Monday, July 20, 2009

ಇದು ಜಗತ್ತಿನ ಯಾವ ವಿಜ್ಞಾನಕ್ಕೂ ಅರ್ಥವಾಗದ ವಿಚಾರ...!

ಕಾಲೇಜು ದಿನಗಳಲ್ಲಿಯೂ ನಾನು ಬಹಳ ಸಂಕೋಚದ ಸ್ವಭಾವನಾಗಿದ್ದೆ..

ಕೀಳರಿಮೆ , ಅನಾಥ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು...
ಬೇರೆಯವರಿಂದ ಅನುಕಂಪ, ಸಿಂಪಥಿ ಯಾವಾಗಲೂ ಬಯಸುತ್ತಿದ್ದೆ...

ಯಾರಾದರೂ ...ಅನುಕಂಪದಿಂದ...
"ಪಾಪ.. ...!!
ಅಪ್ಪ ಇಲ್ಲದ ಹುಡುಗ.. "
ಅಂತ ಅಂದು ಬಿಟ್ಟರೆ ನನ್ನೊಳಗೆ ಒಂಥರಾ... ಖುಷಿಯಾಗುತ್ತಿತ್ತು...
ಅದನ್ನು ನನ್ನ ಮನಸ್ಸು ಬಯಸ್ಸುತ್ತಿತ್ತು.....

ಇದನ್ನು ಹೊರದೊಡಿಸಿದವರು ನನ್ನ ಚಿಕ್ಕಮ್ಮ....

ಅವರು ಸ್ವಲ್ಪ ನಿಷ್ಠೂರವಾದಿ..
ತಮಗೆ ಸರಿ ಎನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಎದುರಿಗೇ ಹೇಳಿ ಬಿಡುವಂತವರು..

"ನೀನು ಅನುಕಂಪ ಬಯಸುತ್ತಿದ್ದಿಯಾ...
ಇದು ತಪ್ಪು....
ಇದು ನಿನ್ನ ಏಳಿಗೆಗೆ ತೊಂದರೆ ಕೊಡುತ್ತದೆ...

ಅಲ್ಪತ್ರಪ್ತನನ್ನಾಗಿ ಮಾಡಿ ಬಿಡುತ್ತದೆ...
ಇದರಿಂದ ಹೊರಗೆ ಬಂದಂತೂ ನೀನು ಉದ್ಧಾರವಾಗೋದಿಲ್ಲ"
ನನ್ನ ಚಿಕ್ಕಮ್ಮ ಅಪ್ಪಟ ಹಳ್ಳಿ ಪ್ರತಿಭೆ...
ಆ ಭಾಗದಲ್ಲಿ...
ಹಾಡು, ಕಲೆ ಕಸೂತಿಯಿಂದಾಗಿ ಬಹಳ ಪ್ರಸಿದ್ದರು...

ಅವರ ಮಾತು ನನ್ನಲ್ಲಿ ಬಹಳ ನಾಟಿತು...

ಆದರೆ ಹೇಗೆ... ಹೊರಬರುವದು...?

ಚಿಕ್ಕಪ್ಪ, ಚಿಕ್ಕಮ್ಮ ಇಬ್ಬರೂ ನನಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ಪ್ರೋತ್ಸಾಹಿಸುತ್ತಿದ್ದರು...

"ನಿನ್ನಪ್ಪ ...ಆ ಕಾಲದಲ್ಲಿ ..
ಆ .. ದೇವಿಸರದ ಕುಗ್ರಾಮದಲ್ಲಿ ನಾಟಕ ತಂಡ ಕಟ್ಟಿ..
ನಾಟಕದ ನಿರ್ದೇಶನ ಮಾಡಿ ...
ರಾತ್ರಿಯಿಂದ ಬೆಳಗಿನವರೆಗೆ ನಾಟಕ ಆಡಿಸಿದ್ದರು...

ಅವರೇ ಮುಖ್ಯ ಖಳನಾಯಕನ ಪಾತ್ರ..
ನಮ್ಮೂರಲ್ಲಿ " ನ ಭೂತೋ... ನಭವಿಷ್ಯತಿ.."
ಅನ್ನುವಂಥಹ ನಾಟಕ...
ಅವರ ಮಗ ನೀನು....
ನೀನೂ ಭಾಷಣ ಮಾಡ ಬಲ್ಲೆ ...ಮಾಡು..."
ಎಂದು ಹುರಿದುಂಬಿಸುತ್ತಿದ್ದರು...


ನನ್ನಲ್ಲಿ ಆತ್ಮ ವಿಶ್ವಾಸದ ಕೊರತೆ.....

ಅವರ ಒತ್ತಾಯಕ್ಕೆ ಭಾಷಣ ಮಾಡಿದರೂ ಬಹುಮಾನ ಬಂದಿರಲಿಲ್ಲ....

ಕಾಲೇಜು ದಿನಗಳಲ್ಲಿ ನಾಗು, ದಿವಾಕರ ನನಗೆ ಬಹಳ ಆಪ್ತರಾದರು..
ದಿವಾಕರ ಒಳ್ಳೆಯ ಮಾತುಗಾರ...
ನನ್ನನ್ನೂ ತನ್ನ ಸಂಗಡ ಸೇರಿಸಿಕೊಂಡು ಚರ್ಚಾ ಸ್ಪರ್ಧೆಗೆ ಕರೆದು ಕೊಂಡು ಹೋಗುತ್ತಿದ್ದ...
ತಾನೇ ಭಾಷಣ ಬರೆದು ಕೊಡುತ್ತಿದ್ದ...

ಆದರೆ ....
" ಹೇಳಿಕೊಟ್ಟ ಮಾತು..

ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬರುವದಿಲ್ಲವಲ್ಲ...!!.."

ಏನಾದರೂ ಇದ್ದರೆ.... ಅದು ನಮ್ಮ ಸ್ವಂಥದ್ದು...
ನಮ್ಮ ಸ್ವಂತಿಕೆ.....

ನನ್ನ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಆ ಭಾಷಣಗಳೆಲ್ಲ ಸಪ್ಪೆಯಾಗಿ ಬಿಡುತ್ತಿತ್ತು...

"ನೀನು ಒಂದು ಬಹುಮಾನ ತೆಗೆದು ಕೊಳ್ಳುವವರೆಗೆ ನಾನು ಬೀಡುವದಿಲ್ಲ"
ಎಂದು ದಿವಾಕರ ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟ...

ನಾಗು, ದಿವಾಕರ ಇಬ್ಬರೂ ಪಣ ತೊಟ್ಟರು....

ಸಿದ್ದಾಪುರದ ಟೌನ್ ಹಾಲಿನಲ್ಲಿ ಒಂದು ಚರ್ಚಾ ಸ್ಪರ್ಧೆ ಇತ್ತು..

" ಅಣುಸ್ಥಾವರಗಳು ವಿನಾಷಕ್ಕೆ ದಾರಿ"

ಆಗ "ಉತ್ತರ ಕನ್ನಡ ಜಿಲ್ಲೆ ಉಳಿಸಿ" ಎನ್ನುವ ಆಂದೋಲನದ ಜೋರಾಗಿತ್ತು...
ಕೈಗಾ ಅಣುಸ್ಥಾವರ ವಿರೋಧ ಎಲ್ಲೆಡೆ ಇತ್ತು....

ಕಾರಂತಜ್ಜ ನಮ್ಮೆಲ್ಲರ ನಾಯಕರಾಗಿದ್ದರು...

"ಅಣುಸ್ಥಾವರಗಳು ಬೇಕು" ಅನ್ನಲಿಕ್ಕೆ ಯಾರೂ ಇರುತ್ತಿರಲಿಲ್ಲ...

ನಾವು.., ನಮ್ಮ ಗುಂಪು ಸ್ವಲ್ಪ ಎಡವಟ್ಟುಗಳು....
"ಅಣುಸ್ಥಾವರಗಳು ಬೇಕು" ಎಂದು ವಾದ ಮಾಡುವದಕ್ಕೆ ತಯಾರಿ ಮಾಡಿದೆವು...

ದಿವಾಕರ ರಾಜ್ಯಮಟ್ಟದಲ್ಲಿ ಭಾಷಣಕ್ಕೆ ಪ್ರಥಮ ಬಹುಮಾನ ಪಡೆದವ..
ಈಗಲೂ ಅತ್ಯುತ್ತಮ ವಾಗ್ಮಿ... ಪ್ರತಿಭಾವಂತ...

ಆದರೂ ನಮಗೆ ಬಹುಮಾನ ಸಿಗುವದು ಸಾಧ್ಯವೇ ಇಲ್ಲವಾಗಿತ್ತು...!!

ಅದಕ್ಕೆ ಕಾರಣ.....
"ನಯನಾ" ಎನ್ನುವ ಹುಡುಗಿ....


ಸುಂದರ ದುಂಡು ಮುಖದ ನೀಲಿ ಕಣ್ಣಿನ ಹುಡುಗಿ ಭಾಷಣಕ್ಕೆ ಬರುತ್ತಿದ್ದಳು..

ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!

ನಾಗು ಹೇಳಿದ...
" ಈ ಬಾರಿ ಇದಕ್ಕೆಲ್ಲ ಕೊನೆ ಹಾಕೋಣ...
ಈ ಬಾರಿ ನಾವೇ ಗೆಲ್ಲುತ್ತೇವೆ..ನನ್ನ ಬಳಿ ಉಪಾಯವಿದೆ.."


ಅವನ ವಿಚಾರಗಳು.. ಧೋರಣೆಗಳು ಬೇರೆಯೇ...

ಭಾಷಣದ ದಿನ ಬಂತು...
ಊರಿನಿಂದ ನನ್ನ ಭಾಷಣ ಕೇಳಲು ನನ್ನ ಅಣ್ಣ ಬಂದಿದ್ದರು...

ಜನಸಾಗರವೇ ಸೇರಿತ್ತು....

ಮೊದಲು ದಿವಾಕರ...!
ಎಂದಿನ ತನ್ನ ಸಿಂಹ ಧ್ವನಿಯಲ್ಲಿ ಹೇಳಿದ..

"ವಿಜ್ಞಾನ ವೆಂದರೆ ಒಂದು ಕತ್ತಿ ಇದ್ದ ಹಾಗೆ...
ಅದು ಒಬ್ಬ ಕ್ರಷಿಕನ ಕೈಗೆ ಸಿಕ್ಕರೆ ಬೆಳೆಯನ್ನು, ಕಳೆಯನ್ನು ಕಡಿಯಲಿಕ್ಕೆ ಉಪಯೋಗಿಸುತ್ತಾನೆ..
ಅದೇ ಕತ್ತಿ ಒಬ್ಬ ಕೊಲೆಗಡುಕನ ಕೈಗೆ ಸಿಕ್ಕರೆ ತಲೆಕಡಿಯಲು ಉಪಯೋಗಿಸುತ್ತಾನೆ..

