Thursday, May 27, 2010

ಬ್ಲಾಗಿಗರ ಮೊದಲ ಮೆಟ್ಟಿಲು.... ಇದೇ ಶನಿವಾರ..!

ಆತ್ಮೀಯ  ಬ್ಲಾಗ್  ಬಂಧುಗಳೇ...

ಇದೇ.. ಬರುವ ಶನಿವಾರ ( 29/5/2010)
ಮೇ ಫ್ಲವರ್ ಮೀಡಿಯಾ ಹೌಸಿನಲ್ಲಿ  ಒಂದು ಮೀಟಿಂಗನ್ನು ಏರ್ಪಡಿಸಲಾಗಿದೆ..
ದಯವಿಟ್ಟು ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸ ಬೇಕಾಗಿ ವಿನಂತಿ..

ಅಲ್ಲಿ ಶ್ರೀ. ಜಿ.ಎನ್. ಮೋಹನ್ ...
ಮತ್ತು ನಾವೆಲ್ಲರೂ ಸೇರಿ.. ಮುಂದಿನ ರೂಪು ರೆಷೆಯ ಬಗೆಗೆ  ಒಂದು ನಿರ್ಧಾರಕ್ಕೆ    ಬರೋಣ...

ದೂರದ ಊರಲ್ಲಿರುವ ಆಜಾದ್ ಉತ್ಸಾಹ..
  ನಮಗೆಲ್ಲ   ಒಂದು ಟಾನಿಕ್...

ಅಲ್ಲಿ.. ನಾವೆಲ್ಲರೂ ಸೇರಿ ...
ಇದುವರೆಗೆ  ಆದ  developments ಬಗೆಗೆ....
ಇನ್ನು ಮುಂದೆ ಆಗ ಬೇಕಾದ  ವಿಷಯಗಳ ಬಗೆಗೆ ಚರ್ಚಿಸಿ ಒಂದು ಸೂಕ್ತ ನಿರ್ಧಾರಕ್ಕೆ ಬರೋಣ....

ಬ್ಲಾಗಿಗರ ಕೂಟದ ಬಗೆಗೆ  ಬಹಳ ಉತ್ಸಾಹದ ವಾತಾವರಣ  ಕಾಣುತ್ತಾ  ಇದೆ..
ಇಂಥಹ ಒಂದು ಕೂಟದ ಬಗೆಗೆ  ಉತ್ಸಾಹ, ಪ್ರೋತ್ಸಾಹ ಸಿಗುತ್ತಾ ಇದೆ....

ನಾನು  ಸಿರ್ಸಿಗೆ ಹೋಗಿದ್ದರಿಂದ ಎಲ್ಲರ ಈಮೇಲಿಗೆ ಉತ್ತರಿಸಲಾಗಲಿಲ್ಲ....
ದಯವಿಟ್ಟು ಬೇಸರಿಸದಿರಿ...

ಬನ್ನಿ ಎಲ್ಲರೂ ಒಂದೆಡೆ ಸೇರೋಣ..

ಇದು ನಮ್ಮ  ಮೊದಲ ಮೆಟ್ಟಿಲು...

ದೂರದಲ್ಲಿರುವವರು  ತಮ್ಮ  ಸಲಹೆ ಸೂಚನೆಗಳನ್ನು ಈ ಮೇಲ್ ಮುಖಾಂತರ ತಿಳಿಸಿದ್ದಿರಿ..
ಮತ್ತೇನಾದರೂ ಇದ್ದಲ್ಲಿ ಮತ್ತೆ ಈ ಮೇಲ್ ಮಾಡಿ..

ಸಂಪರ್ಕಿಸುವ ಫೋನ್ ..
080 / 22374436  ಮೇ ಪ್ಲವರ್  ಮೀಡಿಯಾ ಹೌಸ್...

ಶನಿವಾರ ಸಾಯಂಕಾಲ ಐದು ಗಂಟೆಗೆ... (5 pm)
ಸ್ಥಳ : ಮೇಫ್ಲವರ್  ಮೀಡಿಯಾ ಹೌಸ್...

ದಯವಿಟ್ಟು ಬನ್ನಿ....

