Saturday, December 6, 2014

.....ಷಂಡ ...............

( ಒಮ್ಮೆ ತಾರೆ... 
ತನ್ನ ಪತಿ ಬ್ರಹಸ್ಪತಿಯ ಬಳಿ ತನ್ನ ಕಾಮದಾಸೆಯನ್ನು ನಿವೇದಿಸುತ್ತಾಳೆ..
ಬ್ರಹಸ್ಪತಿ ಅವಳ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ದೇವಲೋಕದತ್ತ ಹೋಗುತ್ತಾನೆ..
ಬ್ರಹಸ್ಪತಿ 
ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದ ಚಂದ್ರ.. 
ತಾರೆಯರಲ್ಲಿ ಸಂಬಂಧ ಏರ್ಪಡುತ್ತದೆ...
ಅಲ್ಲಿಂದ ಮುಂದೆ... 
ಬ್ರಹಸ್ಪತಿಯ ಸ್ವಗತ...)

:::::::::::::::::::::::::::::::::::::;;;;;;;;;;;;;;;;;;;;;;;;


ನಾನು
ತಾರೆಯನ್ನು ಮದುವೆಯಾದ ದಿನಗಳು...
ಹೊಸ ಬಿಸಿಯ ದಿನಗಳಲ್ಲವೆ ಈಗ.. ?

ನನ್ನವಳ ಪ್ರಶ್ನೆಗಳು ತುಂಬಾ ವಿಚಿತ್ರ...

"ನೀವ್ಯಾಕೆ ಗಡ್ಡ ಬಿಟ್ಟಿದ್ದೀರಿ ? "

ನನಗೆ ನಗು ಬಂತು..

"ನಾನು ಆಧ್ಯಾತ್ಮ ಚಿಂತನೆ..
ಪರಮಾತ್ಮಿಕ ವಿಚಾರಗಳಲ್ಲಿ ತಪಸ್ಸು ಮಾಡುವವನು..

ನಾನು ದೇವಲೋಕದ ಗುರು.. "ಬ್ರಹಸ್ಪತಿ" ನಾನು...

ಇಹಲೋಕದ 
ಕ್ಷಣಿಕ ಸುಖಗಳು  ಮಿಥ್ಯ ಅಂತ ನಂಬಿದವನು....
ಬಂಧನದೊಳಗೆ  ಇದ್ದು.. ಪರಿಧಿಯಾಚೆ ನೋಡುವವನು .. .
ದಿನ ಪೂರ್ತಿ  ಪರಮಾತ್ಮನ  ಚಿಂತನೆಯಲ್ಲಿ ಮುಳುಗಿದವನು..

ನನ್ನಂಥವನಿಗೆ ಬಾಹ್ಯ ಸೌಂದರ್ಯ ಇದ್ದರೆಷ್ಟು.. ಬಿಟ್ಟರೆಷ್ಟು.. ?

ಗಡ್ಡದ ಇರುವು ಪ್ರತಿಕ್ಷಣ ಗೊತ್ತಾದಾಗ... 
ನನ್ನ ಸಾಧನೆ ಇನ್ನೂ ಇದೆ ಅಂತ ಜ್ಞಾಪಕವಾಗುವದಕ್ಕೆ ಗಡ್ಡ ಬಿಟ್ಟಿದ್ದೇನೆ..."

ಅವಳು ನಕ್ಕಳು...
ಕಣ್ಣರಳಿಸಿ ನಗುವಾಗ ಅವಳ ಮುಖವೆಲ್ಲ ಅರಳುತ್ತದೆ...

ನನಗೂ 
ಅವಳನ್ನು ಸ್ವಲ್ಪ ಮಾತನಾಡಿಸುವ ಹಂಬಲ ಉಂಟಾಯಿತು...

"ತಾರೆ...
ಗಡ್ಡ.. 
ಮೀಸೆಗಳು ಗಂಡಸಿಗೆ ಮಾತ್ರ ಯಾಕೆ... ?

ಹೆಣ್ಣಿಗೇಕೆ ಇಲ್ಲ  ಗೊತ್ತಾ ?"

ನನ್ನವಳ ಮನದ ಗೊಂದಲ 
ಅತ್ತಿತ್ತ ಓಡಾಡುವ 
ಅವಳ ಬೊಗಸೆ ಕಣ್ಣುಗಳಲ್ಲಿ ಗೊತ್ತಾಗಿಬಿಡುತ್ತದೆ...

"ಯಾಕೆ ಮುನಿವರ್ಯಾ  ?"

"ಹೆಣ್ಣು ಹೂವಿನಂತೆ...
ಅವಳ ಪ್ರತಿ ಕಣ ಕಣದಲ್ಲೂ ಭಾವನೆಗಳು ಹರಿದಾಡುತ್ತಿರುತ್ತವೆ..

ಅವಳ ಕೆನ್ನೆಗಳಲ್ಲಿ...
ಕಣ್ಣುಗಳಲ್ಲಿ...
ಮೌನ ತುಟಿಗಳಲ್ಲೂ ಭಾವ ತುಂಬಿರುತ್ತವೆ...

ಗಡ್ಡ 
ಮೀಸೆಗಳಿಂದ ಹೆಣ್ಣಿನ ಮುಖ ತುಂಬಿ ಹೋದರೆ ಕಷ್ಟ ಅಲ್ಲವ  ?..

ಗಂಡಿಗೆ 
ಭಾವನೆಗಳು ಕಡಿಮೆ...
ಗಡ್ಡ .. ಮೀಸೆಗಳಿಂದ ಮುಖ ಮುಚ್ಚಿದರೆ ಯಾವ ನಷ್ಟವೂ ಇಲ್ಲ..."

ಈಗ ಅವಳು ಕಣ್ ಮುಚ್ಚಿ ಗಲಗಲನೆ  ನಕ್ಕಳು...

"ಮುನಿವರ್ಯಾ
ಹೆಣ್ಣಿನ ಭಾವನೆಗಳಿಗೂ ಪುರುಷ ಬೆಲೆಕೊಡಬೇಕಲ್ಲವೆ ?"

ನಾನು ಅವಳ ಮಾತನ್ನು ಅಲ್ಲಿಯೆ ತುಂಡರಿಸಿದೆ...

"ಅಗತ್ಯವಿಲ್ಲ...

ಹೆಣ್ಣು ... ಪ್ರಕೃತಿಯ ಹಾಗೆ...
ಹೊಲವನ್ನು ಕೇಳಿ ಯಾರೂ ಉಳುಮೆ ಮಾಡುವದಿಲ್ಲ...

ತನಗೆ ಬೆಳೆ ಬೇಕೆನಿಸಿದಾಗ...
ತನ್ನ ಅವಶ್ಯಕತೆಗಳಿಗಷ್ಟೆ ಪುರುಷ ಹೊಲವನ್ನು ಊಳುತ್ತಾನೆ...

ಪುರುಷನಿಗೋಸ್ಕರವೇ ಪ್ರಕೃತಿ ಹುಟ್ಟಿದ್ದು...
ಹೆಣ್ಣು ಹುಟ್ಟಿದ್ದು...

ಹೆಣ್ಣನ್ನು 
ತನಗೆ ಹೇಗೆ ಬೇಕೋ  ಹಾಗೆ ಬಳಸಿಕೊಳ್ಳುವದು ಪುರುಷನ ಹಕ್ಕು... "

ಅವಳು ಮುಗ್ಧವಾಗಿ ಕಣ್ಣರಳಿಸಿದಳು...

"ನನಗೆ ಅರ್ಥವಾಗಲಿಲ್ಲ ಮುನಿವರ್ಯ..."

"ದಾಂಪತ್ಯದ ..
ಹೆಣ್ಣು ಗಂಡಿನ ಮಿಲನದ ... 
ಸುಖದ ಕ್ಷಣಗಳಿವೆಯಲ್ಲ...

ಸೂಕ್ಷ್ಮವಾಗಿ ಗಮನಿಸಿದ್ದೀಯಾ ?

ಗಂಡು ತನ್ನ ಖುಷಿಯ.. 
ಸುಖದ ಕೊನೆಯ ಹಂತ ತಲುಪಿದಕೂಡಲೆ 
ಮಿಲನದ ಕಾರ್ಯ ನಿಂತುಬಿಡುತ್ತದೆ...

ಗಂಡು ಹೆಣ್ಣಿನ ಮೈಥುನದಲ್ಲಿ ಗಂಡಿನ ಸ್ಖಲನವೇ ಮುಖ್ಯ...
ಗಂಡಸಿನ ತೃಪ್ತಿಯೇ ನಿರ್ಣಾಯಕ... . 

ಅಲ್ಲಿ 
ಹೆಣ್ಣಿಗೆ ಇನ್ನೂ ಸುಖದ ಕ್ಷಣದ ಅಗತ್ಯ ಬೇಕಿದ್ದರೂ 
ಗಂಡು ತೃಪ್ತಿ ಪಡೆದು ಮಲಗಿರುತ್ತಾನೆ...

ಹೆಣ್ಣನ್ನು ಸೃಷ್ಟಿಸಿದ ರೀತಿಯೇ ಹಾಗಿದೆ..

ಸುಖದ ವಿಚಾರ ಬಂದಾಗಲೂ ಹೆಣ್ಣು ಅಬಲೆ... 

ಗಂಡಿಗೋಸ್ಕರ..
ಗಂಡಿನ ಭೋಗ.. 
ಸುಖಗೋಸ್ಕರ ಹೆಣ್ಣಿನ ಹುಟ್ಟು ಆಗಿದೆ..."

ಅವಳಿಗೆ ಕೋಪ ಬಂದಿದ್ದು ಸ್ಪಷ್ಟವಾಗಿ ಕಾಣಿಸಿತು..

"ನೀವ್ಯಾಕೆ ಮದುವೆಯಾಗಿದ್ದೀರಿ  ?
ನೀವು ಸಂಸಾರದ ಸುಖ ಭೋಗಗಳನ್ನು ಬಿಟ್ಟವರಲ್ಲವೆ  ?

ನಿಮಗ್ಯಾಕೆ ಮದುವೆಯ ಅಗತ್ಯ ? "

" ಈ ಜಗತ್ತಿನಲ್ಲಿ 
ಗಂಡು.. ಹೆಣ್ಣು ಹುಟ್ಟಿರುವದು ಸಂತಾನೋತ್ಪತ್ತಿಗೋಸ್ಕರ...

ಆಧ್ಯಾತ್ಮ ಚಿಂತನೆ..
ತಪಸ್ಸಿಗೋಸ್ಕರ ನನ್ನ ಬದುಕು..
ನಾನು ಸನ್ಯಾಸಿ ಅಂತಿದ್ದರೂ..

ಈ ದೇಹದ 
ಮೂಲಗುಣವನ್ನು ಬಿಟ್ಟು ಇರಲಾಗುತ್ತದೆಯೆ  ?