ಇಲ್ಲಿ ಕತ್ತಿಯ ತಪ್ಪು ಏನೂ ಇಲ್ಲ...

ಕತ್ತಿ ಉಪಯೋಗಿಸುವವನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ..

ಅಣುಸ್ಥಾವರಗಳೂ ಹಾಗೇ...ಅದು ಇಂದಿನ ವಿಜ್ಞಾನ ..
ಅದು ಭವಿಷ್ಯದ ಅವಶ್ಯಕತೆ...."
ಎಂದು ತನ್ನ ವಾದ ಮಂಡಿಸಿದ...
ಜನರೆಲ್ಲ ತಲೆದೂಗಿದರು....

ನಂತರ ಬಂದವಳು ಬಳುಕುವ .."ನಯನಾ..."...!!!!...
ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು....
ಕಣ್ಣ ಮುಂದೆ ಬಂದ ಕೂದಲನ್ನು ಹಿಂದಕ್ಕೆ ತಳ್ಳುತ್ತಾ...
ತನ್ನ ಮಾದಕ ..
ಮೋಹಕ ಧ್ವನಿಯಲ್ಲಿ
....ಶುರು ಮಾಡಿದಳು...

" ನನ್ನ ಪ್ರೀತಿಯ ಬಂಧುಗಳೇ...

ಅಣು ಶಕ್ತಿಯಿಂದ ವಿಕಿರಣ ಉಂಟಾಗುತ್ತದೆ....!

ಸ್ವಲ್ಪ ಎಚ್ಚರ ತಪ್ಪಿದರೆ... ವಿನಾಷ ಗ್ಯಾರೆಂಟಿ...!

ರಷಿಯಾದ ಚರ್ನೋಬಿಲ್ಲಿನಲ್ಲಿ ಏನಾಯಿತು.....?

ನಾಗಸಾಕಿ, ಹಿರೋಷಿಮಾದಲ್ಲಿ ಏನಾಗಿದೆ..? ಏನಾಗುತ್ತಿದೆ...??

ಸಹಸ್ರಾರು.., ಕೊಟ್ಯಾಂತ ಜನರು.. ಪರಿತಪಿಸುತ್ತಿದ್ದಾರೆ...!

ಸಾವು ಬದುಕಿನ ಮದ್ಯೆ ಒದ್ದಾಡುತ್ತಿದ್ದಾರೆ....!

ಅಣು ವಿಕಿರಣದಿಂದ ಪರಿಸರ ನಾಶವಾಗುತ್ತದೆ...

ನಯನಾ ತನ್ನ ಧ್ವನಿಯನ್ನು ಮತ್ತೂ ಏರಿಸಿ...
ಮೇಜು ಕುಟ್ಟಿದಳು...!

ಆವೇಶ ...ಜಾಸ್ತಿಯಾಯಿತು..!!

"ಬದುಕು ದುಸ್ಥರವಾಗುತ್ತದೆ...!
ಗಂಡಸರು ನಪಂಸಕರಾಗುತ್ತಾರೆ...!
ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!
ಕಣ್ಣಿಲ್ಲದ, ಕಾಲಿಲ್ಲದ ಮಕ್ಕಳು ನಮ್ಮ ಭವಿಷ್ಯವಾಗುತ್ತಾರೆ...!

ನನ್ನ ಆತ್ಮೀಯ ಬಂಧುಗಳೇ.....
ಇಂಥಹ ಬದುಕು ನಿಮಗೆ ಬೇಕಾ...?

ನೀವೇ ಹೇಳಿ ಅಣು ಸ್ಥಾವರ ನಮಗೆ ಬೇಕಾ..?"

ಅವಳ ಸೌಂದರ್ಯ, ಮಾದಕ ಧ್ವನಿಗೆ ....ಮರುಳಾಗಿದ್ದ ಜನರೆಲ್ಲ...
"ಬೇಡ .. ಬೇಡ " ಎಂದರು...

ನಂತರ ಸರದಿ ನನ್ನದು...!!
ಸೋಲು.... ಖಚಿತವಾಗಿತ್ತು...!!

ಒಂಬತ್ತನೆ ವಿಕೆಟ್ಟಿಗೆ ಅನಿವಾರ್ಯವಾಗಿ ಆಡಲು ಬರುವ ಆಟಗಾರನ ಸ್ಥಿತಿ ನನ್ನದಾಯಿತು..

ನರ್ವಸ್ ಆಗಿಬಿಟ್ಟಿದ್ದೆ..

ಅವಳ ಭಾಷಣದ ಮೋಡಿಯಿಂದ ..
ಜನರ ತಪ್ಪಾಳೆ ನನ್ನನ್ನು ಅಧಿರನನ್ನಾಗಿ ಮಾಡಿ ಬಿಟ್ಟಿತ್ತು....!

ಅಷ್ಟರಲ್ಲಿ ನಾಗು ಓಡೋಡಿ ಬಂದ...!
ಕಿವಿಯಲ್ಲಿ ಏನೇನೋ ಹೇಳಿದ...! ಹುರಿದುಂಬಿಸಿದ....!!

"ಈ ಸ್ಟೇಜು ನಿಂದು.. ಈ ಕ್ಷಣ ಈ ಘಳಿಗೆ ನಿನ್ನದು...
ಈ ಸಮಯ ಮತ್ತೆ ಸಿಗುವದಿಲ್ಲ...
ಪ್ರಕಾಶು.. ...
ಸೋಲು... ಸೋಲುತ್ತಿರುವಾಗ... ಗೆಲ್ಲ ಬೇಕು ..
ಹೋಗು... ಗೆದ್ದೇ ಗೆಲ್ತಿಯಾ.!!..!!"
ಬೆನ್ನುತಟ್ಟಿದ....

ನಾನು ದಿವಾಕರನ ಮುಖ ನೋಡಿದೆ...

"ಹೊಡಿ... ಮುಂದುವರೆಸು.." ಎಂದು ಕಣ್ಣಸನ್ನೆಯಲ್ಲೇ ಹೇಳಿದ...

ನಾನು ಸ್ಟೇಜಿಗೆ ಬಂದೆ...

ಎಲ್ಲೆಲ್ಲೂ ಪಿನ್ ಡ್ರಾಪ್ ಸೈಲೆನ್ಸ್.... !!

ಜನರೆಲ್ಲ ನನ್ನನ್ನೇ ದಿಟ್ಟಿಸುತ್ತಿದ್ದರು.....!
ನನಗೆ ಎಲ್ಲಿಲ್ಲದ ಧೈರ್ಯ ಬಂದು ಬಿಟ್ಟಿತ್ತು....

"ಮಾನ್ಯರೆ....
ನಮ್ಮ ವಿರೋಧಿಯವರು ಈಗ ತಾನೆ ಹೇಳಿದರು...

ಇದು ನಮ್ಮ ಜಗತ್ತಿನ ಯಾವ ವಿಜ್ಞಾನಕ್ಕೂ ...
ಸಾಧ್ಯವಾಗದ, ಅರ್ಥವಾಗದ ವಿಚಾರ...!!

ನನಗಂತೂ ಅರ್ಥವಾಗುತ್ತಿಲ್ಲ....
ನಿಮಗೆ ಅರ್ಥವಾಯಿತಾ...??

"ಗಂಡಸರೆಲ್ಲ ನಪಂಸಕರಾಗುತ್ತಾರೆ...!!

ಅಂಗವಿಕಲ ಮಕ್ಕಳು ಹುಟ್ಟುತ್ತಾರೆ...!!!!!!

ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..???..!!!


ಇದನ್ನು ಕಂಡು ಹಿಡಿದ ಪುಣ್ಯಾತ್ಮ ಯಾರು..???...!!

ಮಹಾಜನಗಳೆ....

ನಾವೆಲ್ಲ ಅವನಿಗೆ ಕರೆದು ಸನ್ಮಾನ ಮಾಡಬೇಕು.....!!.."


ಇಡಿ ಸಭೆಯಲ್ಲಿ ಹಂಚು ಹಾರಿಹೋಗುವಷ್ಟು.. ನಗು.. ತಪ್ಪಾಳೆ...!!!

ಶಿಳ್ಳೆ... ಮುಂದೆ ಮಾತನಾಡಲಾಗದ ಸ್ಥಿತಿ....!!

ನನಗೆ ಉತ್ಸಾಹ ಜಾಸ್ತಿಯಾಯಿತು..... ಮಾತು ಮುಂದುವರೆಸಿದೆ.....

ನಾನು ಸ್ಟೇಜಿನಿಂದ ಹೊರಗೆ ಬರುತ್ತಲೇ ದಿವಾಕರ ನಾಗು ನನ್ನ ಆಲಂಗಿಸಿ ಕೊಂಡರು...

ನನ್ನಣ್ಣನ ಕಣ್ಣಂಚಲ್ಲಿ ನೀರಿತ್ತು...
ಅವನ ಖುಷಿ, ಸಂತೋಷ...
ಹೇಳದಿದ್ದರೂ ಗೊತ್ತಾಗುತ್ತಿತ್ತು...

ಆದರೆ ....
ಅಲ್ಲೂ ನಮಗೆ ಎರಡನೆಯ ಬಹುಮಾನ...!

ಕಾರ್ಯಕ್ರಮವನ್ನು ಸಂಘಟಿಸಿದವರು ಪರಿಸರವಾದಿಗಳು...!
ಕೈಗಾ ಅಣುಸ್ಥಾವರ ವಿರೋಧಿಸುವ ನಮಗೆ...
ಯಾರಿಗೂ "ಆ ವಿಷಯದಲ್ಲಿ" ಮೊದಲ ಬಹುಮಾನ ಬೇಡವಾಗಿತ್ತು...

ಆದರೆ ಸ್ಟೇಜಿನಲ್ಲಿ ಗಟ್ಟಿಯಾಗಿ ನಿಂತು ಮಾತಾಡಿ ಜನರ ಶಿಳ್ಳೆ ಸಿಕ್ಕಿದ್ದು ನನಗೆ ಖುಷಿಯಾಗಿತ್ತು...



71 comments:

ಗೋಪಾಲ್ ಮಾ ಕುಲಕರ್ಣಿ said...

chennagide sir nimma lekhana. nimage bahumana banto illo gottilla i lekhanakkantu modalene bahumanane.

ರೂಪಾ ಶ್ರೀ said...

sir,
ಅಂಥ ಪರಿಸ್ಥಿತಿಯಲ್ಲೂ ನೀವು ತೋರಿದ ಸಮಯ ಪ್ರಜ್ಞೆ ನನಗೆ ತುಂಬಾ ಹಿಡಿಸಿತು!!!

Ittigecement said...

ಗೋಪಾಲ್ ಕುಲಕರ್ಣಿಯವರೆ.....

