸೇರಿತ್ತು....
ಮೊದಲು ದಿವಾಕರ...!
ಎಂದಿನ ತನ್ನ ಸಿಂಹ ಧ್ವನಿಯಲ್ಲಿ ಹೇಳಿದ..
"ವಿಜ್ಞಾನ ವೆಂದರೆ ಒಂದು ಕತ್ತಿ ಇದ್ದ ಹಾಗೆ...
ಅದು ಒಬ್ಬ ಕ್ರಷಿಕನ ಕೈಗೆ ಸಿಕ್ಕರೆ ಬೆಳೆಯನ್ನು, ಕಳೆಯನ್ನು ಕಡಿಯಲಿಕ್ಕೆ ಉಪಯೋಗಿಸುತ್ತಾನೆ..
ಅದೇ ಕತ್ತಿ ಒಬ್ಬ ಕೊಲೆಗಡುಕನ ಕೈಗೆ ಸಿಕ್ಕರೆ ತಲೆಕಡಿಯಲು ಉಪಯೋಗಿಸುತ್ತಾನೆ..
ಇಲ್ಲಿ ಕತ್ತಿಯ ತಪ್ಪು ಏನೂ ಇಲ್ಲ...
ಕತ್ತಿ ಉಪಯೋಗಿಸುವವನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ..
ಅಣುಸ್ಥಾವರಗಳೂ ಹಾಗೇ...ಅದು ಇಂದಿನ ವಿಜ್ಞಾನ ..
ಅದು ಭವಿಷ್ಯದ ಅವಶ್ಯಕತೆ...."
ಎಂದು ತನ್ನ ವಾದ ಮಂಡಿಸಿದ...
ಜನರೆಲ್ಲ ತಲೆದೂಗಿದರು....
ನಂತರ ಬಂದವಳು ಬಳುಕುವ .."ನಯನಾ..."...!!!!...
ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು....
ಕಣ್ಣ ಮುಂದೆ ಬಂದ ಕೂದಲನ್ನು ಹಿಂದಕ್ಕೆ ತಳ್ಳುತ್ತಾ...
ತನ್ನ ಮಾದಕ ..
ಮೋಹಕ ಧ್ವನಿಯಲ್ಲಿ ....ಶುರು ಮಾಡಿದಳು...
" ನನ್ನ ಪ್ರೀತಿಯ ಬಂಧುಗಳೇ...
ಈ ಅಣು ಶಕ್ತಿಯಿಂದ ವಿಕಿರಣ ಉಂಟಾಗುತ್ತದೆ....!
ಸ್ವಲ್ಪ ಎಚ್ಚರ ತಪ್ಪಿದರೆ... ವಿನಾಷ ಗ್ಯಾರೆಂಟಿ...!
ರಷಿಯಾದ ಚರ್ನೋಬಿಲ್ಲಿನಲ್ಲಿ ಏನಾಯಿತು.....?
ನಾಗಸಾಕಿ, ಹಿರೋಷಿಮಾದಲ್ಲಿ ಏನಾಗಿದೆ..? ಏನಾಗುತ್ತಿದೆ...??
ಸಹಸ್ರಾರು.., ಕೊಟ್ಯಾಂತ ಜನರು.. ಪರಿತಪಿಸುತ್ತಿದ್ದಾರೆ...!
ಸಾವು ಬದುಕಿನ ಮದ್ಯೆ ಒದ್ದಾಡುತ್ತಿದ್ದಾರೆ....!
ಅಣು ವಿಕಿರಣದಿಂದ ಪರಿಸರ ನಾಶವಾಗುತ್ತದೆ...
ನಯನಾ ತನ್ನ ಧ್ವನಿಯನ್ನು ಮತ್ತೂ ಏರಿಸಿ...
ಮೇಜು ಕುಟ್ಟಿದಳು...!
ಆವೇಶ ...ಜಾಸ್ತಿಯಾಯಿತು..!!
"ಬದುಕು ದುಸ್ಥರವಾಗುತ್ತದೆ...!
ಗಂಡಸರು ನಪಂಸಕರಾಗುತ್ತಾರೆ...!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!
ಕಣ್ಣಿಲ್ಲದ, ಕಾಲಿಲ್ಲದ ಮಕ್ಕಳು ನಮ್ಮ ಭವಿಷ್ಯವಾಗುತ್ತಾರೆ...!
ನನ್ನ ಆತ್ಮೀಯ ಬಂಧುಗಳೇ.....
ಇಂಥಹ ಬದುಕು ನಿಮಗೆ ಬೇಕಾ...?
ನೀವೇ ಹೇಳಿ ಅಣು ಸ್ಥಾವರ ನಮಗೆ ಬೇಕಾ..?"
ಅವಳ ಸೌಂದರ್ಯ, ಮಾದಕ ಧ್ವನಿಗೆ ....ಮರುಳಾಗಿದ್ದ ಜನರೆಲ್ಲ...
"ಬೇಡ .. ಬೇಡ " ಎಂದರು...
ನಂತರ ಸರದಿ ನನ್ನದು...!!
ಸೋಲು.... ಖಚಿತವಾಗಿತ್ತು...!!
ಒಂಬತ್ತನೆ ವಿಕೆಟ್ಟಿಗೆ ಅನಿವಾರ್ಯವಾಗಿ ಆಡಲು ಬರುವ ಆಟಗಾರನ ಸ್ಥಿತಿ ನನ್ನದಾಯಿತು..
ನರ್ವಸ್ ಆಗಿಬಿಟ್ಟಿದ್ದೆ..