ದೇಹದ ಮೂಲಭೂತವಾದ ಗುಣ ಕಾಮವನ್ನು ಬಿಟ್ಟು ಬದುಕು ಇಲ್ಲ...

ಕಾಮದ ಜೊತೆಗೆ ಪಾರಮಾರ್ಥಿಕ ಸಾಧನೆ ಮಾಡಬೇಕು... 
ಇದು ಸಹಜ... 

ದೇವಲೋಕದ ಎಲ್ಲ ಸಪ್ತ ಋಷಿಗಳನ್ನು ನೋಡು..
ಎಲ್ಲರೂ ಮದುವೆಯಾದವರು...

ಮದುವೆಯಾಗಿ
ಪಾರಮಾರ್ಥಿಕತೆಯತ್ತ ಹೊರಟವರು ನಾವು..."

ಅವಳ ಕೋಪ ತಡೆಯಲಾಗಲಿಲ್ಲ...

"ಆಧ್ಯಾತ್ಮ ಚಿಂತನೆಯವರಿಗೆ 
ಯಾಕೆ ನನ್ನಂಥಹ ಚೆಲುವೆಯ ಅಗತ್ಯ  ?

ಕುಂಟಿಯೋ..
ಕುರುಡಿಯೋ ಸಾಕಾಗುತ್ತಿರಲಿಲ್ಲವೆ ?

ಅಂಥಹ ಅಸಹಾಯಕಳಿಗೆ 
ಸಾಮಾನ್ಯರು ಕಣ್ಣೆತ್ತಿ ನೋಡದ ಕುರೂಪಿಯೊಬ್ಬಳಿಗೆ 
ಬದುಕುಕೊಟ್ಟಿದ್ದರೆ ಚೆನ್ನಾಗಿತ್ತಲ್ಲವೆ  ?

ನಿಮ್ಮಂಥಹ ಋಷಿಗಳಿಗೆ ಚಂದದ ಹೆಣ್ಣೇಕೆ ಬೇಕು  ?"

ನನಗೆ ನಗು ಬಂತು..

"ಅಯ್ಯೋ ಹುಚ್ಚಿ... !

ನಮ್ಮ ಆಧ್ಯಾತ್ಮ ಚಿಂತನೆಗಳಿಗೆ .. 
ತಪಸ್ಸಿಗೆ ಚಂದದ ಅಗತ್ಯವಿಲ್ಲ...

ನಾವು ಮಾಡುವ ಯಜ್ಞ ಯಾಗಾದಿಗಳಿಗೆ 
ಹೋಮ ಹವನಗಳಿಗೆ ಹೆಂಡತಿಯ ಅಗತ್ಯ ಮಾತ್ರ ಇದೆ.. 

ಅಲ್ಲಿಯೂ ಅಂದ ಚಂದದ ಅಗತ್ಯವಿಲ್ಲ..

ಆದರೆ..
ದಾಂಪತ್ಯದ ಹಾಸಿಗೆಗೆ..
ಉದ್ರೇಕದ ಹಸಿವೆಗೆ ಚಂದ ಬೇಕೇ ಬೇಕು...

ಕಾಮದ ಆಕ್ಷಣದ ಸುಖಕ್ಕೆ 
ಚಂದ ಇದ್ದರೆ ಸುಖದ  ಸೊಗಸು ಇನ್ನೂ ಜಾಸ್ತಿ...."

"ಮುನಿವರ್ಯಾ....
ಆಲದಂತಹ ಹೆಮ್ಮರವನ್ನು ಬೆಳೆಸುವ 
ಸಾಮರ್ಥ್ಯವಿರುವ ಪ್ರಕೃತಿಯ ಹೊಲದಲ್ಲಿ 
ಮೆಂತೆ ಸೊಪ್ಪನ್ನು ಬೆಳೆಸುವ ಪುರುಷನಿಗೆ ಏನನ್ನ ಬೇಕು  ?

ಪುರುಷ ಕೊಟ್ಟಾಗಲಷ್ಟೇ ಸುಖ ಅನುಭವಿಸಬೇಕು..

ಪುರುಷ ಕೊಟ್ಟಷ್ಟೇ ಸುಖದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು...!

ಪ್ರಕೃತಿಗೆ.. 
ಹೆಣ್ಣಿಗೆ ಇದರಲ್ಲಿ ಅವಕಾಶ ಇಲ್ಲವೆಂದಾದರೆ..

ಪ್ರಕೃತಿ ಅಂದರೆ ಸಹಜ ಅಂತ ಅರ್ಥವೆ ?..
ಹೆಣ್ಣಿನ ಅತೃಪ್ತಿ ಸಹಜವೇ ?.. ?

ಇವಳಿಗೊಂದು ಸೊಕ್ಕಿನ ಉತ್ತರ ಕೊಡಬೇಕು ಎನಿಸಿತು...

"ಹೌದು...
ಅದಕ್ಕಾಗಿಯೇ ಹೇಳಿದ್ದು... 

ಶಾರೀರಿಕವಾಗಿ ಒಂದೇ ಅಲ್ಲ... 
"ಸುಖ" ಪಡುವ ವಿಷಯದಲ್ಲೂ   ಹೆಣ್ಣು ಅಬಲೆ...!

ಈ ಹೆಣ್ಣಿನ ಕುಲವಿರುವದು ಪುರುಷನ 
ಸುಖ,, ಭೋಗಸ್ಕೋರ ಮಾತ್ರ...

ಇದು ಜಗತ್ತಿನ ಸಹಜ ಸತ್ಯ..."

ಅವಳು ಮತ್ತೆ ಮಾತನಾಡಲಿಲ್ಲ..
ಎದ್ದು ಹೋದಳು...

ಇಂಥಹ ಚರ್ಚೆ ನಮ್ಮಿಬ್ಬರಲ್ಲಿ ಅತ್ಯಂತ ಮಾಮೂಲಿ...

ನಾನು 
ದೇವಲೋಕದಿಂದ ಬಂದಮೇಲೆ ಗೊತ್ತಾಯಿತು..
ನನ್ನ ತಾರೆ ಬಸುರಿ ಅಂತ..

ತುಂಬಾ ಸಂತೋಷವಾಯಿತು...

ಮುಂದೊಂದು ದಿನ 
ಒಂದು ಅತ್ಯಂತ ಮುದ್ದಾದ ಗಂಡು ಮಗುವಿಗೆ ಅಪ್ಪನೂ ಆದೆ..

ಎಲ್ಲೆಡೆ ಸಂಭ್ರಮ  !

ಮಗುವಿನ ನಾಮಕರಣದ ಕಾರ್ಯಕ್ರಮವನ್ನು 
ವಿಜ್ರಂಭಣೆಯಿಂದ ಆಚರಿಸಲು ನಿಶ್ಚಯಿಸಿದೆ.

ಸಮಸ್ತ ಲೋಕದ ಗಣ್ಯರನ್ನು ಆಹ್ವಾನಿಸಿದೆ...

ಪುರೋಹಿತ ವರ್ಗದವರ ಮಂತ್ರ ಘೋಷಣೆ  ಮುಗಿಲು ಮುಟ್ಟಿತ್ತು...

ಅತಿಥಿಗಳ ಕಿಲ ಕಿಲ ನಗು...
ಸಂಭಾಷಣೆ.. 
ಗದ್ದಲದಿಂದ ಸಂಭ್ರಮಕ್ಕೆ ಕಳೆ ಕಟ್ಟಿತ್ತು..

ಆಗ ಒಂದು ಘರ್ಜನೆ ಕೇಳಿ ಬಂತು... !

"ಈ ಕಾರ್ಯಕ್ರಮವನ್ನು ಇಷ್ಟಕ್ಕೇ  ನಿಲ್ಲಿಸಿ..!."

ನಾನು ಆ ಧ್ವನಿಯತ್ತ ತಿರುಗಿ ನೋಡಿದೆ...

ನನ್ನ ಶಿಷ್ಯ ಚಂದ್ರ..!

ನನ್ನನ್ನು ನೋಡಿದ ಚಂದ್ರ ಮತ್ತೆ ಹೂಂಕರಿಸಿದ...

"ಗುರುವರ್ಯಾ...
ಈ ಮಗುವಿಗೆ ಅಪ್ಪ ನಾನು..

ಈ ಮಗುವಿನ ನಾಮಕರಣ ನನ್ನ ಹಕ್ಕು  !
ಈ ಮಗುವಿಗೆ ನಾನು ಹೆಸರಿಡುವೆ..."

ನಾನು ದಿಘ್ಬ್ರಾಂತನಾದೆ !

ನೆರೆದಿರುವ ಅತಿಥಿಗಳನಡುವೆ 
ನನ್ನ ಮಾನ..
ಮರ್ಯಾದೆ ಮಣ್ಣು ಪಾಲಾಗುತ್ತಿದೆ...!

"ನೀಚನಂತೆ ಮಾತನಾಡಬೇಡ...
ಯಾರ ಬಳಿ.. 
ಯಾವ ಮಾತನಾಡುತ್ತಿರುವೆಯೆಂದು ಪ್ರಜ್ಞೆ ಇಟ್ಟುಕೊ..."

ಚಂದಿರ ಮತ್ತೆ ಹೂಂಕರಿಸಿದ...

ಸಭೆಯಲ್ಲಿ ಗದ್ದಲ ಶುರುವಾಯಿತು...
ಬಿಸಿ ಬಿಸಿ ಚರ್ಚೆ.. ವಾಗ್ವಾದ ಶುರುವಾಯಿತು...

ಇಂದ್ರದೇವ ಮುಂದೆ ಬಂದು ಎಲ್ಲರನ್ನೂ ಶಾಂತಗೊಳಿಸಿದ..

"ಇಬ್ಬರೂ ಈ ರೀತಿ ಜಗಳವಾಡಿದರೆ 
ವಿಷಯ ಗೊತ್ತಾಗುವದಿಲ್ಲ...
ಮಗುವಿನ ತಾಯಿಯನ್ನು ಕರೆಸಿರಿ..."

ತಲೆಯನ್ನು ತಗ್ಗಿಸಿ 
ತಾರೆ ಸಭೆಗೆ ಬಂದಳು...

ಅಲ್ಲಿರುವ 
ಹಿರಿಯರು ಪರಿ ಪರಿಯಾಗಿ ತಾರೆಗೆ ಪ್ರಶ್ನೆ ಕೇಳಿದರು...

"ಈ ಮಗುವಿನ "ಅಪ್ಪ" ಯಾರು  ?"

ತಾರೆ ಮಾತನಾಡಲಿಲ್ಲ... 
ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ...
ಮೌನವಾಗಿ ಸುಮ್ಮನಿದ್ದುಬಿಟ್ಟಿದ್ದಳು... !

ನನಗೆ..
ನನ್ನ ಗರ್ವಕ್ಕೆ ದೊಡ್ಡ ಕೊಡಲಿ ಏಟು ಬಿದ್ದಂತಾಗಿತ್ತು...

