Tuesday, August 24, 2010

ಕೆಲವು ಸಂತೋಷದ ಕ್ಷಣಗಳು....!!

ಗೆಳೆಯರಾದ ಶಿವು  ಮತ್ತು.. ಆಜಾದರ  ಪುಸ್ತಕ ಬಿಡುಗಡೆಯ ..
ಕೆಲವು ಸಂತೋಷದ ಕ್ಷಣಗಳು....

ಇಲ್ಲಿ ಏನೂ ಹೇಳುವ ಅಗತ್ಯವಿಲ್ಲ ಅಲ್ಲವೇ?
ಎಲ್ಲರಲ್ಲೂ...
ಸಂಭ್ರಮ.. !
ಸಂತೋಷ..!
ಸಡಗರ...!!

ಯಾವುದೇ....ನಿರಿಕ್ಷೆಗಳಿಲ್ಲದ..
ಕೇವಲ....
 ಸ್ನೇಹ... ಪ್ರೇಮದ ...
ಬ್ಲಾಗ್ ಗೆಳೆಯರ... ಸಮ್ಮೇಳನ  ಅದಾಗಿತ್ತು...!!

ಇನ್ನೊಮ್ಮೆ..
ಮತ್ತೊಮ್ಮೆ... ಮೆಲುಕು ಹಾಕಬೇಕಾದ ಕ್ಷಣಗಳು...
ನಿಮಗಾಗಿ...

ಜೈ .... ಹೋ....!!


ಖ್ಯಾತ ಛಾಯಾ ಚಿತ್ರಗ್ರಾಹಕರಿಗೆ " ಸನ್ಮಾನವಿತ್ತು"

ನಮ್ಮ ಪ್ರೀತಿಯ "ಹುಡುಕಾಟದ  ಮಲ್ಲಿಕಾರ್ಜುನ್" ಅವರಿಗೆ ಹಿರಿಯರಿಂದ  ಸನ್ಮಾನ... !

ಡುಂಡಿರಾಜರ.. ಹಾಸ್ಯ ಚಟಾಕಿಗಳ ಡಿಂಡಿಮ... !! 


ಶಿವು ಪುಸ್ತಕದ ಪರಿಚಯ ಮಾಡಿಕೊಟ್ಟವರು
"ಹಾಲ್ದೊಡ್ಡೇರಿ."... ಸುಧೀಂದ್ರರವರು....."


ಗೆಳೆಯರಿಬ್ಬರ ಕನಸು ನನಸಾದ ಕ್ಷಣಗಳು...

ಶೇಷಶಾಸ್ತ್ರಿಗಳ ವಿದ್ವತ್ಪೂರ್ಣ ಮಾತುಗಳು...

ಕಾರ್ಯಕ್ರಮದ  ಮುಖ್ಯ ಆಕರ್ಷಣೆ..
ನಿರೂಪಕರಾದ "ಪ್ರವೀಣ್ ಮತ್ತು ಸುಗುಣ" ತುಂಬಾ ಸೊಗಸಾಗಿ ಕಾರ್ಯಕ್ರಮ ನಡೆಸಿಕೊಟ್ಟರು... 

ಈ "ಚಾಟ್ ಪ್ರವೀಣ"..
ನೀರು  ವಿಜ್ಞಾನಿ...
ಮತ್ಸ್ಯ ಜ್ಞಾನಿ.. ಬಲು ಮಾತುಗಾರ..  !!

ಸುಮಧುರ.. ನಿರೂಪಣೆಯ .. ಮೃದು ಮನಸಿನ... "ಸುಗುಣ.."
ಪುಸ್ತಕ ಬಿಡುಗಡೆಯ  ಸಭೆಗೆ ಇವರ ನಿರೂಪಣೆ ಬಹಳ ಸೊಗಸಾಗಿತ್ತು...
ಕಾರ್ಯಕ್ರಮಕ್ಕೆ ಮೆರಗು ತಂದಿತ್ತು...

ನಮ್ಮ ಮೆಚ್ಚಿನ  ನಟಿ.. ಮಂಗಳತ್ತೆ...( ಜಯಲಕ್ಷ್ಮಿ ಪಾಟೀಲ್)  ಮತ್ತು ಉಮಾ ಭಟ್..


ಸುಘೋಷ್  ಮತ್ತು... ಘಜಲ್ ಕವಿ  "ಉಮೇಶ್ ದೇಸಾಯಿಯವರು..."


ನಮ್ಮೆಲ್ಲ ಮೆಚ್ಚಿನ ಛಾಯಾಗ್ರಾಹಕ  "ಮಲ್ಲಿಕಾರ್ಜುನ್"

ಮೋಹಕ ಮೋಡಿಗಾರ ಕೊಳಲು ಗಾರುಡಿಗ "ಕೃಷ್ಣಮೂರ್ತಿಯವರು"...
" ವಿ.ಆರ್. ಭಟ್.." ಮತ್ತು  "ನಾರಾಯಣ್ ಭಟ್"

ಎಷ್ಟು ಮಾತನಾಡಿದರೂ... ಸುದ್ಧಿ ಮಾತ್ರ ಖಾಲಿಯಾಗೊದಿಲ್ರಿ....