ನನ್ನ ಬ್ಲಾಗಿಗೆ ಸ್ವಾಗತ.....
ಆನಾಥ ಪ್ರಜ್ಞೆ, ಕೀಳರಮೆಯಂಥಹ ಶತ್ರು ಬೇರೊಂದಿಲ್ಲ..
ಗೊತ್ತಾದರೂ ಬಿಡಲಾಗದ ಸ್ಥಿತಿ....

ಹೆಜ್ಜೆ ಹೆಜ್ಜೆಗೂ ಅಪ್ಪನ ನೆನಪು..
ಕೀಳರಮೆಯ, ಹಿಂಜರಿಕೆಯ ಭಾವ ಕಾಡುತ್ತಿತ್ತು...

ಹೇಳುವಷ್ಟು , ಬರೆಯುವಷ್ಟು ಸುಲಭವಲ್ಲ ಅದು...
ನನ್ನ ಚಿಕ್ಕಮ್ಮ, ಸ್ನೇಹಿತರನ್ನು ಯಾವಾಗಲೂ ನೆನಪಿಸಿಕೊಳ್ಳ ಬೇಕು....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರೂಪಾಶ್ರೀಯವರೆ....

ನಯನಾ" ಚೆನ್ನಾಗಿ ಮಾತಾಡುತ್ತಿರಲಿಲ್ಲ ಎನ್ನುವದು ನಮ್ಮ ಆಕ್ಷೇಪವಲ್ಲ...
ಅವಳಿಗಿಂತ ನಮ್ಮ ಮಾತು, ವಿಚಾರ ಚೆನ್ನಾಗಿರುತ್ತಿತ್ತು...
ಚರ್ಚಾ ಸ್ಪರ್ಧೆಯಲ್ಲಿ...
ಅವಳಿಗೆ ಯಾವಾಗಲೂ ನಮ್ಮ ಮಾತು ಮುಗಿದ ಮೇಲೆ ಅವಕಾಶ ಸಿಗುತ್ತಿತ್ತು...

ಅಲ್ಲಿ ಖಂಡಿಸುವದು ಸುಲಭ...
ಸಮರ್ಥನೆ ಕಷ್ಟ...

ಆದರೆ ಅಂದು ಅವಳ ಮಾತು ಮುಗಿದ ಮೇಲೆ..
ಮೊದಲಾ ಬಾರಿಗೆ ನಮಗೆ ಅವಕಾಶ ಸಿಕ್ಕಿತು...

ಈ ಉಪಾಯ ಹೇಳಿಕೊಟ್ಟಿದ್ದು "ನಾಗು"
ಸಮರ್ಥನೆ ದಿವಾಕರನದು....
ಅಲ್ಲಿ ಗೊಂಬೆಯಂತೆ ಹೇಳಿ ಬಂದದ್ದು ನಾನು...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

VENU VINOD said...

ಗಂಡಸರು ನಪಂಸಕರಾದರೆ...
ಅಂಗವಿಕಲ ಮಕ್ಕಳು ಹೇಗೆ ಹುಟ್ಟುತ್ತಾರೆ..?
ನಿಮ್ಮ ಸಮಯಪ್ರಜ್ಞೆ ನಿಜಕ್ಕೂ ಶ್ಲಾಘನೀಯ witty answer :)
and....
ದಿವಾಕರನಂತಹ ಫ್ರೆಂಡ್ ಇರಬೇಕು ಇದ್ದರೆ...

Ittigecement said...

ವೇಣು ವಿನೋದ್...

ನಿಮ್ಮ ಬ್ಲಾಗಿಗೆ ಸರಿಯಾಗಿ ಬರಲಾಗಲಿಲ್ಲ..
ಕ್ಷಮಿಸಿ...

ಗೆಳೆಯರ ವಿಚಾರದಲ್ಲಿ ನಾನು ಬಹಳ ಅದ್ರಷ್ಟವಂಥ....
ಸತ್ಯ, ದಿವಾಕರ, ನಾಗು, ಶಿವು ಮಲ್ಲಿಕಾರ್ಜುನ...
ನಿಜಕ್ಕೂ ಅವರ ಸಹಾಯಕ್ಕೆ..
ಪ್ರೀತಿ ಸ್ನೇಹಕ್ಕೆ ಎಷ್ಟು ಋಣಿಯಾಗಿದ್ದರೂ ಸಾಲದು....

ನಯನಾ.." ಯಾವಗಲೂ ಮೊದಲ ಸ್ಥಾನ ಪಡೆಯುತ್ತಿದ್ದಳು...
ಆ ಸರಣಿಯನ್ನು ಮುರಿಯಲೇ ಬೇಕಿತ್ತು....
ಅದಕ್ಕೆ ಸರಿಯಾದ ಅವಕಾಶ ಅಂದು ಸಿಕ್ಕಿತು....

ನನ್ನ ಭಾಷಣ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

Anonymous said...

ಭಾಷಣ ಚೆನ್ನಾಗಿದೆ ಪ್ರಕಾಶಣ್ಣ. ಮುಂದೆ? ಪ್ರಥಮ ಬಹುಮಾನ ಬಂದದ್ದು ಯಾವಾಗ?

Ittigecement said...

ಜ್ಯೋತಿಯವರೆ....

ಮೊದಲ ಬಹುಮಾನ ಬಂದಿತ್ತು...
ಅದರಲ್ಲೂ...
ಪೆಟ್ಟಿಗೆ ಗಪ್ಪತಿಯ "ನಯನಾ" ಸೋಲಿಸಿ ಮೊದಲು ಬಂದಿದ್ದೆ....

ಆದರೆ ಒಂದು ಒಳ್ಳೆಯ ಚರ್ಚೆಯ ವಸ್ತು....

ಖಂಡಿತ ಅದನ್ನೂ ಬರೆಯುವೆ.... ಮುಂದೆಯಾವಾಗಲದರೂ....

ಭಾಷಣ ಇಷ್ಟವಾಗಿದ್ದಕ್ಕೆ ವಂದನೆಗಳು...

Unknown said...

ಇದು ನೈಜ ಕತೇನಾ?

Ittigecement said...

ಅಶೋಕ್ ಸರ್....

ನಡೆದದ್ದು ನಿಜ...

ಸ್ವಲ್ಪ ಉಪ್ಪು ಖಾರ..
ಮಸಾಲೆ ಒಗ್ಗರಣೆ...

ಮೂಲ ಘಟನೆಗೆ ಚ್ಯುತಿ ಬಾರದಂತೆ....

ನಿನ್ನೆ ಶಂಕರ ಮಠದಲ್ಲಿ ಯಕ್ಷಗಾನ ತಾಳ ಮದ್ದಲೆಗೆ ಸ್ನೇಹಿತ ದಿವಾಕರ ಬಂದಿದ್ದ...

"ಪಾದುಕ ಪಟ್ಟಾಭಿಷೇಕ"

ಭರತ ಅರ್ಥ "ದಿವಾಕರ" ಹೇಳಿದರೆ...
ರಾಮನ ಅರ್ಥ ಹೇಳಿದವರು...
ವಿದ್ವಾನ್ "ಕೆರೆಕೈ ಉಮಾಕಾಂತ್ ಭಟ್"


ಮತ್ತೆ ನೆನಪಾಯಿತು...

ಧನ್ಯವಾದಗಳು...

shivu.k said...

ಪ್ರಕಾಶ್ ಸರ್,


ಓದುವಾಗ ಭಾಷಣದ ಸಮಯ ಬಂತಲ್ಲ ಆಗ ಎಲ್ಲಾ ಚಿತ್ರಗಳು ಕಣ್ಣಮುಂದೆ ಬಂದವು. ನಂತರ ನಿಮ್ಮ ಭಾಷಣ ಓದಿ ಸಕ್ಕತ್ ನಗು ಬಂತು. ಆಗ ಹಿಂಜರಿಕೆಬಿಟ್ಟು ಮಾತಾಡಿದ ಮಾತುಗಳು ಈಗಲೂ ಹಾಗೆ ಸರಾಗವಾಗಿ [logic]ಮಾತಾಡುವುದು ಮುಂದುವರಿದಿದೆಯಲ್ಲಾ...

ಲೇಖನದ ಎಲ್ಲಾ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ...
ಮುಂದುವರಿಸಿ...

ಧನ್ಯವಾದಗಳು.

Ittigecement said...

ಶಿವು ಸರ್.....

ಬೇರೆಯವರಿಂದ ಅನುಕಂಪ, ಸಿಂಪಥಿ ಬಯಸುವದು ನನ್ನ
ದೌರ್ಬಲ್ಯ ಅಂತ ತಿಳಿಸಿಕೊಟ್ಟ ನನ್ನ
ಚಿಕ್ಕಮ್ಮ ನನಗೆ "ಗ್ರೇಟ್" ಅನಿಸುತ್ತಾರೆ... ಈಗ.

ಆದರೆ ಆಗ ಅವರು ಹೇಳಿದ್ದನ್ನು ಅಪಾರ್ಥ ಮಾಡಿಕೊಳ್ಳುತ್ತಿದ್ದೆ..
ಅವರು ನನ್ನ ವಿರೋಧಿಗಳು ಅಂದುಕೊಳ್ಳುತ್ತಿದ್ದೆ...
ಬಹುಷಃ ಆಗ ಅವರು
"ಚಿಕ್ಕವಯಸ್ಸಿನವನು, ಹುಡುಗಾಟಿಕೆ ಬುದ್ಧಿ" ಅಂತ ಕ್ಷಮಿಸಿ ಬಿಟ್ಟರೇನೊ....
ಅವರ ಮಾತಿನ ಸತ್ಯ ಸರಿಯಾಗಿ ಮನದಟ್ಟಾಗಿದ್ದು "ನಾಗು, ದಿವಾಕರ" ಇಬ್ಬರೂ ಹೇಳಿದಾಗ...

ನನ್ನ ಚಿಕ್ಕಪ್ಪ, ಚಿಕ್ಕಮ್ಮನವರುಗಳಿಗೆ..
ಆಗ ನನ್ನ ಮಾತುಗಳಿಂದ, ನಡತೆತೆಯಿಂದ ಬೇಸರ ಕೊಟ್ಟಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ...
ಈಗ ಪಶ್ಚಾತ್ತಾಪ ಆಗುತ್ತದೆ....

ಅವರುಗಳು ನನ್ನನ್ನು ಕ್ಷಮಿಸಿ ಏನೂ ಆಗಿಲ್ಲ ಅನ್ನುವಂತೆ
ಪ್ರೀತಿ ಮಮತೆಯಿಂದಲೆ ಇದ್ದಾರೆ...
ನನಗೆ ಎಲ್ಲೋ "ಅಪರಾಧಿ ಮನೋಭಾವ" ಕಾಡುತ್ತದೆ....

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

NiTiN Muttige said...