( ನಮ್ಮ ಪ್ರಿಯ ಮಿತ್ರ "ಗೌತಮ್ " ಒಂದು ವಿಷಯ  ನಮ್ಮೆಲ್ಲರ ಗಮನಕ್ಕೆ ತಂದಿದ್ದಾರೆ...
ಅದು..
ಈ ಮೊದಲು ೨೦೦೮ ರಲ್ಲಿ  "ಬ್ಲಾಗಿಗರ ಕೂಟ" ನಡೆದಿತ್ತು .. ಎಂದು..

ಪ್ರಣತಿ  ಬಳಗ ಅದನ್ನು ಯಶಸ್ವಿಯಾಗಿ ನಡೆಸಿತ್ತು..  !!
ನಾನೂ ಒಮ್ಮೆ ಅದರ ಬಗೆಗೆ ಕೇಳಿದ್ದೆ..
ವಿವರ ತಿಳಿದಿಲ್ಲವಾಗಿತ್ತು..
ಹಿಂದಿನ ಲೇಖನ ಬರೆಯುವಾಗ  ನೆನಪಾಗಲಿಲ್ಲ...

ದಯವಿಟ್ಟು  ಕ್ಷಮಿಸಿ..

ಆ  ಬ್ಲಾಗ್  ಕೂಟ ನಡೆಸಿದ ಮಿತ್ರರಿಂದ ಅವರ ಅನುಭವ ಪಡೆದು..
ಅವರ ಸಹಕಾರ...
 ಸಹಯೋಗದಿಂದ ...
ಎಲ್ಲರೂ ...
ಒಂದೆಡೆ.. ಸೇರಿ...
ಸಂಭ್ರಮಿಸೋಣ....!!
ಕಾರ್ಯಕ್ರಮವನ್ನು  ಯಶಸ್ವಿಗೊಳಿಸೋಣ...!

ನನ್ನ  ಮರೆವಿಗಾಗಿ  ಮತ್ತೊಮ್ಮೆ  " sorrryyyy..."

ದಯವಿಟ್ಟು  ಶನಿವಾರ  ಬನ್ನಿ... )

Sunday, May 16, 2010

ಬ್ಲಾಗಿಗರ.. ಬ್ಲಾಗ್ ಓದುಗರ... ಕೂಟ...

ಕೆಲವು ತಿಂಗಳ ಹಿಂದೆ ...
ನಮ್ಮ ಬ್ಲಾಗ್ ಮಿತ್ರ ಆಝಾದ್ ( ಜಲನಯನ ಬ್ಲಾಗ್) ತಮ್ಮ ಬ್ಲಾಗಿನಲ್ಲಿ..
 ಒಂದು ಪ್ರಸ್ತಾಪ ಇಟ್ಟಿದ್ದರು..



ಬ್ಲಾಗಿಗರೆಲ್ಲರೂ ಒಂದು ಕಡೆ ಸೇರ ಬೇಕು...

ತುಂಬಾ ಜನರಿಗೆ ಇದರ ಬಗ್ಗೆ ಒಲವಿದೆ...
ಆದರೆ..
ಹೇಗೆ..?
ಎಲ್ಲಿ..?
ಇತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರವಿರಲಿಲ್ಲ..


ನನ್ನ ಬಳಿಯೂ ತುಂಬಾ ಜನ ಇದನ್ನು ಪ್ರಸ್ತಾಪ ಮಾಡಿದ್ದರು..


ದೂರದ ಊರಲ್ಲಿರುವ ಸ್ನೇಹಿತ "ಉದಯ ಇಟಿಗಿ" ( ಬಿಸಿಲ ಹನಿ ಬ್ಲಾಗ್ )
 ಒಂದು ಬ್ಲಾಗಿಗರ ಸಂಜೆ"ಯನ್ನು ಏರ್ಪಡಿಸಿದ್ದರು..


ನಾವೆಲ್ಲ ಹೋಗಿದ್ದೇವು ..


ಅದೊಂದು ಅಪೂರ್ವ ಅನುಭವ..!
ಅಂಥಹದೊಂದು ಸಂಜೆಗಾಗಿ ಅವರಿಗೆ ಕೃತಜ್ಞತೆಗಳು..


ಮತ್ತೆ ಮತ್ತೆ ಈ ಥರಹದ "ಬ್ಲಾಗಿಗರೆಲ್ಲರೂ ಒಂದೆಡೆ ಸೇರಬೇಕು ಎನ್ನುವ" ಮಾತು ಕೇಳಿ ಬರುತ್ತಲೇ ಇದೆ..