ಇಂದ್ರ ಲೋಕದಲ್ಲಿ 
ತ್ರಿಲೋಕ ಸುಂದರಿಯರಾದ ಅಪ್ಸರೆಯರನ್ನು ನಿರ್ವಿಕಾರವಾಗಿ ನೋಡಿ.. 
ಪ್ರತಿಕ್ರಿಯಿಸುವ .. 
ನಾನು ಪತಿ ಧರ್ಮವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದವನು... 

ನಾನಿಲ್ಲದ ಸಮಯದಲ್ಲಿ ತಾರೆ ಜಾರಿದಳೆ  ?

ತುಂಬಿದ ಸಭೆಯಲ್ಲಿ  ಕೋಪದಿಂದ.. 
ಅವಮಾನದಿಂದ 
ಕಾಲನ್ನು  ಜೋರಾಗಿ ಒದೆಯುತ್ತ... 
ನೇರವಾಗಿ..
ತಾರೆಯ ಅಜ್ಜ..
ಬ್ರಹ್ಮನ ಬಳಿ ಹೋದೆ...

"ಸೃಷ್ಟಿಕರ್ತಾ...
ದೇವತೆಗಳ ಗುರುವಾದ  ನನಗೆ ಅನ್ಯಾಯವಾಗಿದೆ...

ಅವಮಾನವಾಗಿದೆ ನಿನ್ನ ಮೊಮ್ಮಗಳಿಂದ...!

ನನಗೆ ನ್ಯಾಯ ಕೊಡಿಸು..."

ಬ್ರಹ್ಮದೇವ..
ಚಂದ್ರನನ್ನೂ.. ತಾರೆಯನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿದ...

ಆಮೇಲೆ ನನ್ನನ್ನು ಕರೆದ...

"ಗುರು... 
ಬ್ರಹಸ್ಪತಿ... ಶಾಂತನಾಗು...

ನೀನು 
ಇಹಲೋಕದ ಐಹಿಕ ಸಾಂಗತ್ಯವನ್ನು ತ್ಯಜಿಸಿ ... 
ಋಷಿಯಾದವನು...
ಮತ್ತೆ ಜಗದ ಜಂಜಡಗಳಿಗೆ ಬೀಳಬೇಡ...

ತಾರೆಗೆ
ಪ್ರಕೃತಿ ಸಹಜವಾಗಿ 
ಕಾಮದಾಸೆ ಆದಾಗ ನೀನು ಪುರಸ್ಕರಿಸಲಿಲ್ಲ.. .

ಅದು ನಿನ್ನ ಮೊದಲ ತಪ್ಪು...

ಅವಳು ಚಂದ್ರನನ್ನು ಸೇರಿದಾಗ 
ನಿನ್ನ ಕುರಿತು ಧ್ಯಾನದಲ್ಲೇ ಇದ್ದಳಂತೆ...

ಗಂಡು.. 
ಹೆಣ್ಣಿನ ಮಿಲನದಲ್ಲಿ 
ಬೇರೆ ವ್ಯಕ್ತಿಯ ಬಗೆಗೆ ಚಿಂತಿಸಿದರೆ ... 
ಅದು ಮಾನಸಿಕ ವ್ಯಭಿಚಾರವಾಗುತ್ತದೆ..

ಆದರೆ 
ನಿನ್ನ ತಾರೆ
ಚಂದ್ರನನ್ನು ಸೇರುವಾಗಲೂ 
ನಿನ್ನ ಧ್ಯಾನದಲ್ಲೇ ಇದ್ದಳು... ಇದು ವ್ಯಭಿಚಾರವಲ್ಲ.. ಸದಾಚಾರವಲ್ಲವೇ ?..

ಈ ವಿಷಯವನ್ನು ದೊಡ್ಡದಾಗಿಸಿ...
ಆಕಾಶಕ್ಕೆ 
ಎಂಜಲು ಉಗಿದು 
ನಿನ್ನ ಮುಖಕ್ಕೆ  ಯಾಕೆ  ಬೀಳಿಸಿಕೊಳ್ಳುತ್ತೀಯಾ ?

ಅವಳನ್ನು ಕ್ಷಮಿಸಿ ದೊಡ್ಡ ಮನುಷ್ಯನಾಗಿಬಿಡು..."

ನಾನು ಸುಮ್ಮನೆ
ಅವಡುಗಚ್ಚಿ ಹೊರಗೆ ಬಂದೆ...

ಒಳಗೊಳಗೆ ಜ್ವಾಲಾಮುಖಿ ಕುದಿಯುತ್ತಿತ್ತು...

ಉಪದೇಶ ಬೇರೆಯವರಿಗೆ ಕೊಡುವದು ಸುಲಭ...!

ನನ್ನೊಳಗಿನ ಗಂಡಸು..
ಸೊಕ್ಕಿನ ಅಹಮ್ ಸುಮ್ಮನಿರಬೇಕಲ್ಲ...!

ಗಡಸುತನದಿಂದ ಅಲ್ಲವೇ ಗಂಡಸು ಶಬ್ದ ಉತ್ಪತ್ತಿಯಾದದ್ದು ? 

ಆಶ್ರಮಕ್ಕೆ ಬಂದವನೇ ಮಗುವನ್ನು ಎತ್ತಿಕೊಂಡೆ...

ಮಗು ಮುಗ್ಧವಾಗಿ ನಗುತ್ತಿತ್ತು...

ಆ ನಗು 
ನನ್ನ ಗಂಡಸುತನವನ್ನು..
ನನ್ನ ಹಂಕಾರವನ್ನು ಅಣಕಿಸಿದಂತಿತ್ತು..
ಕೆಣಕುವಂತಿತ್ತು... 

ಕಮಂಡಲದಿಂದ ನೀರು ತೆಗೆದುಕೊಂಡೆ...

ತಾರೆ ಗಾಭರಿಯಿಂದ ನನ್ನ ಕಾಲು ಹಿಡಿದುಕೊಂಡಳು...

ನಾನು ಕಾಲು ಝಾಡಿಸಿದೆ... 
ತಾರೆ ದೂರ ಹೋಗಿ ಬಿದ್ದಳು...!

" ನನ್ನದಲ್ಲದ ಈ ಮಗು...ಷಂಡನಾಗಲಿ... ...!

ಗಂಡಾಗಿ ಹುಟ್ಟಿದ್ದರೂ ... 
ನಿರ್ವೀರ್ಯದ ಬದುಕು ಸಾಗಿಸಲಿ..."

ತಾರೆ
ಪರಿ ಪರಿಯಾಗಿ  ಬೇಡಿಕೊಂಡಳು...

ನಾನು ಬಗ್ಗಲಿಲ್ಲ...

"ತಾರೆ..
ನಾನು ಯಾಕೆ ಈ ಘೋರವಾದ ಶಾಪ ಕೊಟ್ಟೆ ಗೊತ್ತಾ ?"

ದಳ 
ದಳನೆ ನೀರಿಳಿವ ಕಣ್ಣಿಂದ 
ತಾರೆ ದೈನ್ಯವಾಗಿ ನನ್ನನ್ನು ನೋಡಿದಳು...

" ಪತಿಯನ್ನು ಧಿಕ್ಕರಿಸಿ..
ಅಕ್ರಮ ಸಂಬಂಧ ಮಾಡುವ 
ಪ್ರತಿಯೊಂದೂ ಹೆಣ್ಣಿಗೂ ಈ ಶಾಪ ನೆನಪಿನಲ್ಲಿರಬೇಕು...

ಹೆಣ್ಣಿನ ಅಕ್ರಮ ಸಂಬಂಧ ಮಾಡುವ 
ಪ್ರತಿಯೊಬ್ಬ  ಗಂಡಸಿಗೂ ಇದು ನೆನಪಿನಲ್ಲಿರಬೇಕು..

ನೀನೂ..
ನಿನ್ನ ಚಂದ್ರ ಬದುಕಿನುದ್ದಕ್ಕೂ
ಷಂಡ ಮಗುವನ್ನು ನೆನಪಿಸಿಕೊಂಡು ಕೊರಗುತ್ತಿರಬೇಕು...

ನಿಮ್ಮಿಬ್ಬರಿಗೆ 
ನಿಮ್ಮ ಅಕ್ರಮ ಸಂಬಂಧ ನೆನಪಾದಗಲೆಲ್ಲ 
ಈ "ನಿರ್ವೀರ್ಯ" ಮಗು ನೆನಪಾಗಬೇಕು....!.. "

ನನ್ನ  ಬಿರುಸಿನ ಮಾತನ್ನು ಕೇಳಿದ 
ತಾರೆ ಧಡಕ್ಕನೆ ಎದ್ದಳು...

ಕೋಪದಿಂದ ಕಂಪಿಸುತ್ತಿದ್ದಳು.... 

"ಮುನಿವರ್ಯಾ...
ತಪ್ಪು ಮಾಡಿದೆ...

ಈ ವಿಶ್ವದಲ್ಲಿ..
ಸೂರ್ಯ.. 
ಚಂದ್ರ.. ತಾರೆ..ಗುರು ....
ಇರುವ ತನಕ "ಬುಧನೂ" ಇರುತ್ತಾನೆ...

ಪ್ರೀತಿಸಿದ
ಒಲಿದ
ಹೆಣ್ಣಿನ ಆಸೆ ನೆರವೇರಿಸದ 
"ಗುರು" .... 
ಅವನ ಪೌರುಷ.. ಅಹಂಕಾರ.. ಸೊಕ್ಕೂ ಕೂಡ ನೆನಪಾಗುತ್ತದೆ....

ನೀನು ಹೇಳುವ 
ಅಕ್ರಮ..
ಅನೈತಿಕ ಸಂಬಂಧಳೂ ಶಾಶ್ವತವಾಗಿ ಇರುತ್ತವೆ...

ನನ್ನ ಈ ಮಾತು  ಸೂರ್ಯನಷ್ಟೆ ಸತ್ಯ...!.. .".. 

ನನ್ನ ಕೋಪವಿನ್ನೂ ಆರಿರಲಿಲ್ಲ...

ಆಕಾಶ ನೋಡಿದೆ...

ಹುಣ್ಣಿಮೆಯಾಗಿತ್ತು...

ಚಂದ್ರ ಬಾನಿನಲ್ಲಿ ನಕ್ಕಂತೆ ಕಂಡ....

ನನ್ನ ಮೈಯೆಲ್ಲ ಉರಿಯುತ್ತಿತ್ತು....!