ಹಾ..ಹಾ...ಹಾ...
ನಪುಂಸಕರಾದರೆ ಮಕ್ಕಳಾಗುವುದು ಹೇಗೆ!! ಪ್ರಶ್ನೆ ಸಕತ್ ಆಗಿದೆ ಇದು ನಾಗು ದು ತಲೆದಾ!!...
ನಾನು ಭಾಷಣ ಸ್ಪರ್ಧೆಗೆ ಹೋಗುವಾಗಲೂ ನಯನ ಎಂಬ ಹುಡುಗಿ ಇದ್ದಳು.ಒಂದು ಸಲವೂ ಅವಳನ್ನು ಸೋಲಿಸಲಾಗಲಿಲ್ಲ!!!...

ಆ ವಯಸ್ಸೆ ಹಾಗೆ.. ನಮಗೇ ಮಾತ್ರ ಗೊತ್ತು ಎಂಬ ಹೆಡೆ ತಲೆಯಲ್ಲಿ ಆಡುತ್ತಿರುತ್ತದ್ದೆ.ಹಿರಿಯರಿಗೆ ಎಲ್ಲೋ ನೋವು ಮಾಡಿ ಬಿಟ್ಟಿರುತ್ತೆವೆ.ಆದರೆ ಒಂದು ಕಾಲಘಟ್ಟದಲ್ಲಿ ಅರಿತು ಜೀವನದಲ್ಲಿ ಮತ್ತೆ ಅಂಥ ತಪ್ಪು ಮಾಡಬಾರದು ಎಂಬ ತೀರ್ಮಾನ ತೆಗೆದು ಕೊಳ್ಳುತ್ತೇವಲ್ಲಾ...ಅದು ನಿಜ ಜೀವನ ಅಲ್ಲವಾ....

Ittigecement said...

ನಿತಿನ್...

ಇಲ್ಲಿ ಆ ಹುಡುಗಿಯ ಹೆಸರು ಬದಲಿಸಿದ್ದೇನೆ....
ಭಾಷಣದ ತಿರುವು ಪಡೆದ ಈ ಪಾಯಿಂಟ್ ...
ನಾಗು ಹುರಿದುಂಬಿಸಿದ್ದು... ದಿವಾಕರನ ಪ್ರೋತ್ಸಾಹ...
ಆ ನನ್ನ ಮಾತು ಹೇಗಿತ್ತು ಅಂದರೆ ಸೆಹ್ವಾಗ್ ಬ್ಯಾಟಿಂಗ್ ಥರಹ...
ಮೊದಲ ಬಾಲ್ ಸಿಕ್ಸರ್ ಆಗಿತ್ತು...

ಆದರೂ ಭಾಷಣ ನನಗೆ ಹೇಳಿಸಿದ್ದಲ್ಲ...
ಅದು ಏನಿದ್ದರೂ ದಿವಾಕರನದ್ದು...
ಅದ್ಭುತ ಮಾತುಗಾರ...
ಸಾಧ್ಯವಾದಲ್ಲಿ...
ಸಧ್ಯದಲ್ಲಿ ನಿಮಗೆ ಅವನ ಮಾತನ್ನು ಸವಿಯುವ ಅವಕಾಶ ಅಗಬಹುದು...

ನೀವು ಅಂದಿದ್ದು ತುಂಬಾ ಅರ್ಥ ಪೂರ್ಣ ಮಾತು...
ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾದರೂ...
ಒಪ್ಪಿಕೊಳ್ಳಲು ಅಹಂ ಅಡ್ಡಿ ಬರುತ್ತಿತ್ತೇನೊ....

ಪ್ರತಿಕ್ರಿಯೆಗೆ ವಂದನೆಗಳು....

ಜಲನಯನ said...

ಪ್ರಕಾಶ್, ಎಂತಾ ಮಾರಾಯ್ರೆ...ನಂಗೆ ನನ್ನ ಕಾಲೇಜಿನ ೨೦-೨೨ ವರ್ಷ ಹಿಂದಿನ ದಿನಗಳಿಗೆ ತಳ್ಳಿಬಿಟ್ರಿ ನಿಮ್ಮ ಲೇಖನದಿಂದ...ಎಂಥಾ ಮಜ ಅಲ್ವಾ..? ಆ ಸ್ಪರ್ಧೆಗಳು...ಚರ್ಚಾ ಸ್ಪರ್ಧೆಗಳಲ್ಲಿ ಏನೋ ಹುಚ್ಚು ಆವೇಶ, ಕೆಲವೊಮ್ಮೆ ಆಶು ಸ್ಪರ್ಧೆಗಳಲ್ಲಿ ಪದ ಸಿಗದೆ ತೊಳಲಾಡಿದ್ದೀವಿ, ಮತ್ತೆ ನಮ್ಮ ನೆಚ್ಚಿನ ವಿಷಯದ ಚರ್ಚಾ ಸ್ಪರ್ಧೆಯಲ್ಲಿ ಮೇಜು ಕುಟ್ಟಿದ್ದು ನಿಮ್ಮ ಸ್ನೇಹಿತೆ ತರಹ ..ಶಹಬ್ಬಾಶ್ ಎನಿಸಿಕೊಂಡದ್ದೂ..ಊಂಟು...ನನಗೆ ನನ್ನ ಮೊದಲ ಚರ್ಚಾ ಸ್ಪರ್ಧೆಯ ಬಹುಮಾನ ಎಂದಿಗೂ ಮರೆಯಲಾಗದು.....thanks you ನಮ್ಮ ನೆನಪಿನಾಳಕ್ಕೆ ನಮ್ಮನ್ನು ಕೊಂಡೊಯ್ದಿದ್ದಕ್ಕೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಲಗಾನ್ ಚಿತ್ರದಲ್ಲಿ ಕಡೆಯ ಬಾಲು ಸಿಕ್ಸರ್ ಹೊಡೆದಂತೆ ಆ ಹುಡುಗಿಯ ಆತುರದಮಾತನ್ನು ಹಿಡಿದು ನೀವು ನಿಮ್ಮ ಸಮಯಪ್ರಜ್ಞೆ ಬಳಸಿ ಮೆಚ್ಚುಗೆಯಾಗುವಂತೆ ಮಾತನಾಡಿದ್ದೀರಿ. ಇಲ್ಲಿ ಮೊದಲ ಬಹುಮಾನ ಬರದಿದ್ದರೇನಂತೆ ಬೆಟ್ಟದಷ್ಟು ಆತ್ಮವಿಶ್ವಾಸ ಬಂದಿರುವುದು ಮುಖ್ಯವಲ್ಲವೇ?

Ramya Hegde said...

ನಿಮ್ಮ ಭಾಷಣ ಚನ್ನಾಗಿತ್ತು. ನಾಗು ಅವರ ಸಮಯ ಪ್ರಜ್ಞೆ ತುಂಬಾ ಇಷ್ಟ ಆತು. ಮೊದಲನೇ ಬಹುಮಾನ ಯಾವಾಗ ಬಂತು, ನಯನಾ ಳ ಕಿರುನೋಟವನ್ನು ಸೋಲಿಸಿದ್ದು ಯಾವಾಗ?

umesh desai said...

ಹೆಗಡೆ ಅವರೆ ಮೆಚ್ಚಿದೆ ನಿಮ್ಮ ಸಮಯ ನೋಡಿ ಸಿಕ್ಸರ್ ಎತ್ತುವ ಚಾಲಾಕಿತನ...ನಿಮ್ಮ ಚಿಕ್ಕಮ್ಮ ನಿಮ್ಮ ಕೀಳರಿಮೆ ಹೋಗಲಾಡಿಸಿದರು ಎಂದಿರಿ ನಮ್ಮದೂ ಧನ್ಯವಾದ ಇಲ್ಲವಾದರೆ ಪ್ರಕಾಶ್ ಹೆಗಡೆ ಹೀಗೆ ಪ್ರಕಾಶಿಸಲು ಆದುತ್ತಿತ್ತೇ....

ರಾಜೀವ said...

ಪ್ರಕಾಶ್ ಸರ್,

ಒಳ್ಳೆಯ ಲೇಖನದ ಜೊತೆ ಒಳ್ಳೆಯ ಸಂದೇಶವನ್ನೂ ಕೊಟ್ಟಿದ್ದೀರ. ಸಂಪಾದಿಸಿದರೆ ಅಂತಹ ಸ್ನೇಹಿತರನ್ನು ಸಂಪಾದಿಸಬೇಕು. ನಿಮ್ಮ ತಂಡಕ್ಕೆ ಹಾಟ್ಸ್ ಆಫ್.

ನನ್ನ PUC ದಿನಗಳನ್ನು ನೆನಪಿಸಿಬಿಟ್ಟಿರಿ. PUCನಲ್ಲಿ ಒಳ್ಳೆ ಅಂಕಗಳನ್ನು ಪಡೆದೆ. ಕೊನೆಯ ದಿನ ಪ್ರಿನ್ಸಿಪಾಲ್ ನನ್ನನ್ನು ಕರೆದು, ಏನಾದರು ಮಾತಾಡು ಎಂದರು. ನಾನು ಏನೇನು ಮಾತಾಡ್ಬೇಕು ಅಂತ ಒಂದು ಚೀಟಿಯಲ್ಲಿ ಬರೆದು ಹೋಗಿದ್ದೆ. ಆದರೆ ಸ್ಟೇಜ್ ಮೇಲೆ ಏನು ಜ್ಞಾಪಕ ಬರಲಿಲ್ಲ. ಜೇಬಿನಲ್ಲಿದ್ದ ಚೀಟಿಯನ್ನು ತೆಗೆದು ಅಲ್ಲೇ ಓದಿಬಿಟ್ಟೆ ;). ಅವತ್ತೇ ಕೊನೆ ನಾನು ಸ್ಟೇಜ್ ಹತ್ತಿದ್ದು.

ಚಂದಿನ | Chandrashekar said...

ಗಹನ ವಿಷಯಗಳನ್ನು ಸರಳವಾಗಿ, ಪರಿಣಾಮಕಾರಿಯಾಗಿ ಮಂಡಿಸುವ ಕೌಶಲ್ಯತೆ ನಿಮ್ಮಲ್ಲಿ ಯಥೇಚ್ಚವಾಗಿದೆ.

Ravi Hegde said...

ಪ್ರಕಾಶ್ ಸರ್,

ಭಾಷಣ ಚನ್ನಾಗಿತ್ತು.
ನಯನಾ ಸೋತದ್ದು ಯಾವಾಗ?

Ravi

ಬಾಲು said...