ದೂರದ ಅಮೆರಿಕಾದಲ್ಲಿರುವ  ನಮ್ಮ  ಸ್ನೇಹಿತೆ
 "ಜ್ಯೋತಿ ಮಹಾದೇವ್" ಕೂಡ ಇಂಥಹ ಪ್ರಯತ್ನ ಮಾಡಿದ್ದಾರೆ..
ನನಗೆ ಅಲ್ಲಿಗೆ ಹೋಗಲಾಗಲಿಲ್ಲ..


ಈಗ "ಜಲನಯನ" ಮತ್ತೆ ಮರು ಹುಟ್ಟು ಹಾಕಿದ್ದಾರೆ...


ಬ್ಲಾಗಿಗರೆಲ್ಲರೂ ಒಂದೆಡೆ ಯಾಕೆ ಸೇರಬಾರದು ?


ಅವರು ಮೊದಲು ನನ್ನ ಬಳಿ ಈ ಪ್ರಶ್ನೆ ಇಟ್ಟಾಗ ನಾನು ಕೆಲವು ಸಲಹೆ ಇಟ್ಟಿದ್ದೆ...


"ಇದು ನಿಜ ಅರ್ಥದಲ್ಲಿ ಎಲ್ಲ ಬ್ಲಾಗಿಗರ ಕೂಟ ಆಗಬೇಕು...
ಎಲ್ಲರನ್ನೂ ಒಟ್ಟಿಗೆ ಸೇರಿಸ ಬೇಕು...
ಯಾರೊಬ್ಬರಿಗೂ ಬೇಸರವಾಗಬಾರದು..
ಮುಂದೊಂದು ದಿನ ಈ ಕೂಟ ಎಲ್ಲರಿಗೂ ಮಾದರಿಯಾಗಿರಬೇಕು...
ಶ್ರೀ ಜಿ.ಎನ್.ಮೋಹನ್ ಇದರ ಬಗೆಗೆ ಸೂಕ್ತ ವ್ಯಕ್ತಿ..
ಅವರ ಸಲಹೆ ಸೂಚನೆ, ಮಾರ್ಗದರ್ಶನ ಪಡೆದು ಕೊಳ್ಳಬೇಕು.."


"ಜಿ.ಎನ್. ಮೋಹನರನ್ನು ನೀನೆ ಮಾತನಾಡಿಸು"
ಅಂತ ಆಝಾದ್ ನನಗೆ ಹೇಳಿದರು...

ಇದು ಬಹಳ ಕಷ್ಟದ ಕೆಲಸ...
ಪ್ರಯತ್ನಿಸಿದೆ...


ನಾನು  ಅವರನ್ನು ಫೋನಿನಲ್ಲಿ ಸಂಪರ್ಕಿಸಿದೆ...


" ಪ್ರಕಾಶ್..
ತುಂಬಾ ಖುಷಿಯಾಗುತ್ತದೆ.. 
ಸುಶ್ರುತ.., ನಿಧಿ.. ಇನ್ನೂ ಹಲವರೆಲ್ಲರೂ ಸೇರಿ ಒಂದು ಮೀಟಿಂಗ್ ನಾವು ಮಾಡಿದ್ದೇವೆ..
ಕಾರಣಾಂತರಗಳಿಂದ ಮತ್ತೆ ಭೇಟಿಯಾಗಲು ಸಾಧ್ಯವಾಗಿಲ್ಲ..
ನೀವು ಮಾಡುವದಾದರೆ ನಮ್ಮ ಬೆಂಬಲವಿದೆ" ಎಂದರು..


"ಸರ್ ಇದು ನಿಮ್ಮ ಮುಂದಾಳತ್ವದಲ್ಲಿ ನಡೇದರೆ ಉತ್ತಮ"
ಎಂದು ನಾನು ಹೇಳಿದೆ..


ಮತ್ತೆ ಇದರ ಬಗೆಗೆ ಭೇಟಿಯಾಗಬೇಕೇಂದು ಮಾತನಾಡಿಕೊಂಡೆವು...
ಆದರೆ  ಅದಕ್ಕೆ.. ಇನ್ನೂ ಸಮಯ ಕೂಡಿ ಬಂದಿಲ್ಲ..


ಅದಕ್ಕೆ ಕಾರಣ ನಾನು ಬ್ಯೂಸಿಯಾಗಿರುವದು...


ಪ್ರಿಯ..
 ಬ್ಲಾಗಿಗರೇ..
ಬ್ಲಾಗ್ ಓದುಗರೇ...