( ಕಥೆಯನ್ನು ಓದಿ .. ಚರ್ಚಿಸಿ .. ಸಲಹೆ, ಸೂಚನೆ ನೀಡಿದ 
ಗೆಳೆಯ "ಸುಬ್ರಮಣ್ಯ .. ದೀಕ್ಷಾ ಕಾಲೇಜು ಹುಬ್ಬಳ್ಳಿ"
ಮತ್ತು ನನ್ನ ಪ್ರೀತಿಯ "ವಾಜಪೇಯಿ ಅಣ್ಣ" ಇವರಿಗೆ ಪ್ರೀತಿಯ ನಮನಗಳು.. 

ಚಂದದ ಪ್ರತಿಕ್ರಿಯೆಗಳಿವೆ.. 
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ... )


Saturday, November 22, 2014

ತಾಳಿ

ನನ್ನ
ಮುಖದ ಮೇಲೆ
ಯಾರೊ ನೀರು ಚಿಮುಕಿಸಿದರು...

ಮೆಲ್ಲಗೆ ಕಣ್ಣು ಬಿಟ್ಟೆ...
ಎಚ್ಚರ ತಪ್ಪಿ ಬಿದ್ದಿದ್ದೆ ಅಂತ ಅನ್ನಿಸ್ತಿದೆ...

ಅಸಾಧ್ಯ ನೋವು..

"ಅಮ್ಮಾ..
ಅಯ್ಯೋ..."  .... ನರಳಿದೆ..

"ಸ್ವಲ್ಪ ಸಮಾಧಾನ ಮಾಡ್ಕೊ ತಾಯಿ...
ನಿಮ್ಮ ಹತ್ತಿರದವರ ಹೆಸರು ಹೇಳ್ತೀರಾ  ?"

ಮಾತನಾಡಲು ಬಾಯಿ ತೆರೆದೆ...

ತುಟಿ ನಡುಗುತ್ತಿತ್ತು...

ತುಟಿಯನ್ನು 
ರಕ್ತ ಬರುವಷ್ಟು ಹೀರಿದ್ದರು...

ಮತ್ತೆ ನೋವಿನಿಂದ ನರಳಿದೆ...

"ನನ್ನ ಮೊಬೈಲಿನಲ್ಲಿ  "ಅಪ್ಪ"  ಅಂತ ಇದೆ.. ನೋಡಿ.."

ಬಹಳ ಕಷ್ಟಪಟ್ಟು ಉಸುರಿದೆ..

ಸ್ವಲ್ಪ ನೀರು ಕುಡಿಸಿದರು..

ಕಣ್ಣಿಗೆ ಕತ್ತಲು ಕಟ್ಟಿತು..
ಮತ್ತೆ ಪ್ರಜ್ಞೆ ತಪ್ಪಿತು..

ಎಚ್ಚರವಾದಾಗ ಅಪ್ಪ ಕಣ್ಣೆದುರು ಇದ್ದರು..

"ಮಗಳೆ .."

ಅಂತ ತಬ್ಬಿಕೊಂಡರು...
ಅವರ ಕಣ್ಣಲ್ಲಿ ನೀರು ಇಳಿಯುತ್ತಿತ್ತು,...

ಆಮೇಲೆ ಗೊತ್ತಾಗಿದ್ದು ಇಷ್ಟು..

ಯಾರೊ ದಂಪತಿಗಳು 
ಸಾಯಂಕಾಲದ ಹೊತ್ತು 
ವಾಯುವಿಹಾರಕ್ಕೆ ಹೋಗುತ್ತಿದ್ದಾಗ
ರಸ್ತೆ ಬದಿಯ ಪೊದೆಯಲ್ಲಿ ನಾನು ನರಳುವ ಶಬ್ಧ ಕೇಳಿತಂತೆ..

ನನ್ನ ಮೇಲೆ ಅತ್ಯಾಚಾರವಾಗಿತ್ತು...!

ನನ್ನ 
ಮೊಬೈಲಿನಿಂದ ನನ್ನಪ್ಪನಿಗೆ ಫೋನ್ ಮಾಡಿ ಕರೆಸಿ..
ಡಾಕ್ಟರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು...

"ನೀವು ಪೋಲಿಸರಿಗೆ ದೂರು ನೀಡಿ..."

ಅಪ್ಪನ ಕಣ್ಣಲ್ಲಿ ನೀರು ಇಳಿಯುತ್ತಿತ್ತು..

"ಬೇಡಿ ಸಾರ್...
ನಾವು ಬಡವರು... 
ಮರ್ಯಾದೆ ಬೀದಿಗೆ ಬಂದರೆ ಬದುಕುವದು ಕಷ್ಟ..

ಬಡತನಕ್ಕೆ ಮರ್ಯಾದೆ ಬಲು ದೊಡ್ಡದು.. 

ಇಲ್ಲಿಯೇ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗುವೆ..."

"ಈ ಸ್ಥಿತಿಯಲ್ಲಿ 
ಮನೆಗೆ ಕರೆದುಕೊಂಡು ಹೋದರೆ .. 
ಅಕ್ಕಪಕ್ಕದವರು ಏನಂದಾರು  ?"

ನನ್ನಪ್ಪನ ಬಳಿ ಉತ್ತರ ಇರಲಿಲ್ಲ..

"ನೋಡಿ..
ಮಗಳಿಗೆ ತಂದೆಯಾಗಿ ನಿಮ್ಮ ಸ್ಥಿತಿ ಅರ್ಥವಾಗುತ್ತದೆ..

ಒಂದಷ್ಟು ದಿನ ಇವಳು ನಮ್ಮ ಮನೆಯಲ್ಲಿರಲಿ..

ನಮಗೇನೂ ತೊಂದರೆ ಇಲ್ಲ..."

ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ..
ನನ್ನನ್ನು ಕಾಪಾಡಿದ ದಂಪತಿಗಳು 

ಅವರು ನಮಗೆ  ದೇವರಂತೆ ಕಂಡರು ...

ಅಪ್ಪ ಅವರ ಮಾತಿಗೆ ಒಪ್ಪಿದ 
ಅವರು ಅಪ್ಪನಿಗೂ ಪರಿಚಿತರಾಗಿದ್ದರು.. .

ನಾನು ಆ ಸಹೃದಯರ ಮನೆಗೆ ಬಂದೆ..

ಅವರಿಬ್ಬರೂ 
ನನಗೆ ಅಪರಿಚಿತರು ಅಂತ ಅನ್ನಿಸಲೇ ಇಲ್ಲ...
ಯಾವುದೋ ಜನ್ಮದ ನನ್ನ ಬಂಧುಗಳಂತೆ ಅನ್ನಿಸಿದರು...

ಸಿನೇಮಾದಲ್ಲಿ 
ವಿಲನ್ನುಗಳು ಅತ್ಯಾಚಾರ ಮಾಡುವದನ್ನು ನೋಡಿದ್ದೆ..
ನಾಯಕಿ ಕಿರಿಚಾಡುವದನ್ನು ಕೇಳಿದ್ದೆ..
ಪುಸ್ತಕಗಳಲ್ಲಿ ವರ್ಣನೆ ಓದಿದ್ದೆ..

ನನಗಾದ ಅನುಭವ ಇದೆಯಲ್ಲ...ಅದು  ಯಾರಿಗೂ ಬೇಡ..!

ಒಬ್ಬಾತ 
ನನ್ನನ್ನು ಮಲಗಿಸಿ ಕೈಯನ್ನು ತನ್ನ ಬೂಟುಕಾಲಲ್ಲಿ ಮೆಟ್ಟಿ ನಿಂತಿದ್ದ...

ಇನ್ನೊಬ್ಬ ಬಟ್ಟೆಯನ್ನು ಹರಿಯುತ್ತಿದ್ದ.. ...

ಅದೆಷ್ಟು ಆತುರ ಈ ದುರುಳರಿಗೆ..!

ಕೂಗೋಣವೆಂದರೆ 
ನನ್ನ ಬಾಯಿಗೆ ಬಟ್ಟೆ ತುರುಕಿದ್ದರು...!

ಸರಾಯಿ ವಾಸನೆ ಘಮ್ಮೆಂದು ಮೂಗಿಗೆ ಅಡರಿತು...

ಹರಿದಾಡಿದರು...
ಕೆನ್ನೆ.. ತುಟಿ..
ಮೂಗು
ಎದೆ.. ಎಲ್ಲೆಡೆ ಕಚ್ಚಿದರು..

ನನ್ನನ್ನು ಹೀರಿಬಿಟ್ಟರು...!

ನನಗೆ ನೋವು.. ಹಿಂಸೆ ಕೊಟ್ಟು 
ಈ ದೇಹದಿಂದ ಯಾವ ಸುಖ ಸಿಕ್ಕಿತೋ  ಆ ದುರಳರಿಗೆ ... ! .. 

ಕನಸಲ್ಲೂ 
ಊಹಿಸಲಾಗದ ಭಯಂಕರ ಅತ್ಯಾಚಾರ ನಡೆದೇ ಹೋಯಿತು....

ನೆನಪಾದಾಗಲೆಲ್ಲ ನೋವು ಜಾಸ್ತಿಯಾಗುತ್ತಿತ್ತು...

ನೋವು ದೇಹಕ್ಕಾಯಿತೊ... 
ಮನಸ್ಸಿಗೋ ... 

ನರಳಿದೆ..

ರೂಮಿನ ಬಾಗಿಲು ತೆಗೆದು
ನನ್ನನ್ನು ಕಾಪಾಡಿದವ  ನನ್ನ ಬಳಿ ಬಂದರು ...

ಮೆಲ್ಲಗೆ ನನ್ನ ಹಣೆ ಸ್ಪರ್ಷಿಸಿದರು ..

ಅವರ  ಮುಖದಲ್ಲಿ ಕರುಣೆಯಿತ್ತು... 
ಅನುಕಂಪವಿತ್ತು ..

ಸಾಂತ್ವನಕ್ಕೆ ಮಾತು ಬೇಕಿಲ್ಲ..
ನೋಟ..
ಸ್ಪರ್ಷ ಸಾಕು..

ನನ್ನನ್ನು ಎತ್ತಿ ಕುಳ್ಳಿರಿಸಿ ನೀರು ಕುಡಿಸಿದರು ...

ಈಗ
ಅವರ  ಮಡದಿಯೂ ರೂಮಿಗೆ ಬಂದಳು..

"ಆ ರಾಕ್ಷಸರನ್ನು 
ಸುಮ್ಮನೆ ಬಿಡಬಾರದು...!

ಕೊಚ್ಚಿ 
ಕೊಚ್ಚಿ ಕತ್ತರಿಸ ಬೇಕು..."

ಅತ್ತು ಬಿಡೋಣ ಎಂದುಕೊಂಡೆ...
ನನ್ನ ಕಣ್ಣಲ್ಲಿ ಈಗ ನೀರೂ ಸಹ ಬರುತ್ತಿಲ್ಲ...

ಆ ದಂಪತಿಗಳ ಮಮತೆಗೆ
ಸ್ನೇಹಕ್ಕೆ.. 
ಅವರ ಒಳ್ಳೆಯತನಕ್ಕೆ ನಾನು ಮನಸೋತೆ...