ಹೆಬ್ಬಾರ್ ಸರ್  ಅವರ ಉತ್ಸಾಹ... ನಮಗೆಲ್ಲ ಸ್ಪೂರ್ತಿಯಾಗಿತ್ತು....

ಡಾ. ಸತ್ಯನಾರಾಯಣ್..

ಇವರು "ಬಿಸಿಲ ಹನಿ"  ಗೆಳೆಯ "ಉದಯ್ ಇಟಗಿಯವರು....

ಮಂಗಳೂರಿನ "ದಿನಕರ್ ದಂಪತಿಗಳು..".

ಮಗುವಿನಂಥಹ ನಗುವಿನ  "ಸೀತಾರಾಂ ಸರ್..."

ಈ.. ಶಾರ್ಪ್ ಶೂಟರ್ಸ್ ಕಾಟ ಬಹಳ ಇತ್ತು..  !!

ಹೊರನಾಡಿನಲ್ಲಿ  ಕನ್ನಡದ ದೀಪ  ಹಚ್ಚುತ್ತಿರುವ.. ಗೆಳೆಯ...

ಸವಿಗನಸಿನ ತುಂಟ ಕವಿ... "ಮಹೇಶ್"

ವಿ.ಆರ್. ಭಟ್ ಅವರಿಂದ ಶೇಷಶಾಸ್ತ್ರಿಗಳಿಗೆ  ಸನ್ಮಾನ....

ಸುಧೀಂದ್ರ ಅವರಿಗೆ  ಸನ್ಮಾನ  ಸೀತಾರಾಂ ಅವರಿಂದ....

ಘನ  ಗಂಭೀರ  ಅನಿಸುತ್ತಾರಲ್ಲವೇ??

ಇಂಥಹ ತರಲೆ...ತುಂಟಾಟ.. ನೂರಾರಿದ್ದವು  !!..  !!

ಚಂದಾ.. ಚಂದಾ.. ಈ ಜೋಡಿ ಚಂದಾ.. "ನಂಜುಂಡ, ಚೇತನಾ"....

ಇವರು "ನಿಶಾ ಅಂತರಂಗ"...



ನಮ್ಮೆಲ್ಲರ ಮೆಚ್ಚಿನ ಬ್ಲಾಗಿನ ಒಡತಿ "ಎಸ್ಸೇಸ್ಸ್ಕೆ " ಶೋಭಾ....


ಬಹುಮಾನ ಕಾರ್ಯಕ್ರಮಕ್ಕೆ  ತಪ್ಪಿಸಿಕೊಂಡರು ಇವರು..
ಸುಂದರ ಫೋಟೋ ತೆಗೆಯುವ "ಓಂ ಪ್ರಕಾಶ್" ಮತ್ತು  ನಮ್ಮೆಲ್ಲರ ಮೆಚ್ಚಿನ "ಪಾಲಚಂದ್ರ" (ಅನುಭವ ಮಂಟಪ"

"ಮದುವೆ ಗಂಡು"  ಮನದಾಳದ " ಪ್ರವೀಣರಿಗೆ....
ಸಮಯ ನೋಡುವದು ಹೇಗೆ ಅಂತ  ಹೇಳಿಕೊಡುತ್ತಿರುವ  ಭಟ್ಟರು....


ಇವರು "ನಿಮ್ಮೊಳಗೊಬ್ಬ... "ಬಾಲು..."


ಉಮಾ ಭಟ್, ಸುಮನಾ ವೆಂಕಟ್, ಚೇತನಾ....


ಸರ್ಜನರೊಂದಿಗೆ   ಸವಿಯಾದ ತಿಂಡಿ ಸವಿಯುತ್ತಿರುವ "ಕವಿ ಸಾಮ್ರಾಟ್ " ಪರಾಂಜಪೆಯವರು...
ಮಹೇಶ್. ಶಿವು ಮತ್ತು ದಿವ್ಯಾ...

ಈ ಕಾರ್ಯಕ್ರಮ ಯಶಸ್ವಿಯಾಗಲು.. ಮೂಲ ಕಾರಣ ...
ಈ ಗೆಳೆಯರ ಬಳಗ...
ಇಲ್ಲಿ ಇನ್ನೂ ಎರಡು ಮೂರು ಜನ  ತಪ್ಪಿಸಿಕೊಂಡಿದ್ದಾರೆ......
ಮುಂದಿನ ಫೋಟೋ ಪೋಸ್ಟಿನಲ್ಲಿ  ಕರೆತರುವೆ...

(ಪ್ರವೀಣ, ನವಿನ, ಅನಿಲ್ ಬೆಡಗೆ)

ಇನ್ನೂ...
ಕೆಲವು  ಅಪರೂಪದ ಫೋಟೋಗಳಿವೆ...
ಕೆಲವು ದಿನಗಳ ನಂತರ...!!

ಜೈ  ಹೋ...  ಬ್ಲಾಗರ್ಸ್..  !!

47 comments:

V.R.BHAT said...

Extremely Good, memorable, unforgettable, Bloggers' Any Time Munch [BATM], thanks for uploading! Jai Ho

ನಾಗರಾಜ್ .ಕೆ (NRK) said...

Book release function was good n Fun, what we had that is memorable.
Jai Jai Ho to wonderful kannada Bloggers.

Raghu said...