ಈಗ ನೀವು ಹೇಳಿ..
ಇಂಥಹದೊಂದು ಕೂಟ ಆಗ ಬೇಕಲ್ಲವೆ ?


ಆ ಕೂಟದಲ್ಲಿ ಏನೇನು ಕಾರ್ಯಕ್ರಮ ಆಗ ಬೇಕು ?
ಹೇಗೆ ಆಗಬೇಕು..?
ಎಲ್ಲಿ ಆಗಬೇಕು ?
ಯಾವಾಗ ಆಗಬೇಕು...?


ದಯವಿಟ್ಟು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ...


ಇದು ನಿಜ ಅರ್ಥದಲ್ಲಿ....
ಸಮಸ್ತ ಬ್ಲಾಗಿಗರ ಒಕ್ಕೂಟ ಆಗಬೇಕು...
ನಮ್ಮೆಲ್ಲರ..
ಸಂಭ್ರಮದ ,, ಸಂತೋಷದ  ಕ್ಷಣಗಳಾಗಬೇಕು...
ಅಲ್ಲವೇ...?

ಹಾಗಾಗುವಂತೆ ಮಾಡೋಣ...

(ಮೋಹನಸರ್, ಆಜ್ಹಾದ್, ಶಿವು,  ಸುಶ್ರುತ ದೊಡ್ಡೇರಿ.. ಇನ್ನೂ ಹಲವರ ಒಂದು  ಕಮಿಟಿ ಮಾಡೋಣ.. ಕಾರ್ಯಕ್ರಮದ ಕುರಿತು ಮಾತಾಡಿ ಒಂದು ನಿರ್ಣಯ ತೆಗೆದು ಕೊಳ್ಳೋಣ....
ಮೋಹನ್ ಸರ್ ಹಾಗೂ ಆಜ್ಹಾದ್  ಬೆಂಬಲ ಆನೆ ಬಲ ತಂದು ಕೊಟ್ಟಿದೆ..)

ಜೈ... ಹೋ... !!
 

Saturday, May 8, 2010

ಮತ್ತೆ ಸಿಕ್ಕಿತ್ತು .... ಪೆಪ್ಪರಮೆಂಟು....!

part  3...


ಮೀಸೆ ಮಂಜಣ್ಣನ ಮನೆಯ ಜಗುಲಿಯಲ್ಲಿ ವಿಚಾರಣೆ ಶುರುವಾಯಿತು..
ಚಿಕ್ಕಪ್ಪ.. ಟಮ್ಮಟಿ ಅಪ್ಪ..
ಎಲ್ಲರಿಗೂ... ನಮ್ಮ ಮೇಲೆ ಅನುಮಾನ .. !


"ಈಗ ಸಣ್ಣ ಗಾಯವಾಗಿದೆ ಸರಿ...
ಕೈ, ಕಾಲು ಮುರಿದ್ದಿದ್ದರೆ ಏನು ಗತಿ ?
ತಿನ್ನಲಿಕ್ಕೆ ತೋತಾ ಪುರಿ ಮಾವಿನ ಕಾಯಿ ಬಿಟ್ಟು..
ಈಶಾಡಿಯ ಕಾಯಿ ಯಾಕೆ ತಿನ್ನುವದು ?"


ಅಲ್ಲಿಯವರೆಗೆ ಸುಮ್ಮನಿದ್ದ ಟಮ್ಮಟಿ...


"ಇಲ್ಲ .... ಮಂಜಣ್ಣ..
ಇವರು ಮರ ಹತ್ತಿ ಏನನ್ನೋ ನೋಡ್ತಾ ಇದ್ರು.. !
ನಾನು ಎಷ್ಟು ಕೇಳಿದ್ರೂ.. ನನಗೆ ಹೆಳ್ಳಿಲ್ಲ.. !
ಇಲ್ಲಿ ನಂದೇನೂ ತಪ್ಪಿಲ್ಲ... ! "


ನಾಗೂಗೆ ಕೋಪ ಬಂತು...


"ಮಂಜಣ್ಣ..
ಇವ ಸುಳ್ಳು ಹೇಳ್ತಾನೆ..
ನಾವು ಇವನಿಗೆ ಮಾವಿನ ಕಾಯಿ ಕೊಡ್ಲಿಲ್ಲ ಅಂತ...!
ಇವನೇ.. ಬಂದು ನಮ್ಮನ್ನು ಬೀಳ್ಸಿದ್ದು... !"