ಎಷ್ಟು ಅನ್ಯೋನ್ಯವಾಗಿದ್ದಾರೆ !

ನನ್ನ ಭಾಗ್ಯದಲ್ಲಿ  ಇಂಥಹ ಬಾಳುವೆ  ಇದೆಯಾ ?
ಜಗತ್ತಿನಲ್ಲಿ ಇಂಥವರೂ ಇರ್ತಾರಾ ?

ಅವರು ನನ್ನ ಸೇವೆ ಮಾಡುವಾಗ 
ಅವರಿಬ್ಬರನ್ನು ಕಣ್ ತುಂಬಾ ನೋಡುತ್ತಿದ್ದೆ.. 

ಅವರ 
ಮಮತೆಯ ಮಂದಿರವನ್ನು ನನ್ನ ಹೃದಯದಲ್ಲಿ ಕಟ್ಟಿಕೊಂಡೆ 

ಸುಮಾರು ಒಂದು ತಿಂಗಳಾಯಿತು..
ನಾನು ಅವರ ಮನೆಯವಳೇ ಆಗಿಬಿಟ್ಟೆ..

ಕ್ರಮೇಣ ನಾನು ಓಡಾಡುವಷ್ಟು ಆರೋಗ್ಯವಂತಳಾದೆ..

ನನ್ನನ್ನು 
ಇಬ್ಬರೂ ತುಂಬಾ ಮಮತೆಯಿಂದ..
ತಮ್ಮ ತಂಗಿಯಂತೆ ನೋಡಿಕೊಂಡರು..

"ಇವತ್ತು ಡಾಕ್ಟರ್ ಬಳಿ ಹೋಗಬೇಕು..
ರೆಡಿ ಆಗಮ್ಮ..."

ನನ್ನ ಅಣ್ಣನಂತಿದ್ದ
ಅವರ ಮುಖವನ್ನೇ ನೋಡಿದೆ..

"ನೋಡಮ್ಮ..
ನಿನ್ನ ದೇಹದ ಬಹಳಷ್ಟು ಗಾಯಗಳು ವಾಸಿಯಾದವು...

ಆ ದುರುಳರ ಕೆಟ್ಟ ಕೆಲಸದ ಪರಿಣಾಮ ನಿನ್ನ ಹೊಟ್ಟೆಯಲ್ಲಿ ಬೆಳೆಯಬಾರದು..

ಅವರಿಗೆಲ್ಲ ಯಾವ ರೋಗವಿತ್ತೊ.. ಏನೊ..

ಎಲ್ಲವನ್ನೂ ಒಮ್ಮೆ ಪರೀಕ್ಷಿಸಿಕೊಂಡು ಬರಬೇಕಮ್ಮ..."

ನಾನು ತಲೆಯಾಡಿಸಿದೆ...
ಅವರ ಮಡದಿ ನಮ್ಮನ್ನು ಬೀಳ್ಕೊಟ್ಟರು...

ಡಾಕ್ಟರ್ ಎಲ್ಲವನ್ನೂ ಪರೀಕ್ಷಿಸಿದರು...

"ಏನೂ ಸಮಸ್ಯೆ ಇಲ್ಲ... ಎಲ್ಲವೂ ವಾಸಿಯಾಗಿದೆ..."

ನನ್ನನ್ನು ಕರೆದುಕೊಂಡು ಬಂದವರಿಗೂ ಖುಷಿ ಆಯ್ತು.. 

ಒಂದಷ್ಟು ಮಾತ್ರೆ..
ಔಷಧಗಳನ್ನು ಬರೆದುಕೊಟ್ಟರು...

ಮೊದಲೆಲ್ಲ
ನನ್ನಮ್ಮ ನನ್ನ ಮೈ ಮುಟ್ಟಿದರೂ ನನಗೆ ನಾಚಿಕೆಯಾಗುತ್ತಿತ್ತು..
ಕಚಗುಳಿ ಇಟ್ಟಂತಾಗುತ್ತಿತ್ತು...

ಡಾಕ್ಟರ್ 
ನನ್ನ ದೇಹ ಪರೀಕ್ಷಿಸುತ್ತಿರುವಾಗ ನನಗೇನೂ ಅನ್ನಿಸಲೇ ಇಲ್ಲ...

ನಾನು 
ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬಿಟ್ಟೆನಾ ? 

ಇಬ್ಬರೂ ಮನೆಗೆ ಬಂದೆವು..
ಮನೆಯಲ್ಲಿ ಅವರ ಮಡದಿ ಕಾಣಲಿಲ್ಲ..

ಒಂದು ಚೀಟಿಯಿತ್ತು...

"ನಾನು 
ಅಣ್ಣನ ಮನೆಗೆ ಹೋಗುತ್ತಿದ್ದೇನೆ..
ನನಗಾಗಿ ಕಾಯಬೇಡಿ.. ನೀವಿಬ್ಬರೂ ಊಟ ಮಾಡಿ..."

ಅವರು ತುಂಬ ಪ್ರೀತಿಯಿಂದ 
ಮಮತೆಯಿಂದ ಬಡಿಸಿದರು..

"ಸರ್...

ನಿಮ್ಮಿಬ್ಬರಿಂದಾಗಿ  
ನಾನು ಈ ಆಘಾತದಿಂದ ಹೊರಗೆ ಬರ್ತಾ ಇದ್ದೀನಿ.. 

ನಿಮ್ಮಿಬ್ಬರ ಪ್ರೀತಿಗೆ..
ಮಮತೆಗೆ ನನಗೆ ಏನು ಹೇಳಬೇಕೆಂದೇ  ತಿಳಿಯುತ್ತಿಲ್ಲ...

ನಿಮಗೆ ಏನೆಂದು ನಾನು ಕರೆಯಲಿ  ? "

ಅವರು ನಸುನಕ್ಕರು..
ನಗುವಿನಲ್ಲಿ ಪ್ರೀತಿ ಇತ್ತು... 

"ಮನಸ್ಸಲ್ಲಿ ಪ್ರೀತಿ ಇದ್ದರೆ ಸಾಕಮ್ಮ...
ಏನು ಬೇಕಾದರೂ ಕರೆಯಬಹುದು.. ..

ನನ್ನದೇನೂ ಅಭ್ಯಂತರ ಇಲ್ಲ..."

"ನನ್ನ ಅಕ್ಕನ ಗಂಡ..
ನನ್ನ 
ಬಾವನನ್ನು  "ಜಿಜ್ಜು"  ಅಂತ ಕರೆಯುತ್ತಿದ್ದೆ.
ಅವರೀಗ ಇಲ್ಲ..

ನಿಮ್ಮಲ್ಲಿ ನನ್ನ ಬಾವನನ್ನು ಕಾಣುತ್ತಿದ್ದೇನೆ ಸರ್.."

ಅವರು ತಲೆ ಆಡಿಸುತ್ತ ಮತ್ತೆ ನಸು ನಕ್ಕರು...

ಊಟವಾಯಿತು..

ನಾನು ಡೈನಿಂಗ್ ಟೇಬಲ್ಲನ್ನು ಸ್ವಚ್ಛಗೊಳಿಸಲು ಹೋದೆ..

"ನೀನು ವಿಶ್ರಾಂತಿ ಮಾಡಮ್ಮ..
ಇದೆಲ್ಲ ನಾನು ಮಾಡ್ತಿನಿ..."

"ಜಿಜ್ಜು...
ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ..

ಈಗ ನೋವು ಕೂಡ ಇಲ್ಲ..

ಡಾಕ್ಟರ್ ಕೂಡ ಹೇಳಿದ್ದಾರಲ್ಲ ಸಂಪೂರ್ಣ ಗುಣಮುಖಳಾಗಿದ್ದೇನೆ..
ನನಗೆ ಯಾವ ಸಮಸ್ಯೆಯೂ ಇಲ್ಲ ಅಂತ..

ನಾನು ಇದೆಲ್ಲ ಮಾಡ್ತಿನಿ ಬಿಡಿ....."

ಅವರು ಬಂದು ನನ್ನ ಕೈಯಲ್ಲಿದ್ದ ಬಟ್ಟೆಯನ್ನು ಹಿಡಿದುಕೊಂಡರು...

"ಹಾಗಲ್ಲಮ್ಮ..
ನಿನ್ನ ಬಳಿ ಕೆಲಸ ಮಾಡಿಸಿದರೆ 
ನನ್ನವಳು ನನ್ನನ್ನು ಸುಮ್ಮನೆ ಬಿಡುವದಿಲ್ಲ.."

ನಾನು 
ಅವರ ಕೈಯಿಂದ ಬಿಡಿಸಿಕೊಳ್ಳಲು ಕೊಸರಾಡಿದೆ..

ಅವರು ಇನ್ನೂ ಜೋರಾಗಿ ಹಿಡಿದುಕೊಂಡರು...

"ನಿನ್ನ ಬಗೆಗೆ 
ನನಗೆ ಬಹಳ ದುಃಖ  ಇದೆಯಮ್ಮ..

ನಿನ್ನ ಮೊದಲ ಅನುಭವವೇ  ಹೀಗಾಗಬಾರದಿತ್ತು..."

ನನಗೆ ಅರ್ಥವಾಗಲಿಲ್ಲ...

ಅವರು ತಡವರಿಸಿದರು..

"ಅದು..

ಅದ್ದೂ.. ... 

ನಿನ್ನ ಮೊದಲ ಸೆಕ್ಸ್ ಅನುಭವ ಹೀಗಾಗ ಬಾರದಿತ್ತು...!... "

ಅವರಿನ್ನೂ ನನ್ನ ಕೈಯನ್ನು ಬಿಟ್ಟಿರಲಿಲ್ಲ..

"ನೋಡಮ್ಮ...
ಸೆಕ್ಸ್..
ಕಾಮವೆಂದರೆ ಒಂದು ಸುಂದರ ಅನುಭೂತಿ...

ಶಬ್ಧಗಳಿಗೆ ವರ್ಣನೆಗೆ ಸಿಗುವಂಥದ್ದಲ್ಲ...

ಕಾಮವಿಲ್ಲದಿದ್ದರೆ 
ಈ ಜಗತ್ತು ಶುಷ್ಕ... ನೀರಸ ... "

ನನಗೆ ಏನು ಹೇಳಬೇಕೆಂದು ತೋಚಲಿಲ್ಲ...

"ನಿನ್ನನ್ನು ಕೇಡಿಸಿದ್ದಾರಲ್ಲ..
ಅವರು ಮಾನಸಿಕ ರೋಗಿಗಳು...

ಪ್ರೀತಿಯಿಂದ ಪಡೆಯಬೇಕಾದಂಥಹುದನ್ನು ಬಲಾತ್ಕಾರವಾಗಿ ಪಡೆಯಲು ಪ್ರಯತ್ನಿಸಿದ್ದಾರೆ..