ಎಂಥ ದಿನ..ಎಷ್ಟು ಖುಷಿ ಆಯಿತು ಅಂದ್ರೆ ಹೇಳೋಕ್ಕೆ ಆಗೋಲ್ಲ..ಇಷ್ಟು ದಿನ ಹಾಯ್ ಬೈ..ಅಂತ ಇದ್ದವರು ಎಷ್ಟು ಬೇಗ ಬೆರೆತು ಕೊಂಡೆವು.
ಫೋಟೋಸ್ ಎಲ್ಲ ಸೂಪರ್ ಸರ್..ಸೀತಾರಾಂ ಸರ್..ಅನಿಲ್..ಶಿವೂ..ಸುಗುಣ..ಆಜಾದ್..ಮಹೇಶಣ್ಣ..ಎಲ್ಲರ ಫೋಟೋ ಮಸ್ತ್ ಮಸ್ತ್..
ನಿಮ್ಮವ,
ರಾಘು.

ಮನಸಿನ ಮಾತುಗಳು said...

ಪ್ರಕಾಶಣ್ಣ,
It was a really nice moments with you all ... :-)
ತುಂಬಾ ಖುಷಿ ಆತು. ಎಲ್ಲರನ್ನೂ ಪರಿಚಯ ಮಾಡಿಸಿಕೊಟ್ಟಿದಕ್ಕೆ ನಿಂಗೆ ಒಂದು special thanks ..:-)
ಕಾರ್ಯಕ್ರಮ ಮುಗಿದ ಮೇಲೆ ನಂಗೆ ನನ್ ಅತ್ತೆ ಮನೆಗೆ ಹೋಗಕಿತ್ತು. ಸತ್ಯನಾರಾಯಣ ಪೂಜೆ ಇತ್ತು. ಅದ್ಕೆ ನಿಮ್ಮೆಲ್ಲರ ಜೊತೆ ಕೊನೆ ಕ್ಷಣಗಳಲ್ಲಿ ಇರಕೆ ಆಗಲ್ಲೆ :-(
ಮುಂದಿನ ಸಾರಿ ಮತ್ತೆ ಸಿಗೋಣ ಎಲ್ಲರೂ. ನನ್ ಫೋಟೋ ಚನಾಗಿ ತೆಗದ್ದೆ ಪ್ರಕಾಶಣ್ಣ. Thanks again .. :-) :-)

Naveen ಹಳ್ಳಿ ಹುಡುಗ said...

Pakku Mama....
Jai Ho

Dr.D.T.Krishna Murthy. said...

wonderful function,wonderful photos,and above all friendly prakaashanna and his young brigade!
JAI HO!

balasubramanya said...

ಪ್ರಕಾಶ್ ಅಣ್ಣ @ಪ್ರಕ್ಕು ಮಾಮ , ಪ್ರೀತಿಯಿಂದ ಹೃದಯವಂತ ಪ್ರಕಾಶ್ ಚಿತ್ರ ಲೇಖನ ಸುಂದರವಾಗಿ ಮೂಡಿಬಂದಿದೆ. ನಿಮ್ಮ ಚಿತ್ರಗಳು ಮಾತನಾಡಿವೆ.ಗೆಳೆಯರ ಪ್ರೀತಿಯ ಸಾಗರದಲ್ಲಿ ಈಜಾಡಿದ ಆ ಸುಂದರ ಭಾನುವಾರ ಮರೆಯಲಾಗದ ದಿನವಾಗಿ ಉಳಿದಿದೆ.ನಿಮಗೆ ಧನ್ಯವಾದಗಳು.

mshebbar said...

Wonderful Experience -msh

Ittigecement said...

ವಿ.ಆರ್. ಭಟ್ಟರೆ..

ಅಂದು ಆ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ..

ಮೊದಲಿಗೆ ಸುಗುಣ ಮತ್ತು ಮಹೇಶರು ಕಾರಣ..

ನಂತರ..
ಉತ್ಸಾಹಿ ಗೆಳೆಯರ ಬಳಗ...
ಅನಿಲ್ ಬೆಡಗೆ..
ನಾಗರಾಜ್..
ನವೀನ್ ಮೇಷ್ಟ್ರು..
" ಮದುವೆ ಗಂಡು" ಪ್ರವೀಣ್ ಗೌಡ್ರು...
ಮದುಮಗ "ಶಿವಪ್ರಕಾಶ್"
....
.......

ಈ ಹೆಸರುಗಳ ಪಟ್ಟಿ ಸ್ವಲ್ಪ ಉದ್ದವಿದೆ..

ಇದು ನಮ್ಮೆಲ್ಲರ ಕಾರ್ಯಕ್ರಮ...ಅಂತ ಎಲ್ಲರೂ ಸಂಭ್ರಮಪಟ್ಟಿದ್ದು..
ಓಡಾಡಿ ಸಂತೋಷಪಟ್ಟಿದ್ದು...
ಒಬ್ಬರನ್ನೊಬ್ಬರು ಪರಸ್ಪರ ಅಭಿನಂದಿಸಿಕೊಂಡಿದ್ದು...
ಎಷ್ಟೋ ವರ್ಷಗಳ ಸ್ನೇಹಿತರ ಹಾಗೆ ಹರಟಿದ್ದು...