ಓಹ್ ಅದು ಪೆಟ್ಟಿಗೆ ಗಪ್ಪತಿ ಯಾ ನಯನ ನ?
ಎಂತ ನೀವು, ಗಪ್ಪತಿ ಯಾವ ಹುಡುಗಿ ಹಿಂದೆ ಹೋದ್ರು ತೊಂದ್ರೆ ಕೊಡ್ತಿರಲ್ಲ ? (ಹ್ಹಿ ಹ್ಹಿ )

ನಾಗು ಮತ್ತೆ ದಿವಾಕರ ಅವರ ಸಮಯ ಪ್ರಜ್ಞೆ ಗೆ ಹ್ಯಾಟ್ಸ್ಆಫ್... ಆಮೇಲೆ ಅಲ್ಲಿ ಸ್ಟೇಜ್ ಮೇಲೆ ಮೇಲೆ ನಿಂತು ಜನಸ್ತೋಮ ದ ಮುಂದೆ ನಯನ ಮೇಲೆ ದಾಳಿ ಮಾಡಿದ ನಿಮ್ಮ ಸಾಹಸ ಮೆಚ್ಚು ವಂತದ್ದು.

ನಿಜಕ್ಕೂ ಅ ರೀತಿಯ ಚರ್ಚ ಸ್ಪರ್ದೆಗಳು ನಮ್ಮ ಕೀಳರಿಮೆ ಯನ್ನ ಹೊಗಲಾಡಿಸುತ್ತವೆ.

Ittigecement said...

ಆಝಾದ್ ಸರ್...(ಜಲನಯನ)

ತಮ್ಮ ಕನ್ನಡ ಅಭಿಮಾನದ ಬಗ್ಗೆ ಬಹಳಷ್ಟು ವಿಷಯ ಗೊತ್ತಾಗಿದೆ...
ದೂರದ ನಾಡಿನಲ್ಲಿದ್ದು ಅಷ್ಟೊಂದು ಭಾಷಾಭಿಮಾನ ಪ್ರೀತಿ ಇಟ್ಟುಕೊಂಡಿದ್ದೀರಲ್ಲ...
ತುಂಬಾ ಖುಷಿಯಾಗುತ್ತದೆ..

ಸಾವಿರಾರು ಜನರ ಮುಂದೆ ನಿಂತು ಎಲ್ಲರ ಬಳಿ ಮಾತಾಡಲು ಆಗುವದಿಲ್ಲ...
ಆದೂ ಅನುಕಂಪ, ಅನಾಥ ಪ್ರಜ್ಞೆ ಬೆಳೆಸಿಕೊಂಡ ನನ್ನಂಥವನ ಪರಿಸ್ಥಿತಿ ಯಾರಿಗೂ ಬೇಡ...

ದೌರ್ಬಲ್ಯ ಗೊತ್ತಾದ ಮೇಲೂ ಅದರಿಂದ ಹೊರಬರುವದು ಬಹಳ ಕಷ್ಟ...

ನಾಗು ಆ ಸಮಯದಲ್ಲಿ ಕೊಟ್ಟ ಟಾನಿಕ್ ಸರಿಯಾದ ಪರಿಣಾಮ ಬೀರಿತು..
"ಸೋಲು.. ಸೋಲುತ್ತಿರುವಾಗ ಗೆಲ್ಲಬೇಕು..."

ಆ ಗೆಲುವಿನ ರುಚಿ ಬೇರೆ...

ಕೊನೆಯಲ್ಲಿ ಒಂದು ರನ್ನಿಂದ ಮ್ಯಾಚ್ ಗೆದ್ದ ಹಾಗಾಗಿತ್ತು...

ಆಝಾದ್ ಸರ್...
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

ಸವಿಗನಸು said...

ಪ್ರಕಾಶಣ್ಣ,
ಮಸ್ತ್ ಮಜಾ ಇತ್ತು ನಿಮ್ಮ ಭಾಷಣ....ಕಾಲೇಜ್ ದಿನಗಳು, ಮಧುರ ಕ್ಷಣಗಳು ಎಲ್ಲ ನೆನಪಿಗೆ ತರಿಸಿದ್ದೀರಾ......ನಯನ ಈಗ ನಿಮ್ಮ ಈ ಬ್ಲಾಗ್ ನೋಡಬೇಕು ಚೆನ್ನಾಗಿರುತ್ತೆ. ಮೊದಲ ಬಹುಮಾನದ್ದು ಬರೆಯಿರಿ ಇನ್ನಷ್ಟು ನಲಿಯೋಣ.

Ittigecement said...

ಮಲ್ಲಿಕಾರ್ಜುನ್...

ಕಾರಂತಜ್ಜ, ನಾಗೇಶ್ ಹೆಗಡೆಯವರು..
ಅಲ್ಲಿದ್ದರೆ ಚೆನ್ನಾಗಿ ಕಿವಿ ಹಿಂಡಿಬಿಡುತ್ತಿದ್ದರೇನೋ...

ಬಹಳ ಗಂಭೀರ ಚರ್ಚೆ ನಡೆಯುತ್ತಿರುವಾಗ..
ಒಂದು ಸಣ್ಣ ಸಿಲ್ಲಿ ವಿಷಯ..
ರಸ್ತೆಯನ್ನೇ ಬದಲಿಸಿ...
ಎಲ್ಲರು ಅದರ ಬಗೆಗೆ ಗಮನ ಹರಿಸುವಂತೆ ಮಾಡಿಬಿಡುತ್ತದೆ...

ಅಂಥಹ ಗಂಭೀರ ವಿಷಯ..
ಉತ್ತರ ಕನ್ನಡ ಜನರ ಬದುಕಿನ ಪ್ರಶ್ನೆ...

ನಾನು ಹೇಳಿದ್ದು ನಿಜಕ್ಕೂ ಸಿಲ್ಲಿ ಪಾಯಿಂಟ್....
ಅಲ್ಲಿಯವರೆಗೆ ನಡೆದ ಗಂಭೀರ ಚರ್ಚೆಯ ಸ್ವರೂಪವನ್ನೇ ಬದಲಿಸಿಬಿಟ್ಟಿತ್ತು...

ಬ್ಯಾಟು ಹಿಡಿಯಲು ಬರದವನು ..
ಹೇಗೋ ತಾಗಿ ಬೌಂಡರಿ ಹೊಡೆದ ಕಥೆಯಾಯ್ತು...

ಮೆಚ್ಚಿದ್ದಕ್ಕೆ ಧನ್ಯವಾದಗಳು...

Unknown said...

ಪ್ರಕಾಶ್ ಸರ್
ಖುಷಿ ಕೊಟ್ಟಿತು ನಿಮ್ಮ ಬರಹ. ಹೌಉ, ಮುಳುಗುವವನಿಗೆ ಹುಲುಕಡ್ಡಿಯೂ ಆಸರೆಯಾಗಬಲ್ಲದು ಎಂಬಂತೆ ನಮ್ಮ ಆತಂಕದ ನಡುವೆ ಬಂದು ಹೋಗು ಒಂದು ಮಾತು ಸಂತೋಷದ ವರ್ಷವನ್ನೇ ಸುರಿಸಬಲ್ಲುದು. ಅಂದ ಹಾಗೆ ನಿಮ್ಮ ಬರವಣಿಗೆಯಲ್ಲಿ ಋ ಕಾರದಿಂದ ಕೂಡಿದ ಗುಣಿತಾಕ್ಷರಗಳು ರಕಾರದಿಂದ ಕೂಡಿದ ಒತ್ತಕ್ಷರಗಳಂತೆ ಮೂಡಿ ಬರುತ್ತಿವೆ. ಉದಾಹರಣೆಗೆ ತೃಪ್ತಿ ಎಂಬುದು ತ್ರಪ್ತಿ ಎಂದು ಕಾಣುತ್ತದೆ. ಬಹುಶಃ ಇದು ಕಣ್ತಪ್ಪಿನಿಂದ ಆಗಿದ್ದಿರಬಹುದು. ನಾನು ಇದನ್ನು ಮೂರು ಬಾರಿ ಗಮನಿಸಿದ್ದರಿಂದ ಹೇಳಬೇಕಾಯಿತು.
ನಿಮ್ಮ ಹೊಸ ಬ್ಲಾಗಿಗೂ ಭೇಟಿ ಕೊಟ್ಟಿದ್ದೆ. ಛಾಯಾಚಿತ್ತಾರ ಬಹಳ ಚೆನ್ನಾಗಿದೆ. ಯಾವುದೇ ಫೋಟೋಗಳಿಗೆ ಕಪ್ಪು ಹಿನ್ನೆಲೆ ಒಪ್ಪುತ್ತದೆ.

ಕ್ಷಣ... ಚಿಂತನೆ... said...

ಪ್ರಕಾಶ್ ಸರ್‍, ಲೇಖನದ ಶೀರ್ಷಿಕೆಯಂತೆ ಇದು ನಿಜಕ್ಕೂ ನಿಗೂಢವೇ ಹೌದು. ಹಿಂಜರಿಕೆ, ಆತ್ಮವಿಶ್ವಾಸದ ಕೊರತೆ ಇವೆಲ್ಲವೂ ಎಂತಹ ವ್ಯಕ್ತಿಯಲ್ಲಿಯೇ ಆಗಲಿ ಅದೊಂದು ವಯಕ್ತಿಕ ವ್ಯಕ್ತಿತ್ವವಾಗಿರುತ್ತದೆ. ಒಬ್ಬರಿಂದ ಮತ್ತೊಬ್ಬರು ಅಥವಾ ಸ್ವಪ್ರೇರಣೆ ಅಥವಾ ಕೆಲವಾರು ಅನಿವಾರ್ಯ ಸಂದರ್ಭಗಳಲ್ಲಿ ಈ ಆತ್ಮವಿಶ್ವಾಸವನ್ನು ಹೊಂದುವಂತಹ, ಪ್ರಚುರಪಡಿಸುವಂತಹ ಘಟನೆಗಳು ನಡೆಯುತ್ತವೆ, ಎಂದು ಈ ಲೇಖನವನ್ನು ಓದಿದಾಗ ಅನಿಸಿತು.

ಲೇಖನ ಒಂದು ವಿಧದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪುಟ್ಟಪಾಠದಂತಿದೆ. ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

ಜಾಕಾಸ್ ಹುಡ್ಗ... said...

ವ್ಯಕ್ತಿತ್ವ ವಿಕಸನದ ಲೇಖನದಂತಿದೆ..ಕೀಳರಿಮೆಯಿಂದ ಮೇಲೆ ಬರಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ಒಂದು ಓಳ್ಳೆಯ reference..

Ittigecement said...

ರಮ್ಯಾ....

ನಾಗು ಸರಿಯಾದ ಸಮಯಕ್ಕೆ ನನ್ನನ್ನು ಹುರಿದುಂಬಿಸಿದ್ದು ಒಳ್ಳೆದಾಯಿತು..
ನಮಗೆ ಎಲ್ಲದೂ ಗೊತ್ತಿದ್ದರೂ...
ಆ ಕ್ಷಣದಲ್ಲಿ, ಸಂದರ್ಭದಲ್ಲಿ ಅಂಥಹ ನುಡಿಗಳ ಅವಶ್ಯಕತೆ,
ಮತ್ತು ಪರಿಣಾಮ ಬಹಳ....