ಕ್ರೂರಿಗಳು..."

"ಹೌದು ಸರ್..
ಅವರು ರಾಕ್ಷಸರು..!.. "........ 

ಅವರು ನನ್ನ ಕೈಯನ್ನು ಬಿಡದೆ 
ಹಾಗೆ ಹಿಡಿದುಕೊಂಡು ನನ್ನನ್ನು ಬಳಸಿ ತಬ್ಬಿಕೊಂಡರು...

ಈಗ ನಾನು ಅಪ್ರತಿಭಳಾದೆ..

"ಇದೇನು ಸಾರ್.. ನೀವು  ?
ನನಗೆ ಇದೆಲ್ಲ ಇಷ್ಟ ಆಗಲ್ಲ.. ಪ್ಲೀಸ್ ಬಿಟ್ ಬಿಡಿ..."

ಅವರು 
ನನ್ನನ್ನು ನೋವಾಗದ ಹಾಗೆ ಹಿಡಿದುಕೊಂಡಿದ್ದರು...

"ನಿನಗೊಂದು ಸ್ವರ್ಗ ತೋರಿಸುತ್ತೇನೆ..!

ನಿನಗಾದ ಕಹಿ ಅನುಭವ ನೀನು ಮರೆತುಬಿಡಬೇಕು..

ಒಂದು ಅರ್ಧ .. 
ಮುಕ್ಕಾಲು ಗಂಟೆ ಸುಮ್ಮನಿದ್ದುಬಿಡು.... 

ಸೆಕ್ಸ್ ಎಂದರೆ ಸುಂದರ..
ಸಿಹಿಯಾದ 
ಸುಖ ಅಂತ ನಿನಗೂ ಅದರ ಅನುಭವ ಕೊಡುತ್ತೇನೆ..."

ನಾನು ಕೊಸರಾಡಿದೆ...

"ನೋಡು..
ಗಡಿಬಿಡಿ.. ಆತಂಕ ಏನೂ ಬೇಡ... 

ಒಂದು ಹತ್ತು ನಿಮಿಷ ನೀನು ಸುಮ್ಮನಿರು..

ಒಪ್ಪಿಕೊ... 

ನಿನ್ನ ದೇಹ ...
ಈ ಕ್ರಿಯೆಗೆ ಸಹಕರಿಸದಿದ್ದರೆ 
ನಾನು ನಿನ್ನನ್ನು ಬಿಟ್ಟು ಬಿಡುವೆ..

ಖಂಡಿತಾ ಬಲವಂತ ಮಾಡುವದಿಲ್ಲ... "

"ಸಾರ್..
ಇದೇನು.. ?

ನಿಮ್ಮದು ಪ್ರೀತಿಯ ಸಂಸಾರ...

ನಿಮ್ಮ ಮಡದಿ ಏನಂದುಕೊಂಡಾಳು... ?

ನನ್ನನ್ನು ಬಿಟ್ ಬಿಡಿ.. ಪ್ಲೀಸ್..."

ಅವರ ಕೈ .. 
ನನ್ನ ಮೈಮೇಲೆಲ್ಲ ಹರಿದಾಡುತ್ತಿತ್ತು...

ನನ್ನ ಕಿವಿಯ ಬಳಿ ಬಂದು ಉಸುರಿದರು...

"ಅವಳು ನನ್ನ ಮಡದಿ ನಿಜ..

ನಾನು .... 
ನನ್ನ 
ಎಲ್ಲ ಸುಖವನ್ನೂ ಅವಳ ಕುತ್ತಿಗೆಗೆ ಕಟ್ಟಲಿಲ್ಲ..

ತಾಳಿಯನ್ನಷ್ಟೆ ಕಟ್ಟಿದ್ದೇನೆ..."... 

ಅವರು ಏದುಸಿರು ಬಿಡುತ್ತಿದ್ದರು...

ಅಪ್ಪುಗೆ ಬಿಗಿಯಾಗ ತೊಡಗಿತು...



(3K ಬಳಗಕ್ಕಾಗಿ ಬರೆದ ಕಥೆ ಇದು.... 
ಕೇವಲ ಕಥೆಯಲ್ಲ... 
ಸತ್ಯ ಅಂತನೂ  ಅಂದುಕೊಳ್ಳಬಹುದು...)

Saturday, October 25, 2014

ಆ ಚರ ...

ನಮ್ಮ
ಇಷ್ಟ..
ಕಷ್ಟಗಳು ಯಾವಾಗಲೂ ಒಂಟಿ...

ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ ನೋಡಿ.... 


ಹಸಿರು ಚಿಗುರುತ್ತದೆ...

ಮೊಗ್ಗು ಹೂವಾಗಿ ಅರಳುತ್ತದೆ...

ಈ ಹೂವಿಗೆ ಅಷ್ಟು ಸಾಕಾ ?...


ದುಂಬಿ

ತನ್ನೆಡೆಗೆ ಬರಬೇಕು...

ತನ್ನ ಚಂದ ನೋಡಿ ಹಾಡಬೇಕು...


ಮಕರಂದ ಹೀರಬೇಕು...


ಮಕರಂದ ಹೀರಿದ ಮೇಲೆ 

ತನ್ನ ಅಂದ .... 
ಹಾಳಾಗುತ್ತದೆ ಅಂತ ಗೊತ್ತಿದ್ದರೂ..
ಕೊಡುವದರಲ್ಲೇ ತೃಪ್ತಿ ಕಾಣುತ್ತದೆ ಆ ಹೂವು..

ತೃಪ್ತಿ .... 

ಅನ್ನೋದಕ್ಕೆ ವಿಶ್ರಾಂತಿ  ಅನ್ನೋದೆ ಇಲ್ಲ... 

ತನ್ನ ಚಂದವನ್ನು ... 

ಯಾರಾದರೂ ನೋಡಲಿ..

ಹೂ ಮಾಲೆ ಕಟ್ಟಿ 

ಯಾವ ಮೂರ್ತಿಗಾದರೂ ಅಲಂಕರಿಸಲಿ..

ಚಂದದ ಹೆಣ್ಣಿನ ಮುಡಿಸೇರಲಿ..


ಅರಳಿದ 

ಹೂವಿನ ಚಂದ ಕೆಲವೇ ಕ್ಷಣ 
ಅಂತಿದ್ದರೂ
ಚಂದವನ್ನು ಹಾಳುಮಾಡಿಕೊಳ್ಳುವದರಲ್ಲೇ ಸಾರ್ಥಕತೆಯನ್ನು ಕಾಣುತ್ತದೆ...

ಏನು ಮಾಡಲಿ ?


ಹೆಣ್ಣಿಗೆ 

ಈ ಗಂಡಸರು 
ಹೂವು 
ಪ್ರಕೃತಿ ಎನ್ನುತ್ತಾರೆ...

ಪ್ರಕೃತಿಯ 

ಆಗುಹೋಗುಗಳ ಬಗೆಗೆ ಪುರುಷನಿಗೆ ಲಕ್ಷ್ಯವೇ ಇರುವದಿಲ್ಲ...

ರಜಸ್ವಲೆಯಾಗಿ 

ಇಂದು ಮಿಂದಿದ್ದೇನೆ...
ನನ್ನವನಿಗೆ ನನ್ನ ಬಗೆಗೆ ಲಕ್ಷವೇ ಇಲ್ಲ...

ನನ್ನವ ...... 

ನಿಮಗೆ ಗೊತ್ತಿರಬೇಕು...

ದೇವಗುರು "ಬೃಹಸ್ಪತಿ..." !


ನಾನವನ ಮಡದಿ "ತಾರೆ..."


ನನ್ನ ಬದುಕೇನು ಚಂದವೆ ?


ನಿಮಗೇನು ಗೊತ್ತು

ಸನ್ಯಾಸಿಯ 
ಆಶ್ರಮದ ಬೇಲಿಯೊಳಗಿನ ಬದುಕು.... ?

ನನ್ನವ 

ಬದುಕಿನ ಪಾರಮಾರ್ಥಿಕತೆಯನ್ನು ಹುಡುಕುವವ...

ನನ್ನವ 

ನನಗೂ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದಾನೆ...

ನಮ್ಮ ಒಳಗಿನ ಆಸೆಯ ಅಭಿವ್ಯಕ್ತಿ ಬಲು ಕಷ್ಟ...

ನನ್ನವನಿಗೆ
ನನ್ನಾಸೆಯನ್ನು ಹೇಳಲೇ ಬೇಕಲ್ಲ...

ನನ್ನ 

ಮೌನ ಮಾತಾಡುತ್ತದೆ .. 
ಆ ಮೌನವನ್ನು ಕೇಳುವ ಮನಸ್ಥಿತಿ ಪುರುಷನಿಗಿರಬೇಕಲ್ಲ.... 

ಅವನ ಬಳಿ ಸುತ್ತಾಡಿದೆ...


"ಏನು " ಎನ್ನುವಂತೆ ನೋಡಿದ...


ನನಗೆ 

ನಗು ಬಂದರೂ ಪ್ರಶ್ನೆ ಕೇಳಿದೆ...

"ನಮ್ಮ 

ಅಂಗಳಕ್ಕೆ..
ಈ ಆಶ್ರಮಕ್ಕೆ ..... 
ಯಾಕೆ ಬೇಲಿ ಹಾಕಿದ್ದೀರಿ..? ..... 

ಪಕೃತಿ ಸಹಜ ಅಲ್ಲವಾ ?


ಪ್ರಕೃತಿಯ ಮೇಲೇಕೆ 

ಬೇಲಿ ಹಾಕಿ..
ಪ್ರಭುತ್ವ ಸ್ಥಾಪಿಸುವ  ಆಸೆ.. ? ... 

ಯಾವ ಪುರುಷನಿಗೇ ಆಗಲಿ 

ಪ್ರಕೃತಿಯ ಮೇಲೆ ಪ್ರಭುತ್ವ ಸಾಧ್ಯವೆ ?.."

ನನ್ನ ಗಂಡ 

ಗಡ್ಡವನ್ನು ತೀಡುತ್ತಾ ...... 
ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ...

"ಬೇಲಿ ಹಾಕಿದ್ದು .... 

"ಪ್ರಭುತ್ವ" ಸಾಧಿಸಲಿಕ್ಕೆ ಅಂತ ಯಾಕೆ ತಿಳಿದು ಕೊಳ್ತೀಯಾ ?

ಇದು    "ನಮ್ಮದು"

ನನ್ನದು ಮಾತ್ರ ...
ಅಂತಿದ್ರೆ ಬದುಕು ಕಟ್ಟಿಕೊಳ್ಳುವದು ಸುಲಭ.. 

ಅದು 

ಪ್ರೀತಿಗೆ ... 
ದಾಂಪತ್ಯಕ್ಕೆ ಸಹಾಯಕ ಮತ್ತು ಸಹಜ... "

"ಪ್ರೀತಿ ಅಂದರೆ ಬೇಲಿಯೊಳಗಿನ ಸ್ವಾರ್ಥವಾ ? "


"ಹೌದು ... 