ಅಲ್ಲಿ ಕಳೆದ ಪ್ರತಿಯೊಂದೂ ಕ್ಷಣಗಳೂ... ಮರೆಯಲಾಗದು...

ಜೈ ಹೋ ಬ್ಲಾಗರ್ಸ್... !!

Laxman (ಲಕ್ಷ್ಮಣ ಬಿರಾದಾರ) said...

Karyakram tumba chennagi ayitu prakash avare. Nanage hosa geleyara parichaya ayitu
Photo tumba chennagive.
innastu photo haki

Jai ho

ಸುಮ said...

nice photos .ಊರಿಗೆ ಹೋಗಲೇ ಬೇಕಿದ್ದುದರಿಂದ ನಾನು ಮಿಸ್ ಮಾಡಿಕೊಂಡೆ . ಹೊಟ್ಟೇ ಉರೀತಾ ಇದ್ದು ಎಲ್ಲರನ್ನ ಭೇಟಿಯಾಗೋ ಅವಕಾಶ ತಪ್ಪಿದ್ದಕ್

ಕ್ಷಣ... ಚಿಂತನೆ... said...
This comment has been removed by the author.
ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಸರಳ ಸುಂದರ ಚಿತ್ರಗಳೊಂದಿಗೆ, ಬ್ಲಾಗಿಗರ ಪುಸ್ತಕಗಳ ಬಿಡುಗಡೆಯನ್ನು ನಿರೂಪಿಸಿದ್ದೀರಿ. ವಿಶೇಷ ಮುತುವರ್ಜಿಯಿಂದ ಕೂಡಿದ ಕಾರ್ಯಕ್ರಮ ಚೆನ್ನಾಗಿತ್ತು.

ಹೊಸ ಗೆಳೆಯರ ಪರಿಚಯ,ದೂರ ದೇಶ, ಊರುಗಳಿಂದ ಬಂದವರು, ಜೊತೆಗೆ ಈ ಮೊದಲೇ ಪರಿಚಿತರಾಗಿದ್ದವರ ಭೇಟಿ, ನಗು-ಉತ್ಸಾಹ ಎಲ್ಲ ಸದಾ ಕಾಲ ನೆನಪಿನಲ್ಲುಳಿಯುವಂತಹದ್ದು. ಇಂತಹ ಕಾರ್ಯಕ್ರಮದ ರೂವಾರಿಗಳಿಗೆ ಧನ್ಯವಾದಗಳು.

ನೀವು ಪರಿಚಯಿಸುತ್ತಿದ್ದ ಪರಿ, ಉಡುಗೊರೆಯ ನೆಪದಲ್ಲಿ ನಕ್ಕು ನಲಿದದ್ದು ಮರೆಯಲ್ಲಿಕ್ಕುಂಟೇ? ಅದರಲ್ಲಿಯೂ ವೇದಿಕೆಯ ಮೇಲೆ ಬ್ಲಾಗಿಗರನ್ನು ವಿಶಿಷ್ಟವಾಗಿ ಪರಿಚಯಿಸಿದ ಎಲ್ಲರಿಗೂ ಧನ್ಯವಾದಗಳು.

ಇನ್ನಷ್ಟು ಚಿತ್ರಗಳಿಗಾಗಿ ಕಾಯುತ್ತಿರುವೆನು.

PARAANJAPE K.N. said...

ಪ್ರಕಾಶ್ ಜೀ
ಚಿತ್ರಗಳು- ಅಡಿ ಟಿಪ್ಪಣಿಗಳು, ಚೆನ್ನಾಗಿವೆ. ಅದು ನಿಜವಾಗಿಯೂ ಖುಷಿಯ ದಿನವಾಗಿತ್ತು, ಮತ್ತೆ ಬರಲಿ ಅ೦ತಹ ಖುಷಿ. ಇನ್ನಷ್ಟು ಚಿತ್ರ ಹಾಕಿ ಸ್ವಾಮಿ.

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿದೆ ಪ್ರಕಾಶಣ್ಣ.... ಫೋಟೋಗಳನ್ನು ನೋಡುತ್ತಾ ನಾನೂ ಕಾರ್ಯಕ್ರಮದಲ್ಲೇ ಇದ್ದ ಹಾಗೆ ಅನಿಸಿತು...

ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಅನ್ನುವ ನೋವು ಇದ್ದೇ ಇದೆ :(

PaLa said...

ನನ್ ಫೋಟೋ ತೆಗೆದಿದ್ದು ಗೊತ್ತಾಗ್ಲೇ ಇಲ್ಲ.. ತುಂಬಾ ಧನ್ಯವಾದ ಸುಂದರ ಚಿತ್ರಕ್ಕೆ..

ನಿಮ್ಮ ಉತ್ಸಾಹ ನೋಡಿ ಬೆರಗಾಯ್ತು. ಗಿಫ್ಟಿನ ಐಡಿಯಾ ತುಂಬಾ ಹೊಸತಾಗಿತ್ತು.. ಅದ್ರಲ್ಲೂ ಹೆಬ್ಬಾರರ "i am a complan boy" super :) ತುಂಬಾ ಖುಷಿಯಾಯ್ತು ಬ್ಲಾಗಿಗರನ್ನೆಲ್ಲಾ ಒಂದೇ ಕಡೆ ಕಲೆ ಹಾಕಿದ್ದಕ್ಕೆ.

shivu.k said...