ನಯನಾಳ ಕಿರು ನೋಟದ ಪರಿಣಾಮ ಪೆಟ್ಟಿಗೆ ಗಪ್ಪತಿ ಮೇಲಾಗುತ್ತಿತ್ತು...
ಸ್ವಲ್ಪ ಮಟ್ಟಿಗೆ "ತೀರ್ಪುಗಾರರ" ಮೇಲೆ ಅಂತ ನಾವು ಮಾತಾಡಿಕೊಳ್ಳುತ್ತಿದ್ದೇವು
ಅದು ತಪ್ಪಿರ ಬಹುದು...
ಹೆಣ್ಣುಮಗಳು ಅನ್ನುವ ಮಮಕಾರವೂ ಇದ್ದಿರ ಬಹುದು...

ಆದರೆ ನಯನಾಳ ಕಿರು ನೋಟದಿಂದ..
ನನಗೇನೂ ಆಗದಂಥಹ ಸ್ಥಿತಿಯಲ್ಲಿ ನಾನಿದ್ದೆ...

ನಯನಾಳ ವಿಜಯರಥಕ್ಕೆ ನಾವು ಬ್ರೇಕ್ ಹಾಕಿದ್ದು ಮಸ್ತ್ ಇದೆ..
ಆದರೆ ಅದರಲ್ಲಿ ಜೋಕ್ ಅಷ್ಟಾಗಿ ಇಲ್ಲ...

ಹೇಳುತ್ತೇನೆ ಬರುತ್ತಿಯಲ್ಲ ಆಗ...

ಕಾಲೆಳೆಯಲು ಪ್ರಯತ್ನಿಸಿದ್ದಕ್ಕೆ , ತುಂಟತನಕ್ಕೆ ಖುಷಿಯಾಯಿತು...

Ittigecement said...

ದೇಸಾಯಿಯವರೆ....

ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ ಕ್ಷಮೆ ಇರಲಿ...

ನನ್ನ ದೌರ್ಬಲ್ಯವನ್ನು ತೋರಿಸಿದ್ದಲ್ಲದೆ...
ಅದರಿಂದ ಹೊರಬರಲು ಆಸ್ಥೆವಹಿಸಿದ್ದು ನೆನಪಾದರೆ..
ನನಗೆ ಈಗಲೂ ಹ್ರದಯ ತುಂಬಿ ಬರುತ್ತದೆ...

ನಾನು ಹಾಡಬೇಕು, ಚಿತ್ರ ಬಿಡಿಸಬೇಕು..
ಭಾಷಣ ಮಾಡಬೇಕು ಎಂದು ಅವರು
(ಚಿಕ್ಕಪ್ಪನೂ ಸಹ)
ಹುರಿದುಂಬಿಸುತ್ತಿದ್ದರು...

ನಾನು ಅವರಿಗೆ ಎಷ್ಟು ಋಣಿಯಾಗಿದ್ದರೂ ಸಾಲದು....

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ರಾಜೀವ್....

ಸಭಾಕಂಪನಕ್ಕೆ ನನ್ನ ಮಿತ್ರ ದಿವಾಕರನ ಉಪಾಯ ಚೆನ್ನಾಗಿದೆ...
ಸ್ಟೇಜಿನ ಮೇಲೆ ಹೋಗಿ... ದೀರ್ಘವಾಗಿ ಶಾಸೋಚ್ವಾಸ ಮಾಡಿ..
ಸಾವಧಾನದಿಂದ, ಸಮಾಧಾನದಿಂದ...
ಜನರನ್ನೊಮ್ಮೆ ದಿಟ್ಟಿಸಿ ನೋಡ ಬೇಕು....

ನನಗಂತೂ ಸಭಾ ಹೆದರಿಕೆ ಇದರಿಂದ ದೂರ ಆಗಿದೆ....

ನಿಮ್ಮ ಅನುಭವ ತುಂಬ ಮಸ್ತ್ ಆಗಿದೆ...


ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಚಂದಿನ....

ನಿಮ್ಮ ಕವನಗಳು ತುಂಬಾ ಸೊಗಸಾಗಿರುತ್ತವೆ....

ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...
This comment has been removed by the author.
Ittigecement said...

ರವಿಯವರೆ....

ನಯನಾ... ಬಹಳ ಪರಿಣತಿ ಹೊದಿರುವ ವಾಕ್ ಪಟು....
ಅವಳಿಗೆ ಸಭೆಯ ಜನರ ನಾಡಿ ಮಿಡಿತ ಗೊತ್ತಿರುವಂತೆ ಮಾತಾಡುತ್ತಿದ್ದಳು...

ಧ್ವನಿಯನ್ನು ಎಲ್ಲಿ ಏರಿಸಬೇಕು,
ಎಲ್ಲಿ ಇಳಿಸಬೇಕು...
ತನ್ನಲ್ಲಿರುವ ಮುಖ್ಯವಾದ ಮಾತನ್ನು ..
ಹೇಗೆ, ಯಾವಾಗ ಹೇಳ ಬೇಕು ಎನ್ನುವದರಲ್ಲಿ ನಿಸ್ಸೀಮಳು...

ಅವಳು ಒಳ್ಳೆಯ ಮಾತುಗಾರ್ತಿಯೆಂದು ತನ್ನ ಛಾಪು ಮೂಡಿಸಿ ಬಿಟ್ಟಿದ್ದಳು...
ಅವಳನ್ನು ಸೋಲಿಸುವದು ಸುಲಭದ ಮಾತಲ್ಲ...

ಅದನ್ನು ಇನ್ನೊಮ್ಮೆ ಬರೆಯುವೆ....

Thank you Ravi....

Ittigecement said...

ಬಾಲು ಸರ್....

ನಮ್ಮ ದೌರ್ಬಲ್ಯವನ್ನು ನಾಲ್ಕು ಜನರಮುಂದೆಯೇ ಮೆಟ್ಟಿ ನಿಲ್ಲಬೇಕು...
ನನ್ನಲ್ಲಿರುವ ಕೀಳರಮೆ, ಅನಾಥ ಪ್ರಜ್ಞೆ,
ಹೇಡಿತನ ಎಲ್ಲವನ್ನೂ ಆ ದಿನ ಒದ್ದೋಡಿಸಿದೆ...

ನಿಜ....

ನಾನು ಅಲ್ಲಿ ವಿಫಲನಾಗಿದ್ದರೆ....??

ಬಹುಷಃ ನಾಗುವಿನ ಸಮಯಸ್ಪೂರ್ತಿಯ ಮಾತುಗಳು..
ದಿವಾಕರನ ಬೆಂಬಲ
ನನ್ನಿಂದ ಆ ಭಾಷಣ ಮಾಡಿಸಿತು....

ಸರ್...

ಗಪ್ಪತಿಯ ವಿಚಾರ ಈಗೇಕೆ....
ಅದೂ ಕೂಡ ಹೇಳುವೆ...
ಅಲ್ಲಿ ಆದದ್ದೇ ಬೇರೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

ಶರಶ್ಚಂದ್ರ ಕಲ್ಮನೆ said...

ಒಳ್ಳೆ ಟೈಮಿಂಗು ಪ್ರಕಾಶಣ್ಣ :) ಸಕತಾಗಿದ್ದು ಬರಹ....


ಶರಶ್ಚಂದ್ರ ಕಲ್ಮನೆ

Dileep Hegde said...
This comment has been removed by the author.
Dileep Hegde said...

ಪ್ರಕಾಶ್ ಸರ್,

ಕೆಲವೊಮ್ಮೆ ನಮ್ಮಲ್ಲಿನ ಕೀಳರಿಮೆ ನಮ್ಮನ್ನು ಸಾಧನೆಗಳಿಂದ ವಿಮುಖ ಗೊಳಿಸುತ್ತದೆ... ಆ ಸಮಯದಲ್ಲಿ ಇಂತಹ ಮಿತ್ರರು, ಬಂಧುಗಳು, ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮನ್ನ ತಿದ್ದಿ ಮತ್ತೆ ಸಾಧನೆಯ ಹಾದಿಯಲ್ಲಿ ಮುಂದುವರೆಯುವಂತೆ ಪ್ರೇರೇಪಿಸುತ್ತವೆ....

ಕಾಲೇಜ್ ದಿನಗಳ ಭಾಷಣ ಸ್ಪರ್ಧೆಗಳು, ಚರ್ಚಾ ಸ್ಪರ್ಧೆಗಳು ಒಮ್ಮೆ ಕಣ್ಣೆದುರು ಹಾದು ಹೋದವು.....

ಉತ್ತಮ ಬರಹ ಓದಿಸಿದ್ದಕ್ಕೆ ತುಂಬಾ ಧನ್ಯವಾದಗಳು...

Dileep Hegde

Ittigecement said...

ಮಹೇಶ್....

ನಿಮ್ಮ ಬ್ಲಾಗಿನಲ್ಲಿ ನೀವು ಬರೆದ ಮೊದಲ ಲೇಖನ ಸೂಪರ್...
ತುಂಬಾ ಚೆನ್ನಾಗಿದೆ... ಖುಷಿಯಾಗುತ್ತದೆ..

ಮೊದಲ ಬಹುಬಾನ ಬಂದ ಕಥೆ ರೋಚಕವಾಗಿದೆ...
ವಿಷಯ ಕೂಡ ಗಂಭೀರ...

ಆಮೇಲೆ ನಾನು ಸ್ಟೇಜ್ ಮೇಲೆ ಭಾಷಣ ಮಾಡಿದ ನೆನಪಿಲ್ಲ...

ಆದರೆ ಮಿಮಿಕ್ರಿ ಮಾಡುತ್ತಿದ್ದೆ...

ನನ್ನ ಗೆಳೆಯರು ನನಗೆ ತರಬೇತಿ, ಭಾಷಣ ಎಲ್ಲ ಬರೆದು ಕೊಟ್ಟು...
ಜನರನ್ನು ಹೇಗೆ ಸೆಳೆದುಕೊಳ್ಳ ಬೇಕು ಎನ್ನುವ ಸೂಕ್ಷ್ಮಗಳನ್ನು ಕಲಿಸಲು
ಬಹಳ ಪ್ರಯತ್ನ ಪಟ್ಟಿದ್ದರು...

ಹಳೆಯ ನೆನಪೆಲ್ಲ ಈಗ ಸೊಗಸಾಗಿ ಕಾಣುತ್ತವೆ....

ನಿಮ್ಮ ಪ್ರೀತಿಗೆ ಧನ್ಯವಾದಗಳು...

Unknown said...

ಪ್ರಕಾಶ್ ಸಾರ್,,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ಕ್ಷಮೆಯಿರಲಿ.. :-) ... ಬರಹ ಚೆನ್ನಾಗಿತ್ತು... ಕೊನೆಗೂ ಬಹುಮಾನ ಬಂತಲ್ಲಾ... ಮೊದಲ ಬಹುಮಾನ ಬಂದ ಬಗ್ಗೆಯೂ ಬರೆಯಿರಿ... :-)

Ittigecement said...