ಈ 

ಪ್ರೀತಿ  ತನ್ನ ಬೇಲಿಯೊಳಗೆ ಇರಬೇಕೆಂದು ಮನಸ್ಸು ಬಯಸುತ್ತದೆ... 

ಬೇಲಿ ಒಳಗಿನ "ಪ್ರಕೃತಿ" ನನ್ನದು ಅಂತಿದ್ದಾಗ  

ಪ್ರೀತಿ ಮಾಡಬಹುದು..

ನಮ್ಮಲ್ಲಿ  "ಬೇಲಿ" ಇಲ್ಲ ಅಂದುಕೊ...


ಇಲ್ಲಿ ಯಾರು ಬೇಕಾದರೂ ಬರಬಹುದು... 

ಹೂ ಕೀಳಬಹುದು... 

ಇದು ತಮ್ಮದಲ್ಲ 

ಅಂತಿದ್ದಾಗ "ಕಾಳಜಿಯೂ" ಇರುವದಿಲ್ಲ... 

ಬೇಲಿ ಇಲ್ಲದ "ಅಂಗಳ" ನಿನಗೆ ಬೇಕಿತ್ತಾ ? "


ಗಂಡಸರೇ ಹೀಗೆ...

ಪ್ರಶ್ನೆಗೆ ಉತ್ತರವಿಲ್ಲವಾದಾಗ "ಪ್ರಶ್ನೆಗೆ" ಪ್ರಶ್ನೆಯನ್ನೇ ಕೇಳುತ್ತಾರೆ..

ಅವನ ಪ್ರಶ್ನೆಗೆ ನಾನೂ ಸಹ ಪ್ರಶ್ನೆಯನ್ನೇ ಕೇಳಿದೆ...


"ಪ್ರಕೃತಿಯ ಸಹಜ ಗುಣವೇನು ? "


"ಏನು ?"


"ಸೃಷ್ಟಿ...!


ಸೃಷ್ಟಿಸುವದು 

ತಾಯಿಯಾಗುವದು ಅವಳ ಬದುಕಿನ ಸಾರ್ಥಕತೆ...

ಬೇಲಿ ಹಾಕಿದವರಿಗೆ 

ಗಿಡಕ್ಕೆ ಗೊಬ್ಬರ ಕೊಡುವದು  ತಿಳಿದಿರಬೇಕು... "

ನನ್ನವ ದುರುಗುಟ್ಟಿದ...


"ಓಹ್ಹೋ ... !

ಇದಕ್ಕೆ ಇಷ್ಟೆಲ್ಲ ಪೀಠಿಕೆಯೇ ?..

ನನಗೆ ಕಾರ್ಯ ನಿಮಿತ್ತ ದೇವಲೋಕ ಹೋಗಬೇಕಾಗಿದೆ...


ಹದಿನೈದು ದಿನ ಬಿಟ್ಟು ಬರುವೆ

ಅಲ್ಲಿಂದ ಬಂದವ ನಿನ್ನಿಷ್ಟವನ್ನು ಪೂರೈಸುವೆ..."

ಆಸೆಯನ್ನು  ಹೇಳಿದ್ದು  ಅಪರಾಧವಾಯಿತೇನೋ ಎನ್ನುವಂತಿತ್ತು..

ನನ್ನವನ ನಡೆ ನುಡಿ...

ಇಷ್ಟಾದರೂ ಅರ್ಥವಾಯಿತಲ್ಲ..

ನನ್ನ ಪುಣ್ಯ..

ಆಸೆ 

"ಹೂವಾಗಿ"  ಅರಳಿದ ಮೇಲೆ  ಎಲ್ಲವೂ ಚಂದವೆ ...

ಆದರೆ ... 

ಇಂದು 
ಈ ಆಸೆಯೇಕೊ ಬೆಂಕಿಯಾಗಿ ಸುಡುತ್ತಿದೆ...
ನನ್ನನ್ನು ದಹಿಸುತ್ತಿದೆ...

ಬಾಯಾರಿದವರಿಗೆ ಗೊತ್ತು 

ಹನಿ 
ಹನಿ ನೀರಿನ ಹಂಬಲ.... 

ಹನಿ

ಹನಿ ಬಿದ್ದು
ತಂಪಾಗಬೇಕಲ್ಲ...

ಯಾರೋ ಕದ ತಟ್ಟುತ್ತಿದ್ದಾರೆ...


ಕದ ತೆರೆದೆ...


ದಿಘ್ಮೂಢಳಾಗಿ ನಿಂತುಬಿಟ್ಟೆ... !


ಬಂದವ ಚಂದದ ಚಂದಿರ... !!


ನಗು ನಗುತ್ತಾ ನಿಂತಿದ್ದಾನೆ !


ಒಳಗಿನ 

ಒತ್ತಾಸೆಗೆ ದೃವಿಸಿಹೋದೆ... !

ಉಟ್ಟ ಸೀರೆ ಜಾರುತ್ತಿದೆಯೇ... ?

ಬಟ್ಟೆ ಭಾರವಾಗುತ್ತಿದೆಯೆ ?

ಚಂದ್ರಮನನ್ನು ಒಳಗೆ ಕರೆದೆ...

ಕುಳ್ಳಿರಿಸಿದೆ... 
ಆದರಿಸಿದೆ...

ಪ್ರೀತಿ ತೋರಿದೆ...


ನಕ್ಕೆ...


ಗಡಿಬಿಡಿಯಲ್ಲಿ 

ಸರಿದ 
ಸೆರಗನ್ನು ಸರಿಪಡಿಸಿಕೊಂಡೆ...

ಕಣ್ ತೆರೆದು ಮುಚ್ಚುತ್ತ ಮಾತನಾಡಿದೆ....


ಚಂದಿರ ಬೆಪ್ಪನಂತೆ ನೋಡುತ್ತಿದ್ದ...  !


ಛೇ...

ಈ ಗಂಡಸು ಜಾತಿಯೇ ಇಷ್ಟು !

ಹೆಣ್ಣಿನ ಮಾತು... 

ಮೌನ 
ನೋಟಗಳ ಭಾಷೆಗಳನ್ನು  ಅರ್ಥ ಮಾಡಿಕೊಳ್ಳುವುದೇ ಇಲ್ಲ.. 

ನಾಚಿಕೆ ಬಿಟ್ಟು..

ನನ್ನನ್ನು ದಹಿಸುವ ಆಸೆಯನ್ನು ಹೇಳಿದೆ...

ಚಂದಿರ ಹೆದರಿದ...


"ನೀನು ನನ್ನ ಗುರು ಪತ್ನಿ...


ತಾಯಿಯನ್ನು ಬಯಸುವದೆ ?


ತಪ್ಪು ತಪ್ಪು...


ಇದು ಅನಾಚಾರ.. ಅತ್ಯಾಚಾರ...! "


ಉತ್ತರ ಕೊಡಲು ಕಂಪಿಸಿದ .. 

ಬಡಬಡಸಿದ ... 

ಅವನನ್ನೇ ದಿಟ್ಟಿಸಿದೆ ... 


 ಬಲು ಮುದ್ದು ಈ ಚಂದಿರ  !


"ಚಂದಿರಾ...

ಅನಾಚಾರ ಎನ್ನುತ್ತೀಯಲ್ಲ... 

"ಆಚಾರ" ಎನ್ನುವ ಶಬ್ಧ "ಚರ"ದಿಂದ ಬಂದಿದ್ದು..

ಚರ ಎಂದರೆ ನಡೆ... 

ನಮ್ಮ ನಡೆ ... 


ನಮಗೆ ಬೇಕಾದದ್ದು ಆಚಾರ..

ಬೇಡವಾದದ್ದು ಅನಾಚಾರ.. 
ಅತ್ಯಾಚಾರ ...

ಇಷ್ಟಕ್ಕೂ

ಅನಾಚಾರ..
ಅತ್ಯಾಚಾರ ನಿರ್ಣಯಿಸುವವರು ಯಾರು ?..."

"ಯಾರು ?"


" ನಾನು...

ಪ್ರಕೃತಿ ತಾನೆ ?

ನೀನು ಮಾಡುವ  ಆ" ಚರ"  ನನಗೆ ಅನಾಚಾರ ಅಲ್ಲ..


ಅದು ನನ್ನ ಪಾಲಿಗೆ ಆಚಾರ..


ಬಾರೋ.. ಬಾ.. 

ಆ ಚರವನ್ನು ಆಚರಿಸುವಾ.. ಬಾ.. "

ಚಂದಿರ ಚಲಿಸಲಿಲ್ಲ... 


"ನೀನು 

ಈ ತೋಟದ ಬೇಲಿಯೊಳಗಿನ ಹೂವು .. 

ಈ ಕ್ಷೇತ್ರ ನನ್ನದಲ್ಲ...


ನನ್ನದಲ್ಲದ್ದನ್ನು  ಬಯಸುವದು ತಪ್ಪು..


ಇದು ನಿಜ ಅರ್ಥದಲ್ಲೂ ಅತ್ಯಾಚಾರವೇ  ಸರಿ..."


ನನಗೆ ನಗು ಬಂತು...


ಪುಕ್ಕಲು ಗಂಡಸಿನ ಬಾಯಲ್ಲಿ  

ನೀತಿ
ನಿಯತ್ತಿನ ಮಾತು..!

"ಚಂದಿರಾ...


ಬಿಸಿಯಾದ ಭೂಮಿಗೆ

ಹನಿ ಬಿದ್ದು ತಂಪಾಗುತ್ತದೆ...

ಅಲ್ಲೇ ಇದ್ದ ಬೀಜ 

ಮೊಳಕೆಯೊಡೆದು ಹಸಿರಾಗುತ್ತದೆ..

ಈ 

ಜಗತ್ತಿನ ಈ ಕಾಡನ್ನೆಲ್ಲ ನೀನು ಬೆಳೆಸಿದ್ದಾ ?

" ಸೃಷ್ಟಿ" ಪ್ರಕೃತಿಯ ಸಹಜ ಗುಣ...


ಇದರಲ್ಲಿ ನಿನ್ನ ಪುರುಷಾರ್ಥವೇನೂ ಇಲ್ಲ...


ಕ್ಷೇತ್ರವೇ ಬೀಜ ಬಿತ್ತಲು ಕರೆಯುವಾಗ

ನಿರಾಕರಿಸುವದು  ... 
ಇಂದಿನ ಕಾಲ ಧರ್ಮದಲ್ಲಿ ತಪ್ಪಾಗುತ್ತದೆ...

ಬಾ.. ಚಂದಿರಾ.."


ಚಂದಿರ ಬರಲಿಲ್ಲ...

ಮೊಂಡು ಹಟ ಮಾಡುತ್ತ ದೂರವೇ ಇದ್ದ...