ಪ್ರಕಾಶ್ ಸರ್,

ನಾನು ವೇದಿಕೆ ಹತ್ತಿದ್ದಕ್ಕೆ ಇಂಥ ದೃಶ್ಯಗಳು ಕಾಣಸಿಗಲಿಲ್ಲ. ನಿಮ್ಮ ಕ್ಯಾಮರಾಗೆ ಥ್ಯಾಂಕ್ಸ್.. ಕ್ಯಾಮರವಿಲ್ಲದೇ ಇಡೀ ಕಾರ್ಯಕ್ರಮವನ್ನು ಆನಂದಿಸಿದ್ದು ಇದೇ ಮೊದಲು. ಎಲ್ಲರ ಫೋಟೊಗಳೂ ಸೂಪರ್. ಕಾರ್ಯಕ್ರಮಕ್ಕೆ ಅಹೋರಾತ್ರಿ ದುಡಿದವರಲ್ಲಿ ಇನ್ನಿಬ್ಬರೂ ಸೂಪರ್ ಹೀರೋಗಳು ತಪ್ಪಿಸಿಕೊಂಡಿದ್ದಾರೆ. ಒಬ್ಬರು ಸೈಲೆಂಟ್ ನಾಗರಾಜ್, ಮತ್ತೊಬ್ಬರು ಉದಯ್ ಹೆಗಡೆ. ಅವರಿಬ್ಬರ ಫೋಟೊಗಳನ್ನು ಹಾಕಿಬಿಡಿ. ಇವರೆಲ್ಲರ ಸಹಕಾರವಿರದಿದ್ದಲ್ಲಿ ನಮ್ಮ ಕಾರ್ಯಕ್ರಮ ಈ ಮಟ್ಟಿಗೆ ಬರುತ್ತಿರಲಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ನನ್ನ ಮತ್ತು ಅಜಾದ್ ಕೃತಜ್ಞತೆಗಳು.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ನಿಜಕ್ಕೂ ಜೈ ಹೋ ಬ್ಲಾಗರ್ಸ್

ಆ ಸುಂದರ ಕ್ಷಣಗಳ ಫೋಟೋ ಹಾಕಿ ನಮಗೂ ನೋಡಿದಂತೆ ಮಾಡಿದ್ದಿರಾ

ಬ್ಲಾಗ್ ಕುಟುಂಬ ಎಂದಿಗೂ ಬೆಳೆಯುತ್ತಿರಲಿ

ಜೈ ಹೋ

UMESH VASHIST H K. said...

ನಾನು ಬರ್ಲಿಲ್ಲ ಮಿಸ್ ಮಾಡ್ಕೊಂಡೆ, ಫೋಟೋಗಳು ಸೂಪರ್ !!!!!!!!!

Shashi jois said...

"ರಕ್ಷಾಬಂಧನದ ಶುಭಾಶಯಗಳು"

ಪ್ರಕಾಶಣ್ಣ

ತುಂಬಾ ಸಂತೋಷವಾಯಿತು. ಎಲ್ಲಾ ಬ್ಲಾಗಿಗ ಮಿತ್ರರನ್ನು ಭೇಟಿ ಮಾಡಿದ್ದು ನಿಜಕ್ಕೂ ಸಂತೋಷ,ಸಡಗರ.

ಸಂಭ್ರಮದ ಹಾಗೂ ಹಬ್ಬ ವಾತಾವರಣ ಸೃಷ್ಟಿ ಮಾಡಿದ ನಿಮಗೆ ತುಂಬಾ ಧನ್ಯವಾದಗಳು.

ಕಾರ್ಯಕ್ರಮ ಮುಗಿದ ಮೇಲೆ ನೀವು "ನಿಮ್ಮ ಗಿಫ್ಟ್ ಕಾನ್ಸೆಪ್ಟ್ "ತುಂಬಾ ಸೊಗಸಾಗಿತ್ತು.

ಫೋಟೋ ಗಳನ್ನು ನೋಡಿದಾಗ ಮತ್ತೊಮ್ಮೆ... ಮೆಲುಕು ಹಾಕಬೇಕಾದ ಕ್ಷಣಗಳು.

ಎಲ್ಲಾ ಫೋಟೋಗಳು ಚೆನ್ನಾಗಿ ಬಂದಿದೆ.

ಜೈ ಹೋ...(ನಿಮ್ಮ ಡೈಲಾಗ್ ಇದು . ನಾನು ಕಾಪಿ ಮಾಡಿದೆ ಹ್ಹಾ ಹ್ಹಾ ಹ್ಹಾ)

Gubbachchi Sathish said...

ಪ್ರಕಾಶಣ್ಣ,

ಸುಂದರ ಕಾರ್ಯಕ್ರಮದ ಸುಂದರ ಕ್ಷಣಗಳು ಮತ್ತೆ ಕಣ್ಮುಂದೆ!

ವಾವ್! ವಾವ್!!

ಮನಮುಕ್ತಾ said...