ಸತ್ಯ ಸರ್.....

ಇದು ಬಹುಷಃ ನನ್ನ ಸಾಫ್ಟ್ವೇರ್ ಸಮಸ್ಯೆ ಅಂತ ಅನಿಸುತ್ತದೆ...
ನಿಮ್ಮಂತೆ ಇದಕ್ಕೂ ಮೊದಲು, ಚಂದ್ರಕಾಂತರವರು, ಪಾಲಚಂದ್ರ ಮುಂತಾದವರು ನನ್ನ ಗಮನಕ್ಕೆ ತಂದಿದ್ದರು...
ಅದು ಏನೇ ಮಾಡಿದರೂ ಕೆಲವು ಶಬ್ಧಗಳನ್ನು ಸರಿ ಬರೆಯಲು ಆಗುತ್ತಿಲ್ಲ...
ನಮ್ಮನೆಗೆ ಯಾರಾದರೂ ಇದರ ತಜ್ಞರು ಬಂದಾಗ ಸರಿ ಪಡಿಸಿಕೊಳ್ಳುವೆ....

ದೌರ್ಬಲ್ಯವನ್ನು ಮೆಟ್ಟಿನಿಂತಾಗ ಬಹಳ ಖುಷಿಯಾಗುತ್ತದೆ...
ಎನೋ ಸಾಧಿಸಿದ ಅನುಭಾವ...

ನನ್ನ "ಛಾಯಾ ಚಿತ್ತಾರ" ಬ್ಲಾಗ್ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ನನ್ನ ಬಳಿ ಸಿಕ್ಕಾಪಟ್ಟೆ ಫೊಟೊಗಳಿವೆ...
ನನಗೆ ಚಂದ ಅನಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುವೆ..

ಪ್ರೀತಿಯ ಪ್ರೋತ್ಸಾಹಕ್ಕೆ ವಂದನೆಗಳು...

ನಮ್ಮನೆ.. SWEET HOME..... said...

ನಿಮ್ಮ ಜೀವನದ ಈ ಸಾಹಸ ನನಗೆ ಬಹಳ ಇಷ್ಟವಾದದ್ದು....
ಖುಶಿಯಾಗುತ್ತದೆ..

PARAANJAPE K.N. said...

ಪ್ರಕಾಶ್
ನಿಮ್ಮ ಬತ್ತಳಿಕೆಯಲ್ಲಿ ಅದೆಷ್ಟು ಬಾಣಗಳಿವೆ ಮಾರಾಯರೇ? ಬಹಳ ಚೆನ್ನಾಗಿದೆ. ಖುಷಿಯಾಯಿತು. ಇನ್ನಷ್ಟು ಬರೆಯಿರಿ.e

ಮೂರ್ತಿ ಹೊಸಬಾಳೆ. said...

samaya spoorti ommomme nimmannu HERO aagi maadi biduttade heege nimmadee sailiyalli bareyuttaa iri

nenapina sanchy inda said...

:-)
malathi S

Padyana Ramachandra said...

ಶ್ರೀ. ಪ್ರಕಾಶ್ ಹೆಗಡೆಯವರಿಗೆ ನಮಸ್ಕಾರ.

ನಿಮಗೆ ಎರಡನೆಯ ಬಹುಮಾನ ಬಂದ ಬಗ್ಗೆ ಪ್ರಸ್ತುತ ಪಡಿಸಿದ ತಮ್ಮ ಅತ್ತ್ಯುತ್ತಮ್ಮ ಲೇಖನಕ್ಕೆ ವಾಚಕರ ಪರವಾಗಿ ಮೊದಲ ಬಹುಮಾನಗಳು.

-ಪ. ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Ittigecement said...

ಶಿವಶಂಕರ್....

ನೀವು ಹೇಳುವ ಸ್ಟೈಲೇ ಬೇರೆ...
ಓದಲು ಮಸ್ತ್ ಇರ್ತದೆ... ಹೇಳಿಬಿಡಿ ಸರ್....

ಕಲೇಜು ದಿನಗಳ ಮಜವೇ ಬೇರೆ...

ಮೆಚ್ಚುಗೆಗೆ ಧನ್ಯವಾದಗಳು...

Ittigecement said...

ಚಂದ್ರಶೇಖರ್ (ಕ್ಷಣ ಚಿಂತನೆ)

ದೌರಬಲ್ಯದಿಂದ ಹೊರ ಬರುವ ಗಟ್ಟಿ ನಿರ್ಧಾರ ನಾವು ಮೊದಲು ಮಾಡ ಬೇಕು...
ಅದು ಬಹಳ ಮುಖ್ಯ...
ನನಗೆ ನನ್ನ ಸ್ನೇಹಿತರು ಬಂಡೆಗಲ್ಲಿನಂತೆ ನನ್ನ ಸಂಗಡ ಇದ್ದರು...

ಎಲ್ಲ ಸುಖಾಂತವಾದ ಮೇಲೆ ಹೇಳಿಕೊಳ್ಳಲು ಚಂದ...
ಅಲ್ಲವಾ...?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Shubhashree said...

nimma kathe heluvudakkinta, baraha ennabahudada lekhanadalli,,,,,kannadada shabdada apabramshave jasti ide

Ittigecement said...

ಜಾಕಾಸ್ ಹುಡುಗರೆ...

ನನ್ನ ಬ್ಲಾಗಿಗೆ ಸ್ವಾಗತ....

ಕೀಳರಿಮೆಯಿಂದ ಹೊರ ಬಂದ ಮೇಲೆ...
ಖುಷಿಯಾಗುತ್ತದೆ...

ಆದರೆ ಹೊರ ಬರಲು ಬಹಳ ಕಷ್ಟ...

ವ್ಯಕ್ತಿತ್ವ ವಿಕಸನದ ಬಗೆಗೆ ನನಗೆ ಹೆಚ್ಚು ಗೊತ್ತಿಲ್ಲ...
ನನ್ನ ಅನುಭವವೊಂದನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ...

ನಿಮ್ಮ ಮೆಚ್ಚುಗೆಗೆ, ಪ್ರತಿಕ್ರಿಯೆಗೆ..
ಧನ್ಯವಾದಗಳು...

Ittigecement said...
This comment has been removed by the author.
Ittigecement said...

ಶರತ್...

ಬಹಳ ದಿನಗಳ ನಂತರ ಬ್ಲಾಗ್ ಲೋಕಕ್ಕೆ ಸ್ವಾಗತ...
ಪರಿಕ್ಷೆಯಲ್ಲ ಮುಗಿಸಿ, ಈಗ ರಜ ತಾನೆ...
ನಿಮ್ಮ ಬ್ಲಾಗಿನಲ್ಲೂ ಒಳ್ಳೆಯ ಬರಹ, ಕವನಗಳ ನಿರಿಕ್ಷೆ ಇಟ್ಟುಕೊಳ್ಳಬಹುದಲ್ಲವೆ...?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಪರಿಕ್ಶೆಗೆ ಶುಭ ಹಾರೈಕೆಗಳು..

Ittigecement said...

ದಿಲೀಪ್....

ಕಾಲೇಜು ದಿನಗಳನ್ನು ದಾಟಿದ ಮೇಲೆ...
ಅದರ ಸಿಹಿ ನೆನಪುಗಳು ಮೆಲುಕು ಹಾಕುವದಕ್ಕೆ ಬಲು ಚಂದ...

ನಮ್ಮ ಗೆಳೆಯರು, ಕಾಲೇಜು ವಾತಾವರಣ..
ಆ ತುಂಟಾಟಗಳು..
ಬಹಳ ಮಸ್ತ್ ಇರುತ್ತವೆ...
ಈ ಲೇಖನ ಓದಿ

ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರವಿಕಾಂತ್ ಗೋರೆಯವರೆ...

ನಿಜ ..
ಈ ಬ್ಲಾಗ್ ಬರೆಯುವದು ಒಂದು ಹವ್ಯಾಸವಷ್ಟೇ..
ಇದೇ ಜೀವನ ಅಲ್ಲವಲ್ಲ...
ಇದರಿಂದ ಜೀವನ ಸಾಗುವದಿಲ್ಲ...
ಸಿಗುವ ಸಮಯದಲ್ಲಿ..
ಇಂಥಹ ಹವ್ಯಾಸಗಳು ಖುಷಿ ಕೊಡುತ್ತವೆ..

ನೀವು ಆಸ್ಥೆಯಿಂದ ಬಂದು ..
ಓದಿ..
ಪ್ರತಿಕ್ರಿಯೆ ಕೊಡುತ್ತೀರಲ್ಲ...

ತುಂಬು ಹ್ರದಯದ ಧನ್ಯವಾದಗಳು...

Ittigecement said...

ನಮ್ಮನೆ...

ನಿಜ ಗೆಲುವಿನ ಅನುಭವ ಸಿಹಿಯಾಗಿರುತ್ತದೆ...
ನನಗೂ ಖುಷಿ...

Ittigecement said...

ಪರಾಂಜಪೆಯವರೆ..

ಅಂದು ನಿಸಾರ್ ಅಹಮದ್ ಅವರ ಸಮಾರಂಭದಲ್ಲಿ ಹೆಚ್ಚಿಗೆ ಮಾತನಾಡಲಾಗಲಿಲ್ಲ..
ಕ್ಷಮಿಸಿ...

ನಮ್ಮದೊಂದು ಗುಂಪಿತ್ತು...
ಅಲ್ಲಿ ಒಬ್ಬೊಬ್ಬರ ಕಥೆನೂ ಮಜವಿತ್ತು...
ಎಲ್ಲರೂ ಈಗ..
ಸಂಸಾರ, ಜೀವನದ ಹೋರಾಟದಲ್ಲಿ ಬಿದ್ದು...
ಕೆಲವರು ಮನಬಿಚ್ಚಿ ನಗುವದನ್ನೂ ಮರೆತು ಬಿಟ್ಟಿದ್ದಾರೆ...

ದೂರ ನಿಂತು...
ಹಿಂದೆ ಬಂದ ದಾರಿಯನ್ನೊಮ್ಮೆ..
ತಿರುಗಿ ನೋಡುವ ಪ್ರಯತ್ನ....

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮೂರ್ತಿ....

ಆ ಕ್ಷಣದಲ್ಲಿ ...
ತತ್ ಕ್ಷಣದಲ್ಲಿ ಬಂದ ಮಾತು...
ಜನರ ಮೆಚ್ಚುಗೆ...
ಇದೆಲ್ಲ...
ಈಗ ಬರಿ ನೆನಪುಗಳಷ್ಟೇ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಮಾಲತಿಯವರೆ...

ನನ್ನ ಬ್ಲಾಗಿಗೆ ಸ್ವಾಗತ...

ತುಂಬಾ... ತುಂಬಾ ಧನ್ಯವಾದಗಳು...

ಬರುತ್ತಾ ಇರಿ...

sunaath said...