"ಈ ಅತ್ಯಾಚಾರಕ್ಕೆ..

ಅನಾಚಾರಕ್ಕೆ 
ಮನಸ್ಸು ಒಪ್ಪುತ್ತಿಲ್ಲ..."

ನನ್ನ ದಹಿಸುವ ಆಸೆ ಹೆಚ್ಚಾಯಿತು...


ಸೃಷ್ಟಿ ಕರ್ತ ಬ್ರಹ್ಮ ನನ್ನ ಅಜ್ಜ..

ಅಜ್ಜ ಸಿಕ್ಕಾಗ ಇದನ್ನೊಮ್ಮೆ ಕೇಳಿಬಿಡಬೇಕು...

ಪ್ರಕೃತಿಗೂ

ಪುರುಷನ ಮೇಲೆ ... 
ಅತ್ಯಾಚಾರ ಎಸಗುವ ಅವಕಾಶ ಇರಬೇಕು.. 

ಹಾಗಿದ್ದಲ್ಲಿ 

ನಾನೇ ಮೊದಲ ಅತ್ಯಾಚಾರಿಣಿಯಾಗುತ್ತಿದ್ದೆ .. 

ಚಂದವಿದ್ದವರು 

ಯಾಕಾದರೂ ಹೆದರುತ್ತಾರೊ.. ಗೊತ್ತಿಲ್ಲ...!

ಈ ಹೇಡಿ ಚಂದಿರನಿಗೆ ಉತ್ತರ ಕೊಡಬೇಕಿತ್ತು...


"ಚಂದ್ರಮಾ...

ಎಂಥಹ ಅತ್ಯಾಚಾರ..
ಎಲ್ಲಿಯ ಅನಾಚಾರ ?

ದಿನಾಲೂ

ಊಟ ಮಾಡುವಾಗ 
ನನ್ನ 
ಸರಿದ ಸೆರಗಿನ ಅಂಚನ್ನು ನೀನು ಆಸ್ವಾದಿಸುವದು ನನಗೆ ಗೊತ್ತಿಲ್ಲ ಅಂದುಕೊಂಡೆಯಾ ?

ನಿನಗೆ ನೀನೇ 

ನಿನ್ನ ಮೇಲೆ 
ಎಷ್ಟು ಬಾರಿ ಅತ್ಯಾಚಾರ ಮಾಡಿಕೊಳ್ಳುತ್ತಿದ್ದೀಯಾ ಗೊತ್ತಾ ?

ಅಸಹಜದ 

ನೀತಿಯ ಗೋಡೆಯನ್ನು  ಕಟ್ಟಿಕೊಳ್ಳುತ್ತೀಯಾ...

ನೀನೆ ಒಡೆದುಕೊಳ್ಳುತ್ತೀಯಾ...


ನೀನು ಮಾಡುತ್ತಿರುವದು  

ಅನಾಚಾರ..
ಇದು ಅತ್ಯಾಚಾರ..."

ಚಂದಿರ ತಗ್ಗಿಸಿದ ತಲೆ ಎತ್ತಲಿಲ್ಲ... 


"ಚಂದಿರಾ... 

ಅತ್ಯಾಚಾರವೆಂದರೆ ಮಾನಸಿಕವೂ ಹೌದು...

ಗಂಡಸು 

ಹೆಣ್ಣಿನ ಮೇಲೆ ದೈಹಿಕ ಅತ್ಯಾಚಾರ ನಡೆಸಿದರೆ ... .

ಗಂಡು ತನ್ನ ಮೇಲೆ 

ತಾನೇ ಮಾನಸಿಕ ಅತ್ಯಾಚಾರ ಮಾಡಿಕೊಳ್ಳುತ್ತಿರುತ್ತಾನೆ...

ಎಲವೊ ಪುರುಷಾ...  !


ಮೊದಲಿಗೆ 

ನೀನು 
ನಿನ್ನ ಮೇಲೆ ಮಾಡಿಕೊಳ್ಳುತ್ತಿರುವ 
ಅತ್ಯಾಚಾರವನ್ನು ನಿಲ್ಲಿಸಿಕೊ.. 

ಚಂದಿರಾ.. 

ಅನ್ನ ಬೆಳೆಯಲು.. 
ಭತ್ತ  
ಬೆಳೆಯಲು ಹೊಲವನ್ನು ಊಳುತ್ತೀಯಲ್ಲ... 

ಅದು ಅತ್ಯಾಚಾರವಲ್ಲವಾ ?"


ಚಂದಿರ 

ಇನ್ನೂ ದೂರವೇ ನಿಂತಿದ್ದ...
ಕಂಪಿಸುವ ಧ್ವನಿಯಲ್ಲಿ ಮಾತನಾಡಿದ...

" ಬೇಡ.. ಬೇಡ..

ನಿನ್ನ ಪತಿ ಸಪ್ತ ಋಷಿಗಳಲ್ಲಿ ಒಬ್ಬ...

ಬದುಕಿನಲ್ಲಿ  ಪಾರಮಾರ್ಥಿಕತೆಯನ್ನು ಕಾಣುವವರು..."


ನನಗೆ ಕೋಪ ತಡೆಯಲಾಗಲಿಲ್ಲ..


ದಹಿಸುವ ಆಸೆ...! 


ಕಂಪಿಸ ತೊಡಗಿದೆ...


"ಚಂದಿರಾ...

ನಾನು ಹೆಣ್ಣು...

ಸಿಕ್ಕಿದ 

ಬದುಕನ್ನು 
ಬದುಕುವದಷ್ಟೇ ನನಗೆ ಗೊತ್ತು...

ಸಾವು..

ಸಾವಿನಾಚೆಯ ಪಾರಮಾರ್ಥಿಕತೆ ನನಗೆ ಬೇಕಿಲ್ಲ...

ಬದುಕಿನ .. 

ಸಾವಿನಾಚೆಯ ತತ್ವ ಬೋಧಿಸುವ 
ಈ ಸಪ್ತ ಋಷಿಗಳಲ್ಲಿ ... 
ಸನ್ಯಾಸಿಗಳಲ್ಲಿ 
ಒಬ್ಬರಾದರೂ ಹೆಣ್ಣು ಇದ್ದಾಳೆಯೇ ?

ಬದುಕಿನ ಸ್ವಾರಸ್ಯ ಬಿಟ್ಟು 

ಸನ್ಯಾಸಿಯಾದ 
ಒಬ್ಬಳಾದರೂ ಹೆಣ್ಣನ್ನು ತೋರಿಸು...

ಜಗತ್ತಿನ ಎಲ್ಲ ತತ್ವ ಶಾಸ್ತ್ರ..

ನೀತಿ 
ಧರ್ಮವನ್ನು ಬೋಧಿಸಿದವ ಪುರುಷ,...

ಪುರುಷ ಜಾತಿಗೆ ಬೇಕಾದಂತೆ  ಜಾತಿ 

ಮತಗಳನ್ನು ಸ್ಥಾಪಿಸಿದವ ಪುರುಷ.. !

ಸಿಕ್ಕಿದ 

ಬದುಕನ್ನು ಬಿಟ್ಟು
ಸಾವಿನಾಚೆಯ ಸುಖವನ್ನು ಹುಡುಕುವದು ಗಂಡು..

ಪುರುಷನ ಪುರುಷಾರ್ಥ ಇಷ್ಟೇ...


ಇದು ಸಹಜ ಅಲ್ಲ..."


ಚಂದಿರ ಮುಖ ಬಾಡಿಸಿದ..


"ತಾರೆ...

ಇದು ನಿಜ...

ನನಗೆ ನಿನ್ನ ಮೇಲೆ ಆಸೆ ಇದೆ...


ಆದರೆ ..... 

ಬೃಹಸ್ಪತಿ ಶಕ್ತಿ ಶಾಲಿ...

ದೇವತೆಗಳ ಗುರು... !


ಶಾಪ ಕೊಟ್ಟರೆ ನಾನೆಲ್ಲಿ ಹೋಗಲಿ ?.. ".. 


ಅಂತೂ 

ಈ ಚಂದಿರ ತನ್ನ ನಿಜವಾದ ಬಣ್ಣವನ್ನು ತೋರಿಸಿದ.. ...

ಅವನನ್ನು ಹಿಡಿದು ಬಿಗಿದಪ್ಪಿದೆ... 

ಮುದ್ದಿಸಿದೆ.. 

ಅವನ ಎದೆಗೊರಗಿ ಉಸುರಿದೆ... 


" ಚಂದಿರಾ

ನಿನಗೆ ಹೇಗಿದ್ದರೂ ಶಾಪ ತಪ್ಪಿದ್ದಲ್ಲ....

ನನ್ನನ್ನು ಅನುಭವಿಸಿದರೆ 

ನನ್ನ ಗಂಡ ನಿನ್ನನ್ನು ಶಪಿಸದೆ ಬಿಡುವದಿಲ್ಲ... 

ನನ್ನನ್ನು

ನಿರಾಕರಿಸಿದರೆ ನಾನು ಶಾಪ ಕೊಡುವೆ...!

ಪ್ರಕೃತಿ ಅಬಲೆಯಲ್ಲ... 


ಚಂದ್ರಮಾ..


ಪುರುಷ ಹೇಗಿದ್ದರೂ ಶಾಪಗ್ರಸ್ಥ... !


ಪುರುಷ... 

ಪ್ರಕೃತಿ ನಾಶದ ಮೂಲ ..

ಏನೂ ಮಾಡದೆ ... 

ವಿನಾಕಾರಣ 
ಯಾಕೆ ಶಾಪ ತೆಗೆದುಕೊಳ್ಳುತ್ತೀಯಾ?

ನನ್ನನ್ನು  ಅನುಭವಿಸಿ ..

ಸುಖಿಸಿ... 
ಶಾಪ ತೆಗೆದು ಕೊ.."

ನನ್ನ ಅಪ್ಪುಗೆಯನ್ನು ಬಿಗಿಗೊಳಿಸಿದೆ...


ನನಗೆ ಗೊತ್ತು 

ಚಂದಿರನಿಗೆ ಬೇರೆ ದಾರಿ ಇಲ್ಲ... 

ಚಂದಿರನೂ  ಅಪ್ಪಿದ.. 


ಇದು

ಪ್ರೀತಿಯೋ...
ಕಾಮವೋ...!

ಎಲ್ಲವೂ ಅಪ್ಪುಗೆಯಲ್ಲಿ ಗೊತ್ತಾಗಿಬಿಡುತ್ತದೆ...


ಒಪ್ಪಿದ ಮೇಲೆ  ಪ್ರೇಮವೇನು ..  ?

ಕಾಮವೂ ಚಂದ..... !




(ಚಂದದ  ಪ್ರತಿಕ್ರಿಯೆಗಳಿವೆ... 
ದಯವಿಟ್ಟು ನೋಡಿ ...)