ಅವಳ ಭಾಷಣದ ಮೋಡಿಯಿಂದ ..
ಜನರ ತಪ್ಪಾಳೆ ನನ್ನನ್ನು ಅಧಿರನನ್ನಾಗಿ ಮಾಡಿ ಬಿಟ್ಟಿತ್ತು....!
ಅಷ್ಟರಲ್ಲಿ ನಾಗು ಓಡೋಡಿ ಬಂದ...!
ಕಿವಿಯಲ್ಲಿ ಏನೇನೋ ಹೇಳಿದ...! ಹುರಿದುಂಬಿಸಿದ....!!
"ಈ ಸ್ಟೇಜು ನಿಂದು.. ಈ ಕ್ಷಣ ಈ ಘಳಿಗೆ ನಿನ್ನದು...
ಈ ಸಮಯ ಮತ್ತೆ ಸಿಗುವದಿಲ್ಲ...
ಪ್ರಕಾಶು.. ...
ಸೋಲು... ಸೋಲುತ್ತಿರುವಾಗ... ಗೆಲ್ಲ ಬೇಕು ..
ಹೋಗು... ಗೆದ್ದೇ ಗೆಲ್ತಿಯಾ.!!..!!"
ಬೆನ್ನುತಟ್ಟಿದ....
ನಾನು ದಿವಾಕರನ ಮುಖ ನೋಡಿದೆ...
"ಹೊಡಿ... ಮುಂದುವರೆಸು.." ಎಂದು ಕಣ್ಣಸನ್ನೆಯಲ್ಲೇ ಹೇಳಿದ...
ನಾನು ಸ್ಟೇಜಿಗೆ ಬಂದೆ...
ಎಲ್ಲೆಲ್ಲೂ ಪಿನ್ ಡ್ರಾಪ್ ಸೈಲೆನ್ಸ್.... !!
ಜನರೆಲ್ಲ ನನ್ನನ್ನೇ ದಿಟ್ಟಿಸುತ್ತಿದ್ದರು.....!
ನನಗೆ ಎಲ್ಲಿಲ್ಲದ ಧೈರ್ಯ ಬಂದು ಬಿಟ್ಟಿತ್ತು....
"ಮಾನ್ಯರೆ....
ನಮ್ಮ ವಿರೋಧಿಯವರು ಈಗ ತಾನೆ ಹೇಳಿದರು...
ಇದು ನಮ್ಮ ಜಗತ್ತಿನ ಯಾವ ವಿಜ್ಞಾನಕ್ಕೂ ...
ಸಾಧ್ಯವಾಗದ, ಅರ್ಥವಾಗದ ವಿಚಾರ...!!
ನನಗಂತೂ ಅರ್ಥವಾಗುತ್ತಿಲ್ಲ....
ನಿಮಗೆ ಅರ್ಥವಾಯಿತಾ...??
"ಗಂಡಸರೆಲ್ಲ ನಪಂಸಕರಾಗುತ್ತಾರೆ...!!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!!!!!!
ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..???..!!!
ಇದನ್ನು ಕಂಡು ಹಿಡಿದ ಪುಣ್ಯಾತ್ಮ ಯಾರು..???...!!
ಮಹಾಜನಗಳೆ....
ನಾವೆಲ್ಲ ಅವನಿಗೆ ಕರೆದು ಸನ್ಮಾನ ಮಾಡಬೇಕು.....!!.."
ಇಡಿ ಸಭೆಯಲ್ಲಿ ಹಂಚು ಹಾರಿಹೋಗುವಷ್ಟು.. ನಗು.. ತಪ್ಪಾಳೆ...!!!
ಶಿಳ್ಳೆ... ಮುಂದೆ ಮಾತನಾಡಲಾಗದ ಸ್ಥಿತಿ....!!
ನನಗೆ ಉತ್ಸಾಹ ಜಾಸ್ತಿಯಾಯಿತು..... ಮಾತು ಮುಂದುವರೆಸಿದೆ.....
ನಾನು ಸ್ಟೇಜಿನಿಂದ ಹೊರಗೆ ಬರುತ್ತಲೇ ದಿವಾಕರ ನಾಗು ನನ್ನ ಆಲಂಗಿಸಿ ಕೊಂಡರು...
ನನ್ನಣ್ಣನ ಕಣ್ಣಂಚಲ್ಲಿ ನೀರಿತ್ತು...
ಅವನ ಖುಷಿ, ಸಂತೋಷ...
ಹೇಳದಿದ್ದರೂ ಗೊತ್ತಾಗುತ್ತಿತ್ತು...
ಆದರೆ ....
ಅಲ್ಲೂ ನಮಗೆ ಎರಡನೆಯ ಬಹುಮಾನ...!
ಕಾರ್ಯಕ್ರಮವನ್ನು ಸಂಘಟಿಸಿದವರು ಪರಿಸರವಾದಿಗಳು...!
ಕೈಗಾ ಅಣುಸ್ಥಾವರ ವಿರೋಧಿಸುವ ನಮಗೆ...
ಯಾರಿಗೂ "ಆ ವಿಷಯದಲ್ಲಿ" ಮೊದಲ ಬಹುಮಾನ ಬೇಡವಾಗಿತ್ತು...
ಆದರೆ ಸ್ಟೇಜಿನಲ್ಲಿ ಗಟ್ಟಿಯಾಗಿ ನಿಂತು ಮಾತಾಡಿ ಜನರ ಶಿಳ್ಳೆ ಸಿಕ್ಕಿದ್ದು ನನಗೆ ಖುಷಿಯಾಗಿತ್ತು...