ಪ್ರಕಾಶಣ್ಣ,
ಎಲ್ಲರ ಖುಶಿ ನೋಡಿ, ಬ್ಲಾಗಿನ್ ನೆ೦ಟ್ರುನ್ನೆಲ್ಲಾ ನೋಡಿ ಯ೦ಗೆ ತು೦ಬಾ ಖುಶಿ ಆತು..ಫೋಟೊಗಳ೦ತೂ..ಚೆ೦ದ ಬ೦ಜು..ಖುಶಿ ಜಾಸ್ತಿ ಆಗಿದ್ದಕ್ಕೆ ನಮ್ ಭಾಷೆಲೇ ಬರಿಯನ ಅನ್ನಿಸ್ತು..:):):)....

ಮನಸು said...

superoo super

Mohan Hegade said...

Namaskara,

super photos hage blog lokada diggajaru.

danyari,

mohan hegade

Ittigecement said...

ನಾಗರಾಜ್.. (ಎನ್.ಆರ್.ಕೆ)...

ನಮ್ಮದೇ..
ನಮ್ಮವರದ್ದೇ.. ಕಾರ್ಯಕ್ರಮ..
ನಾವೇ ಹಮ್ಮಿಕೊಂಡಿದ್ದು..
ಅಲ್ಲಿ ಸೇರಿದವರೂ.. ನಮ್ಮವರೇ...

ನೀವು, ಅನಿಲ್ ಬೆಡಗೆ, ನವೀನ್, ಪ್ರವೀಣ್ ಗೌಡರು ಇಷ್ಟೆಲ್ಲ ಓಡಾಡದಿದ್ದರೆ..
ಶ್ರಮ ಪದದಿದ್ದರೆ..
ಇಷ್ಟೆಲ್ಲ ಚಂದ ಆಗುತ್ತಿರಲಿಲ್ಲ..

ಇಂಥಹ ಸ್ನೇಹ ಪಡೆದ ನಾವೇ ಧನ್ಯರು..

ಮಧ್ಯರಾತ್ರಿ ಮೂರುಗಂಟೆಯವರೆಗೆ ಕುಳಿತು ಆ ಬಾಕ್ಸುಗಳಿಗೆ ಬಹುಮಾನ ತುಂಬಿದ್ದು..
ಸ್ಟೇಜಿನ ಹಿಂದೆ ನಿಮ್ಮ ಓಡಾಟ..
ನೀವು ಊಟ ಮಾಡಿದಿರೋ ಇಲ್ಲವೋ ಅದನ್ನೂ ನಾವು ಕೇಳಲಿಲ್ಲ..

ನಿಮ್ಮ ಪ್ರೀತಿಗೆ..
ಸ್ನೇಹಕ್ಕೆ.. ನಮ್ಮ ಕೃತಜ್ಞತೆಗಳು...

ಜೈ... ಹೋ.. ಬ್ಲಾಗರ್ಸ್... !!

Ittigecement said...

ರಾಘು...

ನಿಮ್ಮ ತುಂಟಾಟ... ಕೀಟಲೆಗಳನ್ನು ನೋಡಿ ಸ್ವಲ್ಪ ಹೊಟ್ಟೆಕಿಚ್ಚಾಯಿತು...

ಒಡಹುಟ್ಟಿದವರಂತೆ...
ಕಾರ್ಯಕ್ರಮದಲ್ಲಿ ಓಡಾಡಿ.. ಸಹಕರಿಸಿದ್ದು... ಖುಷಿ ತಂದಿತು...

ನಾವೆಲ್ಲ ಅಲ್ಲಿ ಯಾಕೆ ಅಷ್ಟೆಲ್ಲ ಸಂಭ್ರಮ ಪಟ್ಟೇವು ಗೊತ್ತಾ?

ಅಲ್ಲಿ ಯಾರಿಗೂ..
ಯಾರಿಂದಲೂ..
ಯಾವ "ನಿರೀಕ್ಷೆಯೂ" ಇದ್ದಿರಲಿಲ್ಲ...

ಅಲ್ಲವಾ?

Ittigecement said...

ದಿವ್ಯಾ...

ನಾವೆಲ್ಲ ಅಲ್ಲಿ ಸೇರಿದ್ದು...
ಸಂತೋಷವಾಗಿ ಅಲ್ಲಿ ಕಾಲ ಕಳೆದದ್ದು ಮಜವಾಗಿತ್ತು...
ನೀವು ಕೊನೆಯವರೆಗೂ ಅಲ್ಲಿರಬೇಕಿತ್ತು..

ನಿಮಗೂ ಒಂದು ಬಹುಮಾನವಿತ್ತು...

ಅಲ್ಲಿ ಶಿವು ಸರ್ ಮತ್ತು ಆಝಾದ್ ನಮಗೆ ಸ್ಟೇಜ್ ಬಿಟ್ಟುಕೊಟ್ಟಿದ್ದು...

ಮತ್ತು ...
ಯಾಕೆ?
ಏನು? ಅಂತ ಯಾವ ಪ್ರಶ್ನೆಯನ್ನೂ ಕೇಳದೆ... ನಮಗೆ ಪೂರ್ತಿಯಾಗಿ ಸ್ವಾತಂತ್ರ್ಯ ಕೊಟ್ಟಿದ್ದು...