ಪ್ರಕಾಶ,
ಅತ್ಯುತ್ತಮವಾದ ಪ್ರತಿವಾದ ನಿಮ್ಮದು.
ನಿಮಗೇ ಪ್ರಥಮ ಬಹುಮಾನ ಸಿಗಬೇಕಾಗಿತ್ತು!

Ittigecement said...

ರಾಮಚಂದ್ರ ಸರ್....

ನನ್ನ ಬ್ಲಾಗಿಗೆ ಸ್ವಾಗತ...

ಕತಾರ್ ದೇಶದ ರಾಸಲಫಾನ್ ನಲ್ಲಿ ನಾನೂ ಇದ್ದೆ...
ಅಲ್ಲಿ ಬಹಳ ಒಂಟೀತನ ಅನುಭವಿಸಿದೆ...
ಮಾನವ ನಿರ್ಮಿತ ಸುಂದರ ದೇಶ...ಅದು..

ನಾನು ಹೆಚ್ಚಿನ ಸಾಹಿತ್ಯ ಓದಿಲ್ಲ...
ಬರವಣಿಗೆಗೆ ತೀರಾ ಇತ್ತೀಚೆಗೆ ಪ್ರವೇಶಿಸಿದ್ದೇನೆ..
ನಿಮ್ಮ ಇಂಥಹ ಪ್ರೋತ್ಸಾಹ ನನಗೆ ಬರೆಯಲು ಇನ್ನಷ್ಟು ಉತ್ಸಾಹ ಕೊಡುತ್ತದೆ...
ಧನ್ಯವಾದಗಳು...

Ittigecement said...

ಶುಭಾಶ್ರೀಯವರೆ....

ನನ್ನ ಬ್ಲಾಗಿಗೆ ಸ್ವಾಗತ..

ನನ್ನ ಬರಹಗಳಲ್ಲಿ ಅಪಬ್ರಂಶ ಇದೆ...
ಅದರಲ್ಲೂ ಋ ಕ್ಕೆ ಸಂಬಂಧಪಟ್ಟ ಒತ್ತಕ್ಷರಗಳು..
ನನ್ನ ಸಾಫ್ಟ್ ವೇರ್ ನಲ್ಲಿ ಸರಿಯಾಗಿ ಬರುತ್ತಿಲ್ಲ...
ಇನ್ನು ಉಳಿದ ತಪ್ಪುಗಳು ನನ್ನಿಂದ ಆದವುಗಳು...

ಕನ್ನಡ ಗೊತ್ತಿದ್ದೂ..
ತಪ್ಪು ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ...

ಕೆಲಸದ ಒತ್ತಡದಲ್ಲಿ ಮತ್ತೆ ಮತ್ತೆ ಓದಿ ತಿದ್ದಲು ಸಾಧ್ಯವಾಗಿಲ್ಲ...

ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿರುವೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...

ಪ್ರೀತಿಯಿಂದ..
ಪ್ರಕಾಶಣ್ಣ...

Ittigecement said...

ಸುನಾಥ ಸರ್....

ನಾವೆಲ್ಲ "ಉತ್ತರ ಕನ್ನಡ ಉಳಿಸಿ" ಹೋರಾಟದಲ್ಲಿ ಭಾಗವಹಿಸಿದ್ದವರು...
ಅಣುಸ್ಥಾವರಗಳು ಬೇಕು ಅನ್ನುವದಕ್ಕೆ ಮಾತನಾಡಲು ಯಾರೂ ಇರಲಿಲ್ಲ..
ನಮ್ಮ ಗುಂಪು ಯಾವಗಲೂ ಸ್ವಲ್ಪ ಎಡವಟ್ಟು....

ನನಗೆ ಮೊದಲ ಬಹುಮಾನ ಬಂದ ಕಥೆಯಲ್ಲೂ ಅಷ್ಟೆ....
ವಿಷಯದ ವಿರೋಧ ಮಾತಾಡಿ ಬಹುಮಾನ ಬಂದಿತ್ತು....

ಆದರೆ ಈ ಸ್ಟೇಜಿನ ಮೇಲೆ ನಿಂತು ಮಾತಾಡುವದು ನನಗೆ ಸರಿ ಹೊಂದುವದಿಲ್ಲ...
ಅದಕ್ಕೆ ಏನಿದ್ದರೂ ದಿವಾಕರ...
ಅತ್ಯುತ್ತಮ ಮಾತುಗಾರ....

ಲೇಖನ ಇಷ್ಟಪಟ್ಟು.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ.. ತು೦ಬಾ ಖುಷಿಯಾಯಿತು ಓದಿ. ಮನಸಾರೆ ನಕ್ಕು ಬಿಟ್ಟೆ. ತುಸು ಗಟ್ಟಿಯಾಗಿಯೇ ನಕ್ಕು ಬಿಟ್ಟೆ.

ಕೀಳರಿಮೆಗಿ೦ತ ದೊಡ್ಡ ರೋಗ ಇನ್ನೊ೦ದಿಲ್ಲ...

Jayalaxmi said...

ನನ್ನಲ್ಲೂ ಚಿಕ್ಕಂದಿನಲ್ಲಿ ಅಪಾರವಾದ ಸಂಕೋಚ ತುಂಬಿತ್ತು, ಆದ್ರೂ ಜನ ಧೈರ್ಯದ ಹುಡುಗಿ ಅಂತಿದ್ರು!! ಈಗ್ಲೂ ನನ್ನಲ್ಲಿರುವ ಆ ಸಂಕೋಚ ಸ್ವಭಾವ ನನ್ನಿಂದ ದೂರವಾಗಿಲ್ಲವೆಂದೇ ಎಷ್ಟೊ ಸಲ ಅವಕಾಶವಂಚಿತೆಯಾಗುತ್ತೇನೆ ಆದ್ದರಿಂದ ಜಗತ್ತನ್ನು ದೂರುವುದಿಲ್ಲ. :) ನಿಮ್ಮ ಇಂಥ ಸುಲಲಿತ ಲೇಖನಗಳು ಯುವಜನತೆಯನ್ನು ಹುರಿದುಂಬಿಸುತ್ತವೆ. ಆದರೆ ನಿಮ್ಮ ಮಸಾಲೆ ಒಗ್ಗರಣೆಯಲ್ಲಿ "ತನ್ನ ಕಿರುನೋಟವನ್ನು ತೀರ್ಪುಗಾರರ ಮೇಲೆ ಹರಿಸಿದಳು...." ಅನ್ನುವ ನಿಂಬೆಹಣ್ಣಿನ ಬೀಜ ಬಾಯಿಗೆ ಬಂದು ನನ್ನ ಬಾಯಿ ಸ್ವಲ್ಪ ವಗರು ವಗರಾಯಿತು. ನೋಡಿ ಹುಳಿ ಹಿಂಡಬೇಕಿತ್ತಲ್ಲವಾ ಪ್ರಕಾಶ ಅವರೆ?;) (ಬೈತಿಲ್ಲ ಮಾರಾಯ್ರೆ!)

Mohan said...

ಪ್ರಕಾಶ್ ಚೆನ್ನಾಗಿದೆ , ಬದುಕು ಮತ್ತು ಬರಹಕ್ಕೆ ಇದೇ ವೆತ್ಯಾಸ

Shubhashree said...

adarallu vathyasa?

Kishan said...
This comment has been removed by the author.
Kishan said...

Nice! as always. You have been raising your bar with each post, its refreshing to read each one of them.

What I like the most is that you maintain a strong 'theme' in each of your post without discounting or compromising on the humor and story line.

I do have faded memories of your stage performances but now you are making them come alive with your writings.

Prabhuraj Moogi said...

ಸೊತಿಲ್ಲ ಸರ್, ನೀವು ಗೆದ್ದಿದ್ದೀರಿ... ಅಣು ವಿಜ್ಞಾನ ಇಂಥ ಉತ್ತಮ ಕೆಲಸಕ್ಕೆ ಬಳಕೆಯಾಗುತ್ತಿದೆ, ಚರ್ಚೆ ಬಲು ರೋಚಕವಾಗಿತ್ತು.
ಬರೀ ಪ್ರಶಸ್ಥಿ ಗೆಲ್ಲಲು ಏನೊ ಹೇಳಬಹುದಾಗಿತ್ತು ಆದರೆ ನಿಮ್ಮ್ ವಾದ ಧೈರ್ಯದಿಂದ ಮಂದಿಸಿದ್ದು ಚೆನ್ನಾಗಿತ್ತು.

Umesh Balikai said...

ನೋಡಲು ನಾಲ್ಕು ಕಣ್ಣು ಸಾಲದು...
ಧ್ವನಿಯೂ ಮತ್ತೇರಿಸುವಂತಿತ್ತು...
ಸ್ವಲ್ಪ ಏರಿದ ಧ್ವನಿಯಲ್ಲಿ...
ಮೇಜು ಕುಟ್ಟಿ... ಮಾತನಾಡಿದರಂತೂ...
..........................................
ನಾವು ಬಹುಮಾನದ ಆಸೆ ಬಿಟ್ಟು ಬಿಡುತ್ತಿದ್ದೇವು...!


ಆಹ್ಹಾ!.. ಆ ಚೆಲುವೆ ಹೇಗಿರಬೇಡ!?.. ಇನ್ನು ಅವಳನ್ನು ಮಾತಿನಲ್ಲಾದರೂ ಸೋಲಿಸಿದ ನೀವು ಹೇಗಿರಬೇಡ. ತುಂಬಾ ರಸಿಕರು ಸರ್ ನೀವು. ಹುಡುಗೀರ ಸೌಂದರ್ಯವನ್ನು ತುಂಬಾ ಚೆನ್ನಾಗಿ ವರ್ಣಿಸುತ್ತೀರೀ :)

ವಿನುತ said...

ಪ್ರಕಾಶ್ ರವರೇ,

ನಿಮ್ಮ ಹಾಸ್ಯ ಪ್ರವೃತ್ತಿ ಬಾಲ್ಯದಿ೦ದಲೇ ಇದೆ!! ನಿಮ್ಮ ಅನುಭವವನ್ನು ನಿಮ್ಮದೇ ಶೈಲಿಯಲ್ಲಿ ಚೆನ್ನಾಗಿ ಹ೦ಚಿಕೊ೦ಡಿದ್ದೀರಿ. ನಿಮ್ಮ ಅನುಭವ ಇತರರಿಗೂ ಮಾದರಿಯಾಗಲಿ.
ನಿಮ್ಮ ಪುಸ್ತಕ ಪ್ರಕಾಶನಕ್ಕೆ ಶುಭಾಕಾ೦ಕ್ಷೆಗಳು ಹಾಗೂ ಅಭಿನ೦ದನೆಗಳು. ಪ್ರತಿ ಬಹುಬೇಗ ನಮಗೆಲ್ಲ ಸಿಗುವ೦ತಾಗಲಿ.