ಅಷ್ಟರಲ್ಲಿ ನನ್ನ ಚಿಕ್ಕಪ್ಪನ  ಕಣ್ಣು ಕೆಂಪಾಯಿತು...


"ಮಂಜಣ್ಣ...
ಇವರು ಸುಮ್ಮನೆ ಬಾಯಿ ಬಿಡುವದಿಲ್ಲ...
ಇವರ ಅಂಡಿನ ಮೇಲೆ ನಾಲ್ಕು ಪೆಟ್ಟು ಕೊಡಬೇಕು...
ಆಗ ಬಾಯಿ ಬಿಡ್ತಾರೆ.... ! "


ನನ್ನ ಚಿಕ್ಕಪ್ಪ ಶಿಕ್ಷೆ ಕೊಡುವದರಲ್ಲಿ ನಿಸ್ಸೀಮ..!


ನಾನು ಎಷ್ಟೇ... ಹಾರಾಡುತ್ತಿದ್ದರೂ..


 ತಾನು...ತಾಳ್ಮೆ ಕಳೆದುಕೊಳ್ಳದೇ..
ನಿಧಾನವಾಗಿ ಚಡ್ಡಿ ಬಿಚ್ಚಿಸಿ..
ಅಂಡಿನ ಮೇಲೆ ಬಲವಾಗಿ ಒಂದರ ಮೇಲೆ.. ಒಂದು..
ಮತ್ತೊಂದು...
ಹೊಡೆದ ಜಾಗಲ್ಲಿಯೇ.. ಹೊಡೆಯುತ್ತಿದ್ದ...!


ಅವನ  ಉರಿ ಕೈ.. ಹೊಡೆತ ....!
ಅಬ್ಭಾ.. ! 
ತುಂಬಾ.. ಜೋರಾಗಿರುತ್ತಿತ್ತು !
ನಮ್ಮಿಂದ ಕೈಯನ್ನು ಹೊಡೆದ ಜಾಗದಲ್ಲಿ ತಿಕ್ಕಿ ಕೊಳ್ಳಲು ಕೊಡುತ್ತಿರಲಿಲ್ಲ...!!


ತಿಕ್ಕಿ ಕೊಂಡರೆ ಉರಿ ಕಡಿಮೆ ಆಗುತ್ತಿತ್ತು...!!


ನಮ್ಮ ಚಿಕ್ಕಪ್ಪನ ಬಳಿ ಹೊಡೆತ ತಿನ್ನುವದಾ ??


ಕುಷ್ಟ ಚಿಕ್ಕಪ್ಪನ ಹೊಡೆತಕ್ಕೆ ಹೆದರಿದ...
ಒಮ್ಮೆ ನಮ್ಮ ಚಿಕ್ಕಪ್ಪನ ಬಳಿ ಕುಷ್ಟ ಚೆನ್ನಾಗಿ ಪೆಟ್ಟು ತಿಂದಿದ್ದ...
ಅವನ ಚಡ್ಡಿ ಒದ್ದೆಯಾಗಿತ್ತು  !


" ಪಕ್ಕೇಶ್.. ಹೆಗ್ಡೇರೆ..
ಎಲ್ಲ ಹೇಳಿ ಬಿಡೋಣ್ರಾ..
ಅವರ ಅವರ..  ಪ್ರೀತಿ..
ಅವರ ಅವರ ಲೆಟರ್ರು..
ನಾವ್ಯಾಕೆ  ಪೆಟ್ಟು ತಿನ್ನೋದು ?"


ಅಲ್ಲಿಯೇ ನಾಗು ಪಿಸು ಗುಡುತ್ತ ಗದರಿದ....


"ಸುಮ್ನಿರು ಕುಷ್ಟಾ..!
ನೀ.. ಮಾತಾಡ ಬೇಡ.."


ಮಂಜಣ್ಣ ಮೀಸೆಯ ಮೇಲೆ ಕೈ ಹಾಕಿ ತಿರುವತ್ತ ನಮ್ಮತ್ತ ನೋಡಿದ..


" ಏನೋ ಕುಷ್ಟಾ...?
ನೀನು ನಿಜ ಹೇಳಿದ್ರೆ.. ನಿನ್ನ ಬಿಟ್ಟು ಬಿಡ್ತೇವೆ ನೋಡು..."