ನಮ್ಮ ಗೆಳೆಯರ ಬಳಗ..
ಶಿವು/ಅನಿಲ್/ ನಾಗರಾಜ್/ ನವೀನ್ ಮೇಷ್ಟ್ರು... ಮಾಲಿಂಗರಾಯ./ಪ್ರವೀಣ್ ಮದುಮಗ.. ಎಲ್ಲರ ಸಹಕಾರ...

ಅದಕ್ಕಿಂತ ದೂರದ ಊರುಗಳಿಂದ ಸಂಭ್ರಮ ಪಡಲು ಬಂದ..
ಕೊಳಲು ಖ್ಯಾತಿಯ ಸರ್ಜನ್ನರು/ದಿನಕರ್ ದಂಪತಿಗಳು/ ನಂಜುಂಡ,ಚೇತನಾ/ಸೀತಾರಾಮ್ ಸರ್ ಇನ್ನೂ ಅನೇಕರು..

ಒಟ್ಟಿನಲ್ಲಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡು...
ನಮ್ಮಿಂದ ಆದ ತಪ್ಪುಗಳನ್ನು ಗಣನೆಗೆ ತೆಗೆದು ಕೊಳ್ಳದೆ...
ನಕ್ಕು ನಲಿದದ್ದು.. ಖುಷಿಯಾಯಿತು...

ಒಟ್ಟಿನಲ್ಲಿ ನಮಗೆಲ್ಲ ಬಹುದಿನಗಳವರೆಗೆ ನೆನಪಿನಲ್ಲಿ ಉಳಿಯುವಂಥಹ ಕಾರ್ಯಕ್ರಮ...

ಪ್ರಗತಿ ಹೆಗಡೆ said...

ನಿಜ ಪ್ರಕಾಶಣ್ಣ...ನೆನಪಿನಲ್ಲಿ ಉಳಿಯುವಂಥಹ ಕಾರ್ಯಕ್ರಮ...

ಅನಂತ್ ರಾಜ್ said...

ಬ್ಲಾಗ್ ಗೆಳೆಯರ ಸಮ್ಮೇಳನದ ಚಿತ್ರಗಳು ಮನಸೂರೆಗೊ೦ಡವು ಪ್ರಕಾಶ್ ಸರ್. ಬ್ಲಾಗಿನ ಒಡೆಯರ ಪರಿಚಯ ಕೂಡ ಚಿತ್ರಗಳ ಮೂಲಕ ಮಾಡಿಸಿದ್ದು ಅಭಿನ೦ದನೀಯ. ಬರಲಾಗದದ್ದಕ್ಕೆ ವ್ಯಥೆ ಇದೆ.

ಶುಭಾಶಯಗಳು
ಅನ೦ತ್

Narayan Bhat said...

ಮನಸೆಳೆವ ಚಿತ್ರಗಳನ್ನು ಸೆರೆಹಿಡಿದು ಎಲ್ಲರ ಮನಗಳ ಸೂರೆಗೊಂಡಿದ್ದೀರಿ.

ಸುಬ್ರಮಣ್ಯ said...

ನಮಸ್ಕಾರ.
ರಾಜಧಾನಿಯಿಂದ ದೂರದಲ್ಲಿರುವವರಿಗೆ ಕಾರ್ಯಕ್ರಮ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದ.

Shweta said...

ee saarenu miss madkonde naanu :(

ಸೀತಾರಾಮ. ಕೆ. / SITARAM.K said...

ಛಾಯಾಚಿತ್ರಗಳು ಮತ್ತು ನಿಮ್ಮ ಒಕ್ಕಣೆ ತುಂಬಾ ಅದ್ಭುತವಾಗಿದೆ. ನನ್ನ ನಗುವಿನ ಚಿತ್ರ ಎಲ್ಲಿಂದ ಹುದುಕಿದ್ರೀ... ಬಹಳ ಜನದ ಆರೋಪ ಇದೆ ನಾನು ಫೋಟೋದಲ್ಲಿ ಗಭೀರವಾಗಿರ್ತೇನೆ ಅಂಥಾ ಅವರಿಗೆ ತೋರ್ಸೋಕೈತು!! ಒಟ್ಟಿನಲ್ಲಿ ನಿಮ್ಮನ್ನೆಲ್ಲಾ ಭೇಟಿಯಾಗಿದ್ದು ಹೆಚ್ಚಿನ ಸಂತೋಷ್.
ಧನ್ಯವಾದಗಳು.

ಶಿವಪ್ರಕಾಶ್ said...

super function...
great moments....
lot of memories...
Thank a lot for everything :)

ಪ್ರವೀಣ್ ಭಟ್ said...

Photos ella mast baindu.. Function tumba chennatu antha gottatu..

urige hoda karana mis madkondi :(

Pravi

Ashok.V.Shetty, Kodlady said...

Prakashanna...

nimmannella meet aagi tumbaa kushi aitu...Mumbai ninda ee kaaryakramakkende bandidde...banda uddesha saartaka aitu...ella blog mitrannu meet maadi bahala santosha aitu...Program antu Soooooooperrrrrr...nimma photogalu saha.......(nan poto ello kaansilla)...namma bhandavya heege munduvariyali....

Umesh Balikai said...

ಇಲ್ಲಿನ ಫೋಟೋಗಳನ್ನು ನೋಡಿದಾಕ್ಷಣ ಅನಿಸಿದ್ದು, "ಛೇ! ಎಂಥ ಒಳ್ಳೆಯ ಅವಕಾಶ ಮಿಸ್ ಮಾಡಿಕೊಂಡೆ!" ಅಂತ. ಹಿರಿ-ಕಿರಿಯ ಬ್ಲಾಗ್ ಮಿತ್ರರನ್ನೆಲ್ಲ ಭೇಟಿ ಮಾಡುವ ಅವಕಾಶ ತಪ್ಪಿ ಹೋಯ್ತಲ್ಲ ಅನ್ನಿಸ್ತು. ನನ್ನ ಹುಡುಕಾಟದ ಭರಾಟೆಯಲ್ಲಿ ಎಷ್ಟೊಂದು ಒಳ್ಳೇ ಸಮಾರಂಭಗಳನ್ನು ಮಿಸ್ ಮಾಡ್ಕೋತಾ ಇದೀನಿ. ಬೇಜಾರಾಗ್ತಿದೆ.. ಪ್ಸ್ಚ್...

ಶಿವು ಸರ್ ಮತ್ತು ಆಜಾದ್ ಸರ್ ಗೆ ಅಭಿನಂದನೆಗಳು.

ಚಿತ್ರಾ said...

ಪ್ರಕಾಶಣ್ಣ,
ಕಾರ್ಯಕ್ರಮದ ಸುಂದರ ಫೋಟೋಗಳಿಗಾಗಿ ಧನ್ಯವಾದಗಳು. ನೀವೆಲ್ಲ ಅಷ್ಟೆಲ್ಲ ಮಜಾ ಮಾಡಿದ್ದಕ್ಕೆ , ಹಾಗೂ ನನಗೆ ನಿಮ್ಮೊಂದಿಗೆ ಸೇರಿಕೊಳ್ಳಲು ಸಾಧ್ಯವಾಗದಿದ್ದಕ್ಕೆ , ಹೊಟ್ಟೆ ಉರಿಯುತ್ತಿದೆ !!!
ನಿನ್ನ ಬಹುಮಾನದೊಂದಿಗೆ ಫೋಟೋ ಹಾಕು ಬೇಗ . ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.

SATISH N GOWDA said...

ನಮಸ್ಕಾರ ಬ್ಲಾಗಿಗರೇ ನಾನು ಮೂರನೆ ಬಾರಿಗೆ ಈ ಕಾರ್ಯಕ್ರಮದ ಫೋಟೋಗಳನ್ನು ನೋಡುತ್ತಿದ್ದೇನೆ . ಮಿತ್ರರೆಲ್ಲರೋ ಕೊಡಿ , ನಲಿದ ಆ ಶುಭ ದಿನಾ ವನ್ನ ನಾನು ತುಂಬಾ ಮಿಸ್ ಮಾಡಿಕೊಂಡೆ . ಸುಂದರ ವಾದ ಕಾರ್ಯಕ್ರಮ . ಹಾಗೇ
ಬಿಡುವು ಮಾಡಿಕೊಂಡು ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com
nannavalaloka (blog)
http://nannavalaloa.blogspot.com

Subrahmanya said...

ಚಿತ್ರಗಳನ್ನು ನೋಡಿ ಸಂತೋಷವಾಯ್ತು. ಸ್ನೇಹ-ಬಾಂಧವ್ಯಗಳು ಹೀಗೆ ಮುಂದುವರಿಯಲಿ.

SANGETHA'S BLOG said...

nice potos

SSK said...

Very nice & thanks a lot!
No more words to express my happiness....!
once again Thank u very much.

© ಹರೀಶ್ said...

ಒಳ್ಳೆಯ ಕಾರ್ಯಕ್ರಮ ಮಿಸ್ ಮಾಡಿಕೊಂಡೆ ಅನ್ನಿಸುತ್ತಿದೆ.

ಸಾಗರಿ.. said...

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದರೂ ಕಣುಂಬ ಕಾರ್ಯಕ್ರಮ ನೋಡಿದಂತಾಯ್ತು. ಧನ್ಯವಾದಗಳು.

ಜಲನಯನ said...

ಇದು ಎಂಥಾ ಜಾಲವಯ್ಯ...?!! ನನ್ನ ಕವನದ ಸಾಕಾರವಾದದ್ದು ನಮ್ಮ ಪುಸ್ತಕದ ಬಿಡುಗಡೆಯಿಂದಲ್ಲ ಅದೇ ನೆಪದಲ್ಲಿ ನನ್ನ ಕಿರಿ ತಮ್ಮಂದಿರ ಆತ್ಮೀಯತೆಯನ್ನು ಅನುಭವಿಸಿದ ಕಾರಣ.

veena said...

oh noooooooooooo.........
ಇಂಥಹ ಒಂದು ಸಮಾರಂಭ ಆದದ್ದು ನಮಗೆ ಗೊತ್ತೇ ಆಗಲಿಲ್ಲ.ದಯವಿಟ್ಟು ಮುಂದಿನ ಕಾರ್ಯಕ್ರಮಗಳ ವಿವರವನ್ನು ನಮ್ಮೊಡನೆಯೂ ಹಂಚಿಕೊಳ್ಳು.

Soumya. Bhagwat said...

really i missed you ppl...... :( superb photos......