"ಮಂಜಣ್ಣ ಹೆಗ್ಡೇರೆ...
ನಾವು ಏನೂ ತಪ್ಪು ಮಾಡ್ಲಿಲ್ರ...
ಎಲ್ಲದೂ.. ಟಮ್ಮಟಿ ಮಾಡಿದ್ದು...!
ಅವ್ರು ಬರದೇ ಇದ್ರೆ...
 ನಾವು ಹಾಡು ಕೇಳ್ಕೊಂಡು ಬರ್ತಾ ಇದ್ರು..!.."


"ಏನು... ??..
ಈಶಾಡಿ ಮರದ ಮೇಲೆ ಹಾಡಾ.. ?
ಅಲ್ಲಿ ಎಂತಾ  ಹಾಡು..?.."


"ಮಂಜಣ್ಣ ಹೆಗ್ಡೇರೆ..
ಅದು  ದೊಡ್ಡ  ಕಥೇರ್ರಾ...!!.."


"ಏನು ಕಥೆ.. ?.. "

ಮಂಜಣ್ಣನ ಹುಬ್ಬು ಮೇಲಕ್ಕೆ ಏರಿತು....!

ಅಷ್ಟರಲ್ಲಿ ಎಂಕಟು  ಬಂದ...!


ಅಯ್ಯೋ ದೇವರೆ..!
ಈ  ಯಂಕಟು ಇಲ್ಲಿ  ಯಾಕೆ ಬಂದ ?
 ಕುಷ್ಟ ಎಲ್ಲವನ್ನೂ ಬಾಯಿ ಬಿಡ್ತಾ ಇದ್ದಾನೆ..!!


ಯಾಕೊ ನಮ್ಮ ಗ್ರಹಚಾರವೇ.. ಸರಿ ಇಲ್ಲ.. !

"ಮಂಜಣ್ಣ..
ಇಲ್ಲಿ ಏನಾಗ್ತಿದೆ ?"


"ಏನಿಲ್ಲ  ಯಂಕಟು...
ಇವರು ನಾಗು ಮನೆ ಈಶಾಡಿ ಮರ ಹತ್ತಿ ಬಿದ್ದಿದ್ದಾರೆ..
ಇವರು ಹೇಳುವದು ಮಾವಿನಕಾಯಿ ತಿನ್ನಲಿಕ್ಕೆ ಅಂತ..


ಟಮ್ಮಟಿ ಹೇಳುವದು..
ಇವರು ಏನೋ .. ನೋಡ್ತಾ ಇದ್ರು ಅಂತ.. !


ಕುಷ್ಟ ಹೇಳ್ತಾ ಇದ್ದಾನೆ..
 ಏನೋ ಹಾಡು ಕೇಳ್ತಿದ್ರಂತೆ..
ಇಲ್ಲಿ ಏನೋ ಎಡವಟ್ಟು ಆಗಿದೆ... !
ಇದು ಖಂಡಿತ.. !
ಒಂದೆರಡು ಪೆಟ್ಟು ಕೊಟ್ಟರೆ  ಬಾಯಿ ಬಿಡ್ತಾರೆ..."




ಯಂಕಟು.. ದುರು ಗುಡುತ್ತ ನಮ್ಮನ್ನು ನೋಡಿದ....!


ನಮಗೆ ತಿರುಗಿ ನೋಡುವ ಧೈರ್ಯ ಇರಲ್ಲಿಲ್ಲ..


"ಮಂಜಣ್ಣಾ..
ಇವರು ದಿನಾ ಆ ಮಾವಿನ ಮರ ಹತ್ತಿ ..
ಮಾವಿನ ಕಾಯಿ ತಿನ್ನೋದೆ ಕೆಲಸ..
ನಾನು ದಿನಾ ನೋಡ್ತಿನಿ..
ತಿನ್ನೋದು ಅಲ್ದೆ...
 "ಶಂಕರ್ ಗುರು" ಸಿನೇಮಾದ ಹಾಡು ಹೇಳ್ತಾರೆ....!
ನಾನು ಕಣ್ಣಾರೆ ನೋಡಿದ್ದೇನೆ..
ಇವರಿಗೊಂದು.. ಬೇರೆ ಕೆಲಸ ಇಲ್ಲ...!
ನಿಮಗೂ ಇಲ್ಲವಾ  ಮಂಜಣ್ಣಾ..?
ಇವರು ಹೇಳ್ತಿರೋದು ಸತ್ಯ... !
ಇವರು ಆ ಕಹಿ ಮಾವಿನ ಕಾಯಿನೇ.... ದಿನಾ ತಿಂತಾರ್ರೆ..!"


ಯಂಕಟು ನಮ್ಮ ಪಾಲಿನ ದೇವರ ಹಾಗೆ ಕಾಣಿಸಿದ..


" ಆ ಕಹಿ.. ಒಗರಿನ ಮಾವಿನ ಕಾಯಿಯಲ್ಲಿ ಏನು ರುಚಿನೋ..?
ರಾಮ ರಾಮಾ.. ಏನು ಹುಡುಗ್ರೋ...!
ಯಂಕಟು...
ನೀನು ಬರದೇ ಇದ್ರೆ ಇವರಿಗೆ ಚೆನ್ನಾಗಿ ಪೆಟ್ಟು ಬೀಳ್ತಿತ್ತು ನೋಡು.."


ಮಂಜಣ್ಣನ ಮಾತು ಮುಗಿತಾ ಇದ್ದ ಹಾಗೆ..
ಮಾಸ್ತರು ಬಂದರು...!


" ಈ ಹುಡುಗರ ಉಪಟಳ ನನಗಂತೂ ಸಾಕಾಗಿ ಹೋಗಿದೆ..
ಮಾರಾಯ್ರೆ..
ಇವತ್ತು ನೀವೆಲ್ಲ ಸೇರಿದ್ದೀರಿ..
ನೀವೇ ಹೇಳಿ ಇವರಿಗೆಲ್ಲ ಏನು ಮಾಡ್ಬೇಕು ?"


"ಇವರು.. ಏನು ಮಾಡಿದ್ದಾರೆ..?"


"ಅದೊಂದು ದೊಡ್ಡ ಕಥೆ...
ಈ ಕುಷ್ಟ.. ಈ ನಾಗು.. ಸಂಗಡ ಪ್ರಕಾಶು..!
ನಾನು ಯಾಕಾದ್ರೂ...
ಮಾಸ್ತರ್ ಆದೆ ಅನ್ನಿಸಿ ಬಿಟ್ಟಿದೆ...!
ಇವತ್ತು ಇಸ್ಪೀಟು ಆಡುವಾಗ ಹೇಳ್ತೀನಿ.."


ಮಾಸ್ತರು ನಮ್ಮ ಕಡೆಗೆ ನೋಡಿ..


"ಇಲ್ಲೇನು ಹಲ್ಕಿಸಿತಾ ಇದ್ದೀರಿ.. ?
ಹೋಗಿ.....  ಓದ್ಕೊಳ್ಳಿ...!"


"ಮಂಜಣ್ಣನವರೆ.. ಕಂಬಳಿ ಹಾಕಿ...
ಇವತ್ತು ಇಸ್ಪೀಟು ಆಡುವಾ..."


ಅನ್ನುತ್ತ ನಮ್ಮನ್ನೆಲ್ಲ ಹೊರಗೆ ಕಳಿಸಿದರು...


ನಾವು ಅಲ್ಲಿಂದ ಓಟ ಕಿತ್ತೇವು...



ಮರುದಿನ ಶಾಲೆ( ಸ್ಕೂಲ್) ಬಿಟ್ಟು ಬರುವಾಗ...
ಪದ್ದಕ್ಕ ಒಬ್ಬಳೇ ಬರ್ತಿದ್ದಳು..!


ನನಗೆ ಮಾತನಾಡಲು ಧೈರ್ಯ ಸಾಲಲಿಲ್ಲ..


ಅನಾಯಾಸವಾಗಿ ಸಿಗುತ್ತಿದ್ದ "ನಿಂಬೆ ಪೆಪ್ಪರ ಮೆಂಟು" ತಪ್ಪಿ ಹೋಯಿತಲ್ಲಾ.. !


"ಪ್ರಕಾಶು ಇಲ್ಲಿ ಬಾರೋ.."
ನಾನು ಹೆದರುತ್ತ ಬಂದೆ..


"ನೀನು ಒಳ್ಳೆಯ ಹುಡುಗ ಅಂದ್ಕೊಂಡು ಬಿಟ್ಟಿದ್ದೆ...
ಆ ನಾಗು ಜೊತೆ ಸೇರಿ..
 ಕೆಟ್ಟು.. ಹಾಳಾಗಿ ಹೋಗ್ತೀಯಾ..
ನಿಜ ಹೇಳು ಪ್ರಕಾಶು..
ಯಾಕೆ ಹೀಗೆ ಮಾಡಿದ್ದು ??"


ನಾನು ಸುಮ್ಮನಿದ್ದೆ....
ಏನು ಅಂತ ಹೇಳಲಿ..?


"ನೋಡು.. .. ಪುಟ್ಟಾ...
ನಂಗೆ ಗೊತ್ತು ನೀನು ಜಾಣ..
ಯಾಕೆ ಹೀಗೆ ಮಾಡಿದ್ದು..?"


"ಪದ್ದಿ... ನೀನು... ಬಯ್ಯ ಬಾರದು..!"


"ಓಕೆ.. ನಾನು ಬಯ್ಯುವದಿಲ್ಲ.. ಹೇಳು.."


"ಪದ್ದಿ...
..ಪದ್ದಿ.. ಅದು...
ಅದೂ..
ನೀನೂ.. ಮತ್ತು ಯಂಕಟು....
ಪ್ರೀತಿ ಮಾಡುವಾಗ ಹೇಗೆ ಹಾಡು ಹೇಳ್ತೀರಿ.. ?  !!
ಅಂತ ನೋಡೋಕೆ ಹೀಗೆ ಮಾಡಿದ್ದು..


ನೀವು ಸಿನೇಮಾ ಹಾಗೆ ಹಾಡು ಹೇಳ್ತೀರಾ ??"


ಪದ್ದಿಗೆ ಎಲ್ಲಿಲ್ಲದ ಕೋಪ ಬಂತು...!


ಪಕ್ಕದಲ್ಲಿದ್ದ ಕೋಲು ತೆಗೆದು ಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದಳು...!


"ಹಾಕ್ತೀನಿ ನೋಡು..!
 ಹಾಡು ಕೇಳ್ಳಿಕ್ಕೆ ಬಂದಿದ್ನಂತೆ...!
ಹಲ್ಕಟ್ಟು.... ! "


ನಾನು ಅಲ್ಲಿಂದ ಹಿಂದೆ ಮುಂದೆ ನೋಡದೆ  ಓಡಿದೆ...


ಓಡಿದೆ...
ಮನೆಯ ಹತ್ತಿರ ನಾಗು ಸಿಕ್ಕಿದ..

"ಪ್ರಕಾಶೂ....
ತಗೋಳ್ಳೋ.. ಪೆಪ್ಪರ ಮೆಂಟು..!!"

"ಹಾಂ.. !
ಎಲ್ಲಿ ಸಿಕ್ಕಿತೋ.. ಇದು  ??  !!"

"ಪ್ರಕಾಶು...
 ಯಂಕಟು ಕೊಟ್ಟಿದ್ದಾನೆ....!
ನಾವು ಮರ ಹತ್ತಿ...
ನೋಡಿದ ಈ ಕಥೆಯನ್ನು ಯಾರಿಗೂ ಹೇಳ ಬಾರದಂತೆ.... !
ದಿನಾ ಕೊಡ್ತಾನಂತೆ...!
ನೀನು ಏನೇ.. ಹೇಳು ಯಂಕಟು ಒಳ್ಳೆಯವನು ಕಣೋ...
ನಿನ್ನೆ ಮಂಜಣ್ಣ ಹತ್ತಿರ ಅವ ಸುಳ್ಳು ಹೇಳ್ದೆ ಇದ್ರೆ...
ನೀನು ಮತ್ತೊಮ್ಮೆ ತೊಟ್ಟಿಲು ಕಟ್ಟ ಬೇಕಾಗಿತ್ತು ನೋಡು......!!..
ತಗೋ  ಪೆಪ್ಪರಮೆಂಟು..!"

ನಾನು ಪೆಪ್ಪರ ಮೆಂಟು ಬಾಯಲ್ಲಿ ಹಾಕಿ ಕೊಂಡೆ..


ನಿಂಬೆ ಹಣ್ಣಿನ ಸುವಾಸನೆ ಸಂಗಡ....
ಹುಳಿ ಹುಳಿಯಾಗಿ...


ಸಿಹಿ.. ಸಿಹಿಯಾಗಿತ್ತು... !


ಬಾಯಿ ಚಪ್ಪರಿದೆ.. !!
ಆಹಾ...!